ಬ್ರೇಕಿಂಗ್ ನ್ಯೂಸ್
16-10-20 12:45 pm Mangalore Correspondent ಕರಾವಳಿ
ಮಂಗಳೂರು, ಅಕ್ಟೋಬರ್ 16 : ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ತುಳು ರಾಷ್ಟ್ರ ಭಾಷೆ. ಇಲ್ಲಿ ಬಂದ ಯಾವುದೇ ಉತ್ತರ ಭಾರತೀಯನೇ ಆದರೂ ಒಂದು ತಿಂಗಳಲ್ಲಿ ತುಳು ಕಲಿಯುತ್ತಾನೆ ಎನ್ನುವ ಮಾತಿದೆ. ಇದಕ್ಕಾಗೇ ತುಳುವನ್ನು ಮಂಗಳೂರಿನ ಮಂದಿಯ ರಾಷ್ಟ್ರ ಭಾಷೆ ಅಂತ ಕೆಲವರು ಟೀಕಿಸುತ್ತಾರೆ. ಕರಾವಳಿಗರ ಪ್ರೀತಿಯ ತುಳು ಭಾಷೆಗೂ ಸಮೃದ್ಧ ಇತಿಹಾಸ ಇದೆ, ಸಾಹಿತ್ಯ, ಪರಂಪರೆ, ಸ್ವಂತ ಲಿಪಿಯೂ ಇದೆ ಎನ್ನುವುದು ಹೆಚ್ಚಿನ ಮಂದಿಗೆ ತಿಳಿದಿಲ್ಲ. ಆದರೆ, ತುಳು ಲಿಪಿ ಪ್ರಚಲಿತದಲ್ಲಿ ಮಾತ್ರ ಇಲ್ಲ.
ಹೀಗಾಗಿ ತುಳು ಲಿಪಿಗೆ ಸರಕಾರ ಪ್ರೋತ್ಸಾಹ ನೀಡಬೇಕು, ಭಾಷೆಯನ್ನು ಉತ್ತೇಜಿಸಲು ಕ್ರಮ ತೆಗೆದುಕೊಳ್ಳಬೇಕು ಎಂಬ ಬೇಡಿಕೆಯೂ ಕರಾವಳಿಯಲ್ಲಿದೆ. ಇದೇ ವೇಳೆ, ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ಈ ನಿಟ್ಟಿನಲ್ಲಿ ಹೊಸ ಉಪಕ್ರಮಕ್ಕೆ ಮುಂದಾಗಿದ್ದಾರೆ. ತಮ್ಮ ಮಂಗಳೂರಿನ ಕಚೇರಿಯಲ್ಲಿ ತುಳು ಲಿಪಿಯಲ್ಲಿ ನಾಮಫಲಕ ಹಾಕಿದ್ದು ತುಳುವರ ಪ್ರೀತಿಗೆ ಪಾತ್ರರಾಗಿದ್ದಾರೆ.
ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ. ಇಲ್ಲಿನ ಜನರಿಗೆ ಆಡು ಭಾಷೆ ಮತ್ತು ವ್ಯಾವಹಾರಿಕ ಭಾಷೆ ತುಳುವೇ ಆಗಿದೆ. ಈಗೀಗ ತುಳು ಭಾಷೆಯ ಬಗ್ಗೆ ಬಹಳಷ್ಟು ಕೆಲಸಗಳಾಗುತ್ತಿವೆ. ಸಾಹಿತ್ಯ ರಚನೆ, ತುಳು ಸಂಘಟನೆಗಳು ಹುಟ್ಟಿಕೊಂಡಿವೆ. ಆದರೆ, ತುಳು ಲಿಪಿಯ ಬಳಕೆ ಮಾತ್ರ ತೀರಾ ಕಡಿಮೆಯಿದ್ದು, ಬೆರಳೆಣಿಕೆಯ ಜನರು ಮಾತ್ರ ತುಳು ಲಿಪಿ ಬಲ್ಲವರಿದ್ದಾರೆ. ಆದರೆ ಇತ್ತೀಚೆಗೆ ತುಳು ಲಿಪಿಯ ವಿಚಾರದಲ್ಲಿ ಯುವಜನರು ಎಚ್ಚೆತ್ತುಕೊಂಡಿದ್ದು, ತುಳು ಸಂಘಟನೆಗಳ ಜೊತೆ ಸೇರಿ ಕಾರ್ಯಕ್ರಮ ರೂಪಿಸುತ್ತಿದ್ದಾರೆ. ಇವುಗಳಲ್ಲಿ ತುಳು ಲಿಪಿ ಕಲಿಕೆ ಕೂಡ ಒಂದು.
ಇಂಥ ಕಾರ್ಯಕ್ರಮಗಳಿಗೆ ಪೂರಕವಾಗಿ ಮಂಗಳೂರು ನಗರದ ಶಾಸಕ ವೇದವ್ಯಾಸ ಕಾಮತ್, ತಮ್ಮ ಕಚೇರಿಯಲ್ಲಿ ತುಳು ಲಿಪಿಯ ನಾಮಫಲಕ ಅಳವಡಿಸುವ ಲಿಪಿಯ ಬಗ್ಗೆ ಉತ್ತೇಜಿಸುವ ಕೆಲಸ ಮಾಡಿದ್ದಾರೆ. ಇದರ ಜೊತೆಗೆ ಪ್ರೊಮೋಟ್ ತುಳು ಎಂದು ಫೇಸ್ಬುಕ್ ಪೇಜ್ನಲ್ಲಿ ಬರೆದುಕೊಂಡಿದ್ದಾರೆ. ಶಾಸಕರ ನೆಲೆಯಲ್ಲಿ ವೇದವ್ಯಾಸ ಕಾಮತ್ ಅವರ ಉತ್ತೇಜನಕಾರಿ ಕಾರ್ಯಕ್ಕೆ ತುಳುವರು ಮೆಚ್ಚಿಕೊಂಡಿದ್ದಾರೆ.
In order to promote Tulu Lipi Mangalore MLA Vedavyas kamath aspires by designing his official lettehead and Name Board in Tulu Lipi.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm