ಬ್ರೇಕಿಂಗ್ ನ್ಯೂಸ್
            
                        23-08-21 04:59 pm Shreeraksha, Boldsky ಡಾಕ್ಟರ್ಸ್ ನೋಟ್
            ಗರ್ಭಿಣಿಯಾಗುವುದು ಒಂದು ವಿಶೇಷ ಭಾವನೆಯಾಗಿದ್ದು, ಅದನ್ನು ಪದಗಳಲ್ಲಿ ವಿವರಿಸಲು ಅಸಾಧ್ಯ. ಸಂತೋಷ, ಸಂಭ್ರಮದ ಜೊತೆಗೆ ಸಾಕಷ್ಟು ಸವಾಲುಗಳು ಸಹ ಗರ್ಭಧಾರಣೆಯ ಜೊತೆಗೆ ಬಳುವಳಿಯಾಗಿ ಬರುವುದು. ತಿಂಗಳು ತುಂಬುತ್ತಾ ಹೋದಂತೆ, ದೈಹಿಕ ಅಸ್ವಸ್ಥತೆ, ಒತ್ತಡ, ಆತಂಕ ಎಲ್ಲವೂ ನಿಮ್ಮನ್ನು ಸುತ್ತುವರಿಯುತ್ತದೆ. ಇದರಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತವೆ, ಅವುಗಳಲ್ಲಿ ಒಂದು, ಹಸಿವಿನ ನಷ್ಟ.
ಸಾಮಾನ್ಯವಾಗಿ ಮೂರು ತಿಂಗಳು ತುಂಬಿದ ನಂತರ ತಿನ್ನಲು ಇಷ್ಟವಿಲ್ಲದಿರುವುದು ಮತ್ತು ಆಹಾರವನ್ನು ನೋಡಿದಾಗ ವಾಕರಿಕೆ ಭಾವನೆ ಹೆಚ್ಚಿನ ಗರ್ಭಿಣಿಯರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಇದು ಏಕೆ ಸಂಭವಿಸುತ್ತದೆ ಎಂಬುದು ಪ್ರತಿಯೊಬ್ಬ ಮಹಿಳೆಯ ಮನಸ್ಸಿನಲ್ಲಿ ಚಿಗುರುವ ಪ್ರಶ್ನೆ. ಅದಕ್ಕಾಗಿ ನಾವಿಂದು ಉತ್ತರ ನೀಡಲಿದ್ದೇವೆ.

ಕೆಲ ಗರ್ಭಿಣಿಯರಿಗೆ ಹಸಿವಾಗದೇ ಇರಲು ಕಾರಣಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:
ಗರ್ಭಾವಸ್ಥೆಯಲ್ಲಿ ಆರೋಗ್ಯಕರ ಆಹಾರ ತಿನ್ನುವುದು ಬಹಳ ಮುಖ್ಯವಾಗಿದೆ. ಹಸಿವು ಕಡಿಮೆಯಾಗುವುದು ಒಂದು ಸಾಮಾನ್ಯ ವಿದ್ಯಮಾನವಾಗಿದ್ದು, ಅದು ಮಹಿಳೆಯ ಆರೋಗ್ಯಕ್ಕೆ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ನೀವು ಗರ್ಭಿಣಿಯಾಗಿದ್ದರೆ, ಇಂತಹ ಸಮಸ್ಯೆಯನ್ನು ನೀವು ಎದುರಿಸುತ್ತಿದ್ದರೆ ಅದಕ್ಕೆ ಕಾರಣವಾಗುವ ಅಂಶಗಳನ್ನು ಈ ಕೆಳಗೆ ನೀಡಲಾಗಿದೆ. ಇದು ಒಬ್ಬರಿಗಿಂತ ಒಬ್ಬರಿಗೆ ಭಿನ್ನವಾಗಿರಬಹುದು.

ಹಾರ್ಮೋನ್ ಬದಲಾವಣೆ:
ಗರ್ಭಿಣಿಯರ ದೇಹವು ಈ ಸಮಯದಲ್ಲಿ ಬಹಳಷ್ಟು ಹಾರ್ಮೋನುಗಳ ಬದಲಾವಣೆಗಳನ್ನು ಅನುಭವಿಸುತ್ತದೆ. ಇದರಿಂದ ನಿಮ್ಮ ದೇಹವು ಕಾಣುವ ರೀತಿಯಲ್ಲಿ ಬದಲಾಗುತ್ತದೆ. ಲೆಪ್ಟಿನ್, ಗರ್ಭಧಾರಣೆಯ ಹಾರ್ಮೋನ್ ಆದ ಹ್ಯೂಮನ್ ಕೋರಿಯಾನಿಕ್ ಗೊನಡೋಟ್ರೋಪಿನ್ (ಎಚ್ಸಿಜಿ) ಗಳ ಏರಿಳಿತಗಳು ಹಸಿವಿನ ಮಟ್ಟವನ್ನು ಕಡಿಮೆ ಮಾಡಬಹುದು. ಜೊತೆಗೆ ನೋವು ಮತ್ತು ವಾಕರಿಕೆಯನ್ನು ಪ್ರಚೋದಿಸಬಹುದು. ಇವುಗಳೆಲ್ಲವೂ ಗರ್ಭಧಾರಣೆಯ ಆರಂಭಿಕ ತಿಂಗಳುಗಳಲ್ಲಿ ಕಂಡುಬರುತ್ತವೆ.

ಔಷಧಗಳು:
ಗರ್ಭಿಣಿಯರಿಗಾಗಿ ನೀಡುವ ಕೆಲವು ಔಷಧಿಗಳು ಹಸಿವಿನ ನಷ್ಟದಂತಹ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಗರ್ಭಿಣಿಯರು ಔಷಧಿಗಳನ್ನು ತೆಗೆದುಕೊಳ್ಳುವುದರಿಂದ, ಆಹಾರ ಪದ್ಧತಿ ಬದಲಾಗಬಹುದು ಮತ್ತು ಹಸಿವು ಕಡಿಮೆಯಾಗಬಹುದು. ಕೆಲವು ಔಷಧಿಗಳು ವಾಕರಿಕೆ, ವಾಂತಿ ಮತ್ತು ತಲೆತಿರುಗುವಿಕೆಗೆ ಕಾರಣವಾಗಬಹುದು. ಗರ್ಭಿಣಿಯರು ತಮ್ಮ ಔಷಧಿಗಳನ್ನು ಆದಷ್ಟು ತಡವಾಗಿ ಆರಂಭಿಸಲು ಮತ್ತು ಸ್ವಯಂ-ಔಷಧಿಗಳನ್ನು ತಪ್ಪಿಸಲು ವೈದ್ಯರು ಸಾಮಾನ್ಯವಾಗಿ ಶಿಫಾರಸು ಮಾಡುತ್ತಾರೆ.

ವಾಕರಿಕೆ:
2017 ರ ಅಧ್ಯಯನದ ಪ್ರಕಾರ, ಹೆಚ್ಚಿನ ವಾಕರಿಕೆಯಿಂದ ಬಳಲುತ್ತಿರುವ 70% ಮಹಿಳೆಯರು ತಮ್ಮ ಗರ್ಭಾವಸ್ಥೆಯಲ್ಲಿ ಆಹಾರ ಸೇವನೆ ಕಡಿಮೆಯಾಗಿದೆ ಎಂದು ದೂರಿದ್ದಾರೆ. ಮಾರ್ನಿಂಗ್ ಸಿಕ್ ನೆಸ್, ವಾಕರಿಕೆ ಮತ್ತು ವಾಂತಿಯು ಗರ್ಭಾವಸ್ಥೆಯ ಆರಂಭದಲ್ಲಿ ಕಂಡುಬರುವ ಕೆಲವು ಸಾಮಾನ್ಯ ಲಕ್ಷಣಗಳಾಗಿವೆ. ಇದು ಕಡುಬಯಕೆಗಳನ್ನು ಕಡಿಮೆ ಮಾಡುತ್ತದೆ, ಜೊತೆಗೆ ವಾಕರಿಕೆ ಭಾವನೆಯನ್ನು ಉಂಟುಮಾಡಬಹುದು. ದೀರ್ಘಕಾಲದ ವಾಕರಿಕೆಯ ಸ್ಥಿತಿಯನ್ನು ಹೊಂದಿರುವ ಮಹಿಳೆಯರು ಗರ್ಭಾವಸ್ಥೆಯಲ್ಲಿ ಹಸಿವು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು

ಕಳಪೆ ಮಾನಸಿಕ ಆರೋಗ್ಯ:
ಗರ್ಭಿಣಿ ಮಹಿಳೆಯರಲ್ಲಿ ಹಸಿವಿನ ನಷ್ಟಕ್ಕೆ ಅನೇಕ ಜನರು ಮಾನಸಿಕ ಸಮಸ್ಯೆಗಳನ್ನು ದೂರುತ್ತಾರೆ. ಗರ್ಭಾವಸ್ಥೆಯಲ್ಲಿ ಅಸ್ವಸ್ಥತೆ, ಒತ್ತಡ ಮತ್ತು ಆತಂಕಕ್ಕೆ ಒಳಗಾಗಿ, ಆಹಾರದ ಮೇಲಿನ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಕೆಲವು ಮಹಿಳೆಯರು ಖಿನ್ನತೆಯನ್ನು ಸಹ ಅನುಭವಿಸುತ್ತಾರೆ. ಪ್ರಸವಪೂರ್ವ ಅಥವಾ ಪ್ರಸವಾನಂತರದ ಖಿನ್ನತೆಯು ಹಸಿವು ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ತಮ್ಮ ತೂಕದ ಬಗ್ಗೆ ಜಾಗೃತರಾಗಿರುವ ಗರ್ಭಿಣಿಯರು ದೇಹ ಮತ್ತು ಮನಸ್ಸು ಎರಡರ ಮೇಲೂ ಪರಿಣಾಮ ಬೀರುವ ಅನಿಯಮಿತ ಆಹಾರ ಪದ್ಧತಿಯನ್ನು ಆಯ್ಕೆ ಮಾಡಿಕೊಂಡಿರುತ್ತಾರೆ.

ಕಳಪೆ ಹಸಿವನ್ನು ನಿರ್ವಹಿಸುವುದು ಹೇಗೆ?:
ಗರ್ಭಾವಸ್ಥೆಯಲ್ಲಿ ಊಟ ಬಿಡುವುದು ಒಳ್ಳೆಯದಲ್ಲ. ಸಾಕಷ್ಟು ಆಹಾರ ಸೇವಿಸದಿದ್ದರೆ, ನಿಮ್ಮ ಭ್ರೂಣದ ಆರೋಗ್ಯಕ್ಕೆ ಬೇಕಾದ ಪೌಷ್ಟಿಕಾಂಶ ಮತ್ತು ಶಕ್ತಿ ದೊರೆಯದೇ ಹೋಗಬಹುದು. ಆದ್ದರಿಂದ ಆಹಾರದ ಕಡೆಗೆ ಗಮನ ಕೊಡುವುದು ಮುಖ್ಯ.
(Kannada Copy of Boldsky Kannada)
            
            
            
    
            
             03-11-25 05:17 pm
                        
            
                  
                Bangalore Correspondent    
            
                    
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             03-11-25 10:47 pm
                        
            
                  
                Mangalore Correspondent    
            
                    
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
    
            
             04-11-25 02:11 pm
                        
            
                  
                Mangalore Correspondent    
            
                    
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm