ಬ್ರೇಕಿಂಗ್ ನ್ಯೂಸ್
21-07-21 01:45 pm Reena TK, BoldSky Kannada ಡಾಕ್ಟರ್ಸ್ ನೋಟ್
ಕಿವಿಯಲ್ಲಿ ಫಂಗಸ್ ಆಗುವುದು ಇಯರ್ ಫಂಗಲ್ ಇನ್ಫೆಕ್ಷನ್ ಅನೇಕರನ್ನು ಕಾಡುವ ಕಿವಿಯ ಸಮಸ್ಯೆಯಾಗಿದೆ, ಇದನ್ನು ವೈದ್ಯಕೀಯ ಭಾಷೆಯಲ್ಲಿ otomycosis (ಒಟೊಮೈಕೋಸಿಸ್) ಎಂದು ಕರೆಯಲಾಗುವುದು.
ಕಿವಿಯ ಫಂಗಸ್ ಸೋಂಕು ಎಂದರೇನು? ಲಕ್ಷಣಗಳೇನು, ಯಾರಿಗೆ ಈ ಸಮಸ್ಯೆ ಹೆಚ್ಚಾಗಿ ಕಾಡುವುದು, ತಡೆಗಟ್ಟುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ ನೋಡಿ:
ಕಿವಿಯಲ್ಲಿ ಫಂಗಸ್ ಸಮಸ್ಯೆ ಉಂಟಾಗಿದೆ ಎಂದು ಸೂಚಿಸುವ ಲಕ್ಷಣಗಳು
* ಕಿವಿಯಲ್ಲಿ ಒಂಥರಾ ತುರಿಕೆ ಕಂಡು ಬರುವುದು. ತುಂಬಾ ಹೆಚ್ಚಾದರೆ ನೋವು ಕಂಡು ಬರುವುದು.
* ಕಿವಿಯ ಒಳಭಾಗದ ಸಿಪ್ಪೆ ಏಳುವುದು
* ಕಿವಿಯಲ್ಲಿ ಗುಗ್ಗೆ ತುಂಬಾ ಇರದಿದ್ದರೂ ಕಿವಿಯಲ್ಲಿ ತುಂಬಾ ತುರಿಕೆ, ಕಿರಿಕಿರಿ ಉಂಟಾಗುವುದು.
* ಊತ * ಕಿವಿ ಒಳಗ್ಗೆ ಕೆಂಪಾಗುವುದು
* ಕಿವಿ ಬಂದ್ ಆದಂತೆ ಅನಿಸುವುದು
* ಕೇಳುವುದಕ್ಕೆ ತೊಂದರೆ
ಯಾರಿಗೆ ಫಂಗಲ್ ಇಯರ್ ಇನ್ಫೆಕ್ಷನ್ ಸೋಂಕು ಬರುತ್ತದೆ?
ಉಷ್ಣವಲಯದಲ್ಲಿ ವಾಸಿಸುವವರಲ್ಲಿ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ. ಅಲ್ಲದೆ ವಾಟರ್ ಸ್ಪೋರ್ಟ್ಸ್ನಲ್ಲಿ ಇರುವವರಿಗೆ, ಸ್ವಿಮ್ಮಿಂಗ್ ಮಾಡುವವರಿಗೆ ಈ ಸಮಸ್ಯೆ ಕಂಡು ಬರುವುದು.
ಫಂಗಲ್ ಇಯರ್ ಇನ್ಫೆಕ್ಷನ್ ಹೇಗೆ ಉಂಟಾಗುತ್ತದೆ?
ಕಿವಿಯಲ್ಲಿ ಗುಗ್ಗೆ ಬ್ಯಾಕ್ಟಿರಿಯಾಗಳಿಂದ ಕಿವಿಯನ್ನು ರಕ್ಷಣೆ ಮಾಡುತ್ತದೆ. ಗುಗ್ಗೆ ಕಮ್ಮಿಯಾದಾಗ ಬ್ಯಾಕ್ಟಿರಿಯಾಗಳು ಕಿವಿಯೊಳಗೆ ಹೋಗಿ ಈ ರೀತಿಯ ಸಮಸ್ಯೆ ಉಂಟಾಗುತ್ತದೆ.
* ಅಧಿಕ ಉಷ್ಣಾಂಷ ಇರುವ ಹಾಗೂ ತುಂಬಾ ಶೀತ ಇರುವ ಕಡೆ ವಾಸಿಸುವವರಿಗೆ ಈ ರೀತಿಯ ಸಮಸ್ಯೆ ಕಂಡು ಬರುವುದು.
* ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಅಥವಾ ಕಿವಿಯ ಸಮಸ್ಯೆ ಇರುವವರಲ್ಲಿ ಈ ಸಮಸ್ಯೆ ಕಂಡು ಬರುವುದು.
* ಗಂಭೀರ ಚರ್ಮ ಸಮಸ್ಯೆ ಇರುವವರಲ್ಲಿಯೂ ಈ ಸಮಸ್ಯೆ ಕಂಡು ಬರುವುದು.
ಯಾವಾಗ ವೈದ್ಯರನ್ನು ಕಾಣಬೇಕು?
ಕಿವಿಯಲ್ಲಿ ನೋವು, ತುರಿಕೆ ಅಥವಾ ಇತರ ಕಿರಿಕಿರಿ ಇದ್ದರೆ ವೈದ್ಯರನ್ನು ಕಾಣಬೇಕು. ವೈದ್ಯರು ಕಿವಿ, ಕಿವಿ ತಮಟೆ ಪರೀಕ್ಷಿಸಿ ಸೂಕ್ತ ಔಷಧಿ ಸೂಚಿಸಬಹುದು.
*ಕಿವಿಯನ್ನು ಸ್ವಚ್ಛ ಮಾಡಿ ಮಾತ್ರೆ ನೀಡಬಹುದು
*ಕೆಲವರಿಗೆ ಇಯರ್ ಡ್ರಾಪ್ ನೀಡಬಹುದು (ಕಿವಿ ಸಮಸ್ಯೆ ತುಂಬಾ ಇದ್ದರೆ ಮಾತ್ರ ಡ್ರಾಪ್ ನೀಡುತ್ತಾರೆ) ಹಾಗೂ ಈ ಸಮಸ್ಯೆ ತಡೆಗಟ್ಟಲು ಏನು ಮಾಡಬೇಕೆಂಬ ಸಲಹೆ ನೀಡುತ್ತಾರೆ.
ತಡೆಗಟ್ಟಲು ಏನು ಮಾಡಬೇಕು?
* ಸ್ವಿಮ್ಮಿಂಗ್ ಮಾಡುವಾಗ ಅಥವಾ ಸರ್ಫಿಂಗ್ ಮಾಡುವಾಗ ಕಿವಿಗೆ ನೀರು ನುಗ್ಗದಂತೆ ಎಚ್ಚರವಹಿಸಿ
* ಸ್ನಾನ ಮಾಡಿದ ಬಳಿಕ ಕಿವಿಯಲ್ಲಿರುವ ನೀರಿನಂಶ ಮೃದುವಾದ ಟವಲ್ನಿಂದ ತೆಗೆಯಿರಿ (ಬಡ್ಸ್ ಬಳಸಬೇಡಿ, ಬಳಸಿದರೆ ಸಮಸ್ಯೆ ಮತ್ತಷ್ಟು ಹೆಚ್ಚುವುದು)
* ಹತ್ತಿಯ ಉಂಡೆಗಳನ್ನು ಕಿವಿಗೆ ಇಡಬೇಡಿ (ಸ್ನಾನ ಮಾಡುವಾಗ ಮಾತ್ರ ಇಡಿ)
* ಕಿವಿಯನ್ನು ತುರಿಸುವುದು, ಉಜ್ಜುವುದು ಮಾಡಬೇಡಿ
* ಕಿವಿಗೆ ನೀರು ಹೋದರೆ acetic acid ಇಯರ್ ಡ್ರಾಪ್ ಬಳಸಿ.
12-08-25 10:39 pm
Bangalore Correspondent
Rajendra Swamiji of Kodimath, Dharmasthala: ಧ...
12-08-25 07:43 pm
ಕೆಎನ್ ರಾಜಣ್ಣ ರಾಜಿನಾಮೆ ಅಲ್ಲ, ಸಚಿವ ಸ್ಥಾನದಿಂದ ಕಿ...
11-08-25 11:01 pm
ರಾಜ್ಯಪಾಲರ ವಿರುದ್ಧ ಅವಹೇಳನ ಹೇಳಿಕೆ ; ಐವಾನ್ ಡಿಸೋಜ...
11-08-25 10:26 pm
KN Rajanna resigns: ಸಹಕಾರ ಸಚಿವ ಕೆ.ಎನ್ ರಾಜಣ್ಣ...
11-08-25 03:29 pm
13-08-25 11:56 am
HK News Desk
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
'ದೇಶ ಸುರಕ್ಷಿತ ಕೈಯಲ್ಲಿದೆ' ; ನರೇಂದ್ರ ಮೋದಿ ಸರ್ಕ...
12-08-25 02:49 pm
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
ಕರ್ನಾಟಕ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಾರ್ವತ್ರಿ...
12-08-25 11:35 am
13-08-25 01:49 pm
Mangalore Correspondent
ಶವ ಹೂತ ಪ್ರಕರಣ ; ಕೊನೆಗೂ ಎಂಟ್ರಿಯಾದ ರಾಷ್ಟ್ರೀಯ ಮಾ...
13-08-25 10:37 am
ನಿಯಂತ್ರಣ ತಪ್ಪಿದ ಸ್ಕೂಟರ್ ಆವರಣ ಗೋಡೆಗೆ ಡಿಕ್ಕಿ ;...
13-08-25 10:17 am
ಧರ್ಮಸ್ಥಳ ಕೇಸ್ ; ಜಿಪಿಆರ್ ಬಳಸಿದರೂ ಸಿಗಲಿಲ್ಲ ಎಲುಬ...
12-08-25 11:06 pm
ಕೆಂಪು ಕಲ್ಲು ಗಣಿಗಾರಿಕೆಗೆ ಶೀಘ್ರದಲ್ಲೇ ಹೊಸ ನಿಯಮ ;...
12-08-25 08:34 pm
13-08-25 04:14 pm
HK News Desk
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm
ಸ್ನೇಹಿತನಿಗೆ ಬೆತ್ತಲೆ ವೀಡಿಯೋ ಶೇರ್ ಮಾಡಿದ್ಲು ಯುವತ...
08-08-25 10:07 pm
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm