ಬ್ರೇಕಿಂಗ್ ನ್ಯೂಸ್
16-09-20 09:26 am Headline Karnataka News Network ಸಿನಿಮಾ
ಮುಂಬಯಿ, ಸಪ್ಟೆಂಬರ್ 16: ನಾಯಿಗಳ ಜಗಳ ವೈವಾಹಿಕ ವಿಚ್ಛೇದನಕ್ಕೂ ಕಾರಣ ಆಗಬಹುದಾ? ನಂಬುವುದು ಕಷ್ಟ. ಆದರೆ ಇಂತಹದೊಂದು ಸುದ್ದಿ ಬಾಲಿವುಡ್ ಅಂಗಳದಿಂದ ಹಾರಿ ಬಂದಿದೆ.
ನಾಯಿಗಳ ಕಚ್ಚಾಟದಿಂದಾಗಿ ಬಾಲಿವುಡ್ ನಟ ಹಾಗು ಕಾಂಗ್ರೆಸ್ ನಾಯಕ ಅಜಯ್ ಸಿಂಗ್ ಪುತ್ರನ ವೈವಾಹಿಕ ಜೀವನ ಕೊನೆಗೊಂಡಿದೆ. ಬಾಲಿವುಡ್ ನ ಉದಯೋನ್ಮುಖ ನಟ ಅರುಣೋದಯ್ ಸಿಂಗ್ ಮತ್ತು ಅವರ ಕೆನಡಾದ ಮೂಲದ ಪತ್ನಿ ಲೀ ಎಲ್ಟನ್ ವಿಚ್ಛೇದನದ ಅರ್ಜಿ ವಿಚಾರಣೆ ಜಬಲ್ಪುರ್ ಹೈಕೋರ್ಟ್ ನಲ್ಲಿ ನಡೆದಿದೆ. ಅರುಣೋದಯ್ ಹಾಗೂ ಲೀ ಮಧ್ಯೆ ನಾಯಿಗಳ ಜಗಳದಿಂದ ಶುರುವಾದ ಗಲಾಟೆ ವಿಚ್ಛೇದನದ ವರೆಗೆ ಬಂದು ನಿಂತಿದೆ.

ಅರುಣೋದಯ್ ಸಿಂಗ್ ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡ ಅಜಯ್ ಸಿಂಗ್ ಅವರ ಪುತ್ರ. ಇದು ಏಕಪಕ್ಷೀಯ ವಿಚ್ಛೇದನದ ಅರ್ಜಿ ಎನ್ನಲಾಗಿದೆ. ಅರುಣೋದಯ್ ಹಾಗೂ ಲೀ 2016ರಲ್ಲಿ ಮದುವೆಯಾಗಿದ್ದರು. ಕೆಲವೇ ದಿನಗಳಲ್ಲಿ ಇಬ್ಬರ ಮಧ್ಯೆ ಗಲಾಟೆ ಶುರುವಾಗಿತ್ತು. ಲೀ ಸಾಕಿದ್ದ ನಾಯಿ ಹಾಗೂ ಅರುಣೋದಯ್ ಸಾಕಿದ್ದ ನಾಯಿ ಮಧ್ಯೆ ನಡೆದ ಕಚ್ಚಾಟ ದಂಪತಿಯ ಮಧ್ಯೆ ಬಿರುಕು ಮೂಡಿಸಲು ಕಾರಣವಾಗಿತ್ತು ಎನ್ನಲಾಗ್ತಿದೆ.
ಇಂದು ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಭೋಪಾಲ್ ಕುಟುಂಬ ನ್ಯಾಯಾಲಯದಿಂದ ದಾಖಲೆಯನ್ನು ಕೋರಿದೆ. ಮುಂದಿನ ವಿಚಾರಣೆ ಅಕ್ಟೋಬರ್ 6 ರಂದು ನಡೆಯಲಿದೆ.
16-06-26 12:26 pm
HK News Staffer
ಧರ್ಮಸ್ಥಳದ ಬುರುಡೆ ಕೇಸಿಗೆ ಬಿಗ್ ಟ್ವಿಸ್ಟ್ ; ಎಸ್ಐಟ...
12-06-26 12:02 pm
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
15-06-26 11:18 am
HK News Staffer
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
ಕೇರಳದಲ್ಲಿ ಜೂನ್ 15ರಿಂದ 'ಪ್ರಿಯದರ್ಶಿನಿ' ಉಚಿತ ಬಸ್...
14-06-26 01:08 pm
16-06-26 11:35 am
HK News Staffer
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್:...
13-06-26 05:28 pm
16-06-26 05:10 pm
HK News Staffer
Chandrashekhar, Belthangady: ಬೆಳ್ತಂಗಡಿ ಸರ್ಕಾರ...
16-06-26 02:34 pm
ಉಳ್ಳಾಲ ; ಸ್ನಾನಕ್ಕೆಂದು ಕೋಣೆಗೆ ತೆರಳಿದ್ದ ಪಿಯುಸಿ...
16-06-26 10:33 am
ಮಕ್ಕಳ ಕಣ್ಣೆದುರೇ ತಾಯಿಯ ಬರ್ಬರ ಹತ್ಯೆ! ಬೆಟ್ಟಿಂಗ್...
15-06-26 09:21 pm
ನಿಯಂತ್ರಣ ತಪ್ಪಿ ನಿಲ್ದಾಣದ ಪ್ಲಾಟ್ ಫಾರಂಗೆ ನುಗ್ಗಿ...
15-06-26 08:37 pm