ಬ್ರೇಕಿಂಗ್ ನ್ಯೂಸ್
01-09-21 12:38 pm Shreeraksha, Boldsky ಡಾಕ್ಟರ್ಸ್ ನೋಟ್
ಕಲ್ಪವೃಕ್ಷ ಎಂದೇ ಪ್ರಸಿದ್ಧಿಯಾಗಿರುವ ತೆಂಗಿನಕಾಯಿ ಆರೋಗ್ಯಕ್ಕೆ ಬಹಳ ಒಳ್ಳೆಯದು, ಏಕೆಂದರೆ ಇದರಲ್ಲಿ ಪೋಷಕಾಂಶ ಸಮೃದ್ಧವಾಗಿದ್ದು, ಅದರ ನೀರು, ತಿರುಳು ಸೇರಿದಂತೆ ತೆಂಗಿನಕಾಯಿ ಪ್ರತಿ ಅಂಶವೂ ಆರೋಗ್ಯಕಾರಿ. ಹೀಗೆ ನೈಸರ್ಗಿಕವಾಗಿ ಲಭಿಸುವ ಅತ್ಯಂತ ಆರೋಗ್ಯದಾಯಕ ಆಹಾರಪದಾರ್ಥಗಳಲ್ಲಿ ಒಂದಾದ ತೆಂಗಿನಕಾಯಿಯ ಪ್ರಯೋಜನಗಳು ಹಾಗೂ ಮಹತ್ವವನ್ನು ವಿಶ್ವದಾದ್ಯಂತ ಸಾರುವ ಉದ್ದೇಶದಿಂದ ಸೆಪ್ಟೆಂಬರ್ 2ರಂದು ವಿಶ್ವ ತೆಂಗು ದಿನವನ್ನ ಆಚರಿಸಲಾಗುತ್ತದೆ.
ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ ನಂತರ, ಭಾರತವು ಅತಿ ಹೆಚ್ಚು ತೆಂಗಿನಕಾಯಿ ಉತ್ಪಾದಿಸುವ ದೇಶವಾಗಿದೆ. ಭಾರತದಲ್ಲಿ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದ ಈ ನಾಲ್ಕು ಪ್ರಮುಖ ರಾಜ್ಯಗಳಿಂದ ಸುಮಾರು 90% ತೆಂಗಿನ ಕಾಯಿಗಳು ಲಭ್ಯವಾಗುತ್ತಿವೆ.
ವಿಶ್ವ ತೆಂಗು ದಿನದ ಪ್ರಯುಕ್ತ, ವಿವಿಧ ಪ್ರದೇಶದಲ್ಲಿ ವಿಭಿನ್ನ ಹೆಸರುಗಳಿಂದ ಕರೆಯಲಾಗುವ ಈ ತೆಂಗಿನಕಾಯಿಯ ಪೋಷಕಾಂಶ, ಅದರ ಪ್ರಯೋಜನ ಹಾಗೂ ಅಡ್ಡಪರಿಣಾಮಗಳ ಬಗ್ಗೆ ಇಂದು ಈ ಲೇಖನದಲ್ಲಿ ವಿವರಿಸುತ್ತೇವೆ.

ತೆಂಗಿನಕಾಯಿಯಲ್ಲಿರುವ ಪೌಷ್ಟಿಕಾಂಶದ ಮೌಲ್ಯಗಳು:
ತೆಂಗಿನಕಾಯಿಗಳನ್ನು ಉಷ್ಣವಲಯದ ಪ್ರದೇಶಗಳಲ್ಲಿ 4,500 ಕ್ಕಿಂತಲೂ ಹೆಚ್ಚು ವರ್ಷಗಳಿಂದ ಬೆಳೆಯಲಾಗುತ್ತಿತ್ತು ಆದರೆ ಇತ್ತೀಚೆಗೆ ಅವುಗಳ ಸುವಾಸನೆ, ಪಾಕಶಾಲೆಯ ಉಪಯೋಗಗಳು ಮತ್ತು ಸಂಭಾವ್ಯ ಆರೋಗ್ಯ ಪ್ರಯೋಜನಗಳಿಗಾಗಿ ಜನಪ್ರಿಯತೆಯನ್ನು ಹೆಚ್ಚಿಸಿದೆ. ತೆಂಗಿನಕಾಯಿಯ ಎಣ್ಣೆ, ತೆಂಗಿನ ತುರಿ, ಹಾಲು, ತೆಂಗಿನ ನೀರು ಸೇರಿದಂತೆ ಎಲ್ಲವೂ ಆರೋಗ್ಯಕ್ಕೆ ಉತ್ತಮವಾದ ಆಯ್ಕೆಗಳಾಗಿವೆ. ತೆಂಗಿನಕಾಯಿ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಸುಮಾರು 80 ಗ್ರಾಂ ತುರಿದ ತೆಂಗಿನಕಾಯಿಯಲ್ಲಿರುವ ಪೋಷಕಾಂಶಗಳ ಮೌಲ್ಯವನ್ನು ಈ ಕೆಳಗೆ ನೀಡಲಾಗಿದೆ.

ಕಾರ್ಬೋಹೈಡ್ರೇಟ್ -10 ಗ್ರಾಂ
ಪ್ರೋಟೀನ್ -3 ಗ್ರಾಂ
ಕೊಬ್ಬು - 27 ಗ್ರಾಂ
ಒಟ್ಟು ಕ್ಯಾಲೋರಿಗಳು - 283 ಕೆ.ಸಿ.ಎಲ್
ಫೈಬರ್ - 7 ಗ್ರಾಂ
ಕಬ್ಬಿಣ 11% ಡಿವಿ
ಪೊಟ್ಯಾಸಿಯಮ್ - 6% ಡಿವಿ
ಸತು - 10% ಡಿವಿ

ತೆಂಗಿನಕಾಯಿಯ ಪ್ರಯೋಜನ:
1. ಜೀರ್ಣಕ್ರಿಯೆ ಸುಗಮಗೊಳಿಸುವುದು:
ಕಾರ್ಬೋಹೈಡ್ರೇಟ್ಗಳು ಅಧಿಕವಾಗಿರುವ ತೆಂಗಿನಕಾಯಿಯಲ್ಲಿ ಪ್ರೋಟೀನ್, ಹಲವಾರು ಪ್ರಮುಖ ಖನಿಜಗಳು ಮತ್ತು ಸಣ್ಣ ಪ್ರಮಾಣದ ಬಿ ಜೀವಸತ್ವಗಳ ಸಹ ಇವೆ. ತೆಂಗಿನಕಾಯಿಯಲ್ಲಿ ಮ್ಯಾಂಗನೀಸ್ ಅಧಿಕವಾಗಿದ್ದು, ಇದು ಮೂಳೆಗಳ ಆರೋಗ್ಯಕ್ಕೆ ಉತ್ತಮ ಜೊತೆಗೆ ಕಾರ್ಬೋಹೈಡ್ರೇಟ್, ಪ್ರೋಟೀನ್ ಮತ್ತು ಕೊಲೆಸ್ಟ್ರಾಲ್ ನ ಚಯಾಪಚಯ ಕ್ರಿಯೆಗೆ ಅಗತ್ಯವಾಗಿದೆ. ಇದರಲ್ಲಿರುವ ತಾಮ್ರ ಮತ್ತು ಕಬ್ಬಿಣದ ಪ್ರಮಾಣವು ಕೆಂಪು ರಕ್ತ ಕಣಗಳನ್ನು ರೂಪಿಸಲು ಸಹಾಯ ಮಾಡುತ್ತದೆ, ಹಾಗೆಯೇ ಸೆಲೆನಿಯಮ್, ನಿಮ್ಮ ಜೀವಕೋಶಗಳನ್ನು ರಕ್ಷಿಸುವ ಪ್ರಮುಖ ಉತ್ಕರ್ಷಣ ನಿರೋಧಕವಾಗಿದೆ.

2. ಹೃದಯದ ಆರೋಗ್ಯಕ್ಕೆ ಉತ್ತಮ:
ತೆಂಗಿನಕಾಯಿಯ ತಿರುಳನ್ನು ಪದೇ ಪದೇ ತಿನ್ನುವ ಜನರು ಪಾಶ್ಚಿಮಾತ್ಯ ಆಹಾರವನ್ನು ಅನುಸರಿಸುವವರಿಗಿಂತ ಕಡಿಮೆ ಹೃದಯ ರೋಗವನ್ನು ಹೊಂದಿರುತ್ತಾರೆ ಎಂದು ಅಧ್ಯಯನಗಳು ಕಂಡುಹಿಡಿದಿವೆ. ಒಣ ಕೊಬ್ಬರಿಯಿಂದ ತಯಾರಿಸಿದ ಶುದ್ಧ ತೆಂಗಿನ ಎಣ್ಣೆಯನ್ನು ಸೇವಿಸುವುದರಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು. ಈ ಅಧಿಕ ಹೊಟ್ಟೆಯ ಕೊಬ್ಬು ನಿಮಗೆ ಹೃದಯ ರೋಗ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ತೆಂಗಿನಕಾಯಿ ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸಿ, ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

3. ರಕ್ತದಲ್ಲಿನ ಸಕ್ಕರೆ ನಿಯಂತ್ರಣ:
ತೆಂಗಿನಕಾಯಿಯಲ್ಲಿ ಕಡಿಮೆ ಕಾರ್ಬೋಹೈಡ್ರೇಟ್ಗಳಿದ್ದು, ಹೆಚ್ಚಿನ ಫೈಬರ್ ಮತ್ತು ಕೊಬ್ಬು ಇರುತ್ತದೆ, ಆದ್ದರಿಂದ ಇದು ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಜೊತೆಗೆ ಅಮೈನೋ ಆಸಿಡ್ಗಳು, ಆರೋಗ್ಯಕರ ಕೊಬ್ಬುಗಳಿದ್ದು, ಇದು ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಉತ್ತಮ ಆಯ್ಕೆಯಾಗಿದೆ.

4. ಶಕ್ತಿಯುತವಾದ ಉತ್ಕರ್ಷಣ ನಿರೋಧಕ:
ತೆಂಗಿನ ತುರಿಯು ಫಿನಾಲಿಕ್ ಸಂಯುಕ್ತಗಳನ್ನು ಹೊಂದಿದ್ದು, ಇದು ಉತ್ಕರ್ಷಣ ನಿರೋಧಕಗಳಾಗಿವೆ. ಇವು ಜೀವಕೋಶಗಳನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಗ್ಯಾಲಿಕ್ ಆಮ್ಲ, ಕೆಫಿಕ್ ಆಮ್ಲ, ಸ್ಯಾಲಿಸಿಲಿಕ್ ಆಮ್ಲ, ಪಿ-ಕೂಮರಿಕ್ ಆಮ್ಲಗಳಂತಹ ಪಾಲಿಫೆನಾಲ್ ಆಂಟಿಆಕ್ಸಿಡೆಂಟ್ಗಳನ್ನು ತೆಂಗಿನಕಾಯಿ ಹೊಂದಿದ್ದು ಅದು ನಿಮ್ಮ ಕೋಶಗಳನ್ನು ಹಾನಿಯಿಂದ ರಕ್ಷಿಸುತ್ತದೆ, ಇದು ನಿಮ್ಮ ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

5. ನಿಮ್ಮ ಆಹಾರದಲ್ಲಿ ಸೇರಿಸುವುದು ಸುಲಭ:
ತೆಂಗಿನಕಾಯಿ ಅಡುಗೆಮನೆಯ ಬಹುಮುಖ ಪ್ರಯೋಜನ ಹೊಂದಿದ್ದು, ಸಿಹಿ ಮತ್ತು ಖಾರದ ಆಹಾರಗಳಲ್ಲಿ ಚೆನ್ನಾಗಿ ಕೆಲಸ ಮಾಡುತ್ತದೆ. ಕಡಿಮೆ ಕಾರ್ಬ್ ಬೇಕೆನ್ನುವವರಿಗೆ, ತೂಕ ಇಳಿಸುವ ಆಲೋಚನೆ ಮಾಡುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ತೆಂಗಿನಕಾಯಿ ನೀರು, ತೆಂಗಿನಹಾಲು, ಒಣತೆಂಗಿನ ಚೂರು, ಹಸಿತೆಂಗಿನಕಾಯಿ ತುರಿ ಹೀಗೇ ನಾನಾ ಬಗೆಯ ರೂಪದಲ್ಲಿ ಇದನ್ನು ಬಳಸಬಹುದು.
ತೆಂಗಿನಕಾಯಿಯ ಅಡ್ಡಪರಿಣಾಮಗಳು:
16-06-26 12:26 pm
HK News Staffer
ಧರ್ಮಸ್ಥಳದ ಬುರುಡೆ ಕೇಸಿಗೆ ಬಿಗ್ ಟ್ವಿಸ್ಟ್ ; ಎಸ್ಐಟ...
12-06-26 12:02 pm
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
15-06-26 11:18 am
HK News Staffer
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
ಕೇರಳದಲ್ಲಿ ಜೂನ್ 15ರಿಂದ 'ಪ್ರಿಯದರ್ಶಿನಿ' ಉಚಿತ ಬಸ್...
14-06-26 01:08 pm
16-06-26 11:35 am
HK News Staffer
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್:...
13-06-26 05:28 pm
16-06-26 08:32 pm
HK News Staffer
SIT Car Accident: ಎಸ್ಐಟಿ ಎಸ್ಪಿ ಸೈಮನ್ ಪ್ರಯಾಣಿಸ...
16-06-26 05:10 pm
Chandrashekhar, Belthangady: ಬೆಳ್ತಂಗಡಿ ಸರ್ಕಾರ...
16-06-26 02:34 pm
ಉಳ್ಳಾಲ ; ಸ್ನಾನಕ್ಕೆಂದು ಕೋಣೆಗೆ ತೆರಳಿದ್ದ ಪಿಯುಸಿ...
16-06-26 10:33 am
ಮಕ್ಕಳ ಕಣ್ಣೆದುರೇ ತಾಯಿಯ ಬರ್ಬರ ಹತ್ಯೆ! ಬೆಟ್ಟಿಂಗ್...
15-06-26 09:21 pm