ಬ್ರೇಕಿಂಗ್ ನ್ಯೂಸ್
30-07-20 06:56 pm Health News ಡಾಕ್ಟರ್ಸ್ ನೋಟ್
ಐಬಿಎಸ್ನ ಸಾಮಾನ್ಯ ಕಾರಣಗಳಲ್ಲಿ ಒತ್ತಡವೂ ಒಂದು. ನರಮಂಡಲವನ್ನು ಶಾಂತಗೊಳಿಸುವ ಮೂಲಕ ಒತ್ತಡವನ್ನು ಮುಚ್ಚಲು ಆಯ್ದ ಯೋಗಾಸನಗಳು ಸಹಾಯ ಮಾಡುತ್ತವೆ ಹಾಗೂ ಕಿರಿಕಿರಿ ಉಂಟುಮಾಡುವ ಜೀರ್ಣಾಂಗವ್ಯವಸ್ಥೆಯನ್ನೂ ಶಾಂತಗೊಳಿಸಿ, ಅದರ ಸುಸ್ಥಿತಿಗೆ ಸಹಾಯ ಮಾಡುತ್ತವೆ. ನಾಡೀಶುದ್ಧಿ, ಪ್ರಾಣಾಯಾಮ ಹಾಗೂ ಧ್ಯಾನದಿಂದ ಒತ್ತಡ ನಿಯಂತ್ರಣವಾಗುತ್ತದೆ. ದಿನಕ್ಕೆ ಮೂರು ಬಾರಿ ವಿಶ್ರಾಂತಿ ಭಂಗಿ ಶವಾಸನ, ಮಕರಾಸನವನ್ನು ಮಾಡಿ.
ಸೂಚಿತ ಆಸನಗಳು: ಪರಿಘಾಸನ, ತಾಡಾಸನ, ಪಶ್ಚಿಮೋತ್ಥಾಸನ, ವಕ್ರಾಸನ, ಜಠರ ಪರಿವರ್ತನಾಸನ, ನಾವಾಸನ, ಶಶಾಂಕಾಸನ, ಮಂಡೂಕಾಸನ, ಹಲಾಸನ, ಭುಜಂಗಾಸನ, ಅಧೋಮುಖ ಶ್ವಾನಾಸನ, ಪವನಮುಕ್ತಾಸನ, ಶವಾಸನ ಮಾಡಿ. ಮೂರು ತಿಂಗಳ ಯೋಗಾಭ್ಯಾಸದಲ್ಲಿ ಸರಿಹೋಗುತ್ತದೆ. ಯೋಗದ ಪ್ರಕಾರ ಮುಖ್ಯ ಅಂಶಗಳಾದ ಆಹಾರ, ವಿಹಾರ ಮತ್ತು ನಿದ್ರೆಗಳ ಮೇಲೆ ಮನುಷ್ಯನ ಆರೋಗ್ಯವು ಅವಲಂಬಿಸಿದೆ.
ಆಹಾರ ಹೇಗಿರಬೇಕು?: ಕಾಶ್ಯಪ ಸಂಹಿತೆಯಲ್ಲಿ ‘ಆರೋಗ್ಯಂ ಭೋಜನಾಧೀನಂ’ ಎಂದು ಹೇಳಿದೆ. ಅಂದರೆ ‘ಊಟ ಬಲ್ಲವನಿಗೆ ರೋಗ ಇಲ್ಲ’. ನಮ್ಮ ದೇಹದ ಸಮಸ್ತ ಚಟುವಟಿಕೆಗಳಿಗೆ ಆಹಾರವೇ ಮೂಲ ಶಕ್ತಿಯಾಗಿದೆ. ಒಳ್ಳೆಯ ಆಹಾರವು ಆರೋಗ್ಯವನ್ನು ಪುನಃ ಪ್ರತಿಷ್ಠಾಪಿಸುತ್ತದೆ ಮತ್ತು ಆರೋಗ್ಯವಂತ ದೇಹ ಮತ್ತು ಮನಸ್ಸನ್ನು ಸುಸ್ಥಿತಿಯಲ್ಲಿಡುತ್ತದೆ. ಸತ್ವಯುವಾದ ಸಾತ್ವಿಕ ಆಹಾರವನ್ನು ಸೇವಿಸಬೇಕು. ಅತಿ ಹುಳಿ, ಅತಿ ಖಾರ, ಅತಿ ಮಸಾಲೆ ಬೇಡ.
ಆಹಾರವನ್ನು ತುಟಿ ಮುಚ್ಚಿ ಚೆನ್ನಾಗಿ ಜಗಿದು ಸೇವಿಸಿ. ಬಾಯಿ ತೆರೆದು ಆಹಾರವನ್ನು ಜಗಿಯಬಾರದು. ಯಾಕೆಂದರೆ ಬಾಯಿಯಲ್ಲಿರುವ ಲಾಲಾರಸ ಆಹಾರಕ್ಕೆ ಬೆರಕೆಯಾಗುವುದಿಲ್ಲ (ಬಾಯಿ ತೆರೆದಾಗ ಗಾಳಿಯ ಸ್ಪರ್ಶದಿಂದ ಜೊಲ್ಲುರಸ ಆಹಾರಕ್ಕೆ ಬೆರಕೆಯಾಗುವುದಿಲ್ಲ). ನಾವು ತುಟಿ ಮುಚ್ಚಿ ಆಹಾರವನ್ನು ಜಗಿದು ನುಂಗಿದಾಗ ಆಹಾರದಲ್ಲಿರುವ ಪೋಷಕಾಂಶಗಳು ರಕ್ತಕ್ಕೆ ಸುಲಭವಾಗಿ ಸೇರುತ್ತವೆ. ಆಹಾರ ಸೇವನೆಯ ಸಂದರ್ಭದಲ್ಲಿ ನೀರನ್ನು ಕುಡಿಯಬಾರದು (ಅತ್ಯಗತ್ಯವಿದ್ದಲ್ಲಿ ಸ್ವಲ್ಪ ನೀರನ್ನು ಕುಡಿಯಬಹುದು). ಇಂದು ಸಾಮಾನ್ಯವಾಗಿ ವೇಗವಾಗಿ ಅಥವಾ ತುಂಬ ತಣ್ಣನೆಯ ಆಹಾರ / ಪಾನೀಯಗಳನ್ನು ತಿನ್ನುವ ಜನರಲ್ಲಿ ಕಂಡುಬರುತ್ತದೆ. ಹಾಗಿದ್ದಲ್ಲಿ, ನಿಮ್ಮ ತಿನ್ನುವ ಮಾದರಿಯನ್ನು ಬದಲಾವಣೆ ಮಾಡಬೇಕಾಗಬಹುದು. ಅದು ಮುಂದುವರಿದರೆ ತಜ್ಞರನ್ನು ಸಂಪರ್ಕಿಸಿ.
01-05-26 08:33 pm
HK News Staffer
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
ಸದ್ಯಕ್ಕಿಲ್ಲ ಡಿಕೆಶಿಗೆ ಸಿಎಂ ಭಾಗ್ಯ ; ರಾಜ್ಯಸಭೆ- ಏ...
29-04-26 10:36 am
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
29-04-26 11:18 pm
HK News Staffer
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:53 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
01-05-26 09:24 pm
HK News Staffer
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm
ಮಕ್ಕಳ ಆಯೋಗ ಸಮಿತಿ ಸದಸ್ಯನಿಂದಲೇ ಹಲವು ಮಹಿಳೆಯರಿಗೆ...
01-05-26 01:45 pm
ಬೆಂಗಳೂರಿನ ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು ಕೋಟ್ಯಂ...
01-05-26 11:48 am