ಬ್ರೇಕಿಂಗ್ ನ್ಯೂಸ್
16-04-21 07:24 pm source: BOLDSKY ಡಾಕ್ಟರ್ಸ್ ನೋಟ್
ಕೆಲವು ಜನರ ದೇಹವು ಕೊಬ್ಬನ್ನು ಹೊಂದಿರದಿದ್ದರೂ, ಹೊಟ್ಟೆಯ ಭಾಗವು ಉಬ್ಬಿರುವುದನ್ನು ನೀವು ಗಮನಿಸಿರಬೇಕು. ಅಂದರೆ ಹೊಟ್ಟೆಯ ಕೆಳಭಾಗವು ಅವರ ದೇಹದ ಉಳಿದ ಭಾಗಗಳಿಗೆ ಹೋಲಿಸಿದರೆ ಹೊರಕ್ಕೆ ಬರುತ್ತದೆ. ವಾಸ್ತವವಾಗಿ, ಇಂದಿನ ಕಾಲದಲ್ಲಿ, ಹೆಚ್ಚಿನ ಜನರು ಇಂತಹ ಸಮಸ್ಯೆಗೆ ಬಲಿಯಾಗುತ್ತಾರೆ. ಈ ಸಂದರ್ಭದಲ್ಲಿ, ಸಮಸ್ಯೆಯನ್ನು ಪರಿಹರಿಸುವ ಮೊದಲು, ಇದು ಯಾವ ಕಾರಣಗಳಿಗಾಗಿ ಸಂಭವಿಸುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಇದರ ನಂತರ ನೀವು ನಿಮ್ಮ ದಿನಚರಿಯನ್ನು ಬದಲಾಯಿಸಬಹುದು ಮತ್ತು ನಿಮ್ಮನ್ನು ಸದೃಢವಾಗಿರಿಸಿಕೊಳ್ಳಬಹುದು.
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವ ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:
ಸರಿಯಾದ ನಿದ್ರೆ:
ನೀವು ಮಲಗುವ ಹಾಗೂ ಏಳುವ ಸಮಯಗಳು ಅನಿಯಮಿತವಾಗಿದ್ದರೆ ಅದರ ಬಗ್ಗೆ ಸ್ವಲ್ಪ ಗಮನ ಹರಿಸಬೇಕು. ನಿದ್ರೆ ಬರದ ಕಾರಣ ನಿಮ್ಮ ದೇಹ ಮತ್ತು ಮನಸ್ಸಿನ ಮೇಲೆ ಅದರ ಪರಿಣಾಮವಾಗುತ್ತದೆ. ನಿಮ್ಮ ದಿನಚರಿ ಹದಗೆಡುತ್ತದೆ ಮತ್ತು ನೀವು ಏನನ್ನಾದರೂ ತರಾತುರಿಯಲ್ಲಿ ತಿನ್ನುತ್ತೀರಿ, ಇದರಿಂದಾಗಿ ನಿಮ್ಮ ಹೊಟ್ಟೆಯ ಕೊಬ್ಬು ಉಂಟಾಗುತ್ತದೆ.
ಎಣ್ಣೆ, ಹಿಟ್ಟು ಮತ್ತು ಸಕ್ಕರೆಯನ್ನು ಸೇವಿಸಬೇಡಿ:
ನಿಮ್ಮ ಆಹಾರದಲ್ಲಿ ಎಣ್ಣೆ, ಹಿಟ್ಟು ಮತ್ತು ಸಕ್ಕರೆ ಸೇವನೆಯನ್ನು ಕಡಿಮೆ ಮಾಡಬೇಕು. ವಿಶೇಷವಾಗಿ ರಾತ್ರಿಯ ಸಮಯದಲ್ಲಿ, ನಿಮ್ಮ ದೇಹ ಈ ವಸ್ತುಗಳನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲಾಗುವುದಿಲ್ಲ, ಇದರಿಂದಾಗಿ ಹೊಟ್ಟೆಯಲ್ಲಿ ಕೊಬ್ಬು ಶೇಖರಣೆಯಾಗುತ್ತದೆ.
ಏಕಕಾಲದಲ್ಲಿ ಬಹಳಷ್ಟು ಆಹಾರವನ್ನು ಸೇವಿಸಬೇಡಿ:
ಅನೇಕ ಜನರು ದಿನಕ್ಕೆ ಎರಡು ಬಾರಿ ತಿನ್ನುತ್ತಾರೆ. ಇದರಲ್ಲಿ ಅವರು ಹಸಿವುಗಿಂತ ಹೆಚ್ಚಿನ ಪ್ರಮಾಣದ ಆಹಾರವನ್ನು ತಿನ್ನುತ್ತಾರೆ ಅದು ಅವರಿಗೆ ಹಾನಿಕಾರಕವಾಗಿದೆ. ಒಂದೇ ಸಮಯದಲ್ಲಿ ಹೆಚ್ಚು ತಿನ್ನುವ ಬದಲು, ಅವುಗಳನ್ನು ಕಡಿತಗೊಳಿಸಿ, ನಡುನಡುವೆ ಏನಾದರೂ ತಿನ್ನಬಹುದು.
ದಿನವಿಡೀ ನೀರು ಕುಡಿಯಿರಿ:
ನಿಮ್ಮ ಹೊಟ್ಟೆಯ ಕೊಬ್ಬಿಗೆ ಮುಖ್ಯ ಕಾರಣ ಎಂದರೆ ನೀವು ನೀರಿನಿಂದ ದೂರವಿರುವುದು ಅಥವಾ ಹೆಚ್ಚು ನೀರು ಕುಡಿಯದೇ ಇರುವುದು. ಆದ್ದರಿಂದ ನೀವು ಹೊಟ್ಟೆಯ ಕೊಬ್ಬಿನಿಂದ ದೂರವಿರಲು ದಿನವಿಡೀ ನೀರು ಕುಡಿಯುತ್ತಿರಿ.
ಪ್ರತಿದಿನ ಸಣ್ಣ ವ್ಯಾಯಾಮ:
ಕ್ರಂಚ್ ವ್ಯಾಯಾಮವು ಹೊಟ್ಟೆಯನ್ನು ಕರಗಿಸಲು ಸಹಾಯ ಮಾಡುತ್ತದೆ. ಈ ವ್ಯಾಯಾಮದಲ್ಲಿ, ನೇರವಾಗಿ ಮಲಗಿಕೊಳ್ಳಿ ಮತ್ತು ನಂತರ ನಿಮ್ಮ ಎರಡೂ ಕೈಗಳನ್ನು ತಲೆಯ ಕೆಳಗೆ ಇರಿಸಿ, ತಲೆಯನ್ನು ಸ್ವಲ್ಪ ಮೇಲಕ್ಕೆತ್ತಿ. ನಂತರ ಎರಡೂ ಕಾಲುಗಳನ್ನು ಮೊಣಕಾಲುಗಳಿಗೆ ಬಾಗಿಸಿ ನಂತರ ನೇರಗೊಳಿಸಿ. ಈ ವ್ಯಾಯಾಮವನ್ನು ಹೆಚ್ಚಾಗಿ ಮಾಡುವುದರಿಂದ ಹೊಟ್ಟೆಯ ಕೊಬ್ಬನ್ನು ಆದಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನಿಂಬೆ ಮತ್ತು ಕೊತ್ತಂಬರಿ ಸೊಪ್ಪು ಚಹಾ
ಅನೇಕ ಜನರು ಗ್ರೀನ್ ಟೀಯನ್ನು ಹೊಟ್ಟೆಯ ಕೊಬ್ಬನ್ನು ಕರಗಿಸಲು ಸೇವಿಸುತ್ತಾರೆ, ಆದರೆ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ನಿಂಬೆ ಮತ್ತು ಕೊತ್ತಂಬರಿ ಚಹಾ ಹೆಚ್ಚು ಪರಿಣಾಮಕಾರಿಯಾಗಿದೆ. ಆದ್ದರಿಂದ ಇವುಗಳನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿಕೊಳ್ಳಿ.
This News Article Is A Copy Of BOLDSKY
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
05-08-25 10:58 pm
HK News Desk
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
ಯೆಮೆನ್ ಬಳಿಯ ಸಮುದ್ರದಲ್ಲಿ ಪ್ಯಾಸೆಂಜರ್ ಹಡಗು ಮುಳುಗ...
04-08-25 05:11 pm
05-08-25 10:34 pm
Mangalore Correspondent
Dharmasthala Case, Update, 11-12 spot: ಧರ್ಮಸ್...
05-08-25 08:22 pm
T-55 Battle Tank, Kadri, Mangalore: 1975ರ ಪಾಕ...
05-08-25 04:29 pm
Dcc Bank, Mangalore, Dr Udaya Kumar: ಸಹಕಾರ ಚಳ...
04-08-25 10:58 pm
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
06-08-25 11:23 am
Mangalore Correspondent
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm
ದೇಲಂತಬೆಟ್ಟು ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ; ಮೂವ...
03-08-25 10:11 pm
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm