ಬ್ರೇಕಿಂಗ್ ನ್ಯೂಸ್
04-06-21 03:31 pm Shreeraksha, BoldSky Kannada ಡಾಕ್ಟರ್ಸ್ ನೋಟ್
ಇಂದಿನ ಕಾಲದಲ್ಲಿ ಮುಖ ತೊಳೆಯುವ ಫೇಸ್ ವಾಶ್ ನಿಂದ ಹಿಡಿದು, ಫೇಸ್ ಮಾಸ್ಕ್, ಕ್ರೀಮ್ ಗಳವರೆಗೂ ಸೌಂದರ್ಯ ಸಾಧನವಾಗಿ ಬಳಸುವ ಪ್ರತಿಯೊಂದು ಉತ್ಪನ್ನಗಳಲ್ಲಿಯೂ ವಿಟಮಿನ್ ಸಿ ಇರುವುದು. ಈ ವಿಟಮಿನ್ ಸಿ ತ್ವಚೆಯ ರಕ್ಷಣೆಗೆ ಬಳಸುವ ಉತ್ಪನ್ನಗಳಲ್ಲಿ ಅತ್ಯಂತ ಜನಪ್ರಿಯ ನೈಸರ್ಗಿಕ ಸಾರಗಳಲ್ಲಿ ಒಂದಾಗಿದೆ. ಗ್ರಾಹಕರು ಹಿಂದೆಂದಿಗಿಂತಲೂ ಹೆಚ್ಚು ವಿದ್ಯಾವಂತರು ಮತ್ತು ಸೌಂದರ್ಯ ಜಾಗೃತರಾಗಿರುವುದರಿಂದ, ನೈಸರ್ಗಿಕ ಸಾರಗಳಿಂದ ಸಮೃದ್ಧವಾಗಿರುವ ಉತ್ಪನ್ನಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಹಾಗಾದರೆ ಅದರ ಪ್ರಯೋಜನಗಳೇನು ಎಂಬುದನ್ನು ನೊಡೋಣ.

ಸೂರ್ಯನ ಕಿರಣಗಳಿಂದ ಆಗುವ ಹಾನಿಯನ್ನು ತಡೆಯುವುದು:
ವಿಟಮಿನ್ ಸಿ ಯ ಪ್ರಮುಖ ಪ್ರಯೋಜನಗಳಲ್ಲಿ ಫೋಟೊಪ್ರೊಟೆಕ್ಷನ್ ಒಂದು. ಇದರರ್ಥ ಮೂಲಭೂತವಾಗಿ ವಿಟಮಿನ್ ಸಿ ಸೂರ್ಯನ ಕಠಿಣ ಕಿರಣಗಳಿಂದ ಉಂಟಾಗುವ ಹಾನಿಯಿಂದ ನಿಮ್ಮನ್ನು ಉಳಿಸುತ್ತದೆ. ಇದಲ್ಲದೆ, ಈ ಹಿಂದೆ ಸುರ್ಯನ ಕಿರಣಗಳಿಂದ ಆದ ಹಾನಿಯನ್ನು ಸರಿ ಮಾಡಿ, ಕೋಮಲ ತ್ವಚೆಯನ್ನು ನೀಡುವುದು.

ಕಲೆಯನ್ನು ಕಡಿಮೆ ಮಾಡುವುದು:
ಮುಖದ ಮೇಲಿನ ಕಲೆಗಳು ಅಥವಾ ಚರ್ಮದ ಬಣ್ಣವನ್ನು ಬದಲಾಗಲು ಸಾಕಷ್ಟು ಕಾರಣಗಳಿವೆ. ವಯಸ್ಸಾಗುವಿಕೆ, ವಿಟಮಿನ್ ಕೊರತೆ ಅಥವಾ ಪೋಷಕಾಂಶಗಳ ಕೊರತೆ ಹೀಗೆ. ಆದರೆ ವಿಟಮಿನ್ ಸಿ ಹೆಚ್ಚು ಈ ಕಲೆಗಳನ್ನು ಕಡಿಮೆ ಮಾಡಿ. ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ. ಆದಕ್ಕೆ ನಿಮ್ಮ ಆಹಾರದಲ್ಲಿ ವಿಟಮಿನ್ ಸಿ ಅನ್ನು ಹೆಚ್ಚೆಚ್ಚು ಸೇರಿಸಿ.

ಸೂಕ್ಷ್ಮ ರೇಖೆಗಳನ್ನು ಕಡಿಮೆ ಮಾಡುವುದು:
ತ್ವಚೆಯ ಮೇಲೆ ಉಂಟಾಗುವ ರೇಖೆಗಳು ವಯಸ್ಸಾಗುವಿಕೆಯ ಪರಿಣಾಮವಾಗಿರಬಹುದು. ಆದರೆ ವಿಟಮಿನ್ ಸಿ ಸೀರಮ್ ಗಳ ನಿಯಮಿತ ಬಳಕೆಯಿಮದ ನಿಮ್ಮ ಸುಕ್ಕಾಗುವಿಕೆ ಅಥವಾ ಸೂಕ್ಷ್ಮ ರೇಖೆಗಳು ಉಂಟಾಗುವುದನ್ನು ಬಹಳ ಸಮಯ ಮುಂದೂಡಬಹುದು. ಈ ಗೆರೆಗಳನ್ನು ಮರೆಯಾಗಿಸುವ ಮತ್ತು ಯಾವುದೇ ಚಿಂತೆಯಿಲ್ಲದೆ ಕಿರುನಗೆ ಬಿರಲು ನಿಮಗೆ ಸಹಾಯ ಮಾಡುವ ಮಾರ್ಗ ಇದಾಗಿದೆ.
ಹೈಡ್ರೇಟಿಂಗ್ ಮಾಡುವುದು:
ವಿಟಮಿನ್ ಸಿ ಚರ್ಮವನ್ನು ಆಳವಾಗಿ ಹೈಡ್ರೇಟ್ ಮಾಡುವುದಲ್ಲದೇ, ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಉತ್ತಮ ಜಲಸಂಚಯನವು ಆರೋಗ್ಯಕರ ಚರ್ಮದ ಅತ್ಯಂತ ಮುಖ್ಯ ಅಂಶವಾಗಿದೆ. ಆದ್ದರಿಂದ ವಿಟಮಿನ್ ಸಿ ಇರುವ ಫೇಸ್ ಮಾಸ್ಕ, ಹಣ್ಣಿನ ಸಿಪ್ಪೆಯ ಮಾಸ್ಕ, ಕ್ರೀಮ್ ಗಳ ಕಡೆಗೆ ಹೆಚ್ಚು ಗಮನ ಕೊಡಿ.
(Kannada Copy of Boldsky Kannada)
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 12:50 pm
HK News Staffer
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm