ಬ್ರೇಕಿಂಗ್ ನ್ಯೂಸ್
02-07-21 02:23 pm Shreeraksha, BoldSky Kannada ಡಾಕ್ಟರ್ಸ್ ನೋಟ್
ಬೇಸಿಗೆಯ ದಿನಗಳಲ್ಲಿ ಅತಿಯಾದ ಬಾಯಾರಿಕೆ ಆಗುವುದು ಸಾಮಾನ್ಯ. ಆದರೆ ಬೇರೆ ಋತುಮಾನದಲ್ಲೂ ಹೇಳಿಕೊಳ್ಳಲಾಗದಷ್ಟು ಬಾಯಾರಿಕೆಯಿಂದ ಬಳಲುತ್ತಿದ್ದೀರಾ? ಹಾಗಾದರೆ ಇದು ನೀವು ಯಾವುದೋ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದೀರಾ ಎಂದು ಸೂಚಿಸುವ ಲಕ್ಷಣವಾಗಿದೆ. ಇಂತಹ ಸಮಸ್ಯೆಗಳಿಗೆ ಚಿಕಿತ್ಸೆ ನೀಡದಿದ್ದರೆ ಮುಂದೆ ಅದು ಅಪಾಯದ ಮಟ್ಟಕ್ಕೆ ತಲುಪಬಹುದು. ಆದ್ದರಿಂದ ಇಲ್ಲಿ ನಾವು ಅತಿಯಾಗಿ ಬಾಯಾರಿಕೆ ಆಗುವುದು ಯಾವ ಆರೋಗ್ಯ ಸಮಸ್ಯೆಗಳೆಂಬುದನ್ನು ಹೇಳಿದ್ದೇವೆ.

ಮಧುಮೇಹ:
ನಿಮ್ಮ ದೇಹದ ಜೀವಕೋಶಗಳಲ್ಲಿ ಇನ್ಸುಲಿನ್ ಕಡಿಎಯಾದಾಗ, ರಕ್ತದಿಂದ ಹೆಚ್ಚುವರಿ ಸಕ್ಕರೆಯನ್ನು ತೆಗೆದುಹಾಕಲು ಮೂತ್ರಪಿಂಡವು ಹೆಚ್ಚು ಶ್ರಮಿಸಬೇಕು. ಇದರ ಪರಿಣಾಮವೇ ಪದೇ ಪದೇ ಮೂತ್ರ ವಿಸರ್ಜನೆ ಆಗುವುದು. ಇದು ಹೆಚ್ಚು ನೀರು ಕುಡಿಯಲು ಪ್ರೇರೆಪಿಸುತ್ತದೆ. ಆದ್ದರಿಂದ ಮೊದಲಿಗಿಂತ ಹೆಚ್ಚು ನೀರನ್ನು ಕುಡಿಯಲು ಬಯಸುತ್ತೀರಿ. ಆಗಾಗ್ಗೆ ಮೂತ್ರ ವಿಸರ್ಜನೆ ಮತ್ತು ಅತಿಯಾದ ಬಾಯಾರಿಕೆ ಮಧುಮೇಹದ ಎರಡು ಆರಂಭಿಕ ಚಿಹ್ನೆಗಳಾಗಿವೆ.
ರಕ್ತಹೀನತೆ:
ರಕ್ತಹೀನತೆ ಎಂದರೆ ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗುವುದು. ಅಸಮರ್ಪಕ ಆಹಾರ ಅಥವಾ ಹೆಚ್ಚು ರಕ್ತಸ್ರಾವದಂತಹ ಹಲವಾರು ಕಾರಣಗಳಿಂದ ಇದು ಉಂಟಾಗುತ್ತದೆ. ನಿರ್ಜಲೀಕರಣವು ರಕ್ತಹೀನತೆಯ ಸಾಮಾನ್ಯ ಸಂಕೇತವಾಗಿದ್ದು, ನೀವು ತೀವ್ರವಾದ ರಕ್ತಹೀನತೆಯನ್ನು ಹೊಂದಿದಾಗ ಅತಿಯಾಗಿ ಬಾಯಾರಿಕೆ ಆಗಲು ಆರಂಭವಾಗುತ್ತದೆ. ತಲೆತಿರುಗುವಿಕೆ, ಆಯಾಸ, ಬೆವರುವುದು ಈ ಸ್ಥಿತಿಯ ಇತರ ಲಕ್ಷಣಗಳಾಗಿವೆ.

ಹೈಪರ್ಕಾಲ್ಸೆಮಿಯಾ:
ಹೈಪರ್ಕಾಲ್ಸೆಮಿಯಾ ಎನ್ನುವುದು ದೇಹದಲ್ಲಿರುವ ಕ್ಯಾಲ್ಸಿಯಂ ಪ್ರಮಾಣ ಅಪಾಯಕಾರಿ ಮಟ್ಟಕ್ಕೆ ಹೆಚ್ಚಾಗುವ ಸ್ಥಿತಿಯಾಗಿದೆ. ಅತಿಯಾದ ಪ್ಯಾರಾಥೈರಾಯ್ಡ್ ಗ್ರಂಥಿಗಳು, ಕ್ಷಯ ಮತ್ತು ಕ್ಯಾನ್ಸರ್ ನಿಂದಲೂ ಇದು ಸಂಭವಿಸಬಹುದು. ಬಾಯಾರಿಕೆಯ ಭಾವನೆ ಹೈಪರ್ಕಾಲ್ಸೆಮಿಯಾದ ಮೊದಲ ಲಕ್ಷಣವಾಗಿದೆ. ರಕ್ತದಲ್ಲಿನ ಕ್ಯಾಲ್ಸಿಯಂ ಹೆಚ್ಚಾದಾಗ ಮೂಳೆಗಳು ದುರ್ಬಲಗೊಳ್ಳಬಹುದು ಜೊತೆಗೆ ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗಬಹುದು.
ಬಾಯಿ ಒಣಗುವುದು:
ಲಾಲಾರಸ ಗ್ರಂಥಿಗಳು ಸಾಕಷ್ಟು ಲಾಲಾರಸವನ್ನು ಬಿಡುಗಡೆ ಮಾಡದಿದ್ದಾಗ, ಅದು ನಿಮಗೆ ಅತಿಯಾದ ಬಾಯಾರಿಕೆಯನ್ನು ಉಂಟುಮಾಡಬಹುದು. ಕೆಲವು ಔಷಧಿಗಳು, ಕ್ಯಾನ್ಸರ್ ಅಥವಾ ತಂಬಾಕು ಬಳಕೆಯಂತಹ ಅಭ್ಯಾಸಗಳಿಂದ ಇದು ಸಂಭವಿಸಬಹುದು. ಇದರ ಇತರ ಲಕ್ಷಣಗಳೆಂದರೆ ಬಾಯಿಯ ದುರ್ವಾಸನೆ, ರುಚಿಯಲ್ಲಿ ಬದಲಾವಣೆ, ಒಸಡಿನಲ್ಲಿ ಸಮಸ್ಯೆ ಮತ್ತು ಅಗಿಯುವುದರಲ್ಲಿ ತೊಂದರೆ ಉಂಟಾಗಬಹುದು.

ಗರ್ಭಧಾರಣೆ:
ಗರ್ಭಧಾರಣೆಯ ಹಲವಾರು ಲಕ್ಷಣಗಳಲ್ಲಿ ಅತಿಯಾದ ಬಾಯಾರಿಕೆ ಕೂಡ ಒಂದು. ಇದು ಸಮಸ್ಯೆಯಲ್ಲ, ಎಚ್ಚರಿಕೆಯ ಚಿಹ್ನೆ ಅಷ್ಟೇ. ಮೊದಲ ತ್ರೈಮಾಸಿಕದಲ್ಲಿ, ರಕ್ತದ ಪ್ರಮಾಣವು ಹೆಚ್ಚಾಗುತ್ತದೆ, ಇದರಿಂದ ಮೂತ್ರವೂ ಹೆಚ್ಚಾಗುವುದು. ಆಗ ನಿಮ್ಮ ದೇಹದಲ್ಲಾಗುವ ನೀರಿನ ನಷ್ಟದಿಂದ ಬಾಯಾರಿಕೆ ಉಂಟಾಗುತ್ತದೆ. ಇದು ನೀರಿನ ನಷ್ಟದ ಪ್ರಮಾಣವನ್ನು ನೀವು ಪುನಃ ತುಂಬಿಸಬೇಕೆನ್ನುವ ಸೂಚನೆಯಾಗಿದೆ.
(Kannada Copy of Boldsky Kannada)
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 06:52 pm
HK News Staffer
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm