ಬ್ರೇಕಿಂಗ್ ನ್ಯೂಸ್
02-12-21 09:25 pm HK Desk news ಸಿನಿಮಾ
ಬೆಂಗಳೂರು, ಡಿ.2 : ಕಂಟೆಂಟ್ ಬೇಸ್ಡ್ , ಸೋಷಿಯಲ್ ಮೆಸೇಜ್ ಇರುವಂಥ ಸಿನಿಮಾಗಳಿಗೆ ಅವುಗಳದ್ದೇ ಆದ ಮಹತ್ವವಿದೆ.. ಅಂತಹ ಸಿನಿಮಾಗಳಿಗೆಂದೇ ಸಾಕಷ್ಟು ಅಭಿಮಾನಿಗಳೂ ಇದ್ದಾರೆ… ಕಮರ್ಶಿಯಲ್ ಸಿನಿಮಾಗಳ ನಡುವೆ ಕಂಟೆಂಟ್ ಸಿನಿಮಾಗಳು ಈಗೀಗ ಹೆಚ್ಚು ಯಶಸ್ಸು ಗಳಿಸುತ್ತಿವೆ. ಇಂತಹ ಸಿನಿಮಾಗಳಿಂದ ಸಮಾಜಕ್ಕೆ ಒಂದೊಳ್ಳೆ ಮೆಸೇಜನ್ನೂ ನೀಡಲಾಗುತ್ತದೆ. ಅದೇ ರೀತಿಯ ಸಿನಿಮಾ ಗರುಡ ಗಮನ ವೃಷಭ ವಾಹನದಿಂದಾಗಿ ರಾಜ್ ಶೆಟ್ಟಿ ಕರುನಾಡಿನಲ್ಲಿ ಮನೆ ಮಾತಾಗಿದ್ದಾರೆ.
ಅಂತಹದ್ದೇ ಒಂದು ಅದ್ಭುತ ಪರಿಕಲ್ಪನೆ ಹೊತ್ತಿರುವ ನಿರ್ದೇಶಕ YK ಅವರು ತಮ್ಮದೇ ಕಲ್ಪನೆಯಲ್ಲಿ ಹೊಸ ಸಿನಿಮಾ ಮಾಡಿದ್ದಾರೆ. ಸಿನಿಮಾಗೆ ನರಸಿಂಹ ಕುಲಕರ್ಣಿ ಬಂಡವಾಳ ಹೂಡಿದ್ದಾರೆ.. ಅಂದ್ಹಾಗೆ ಕನ್ನಡದ ಈ ಹೊಸ ಸಿನಿಮಾದ ಹೆಸರು ಗಿಲ್ಕಿ. ಒಂದು ಅದ್ಭುತ ನಿಶ್ಕಲ್ಮಶ ಪ್ರೇಮಕಥೆ ಹೊಂದಿರುವ , ಪಕ್ಕಾ ಕಂಟೆಂಟ್ ಬೇಸಡ್ ಸಿನಿಮಾ ಗಿಲ್ಕಿ.. ಈ ಸಿನಿಮಾದ ಆ ದೇವರೇ ಹಾಡು ಕೆಲವೇ ದಿನಗಳ ಹಿಂದಷ್ಟೇ ರಿಲೀಸ್ ಆಗಿತ್ತು.. ಈ ಹಾಡು ಜನರ ಹೃದಯ ಕರಗಿಸುವಂತಿದೆ..
ಇದೀಗ ಈ ಸಿನಿಮಾದ ಮತ್ತೊಂದು ಹಾಡು ರಿಲೀಸ್ ಆಗಿದೆ.. ತೀರ ಸೇರೋ ಟೈಟಲ್ ನ ಈ ಹಾಡು ನೋಡುಗರ ಮನಸ್ಸು ನಾಟುವಂತಿದೆ. ಪ್ರತಿಯೊಬ್ಬರ ನಟನೆ ನಮ್ಮನ್ನ ಅವರದ್ದೇ ಪ್ರಪಂಚಕ್ಕೆ ಕೊಂಡೊಯ್ಯುವಂತಿದೆ.


ಅಂದ್ಹಾಗೆ ಗಿಲ್ಕಿ ಸಿನಿಮಾದ ಹಾಡನ್ನ ಮಂಗಳೂರಿನಲ್ಲಿ ಗುರುಡ ಗಮನ ವೃಷಭ ವಾಹನ ಸಿನಿಮಾದ ನಟ ಕಮ್ ನಿರ್ದೇಶಕರಾದ ರಾಜ್ ಬಿ ಶೆಟ್ಟಿ ಅವರು ಬಿಡುಗಡೆ ಮಾಡಿದ್ದು ಹೊಸ ಸಿನಿಮಾಗೆ ಶುಭ ಕೋರಿದ್ದಾರೆ. ವಾಸುಕಿ ವೈಭವ್ ಅವರ ಸಾಹಿತ್ಯ , ಆದಿಲ್ ನಡಾಫ್ ಅವರ ಸಂಗೀತ ಸಂಯೋಜನೆಯ ಹಾಡಿಗೆ ಭರತ್ ನಾಯಕ್ ಅವರ ಧ್ವನಿ ಜೀವ ತುಂಬಿದೆ..

ಸಮಾಜದಿಂದ ದೂರ ಇರುವ ಮೂವರು ತಮ್ಮದೇ ಆದ ಅದ್ಭುತ ಪ್ರಪಂಚ ಕಟ್ಟಿಕೊಳ್ಳುವ ಅದ್ಭುತ ಪರಿಕಲ್ಪನೆಯಲ್ಲಿ ನಿರ್ದೇಶಕ YK ಅವರು ಈ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ.. ಮಾನಸಿಕ ಅಸ್ವಸ್ಥ ಪಾತ್ರಧಾರಿ, ವಿಶೇಷ ಚೇತನ ಪಾತ್ರಧಾರಿಯ ಪಾತ್ರಗಳಲ್ಲಿ ನಟ ತಾರಕ್ ಪೊನ್ನಪ್ಪ , ನಟಿ ಚೈತ್ರಾ ಅದ್ಭುತವಾಗಿ ನಟಿಸಿದ್ದಾರೆ..
AS ಕಾಮಧೇನು ಫಿಲಮ್ಸ್ ಬ್ಯಾನರ್ ನಡಿ ಚಿತ್ರ ಮೂಡಿಬಂದಿದ್ದು ತಾರಕ್ ಪೊನ್ನಪ್ಪ, ಚೈತ್ರಾ ಆಚಾರ್ , ಗೌತಮ್ ರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
July movie to come soon on Screens, song released by Raj B Shetty. The movie is under then banner of A S Kamdenu films.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am