ಬ್ರೇಕಿಂಗ್ ನ್ಯೂಸ್
25-12-21 01:12 pm Mangalore Correspondent ಸಿನಿಮಾ
ಮಂಗಳೂರು, ಡಿ.25 : ಗುಳಿ ಕೆನ್ನೆಯ ಚೆಲುವೆ, ನಟಿ ರಚಿತಾ ರಾಮ್ ಮಂಗಳೂರಿನ ಪೊಲೀಸರಲ್ಲಿ ಮಿಂಚು ಹರಿಸಿದ್ದಾರೆ. ಪೊಲೀಸ್ ಕಮಿಷನರ್ ಶಶಿಕುಮಾರ್ ಕರೆಯಂತೆ, ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿದ ನಟಿ ರಚಿತಾ ಪೊಲೀಸರ ಜೊತೆಗೆ ಬೆರೆತು ಹರಟಿದ್ದಾರೆ.
ದೇವಸ್ಥಾನ ಭೇಟಿ ಸೇರಿದಂತೆ ಖಾಸಗಿ ಕಾರ್ಯಕ್ರಮಕ್ಕೆಂದು ರಚಿತಾ ಮಂಗಳೂರಿಗೆ ಆಗಮಿಸಿದ್ದರು. ಪಬ್ಬಾಸ್ ನಲ್ಲಿ ಐಸ್ ಕ್ರೀಮ್ ತಿಂದು ಹೋಗೋಣ ಎಂದು ಲಾಲ್ ಬಾಗ್ ಬಂದಿದ್ರಂತೆ. ಅಷ್ಟೊತ್ತಿಗೆ ಕಮಿಷನರ್ ಶಶಿಕುಮಾರ್ ಫೋನ್ ಮಾಡಿದ್ದು, ಕಚೇರಿಗೆ ಬರುವಂತೆ ಹೇಳಿದ್ದಾರೆ. ಅದರಂತೆ, ಕಚೇರಿಗೆ ಬಂದ ನಟಿಯನ್ನು ಪೊಲೀಸರು ಮುತ್ತಿಕೊಂಡಿದ್ದಾರೆ.


ಸಿನಿಮಾದಲ್ಲಿ ನೋಡಿದ್ದ ಪೊಲೀಸರು ನಟಿಯನ್ನು ಕಾಣುತ್ತಲೇ ಸೆಲ್ಫಿ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ನಟಿಯ ಅಕ್ಕ ಪಕ್ಕದಲ್ಲಿ ನಿಂತು ಥರಹೇವಾರಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು. ಮಹಿಳಾ ಪೊಲೀಸ್ ಪೇದೆಯರು, ಕಮಿಷನರ್ ಕಚೇರಿಯ ಉದ್ಯೋಗಸ್ಥ ಸಿಬಂದಿ, ಪೊಲೀಸ್ ಅಧಿಕಾರಿಗಳೆಲ್ಲ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದರು. ಇದೇ ವೇಳೆ, ಪೊಲೀಸರ ವತಿಯಿಂದ ಕಮಿಷನರ್ ಶಶಿಕುಮಾರ್ ರಚಿತಾ ರಾಮ್ ಅವರನ್ನು ಸನ್ಮಾನಿಸಿದರು. ಕರಾವಳಿಯ ಯಕ್ಷಗಾನದ ಕಿರೀಟವುಳ್ಳ ಸ್ಮರಣಿಕೆ, ಶಾಲು ಹೊದೆಸಿ ಸನ್ಮಾನಿಸಿದ್ದು ವಿಶೇಷವಾಗಿತ್ತು.



ಇದೇ ವೇಳೆ, ಮಾತನಾಡಿದ ನಟಿ ತಮ್ಮ ಚೆಲ್ಲು ಚೆಲ್ಲು ಮಾತುಗಳಿಂದಲೇ ಪೊಲೀಸರನ್ನು ಆಕರ್ಷಿಸಿದರು. ಏನೋ ಆಕಸ್ಮಿಕವಾಗಿ ಬಂದಿದ್ದೇನೆ. ಯಾವುದೇ ಮೇಕಪ್ ಮಾಡಿಕೊಂಡಿಲ್ಲ ಎಂದು ನಗುತ್ತಾ ಇಲ್ಲಿ ಬರೋದಿಕ್ಕೆ ಶಶಿ ಸರ್ ಕಾರಣ ಎಂದು ಹೇಳಿದರು. ನನಗೂ ಸಣ್ಣಂದಿನಲ್ಲಿ ಐಪಿಎಸ್ ಅಧಿಕಾರಿಯಾಗಬೇಕು ಎಂಬ ಆಸೆ ಇತ್ತು. ಆದರೆ ಈಡೇರಲಿಲ್ಲ. ಬದಲಿಗೆ ನಟಿಯಾಗಿದ್ದೇನೆ. ನಟಿಯಾಗಿ ಸಾಧಾರಣ ಎಲ್ಲ ರೀತಿಯ ಪಾತ್ರಗಳನ್ನು ಮಾಡಿದ್ದೇನೆ. ಪೊಲೀಸ್ ಅಧಿಕಾರಿಯಾಗುವ ಪಾತ್ರ ಇನ್ನೂ ಸಿಕ್ಕಿಲ್ಲ. ಅಂಥ ಉತ್ತಮ ಚಿತ್ರಕತೆ ಸಿಕ್ಕಿದರೆ ಮಾಡಬೇಕೆಂದಿದ್ದೇನೆ ಎಂದು ಹೇಳಿದರು.



ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಪೊಲೀಸರು ತಮ್ಮ ಜೀವ ಲೆಕ್ಕಿಸದೆ ಕೆಲಸ ಮಾಡಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ. ಎಲ್ಲರೂ ಖುಷಿಯಿಂದಿರಿ. ಖುಷಿಯಿಂದ ಜೀವನ ಎಂಜಾಯ್ ಮಾಡಿ. ಇವತ್ತು ಹೀಗಿದ್ದೇವೆ, ನಾಳೆ ಹೇಗಿರುತ್ತೇವೋ ಗೊತ್ತಿಲ್ಲ. ಅದಕ್ಕಾಗಿ ಪಾಸಿಟಿವ್ ಆಗಿ ಯೋಚಿಸುತ್ತಾ ಖುಷಿಯಿಂದಿರಬೇಕು ಎನ್ನುತ್ತಾ ಪುನೀತ್ ಹೆಸರೇಳದೆ, ಅಂದಿನ ಘಟನೆಯನ್ನು ಮೆಲುಕು ಹಾಕಿದರು. ಮುಂದಿನ ವಾರ ತನ್ನ ಹೊಸ ಫಿಲ್ಮ್ ಬರ್ತಿದೆ, ಎಲ್ಲರೂ ನೋಡಿ. ಸಪೋರ್ಟ್ ಮಾಡಿ ಎನ್ನುತ್ತಾ ಬೈ ಬೈ ಹೇಳಿದರು.
Actress Rachita Ram in Mangalore, facilitated by Police Commissioner Shahi Kumar and staffs. Police personals thronged for selfies. Also Rachita thanked the Mangalore police department for their overwhelm love and care.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am