ಬ್ರೇಕಿಂಗ್ ನ್ಯೂಸ್
26-06-21 01:29 pm Shreeraksha, BoldSky Kannada ಡಾಕ್ಟರ್ಸ್ ನೋಟ್
ಸೌಂದರ್ಯವರ್ಧಕಗಳ ಉತ್ಪಾದನೆಯಲ್ಲಿ ಹೂವುಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಹೂವುಗಳಲ್ಲಿ ವಿಟಮಿನ್ ಮತ್ತು ಉತ್ಕರ್ಷಣ ನಿರೋಧಕಗಳು ಅಧಿಕವಾಗಿರುವುದರಿಂದ ತ್ವಚೆಯನ್ನು ಬೆಳಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಆಯುರ್ವೇದ ಹೇಳುತ್ತದೆ. ಅಷ್ಟೇ ಅಲ್ಲ, ಹೂವುಗಳು ನಮ್ಮ ಚರ್ಮವನ್ನು ಮೃದುಗೊಳಿಸುವುದರ ಜೊತೆಗೆ ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಆದ್ದರಿಂದ ನಿಮ್ಮ ಚರ್ಮದ ರಕ್ಷಣೆಯ ದಿನಚರಿಯಲ್ಲಿ ಬಳಸಬಹುದಾದ ಕೆಲವು ಹೂವುಗಳನ್ನು ಇಲ್ಲಿ ನಾವು ಹೇಳಲಿದ್ದೇವೆ.
ತ್ವಚೆಯ ರಕ್ಷಣೆಯಲ್ಲಿ ಬಳಸಬಹುದಾದ ಹೂವುಗಳ ಬಗ್ಗೆ ಈ ಕೆಳಗೆ ವಿವರಿಸಲಾಗಿದೆ:
ಕ್ಯಾಮೊಮೈಲ್:
ಕ್ಯಾಮೊಮೈಲ್ ಹೂವು ಉರಿಯೂತದ ಮತ್ತು ಜೀವವಿರೋಧಿ ಲಕ್ಷಣಗಳೊಂದಿಗೆ ವಿಶ್ರಾಂತಿ ಗುಣಲಕ್ಷಣಗಳನ್ನು ಹೊಂದಿದೆ. ಕ್ಯಾಮೊಮೈಲ್ ಹೂವುಗಳಲ್ಲಿರುವ ಈ ಗುಣಲಕ್ಷಣಗಳು ತ್ವಚೆಯನ್ನು ಶಾಂತಗೊಳಿಸಲು ಬಹಳ ಪರಿಣಾಮಕಾರಿ. ಇದನ್ನು ಬಳಸುವ ವಿಧಾನ ಇಲ್ಲಿದೆ.
ಮಲ್ಲಿಗೆ ಹೂ:
ಮಲ್ಲಿಗೆಯನ್ನು ಲೋಷನ್, ಸಾಬೂನು ಮತ್ತು ಫೇಸ್ ಕ್ರೀಮ್ಗಳಂತಹ ವಿವಿಧ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ನಿಮ್ಮ ಚರ್ಮದ ದಿನಚರಿಯಲ್ಲಿ ಮಲ್ಲಿಗೆಯನ್ನು ಸೇರಿಸುವುದರಿಂದ ಹಾನಿಯಾದ ತ್ವಚೆಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಬಳಸುವ ವಿಧಾನ ಈ ಕೆಳಗಿದೆ.
ಚೆಂಡು ಹೂವು:
ಈ ಹೂವು ಚಳಿಗಾಲದಲ್ಲಿ ಲಭ್ಯವಿದ್ದು, ಇದು ಉರಿಯೂತದ ಪರಿಣಾಮಗಳನ್ನು ಹೊಂದಿದೆ. ಇದನ್ನು ನಿಯಮಿತವಾಗಿ ಬಳಸುವುದರಿಂದ ತ್ವಚೆಯನ್ನು ಕಾಂತಿಯುತಗೊಳಿಸಬಹುದು. ಅದಕ್ಕಾಗಿ ಹೀಗೆ ಮಾಡಿ.
ಚೆಂಡು ಹೂವಿನ ಎಲೆಗಳನ್ನು ಪುಡಿಮಾಡಿ, ಪೇಸ್ಟ್ ತಯಾರಿಸಿ
ಅದನ್ನು ನಿಮ್ಮ ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಬಿಡಿ
ನಂತರ ನಿಮ್ಮ ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ
ಗುಲಾಬಿ:
ಗುಲಾಬಿಗಳು ನೈಸರ್ಗಿಕವಾಗಿ ನಿಮ್ಮ ಮುಖವನ್ನು ಹೈಡ್ರೇಟಿಂಗ್ ಮತ್ತು ತಂಪಾಗಿಸುತ್ತವೆ. ಗುಲಾಬಿ ನೀರು ಚರ್ಮದಲ್ಲಿನ ತೇವಾಂಶವನ್ನು ಲಾಕ್ ಮಾಡಲು ಮತ್ತು ರಂಧ್ರಗಳನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ.
ಈ ಫೇಸ್ ಪ್ಯಾಕ್ ಮಾಡಲು ಬೆಚ್ಚಗಿನ ಹಾಲು, ಜೇನುತುಪ್ಪ ಮತ್ತು ಗೋಧಿ ಹಿಟ್ಟಿನೊಂದಿಗೆ ಕೆಲವು ಚಮಚ ರೋಸ್ ವಾಟರ್ ಬೆರೆಸಿ, ಪೇಸ್ಟ್ ತಯಾರಿಸಿ, ಇದನ್ನು ಪ್ಯಾಕ್ ರೀತಿ ಹಚ್ಚಿಕೊಳ್ಳಿ. ಒಂದು ಗಂಟೆ ಬಿಟ್ಟು, ತೊಳೆಯಿರಿ.
ಕಮಲ:
ಪವಿತ್ರ ಕಮಲವು ಹೈಡ್ರೇಟಿಂಗ್ ಗುಣಗಳಿಗೆ ಹೆಸರುವಾಸಿಯಾಗಿದ್ದು, ಉತ್ತಮ ಜೀವಸತ್ವಗಳಿಂದ ಕೂಡಿದೆ. ಇದು ತ್ವಚೆಯ ವಯಸ್ಸಾಗುವಿಕೆಯ ವಿರೋಧಿ ಮತ್ತು ಹೊಳೆಯುವಂತಹ ಫಲಿತಾಂಶ ನೀಡುವುದು. ಕಮಲದಲ್ಲಿರುವ ವಿಟಮಿನ್ಗಳು ಮೊಡವೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದಕ್ಕಾಗಿ ಕಮಲದ ಎಲೆಗಳನ್ನು ಪುಡಿಮಾಡಿ ಒಂದು ಚಿಟಿಕೆ ಅರಿಶಿನ ಸೇರಿಸಿ, ದಪ್ಪ ಪೇಸ್ಟ್ ತಯಾರಿಸಲು ಕೆಲವು ಹನಿ ನೀರನ್ನು ಸೇರಿಸಿ. ನಿಮ್ಮ ಮುಖದ ಮೇಲಿನ ಮೊಡವೆಗಳನ್ನು ಕಡಿಮೆ ಮಾಡಲು ಅದರ ಮೇಲೆ ಈ ಪೇಸ್ಟ್ ಹಚ್ಚಿ. ತೊಳೆಯಿರಿ
(Kannada Copy of Boldsky Kannada)
15-06-25 09:29 pm
Bangalore Correspondent
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
A.H. Vishwanath, CM Sidddaramaiah ; ನವೆಂಬರ್ ನ...
14-06-25 07:45 pm
Bike Taxi, Ola, Uber, Karnataka: ರ್ಯಾಪಿಡೋ, ಉ...
13-06-25 08:47 pm
Agumbe Ghat, Closed: ಜೂ.15ರಿಂದ - ಸೆ. 30ರವರೆಗೆ...
13-06-25 07:01 pm
16-06-25 01:33 pm
HK News Desk
ಅಹಮದಾಬಾದ್ ಬೆನ್ನಲ್ಲೇ ಮತ್ತೊಂದು ದುರಂತ ; ಕೇದಾರನಾ...
15-06-25 10:29 pm
Israel Iran War, Generals Killed: ಮೂರನೇ ಮಹಾಯು...
14-06-25 12:00 pm
Kasaragod Deputy Tahsildar Suspended: ವಿಮಾನ ದ...
13-06-25 11:09 pm
Air India Plane Crash, Black Box Recovered: ವ...
13-06-25 10:42 pm
16-06-25 12:30 pm
Mangalore Correspondent
ನೆಲ್ಯಾಡಿ ಬಳಿ ಭೀಕರ ಅಪಘಾತ ; ನಿಲ್ಲಿಸಿದ್ದ ಲಾರಿಗೆ...
16-06-25 12:13 pm
Mangalore Fire, Deralakatte Hostel, Rain: ಜಡಿ...
15-06-25 11:04 pm
Kadri Kaibattal, Mangalore Rain, Landslide: ಕ...
15-06-25 09:50 pm
Mangalore Rain, School Holiday: ರೆಡ್ ಅಲರ್ಟ್ ಮ...
15-06-25 09:35 pm
14-06-25 11:02 pm
Bangalore Correspondent
Lokayukta Corruption, Bengaluru SP Srinath Jo...
14-06-25 05:59 pm
Mangalore, Yeyyadi Bar, Murder, Kaushik: ಯೆಯ್...
13-06-25 07:30 pm
Mangalore, Puttur, Dr Adarsh, Sullia, Marriag...
13-06-25 05:37 pm
Goa Rape, Calangute Beach: ಬಕ್ರೀದ್ ಪಾರ್ಟಿಗೆ ಬ...
12-06-25 12:31 pm