ಬ್ರೇಕಿಂಗ್ ನ್ಯೂಸ್
28-08-21 05:36 pm Reena TK, Boldsky ಡಾಕ್ಟರ್ಸ್ ನೋಟ್
ಕೋವಿಡ್ 19ನಿಂದ ಚೇತರಿಸಿದವರಲ್ಲಿ ಬಹುತೇಕ ಜನರು ಇತರ ಆರೋಗ್ಯ ಸಂಬಂಧಿ ಸಮಸ್ಯೆ ಕಾಡುತ್ತಿರುವುದಾಗಿ ಹೇಳುತ್ತಿದ್ದಾರೆ. ಕೆಲವರಿಗೆ ಕೊರೊನಾ ಬಂದು ಹೋಗಿ ಹಲವು ತಿಂಗಳಾದರೂ ಎರಡು ಹೆಜ್ಜೆ ಇಡುವಷ್ಟರಲ್ಲಿ ತುಂಬಾ ಸುಸ್ತು ಆಗುತ್ತಿದೆ ಎಂದು ಹೇಳುತ್ತಿದ್ದಾರೆ.
ಕೋವಿಡ್ 19ನ ಗಂಭೀರ ರೋಗ ಲಕ್ಷಣಗಳು ಕಾಣಿಸಿಕೊಂಡು ಚೇತರಿಸಿಕೊಂಡವರಲ್ಲಿ ಈ ಲಕ್ಷಣಗಳು ಹೆಚ್ಚು ಕಂಡು ಬರುತ್ತಿವೆ, ಹೆಚ್ಚಿನ ಹಲ್ಲಿಗೆ ಸಂಬಂಧಿಸಿದ ಸಮಸ್ಯೆಗಳಿವೆ ಎಂದು ಹೇಳುತ್ತಿದ್ದಾರೆ. ತಜ್ಞರು ಕೋವಿಡ್ 19ನಿಂದ ಚೇತರಿಸಿದವರು ಹಲ್ಲುಗಳ ಶುಚಿತ್ವ ಹಾಗೂ ಆರೈಕೆ ಕಡೆ ಹೆಚ್ಚಿನ ಗಮನ ನೀಡಬೇಕೆಂದು ಹೇಳುತ್ತಿದ್ದಾರೆ.

ಬ್ಲ್ಯಾಕ್ ಫಂಗಸ್ ಅಪಾಯ
ಕೋವಿಡ್ 19ನಿಂದ ಚೇತರಿಸಿಕೊಂಡವರಿಗೆ ಬ್ಲ್ಯಾಕ್ ಫಂಗಸ್ ಅಪಾಯ ಹೆಚ್ಚು. ಆದ್ದರಿಂದ ಬಾಯಲ್ಲಿ ಹುಣ್ಣು, ದವಡೆಯಲ್ಲಿ ಊತ, ಹುಣ್ಣು ಮುಂತಾದ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬಾರದು. ಇವುಗಳನ್ನು ತಿಂಗಳವರೆಗೆ ನಿರ್ಲಕ್ಷ್ಯ ಮಾಡಿದರೆ ಅದು ಕ್ಯಾನ್ಸರ್ ಆಗಿ ಬದಲಾಗಬಹುದು. ಅಲ್ಲದೆ ಬ್ಲ್ಯಾಕ್ ಸಮಸ್ಯೆಯೂ ಆಗಿರಬಹುದು, ಏನೇ ಸಮಸ್ಯೆ ಆಗಿರಲಿ ಆರಂಭಿಕ ಹಂತದಲ್ಲಿ ಆದರೆ ಗುಣ ಪಡಿಸಲು ಸುಲಭ. ಆದ್ದರಿಂದ ಕೋವಿಡ್ 19 ಬಳಿಕ ಬಾಯಲ್ಲಿ ಹುಣ್ಣು, ಹಲ್ಲುಗಳಲ್ಲಿ ನೋವು ಮುಂತಾದ ಸಮಸ್ಯೆ ಇದ್ದರೆ ಕೂಡಲೇ ವೈದ್ಯರಿಗೆ ತೋರಿಸಿ.

ಹಲ್ಲುಗಳು ಹೋಗಬಹುದು
ಕೆಲವರಿಗೆ ಕೋವಿಡ್ 19 ಬಳಿಕ ದವಡೆಯಲ್ಲಿ ರಕ್ತಸ್ರಾವ, ಹಲ್ಲುಗಳಲ್ಲಿ ನೋವು ಕಂಡು ಬಂದಿರುವುದರಿಂದ ಹಲ್ಲುಗಳನ್ನು ತೆಗೆಯಬೇಕಾಗಿದೆ. ಆದ್ದರಿಂದ ಕೋವಿಡ್ನಿಂದ ಚೇರಿಸಿದವರು ಹಲ್ಲುಗಳ ಆರೈಕೆ ಕಡೆ ತುಂಬಾನೇ ಗಮನ ನೀಡಬೇಕು.

ಹಲ್ಲುಗಳ ಆರೈಕೆ ಹೀಗಿರಲಿ
ಮಲಗುವ ಮುನ್ನ ಹಲ್ಲುಜ್ಜಬೇಕು, ನಂತರ ಬಾಯಿಯನ್ನು ಚೆನ್ನಾಗಿ ಮುಕ್ಕಳಿಸಬೇಉ. ಸೇ. 1ರಷ್ಟು ಪೋವಿಡೋನ್ ಅಯೋಡಿಯನ್ ಮೌತ್ವಾಶ್ ಅನ್ನು ದಿನದಲ್ಲಿ ಬಾರಿ ಬಾಯಿಗೆ ಹಾಕಿ ಬಾಯಿ ಮುಕ್ಕಳಿಸುವುದು ಅವಶ್ಯಕವಾಗಿದೆ.

ಮಧುಮೇಹಿಗಳು ಹಲ್ಲುಗಳ ಆರೈಕೆಗೆ ತುಂಬಾನೇ ಗಮನ ನೀಡಬೇಕು
ಮಧುಮೇಹಿಗಳಿಗೆ ಬೇಗನೆ ಹಲ್ಲುಗಳ ಸಮಸ್ಯೆ ಕಾಡುವುದು. ಆದ್ದರಿಂದ ಹಲ್ಲುಗಳ ಆರೈಕೆ ಕಡೆ ತುಂಬಾನೇ ಗಮನ ನೀಡಿ, ಜೊತೆಗೆ ನಿಯಮಿತವಾಗಿ ದಂತ ವೈದ್ಯರನ್ನು ಕಾಣಿ. ಹಲ್ಲುಗಳ ಬಣ್ಣ ಬದಲಾವಣೆ, ದವಡೆಯಲ್ಲಿ ನೋವು, ಹಲ್ಲು ನೋವು ಇದ್ದರೆ ತುಂಬಾ ದಿನ ಕಾಯಬೇಡಿ, ಕೂಡಲೇ ವೈದ್ಯರಿಗೆ ತೋರಿಸಿ, ಚಿಕಿತ್ಸೆ ಪಡೆಯಿರಿ. ಇದರಿಂದಾಗಿ ಬ್ಲ್ಯಾಕ್ ಫಂಗಸ್ ತಡೆಗಟ್ಟಬಹುದು, ಜೊತೆಗೆ ಹಲ್ಲುಗಳ ಆರೈಕೆ ಮಾಡಬಹುದು.
31-07-26 01:22 pm
HK News Staffer
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ ; ಸಂಸದ ಶಶಿಕಾಂತ...
29-07-26 01:52 pm
31-07-26 01:26 pm
HK News Staffer
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
31-07-26 10:58 pm
HK News Staffer
Mangalore Help Deeksha: ದಿಢೀರ್ ಮೆದುಳು ಜ್ವರಕ್ಕ...
31-07-26 07:03 pm
ರಾಜಸ್ಥಾನದಿಂದ ಮಂಗಳೂರಿಗೆ ಬಂದು ಬೀದಿಯಲ್ಲಿ ಅಲೆದಾಡು...
30-07-26 07:51 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
31-07-26 10:53 pm
HK News Staffer
ಪಣಂಬೂರು ತೋಟ ಬೆಂಗ್ರೆ ಬೀಚ್ ನಲ್ಲಿ ಸಾಮೂಹಿಕ ಅತ್ಯಾಚ...
31-07-26 09:47 pm
Kundapura Murder, Latest Update: ಹಣಕಾಸು ದ್ವೇಷ...
31-07-26 08:30 pm
ಜೀವಾವಧಿ ಶಿಕ್ಷೆಗೀಡಾಗಿದ್ದ ವಿನಯ್ ಕುಲಕರ್ಣಿಗೆ ಹೈಕೋ...
31-07-26 06:01 pm
ಕಾವೂರಿನಲ್ಲಿ ಮದರಂಗಿ ಶಾಸ್ತ್ರದಲ್ಲಿ ತಲವಾರು ಏಟು ;...
31-07-26 02:21 pm