ಬ್ರೇಕಿಂಗ್ ನ್ಯೂಸ್
25-12-21 01:12 pm Mangalore Correspondent ಸಿನಿಮಾ
ಮಂಗಳೂರು, ಡಿ.25 : ಗುಳಿ ಕೆನ್ನೆಯ ಚೆಲುವೆ, ನಟಿ ರಚಿತಾ ರಾಮ್ ಮಂಗಳೂರಿನ ಪೊಲೀಸರಲ್ಲಿ ಮಿಂಚು ಹರಿಸಿದ್ದಾರೆ. ಪೊಲೀಸ್ ಕಮಿಷನರ್ ಶಶಿಕುಮಾರ್ ಕರೆಯಂತೆ, ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿದ ನಟಿ ರಚಿತಾ ಪೊಲೀಸರ ಜೊತೆಗೆ ಬೆರೆತು ಹರಟಿದ್ದಾರೆ.
ದೇವಸ್ಥಾನ ಭೇಟಿ ಸೇರಿದಂತೆ ಖಾಸಗಿ ಕಾರ್ಯಕ್ರಮಕ್ಕೆಂದು ರಚಿತಾ ಮಂಗಳೂರಿಗೆ ಆಗಮಿಸಿದ್ದರು. ಪಬ್ಬಾಸ್ ನಲ್ಲಿ ಐಸ್ ಕ್ರೀಮ್ ತಿಂದು ಹೋಗೋಣ ಎಂದು ಲಾಲ್ ಬಾಗ್ ಬಂದಿದ್ರಂತೆ. ಅಷ್ಟೊತ್ತಿಗೆ ಕಮಿಷನರ್ ಶಶಿಕುಮಾರ್ ಫೋನ್ ಮಾಡಿದ್ದು, ಕಚೇರಿಗೆ ಬರುವಂತೆ ಹೇಳಿದ್ದಾರೆ. ಅದರಂತೆ, ಕಚೇರಿಗೆ ಬಂದ ನಟಿಯನ್ನು ಪೊಲೀಸರು ಮುತ್ತಿಕೊಂಡಿದ್ದಾರೆ.


ಸಿನಿಮಾದಲ್ಲಿ ನೋಡಿದ್ದ ಪೊಲೀಸರು ನಟಿಯನ್ನು ಕಾಣುತ್ತಲೇ ಸೆಲ್ಫಿ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ನಟಿಯ ಅಕ್ಕ ಪಕ್ಕದಲ್ಲಿ ನಿಂತು ಥರಹೇವಾರಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು. ಮಹಿಳಾ ಪೊಲೀಸ್ ಪೇದೆಯರು, ಕಮಿಷನರ್ ಕಚೇರಿಯ ಉದ್ಯೋಗಸ್ಥ ಸಿಬಂದಿ, ಪೊಲೀಸ್ ಅಧಿಕಾರಿಗಳೆಲ್ಲ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದರು. ಇದೇ ವೇಳೆ, ಪೊಲೀಸರ ವತಿಯಿಂದ ಕಮಿಷನರ್ ಶಶಿಕುಮಾರ್ ರಚಿತಾ ರಾಮ್ ಅವರನ್ನು ಸನ್ಮಾನಿಸಿದರು. ಕರಾವಳಿಯ ಯಕ್ಷಗಾನದ ಕಿರೀಟವುಳ್ಳ ಸ್ಮರಣಿಕೆ, ಶಾಲು ಹೊದೆಸಿ ಸನ್ಮಾನಿಸಿದ್ದು ವಿಶೇಷವಾಗಿತ್ತು.



ಇದೇ ವೇಳೆ, ಮಾತನಾಡಿದ ನಟಿ ತಮ್ಮ ಚೆಲ್ಲು ಚೆಲ್ಲು ಮಾತುಗಳಿಂದಲೇ ಪೊಲೀಸರನ್ನು ಆಕರ್ಷಿಸಿದರು. ಏನೋ ಆಕಸ್ಮಿಕವಾಗಿ ಬಂದಿದ್ದೇನೆ. ಯಾವುದೇ ಮೇಕಪ್ ಮಾಡಿಕೊಂಡಿಲ್ಲ ಎಂದು ನಗುತ್ತಾ ಇಲ್ಲಿ ಬರೋದಿಕ್ಕೆ ಶಶಿ ಸರ್ ಕಾರಣ ಎಂದು ಹೇಳಿದರು. ನನಗೂ ಸಣ್ಣಂದಿನಲ್ಲಿ ಐಪಿಎಸ್ ಅಧಿಕಾರಿಯಾಗಬೇಕು ಎಂಬ ಆಸೆ ಇತ್ತು. ಆದರೆ ಈಡೇರಲಿಲ್ಲ. ಬದಲಿಗೆ ನಟಿಯಾಗಿದ್ದೇನೆ. ನಟಿಯಾಗಿ ಸಾಧಾರಣ ಎಲ್ಲ ರೀತಿಯ ಪಾತ್ರಗಳನ್ನು ಮಾಡಿದ್ದೇನೆ. ಪೊಲೀಸ್ ಅಧಿಕಾರಿಯಾಗುವ ಪಾತ್ರ ಇನ್ನೂ ಸಿಕ್ಕಿಲ್ಲ. ಅಂಥ ಉತ್ತಮ ಚಿತ್ರಕತೆ ಸಿಕ್ಕಿದರೆ ಮಾಡಬೇಕೆಂದಿದ್ದೇನೆ ಎಂದು ಹೇಳಿದರು.



ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಪೊಲೀಸರು ತಮ್ಮ ಜೀವ ಲೆಕ್ಕಿಸದೆ ಕೆಲಸ ಮಾಡಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ. ಎಲ್ಲರೂ ಖುಷಿಯಿಂದಿರಿ. ಖುಷಿಯಿಂದ ಜೀವನ ಎಂಜಾಯ್ ಮಾಡಿ. ಇವತ್ತು ಹೀಗಿದ್ದೇವೆ, ನಾಳೆ ಹೇಗಿರುತ್ತೇವೋ ಗೊತ್ತಿಲ್ಲ. ಅದಕ್ಕಾಗಿ ಪಾಸಿಟಿವ್ ಆಗಿ ಯೋಚಿಸುತ್ತಾ ಖುಷಿಯಿಂದಿರಬೇಕು ಎನ್ನುತ್ತಾ ಪುನೀತ್ ಹೆಸರೇಳದೆ, ಅಂದಿನ ಘಟನೆಯನ್ನು ಮೆಲುಕು ಹಾಕಿದರು. ಮುಂದಿನ ವಾರ ತನ್ನ ಹೊಸ ಫಿಲ್ಮ್ ಬರ್ತಿದೆ, ಎಲ್ಲರೂ ನೋಡಿ. ಸಪೋರ್ಟ್ ಮಾಡಿ ಎನ್ನುತ್ತಾ ಬೈ ಬೈ ಹೇಳಿದರು.
Actress Rachita Ram in Mangalore, facilitated by Police Commissioner Shahi Kumar and staffs. Police personals thronged for selfies. Also Rachita thanked the Mangalore police department for their overwhelm love and care.
18-06-26 01:25 pm
HK News Staffer
Jayadeva Hospital, Mysuru: ಮೈಸೂರಿನ ಜಯದೇವ ಆಸ್ಪ...
18-06-26 01:17 pm
ಧರ್ಮಸ್ಥಳ ಕೇಸ್ ; ಎಡಪಂಥೀಯರ ಒತ್ತಡಕ್ಕೆ ಎಸ್ಐಟಿ, ಷಡ...
17-06-26 10:12 pm
ಆರ್ಎಸ್ಎಸ್ ಲೆಕ್ಕ ಕೇಳಲು ಇವನ್ಯಾರು? ಪ್ರಿಯಾಂಕ್ ಖ...
17-06-26 06:59 pm
ಜಿಮ್ ಮುಗಿಸಿ ಮನೆಗೆ ಬಂದ ಯುವಕನಿಗೆ ಹೃದಯಾಘಾತ ; ಹೆ...
17-06-26 06:35 pm
18-06-26 01:23 pm
HK News Staffer
ಹೊರ್ಮುಜ್ ಬಿಕ್ಕಟ್ಟು; ಒಮಾನ್ ಕರಾವಳಿಯಲ್ಲಿ ಮತ್ತೊಂದ...
15-06-26 11:18 am
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
18-06-26 12:33 pm
HK News Staffer
ಬಸ್ಸೋ, ಬಸ್ ನಿಲ್ದಾಣವೋ ? ಗುರುಪುರ ಬಂಡಸಾಲೆಯಲ್ಲಿ ವ...
16-06-26 11:35 am
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
18-06-26 01:20 pm
HK News Staffer
ಸ್ಕೂಟರಲ್ಲಿ ನಾಲ್ವರು ಹೆಣ್ಮಕ್ಕಳ ಜಾಲಿ ರೈಡ್; ನಿಯಂತ...
17-06-26 01:41 pm
ವಾಯುಪಡೆ ಅಧಿಕಾರಿ ಪತ್ನಿಗೆ ಅಮಲು ಪದಾರ್ಥ ನೀಡಿ ಅತ್ಯ...
16-06-26 08:32 pm
SIT Car Accident: ಎಸ್ಐಟಿ ಎಸ್ಪಿ ಸೈಮನ್ ಪ್ರಯಾಣಿಸ...
16-06-26 05:10 pm
Chandrashekhar, Belthangady: ಬೆಳ್ತಂಗಡಿ ಸರ್ಕಾರ...
16-06-26 02:34 pm