ಬ್ರೇಕಿಂಗ್ ನ್ಯೂಸ್
14-09-20 12:54 pm Headline Karnataka News Network ಸಿನಿಮಾ
ಮುಂಬಯಿ, ಸಪ್ಟೆಂಬರ್ 13: ಕಂಗನಾ ರಣಾವತ್ ಅವರಿಗೆ ದೇಶದಾದ್ಯಂತ ಬೆಂಬಲ ವ್ಯಕ್ತವಾಗುತ್ತಿದೆ. ಮಹಾರಾಷ್ಟ್ರ ಸರಕಾರ ಕಂಗನಾ ಅವರ ಕಚೇರಿ ಹಾಗು ಮನೆ ಧ್ವಂಸ ಗೊಳಿಸಿದ ಬಳಿಕ ಭಾರಿ ಸುದ್ದಿಯಲ್ಲಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಯ ಬಗ್ಗೆ ಕಂಗನಾ ಪ್ರಶ್ನಿಸುವ ಬಗೆ ಹಾಗು ತನಿಖೆಯ ದಿಕ್ಕು ತಪ್ಪಿಸಲು ಮಹಾರಾಷ್ಟ್ರ ಸರಕಾರ ಮಾಡಿರುವ ಕಸರತ್ತುಗಳ ವಿರುದ್ದ ತೊಡೆ ತಟ್ಟಿರುವ ಕಂಗನಾ ರಾಣಾವತ್ ಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಈ ನಡುವಲ್ಲೇ ಜಸ್ಟ್ ಆಸ್ಕಿಂಗ್ ನ ಮೂಲಕ ವಿವಾದ ಸರಮಾಲೆಯನ್ನೇ ತೊಟ್ಟಿರುವ ನಟ ಪ್ರಕಾಶ್ ರಾಜ್ ಉರ್ಫ್ ರೈ, ಕಂಗನಾ ರಾಣಾವತ್ ಕಾಲು ಎಳೆಯೋಕೆ ಹೋಗಿ ಇದೀಗ ಸ್ವತಃ ಟ್ರೋಲ್ ಆಗಿದ್ದಾರೆ. ಸುಮ್ಮನೆ ಕೂರ್ಲಿಕ್ ಆಗದೇ ...... ಇರುವೆ ಬಿಟ್ಕೊಂಡ್ರಂತೆ. ಹೀಗಾಗಿದೆ ಪ್ರಕಾಶ್ ರೈ ಕತೆ.
ಸುಶಾಂತ್ ಸಿಂಗ್ ಆತ್ಮಹತ್ಯೆ ಬಳಿಕ ಬಾಲಿವುಡ್ ನಲ್ಲಿರುವ ನೆಪೋಟಿಸಂ ಬಗ್ಗೆ ಕಂಗನಾ ಧ್ವನಿ ಎತ್ತಿದ್ದರು. ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಈ ನಡುವೆ ಕಂಗನಾ ಅವರನ್ನು ಟೀಕಿಸುವ ಭರದಲ್ಲಿ ಟ್ವೀಟ್ ಮಾಡಿರುವ ಪ್ರಕಾಶ್ ರೈ, ಕಂಗನಾ ರಾಣಾವತ್ ಮಣಿಕರ್ಣಿಕಾ ಚಿತ್ರದಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಪಾತ್ರದಲ್ಲಿ ಅಭಿನಯಿಸಿದ್ದ ಮಾತ್ರಕ್ಕೆ ಇದೀಗ ನಿಜ ಜೀವನದಲ್ಲೂ ಲಕ್ಷ್ಮೀಬಾಯಿ ಅಂದು ಕೊಂಡಿದ್ದಾರಾ ? ಎಂದು ವ್ಯಂಗ್ಯ ಮಾಡಿ ಟ್ವೀಟ್ ಮಾಡಿದ್ದರು. ಅದರೊಂದಿಗೆ ದೀಪಿಕಾ ಪಡಕೋಣೆ, ಹೃಿತಿಕ್ ರೋಶನ್, ಶಾರುಕ್ ಖಾನ್, ಮೊದಲಾದವರು ನಟಿಸಿದ ಚಿತ್ರಗಳ ಪೋಸ್ಟರ್ ಗಳನ್ನು ಪೋಸ್ಟ್ ಮಾಡಿದ್ದಾರೆ. ಇದನ್ನು ಇಟ್ಟುಕೊಂಡೇ ನೆಟ್ಟಿಗರು ಪ್ರಕಾಶ್ ರೈ ಅವರನ್ನೇ ಟ್ರೋಲ್ ಮಾಡಿದ್ದಾರೆ.
ಜಸ್ಟ್ ಆಸ್ಕಿಂಗ್ ಹ್ಯಾಷ್ ಟ್ಯಾಗ್ ಮೂಲಕ ಪ್ರಕಾಶ್ ರೈ ಟ್ವೀಟ್ ಮಾಡಿರೋದಕ್ಕೆ ಸಾಕಷ್ಟು ಪರ ವಿರೋಧದ ಟೀಕೆಗಳು ಕೇಳಿಬರುತ್ತಿವೆ.
Join our WhatsApp group for latest news updates
#justasking pic.twitter.com/LlJynLM1xr
— Prakash Raj (@prakashraaj) September 12, 2020
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
29-04-25 11:00 pm
Mangalore Correspondent
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
29-04-25 09:59 pm
Mangalore Correspondent
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm