ಬ್ರೇಕಿಂಗ್ ನ್ಯೂಸ್
10-10-20 05:51 pm Mangaluru Correspondent ಕರಾವಳಿ
ಮಂಗಳೂರು, ಅ.10: ನವರಾತ್ರಿ ವೇಳೆ ಹುಲಿವೇಷಗಳ ಅಬ್ಬರ ಕಾಮನ್. ಆದರೆ ಈ ಬಾರಿ ಕೊರೊನಾ ಕಾರಣದಿಂದ ಹುಲಿವೇಷ ಕುಣಿತಕ್ಕೆ ಜಿಲ್ಲಾಧಿಕಾರಿ ಬ್ರೇಕ್ ಹಾಕಿದ್ದು ಕರಾವಳಿಯಲ್ಲಿ ಹುಲಿವೇಷ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹುಲಿವೇಷ ಆಡಂಬರಕ್ಕಲ್ಲ. ಅದು ತುಳುನಾಡಿನ ಸಂಸ್ಕೃತಿ. ಹಾಗಾಗಿ ಕೊರೊನಾ ಕಾರಣಕ್ಕೆ ಹುಲಿವೇಷ ನಿಲ್ಲಿಸಬಾರದು. ಸರಳ ರೀತಿಯಲ್ಲಿ ದೇವರ ಸೇವೆಗೆ ಹುಲಿವೇಷ ತಂಡಗಳಿಗೆ ಅವಕಾಶ ನೀಡಬೇಕು ಎಂದು ಮಂಗಳಾದೇವಿ ದಸರಾ ಶೋಭಾಯಾತ್ರೆ ಸಮಿತಿ ಒತ್ತಾಯಿಸಿದೆ.
ಸಮಿತಿಯ ಅಧ್ಯಕ್ಷ ದಿಲ್ರಾಜ್ ಆಳ್ವ ಸುದ್ದಿಗೋಷ್ಟಿಯಲ್ಲಿ ಈ ಒತ್ತಾಯ ಮಾಡಿದ್ದು, ಜಿಲ್ಲಾಡಳಿತ ಕೋವಿಡ್ ಹಿನ್ನೆಲೆಯಲ್ಲಿ ಹುಲಿವೇಷ ಕುಣಿತಕ್ಕೆ ನಿಷೇಧ ಹೇರಿದ್ದು ಸರಿಯಲ್ಲ. ಮಂಗಳಾದೇವಿ ಉತ್ಸವದ ಸಮಯದಲ್ಲಿ ಹಿಂದಿನಿಂದಲೂ ರಥೋತ್ಸವಕ್ಕೆ ಹುಲಿವೇಷ ಹಾಕುವ ಸಂಪ್ರದಾಯ ಇದೆ. ಈ ಸಂಪ್ರದಾಯವನ್ನು ನಿಲ್ಲಿಸುವಂತೆ ಆಗಬಾರದು. ಸಾಂಕೇತಿಕವಾಗಿ ದೇವರ ಸೇವೆ ನಡೆಸಲು ಅವಕಾಶ ನೀಡಬೇಕು. ಹುಲಿವೇಷವನ್ನು ವ್ರತ ಹಿಡಿದು ನಡೆಸುವ ಮಂದಿ ಇದ್ದಾರೆ. ಪ್ರತಿ ವರ್ಷವೂ ವೇಷ ಹಾಕುವವರೂ ಇದ್ದಾರೆ. ನವರಾತ್ರಿಗೂ ಹುಲಿವೇಷಕ್ಕೂ ಹತ್ತಿರದ ನಂಟು ಇದ್ದು ಭಾವನಾತ್ಮಕ ವಿಚಾರವಾಗಿದೆ ಎಂದು ಹೇಳಿದರು.
ಸಮಿತಿಯ ಉಪಾಧ್ಯಕ್ಷ ದಿನೇಶ್ ಕುಂಪಲ ಮಾತನಾಡಿ, ಈ ಬಾರಿ ಹುಲಿವೇಷ ಕೇವಲ ಹರಕೆ ಮಾತ್ರಕ್ಕೆ ನಡೆಸಲಾಗುವುದು. ಯಾವುದೇ ಆದಾಯ ಗಳಿಸುವ, ಮನರಂಜನೆ ಉದ್ದೇಶಕ್ಕಾಗಿ ಹುಲಿವೇಷ ಇರುವುದಿಲ್ಲ. ನವರಾತ್ರಿಯ ಮೆರವಣಿಗೆಯಲ್ಲಿ ಹುಲಿ ವೇಷಧಾರಿಗಳು ನರ್ತನ ಮಾಡುವುದು ಇಲ್ಲಿನ ಸಂಪ್ರದಾಯ. ಹುಲಿವೇಷ ಇಲ್ಲದ ದಸರಾ, ಜಂಬೂ ಸವಾರಿ ಇಲ್ಲದ ಮೈಸೂರು ದಸರಾದಂತೆ ಎಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಗಿರೀಶ್ ಶೆಟ್ಟಿ, ಉಪಾಧ್ಯಕ್ಷರಾದ ಹನೀಷ್ ಎನ್. ಬೋಳಾರ್ ಮೊದಲಾದವರು ಉಪಸ್ಥಿತರಿದ್ದರು.
Mangaladevi Dasara Shobayatrey urges for pilivesha this Navaratri in Mangalore after the government restricted for pilivesha, the tiger dance, during this Navaratri festival.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm