ಬ್ರೇಕಿಂಗ್ ನ್ಯೂಸ್
02-12-21 09:25 pm HK Desk news ಸಿನಿಮಾ
ಬೆಂಗಳೂರು, ಡಿ.2 : ಕಂಟೆಂಟ್ ಬೇಸ್ಡ್ , ಸೋಷಿಯಲ್ ಮೆಸೇಜ್ ಇರುವಂಥ ಸಿನಿಮಾಗಳಿಗೆ ಅವುಗಳದ್ದೇ ಆದ ಮಹತ್ವವಿದೆ.. ಅಂತಹ ಸಿನಿಮಾಗಳಿಗೆಂದೇ ಸಾಕಷ್ಟು ಅಭಿಮಾನಿಗಳೂ ಇದ್ದಾರೆ… ಕಮರ್ಶಿಯಲ್ ಸಿನಿಮಾಗಳ ನಡುವೆ ಕಂಟೆಂಟ್ ಸಿನಿಮಾಗಳು ಈಗೀಗ ಹೆಚ್ಚು ಯಶಸ್ಸು ಗಳಿಸುತ್ತಿವೆ. ಇಂತಹ ಸಿನಿಮಾಗಳಿಂದ ಸಮಾಜಕ್ಕೆ ಒಂದೊಳ್ಳೆ ಮೆಸೇಜನ್ನೂ ನೀಡಲಾಗುತ್ತದೆ. ಅದೇ ರೀತಿಯ ಸಿನಿಮಾ ಗರುಡ ಗಮನ ವೃಷಭ ವಾಹನದಿಂದಾಗಿ ರಾಜ್ ಶೆಟ್ಟಿ ಕರುನಾಡಿನಲ್ಲಿ ಮನೆ ಮಾತಾಗಿದ್ದಾರೆ.
ಅಂತಹದ್ದೇ ಒಂದು ಅದ್ಭುತ ಪರಿಕಲ್ಪನೆ ಹೊತ್ತಿರುವ ನಿರ್ದೇಶಕ YK ಅವರು ತಮ್ಮದೇ ಕಲ್ಪನೆಯಲ್ಲಿ ಹೊಸ ಸಿನಿಮಾ ಮಾಡಿದ್ದಾರೆ. ಸಿನಿಮಾಗೆ ನರಸಿಂಹ ಕುಲಕರ್ಣಿ ಬಂಡವಾಳ ಹೂಡಿದ್ದಾರೆ.. ಅಂದ್ಹಾಗೆ ಕನ್ನಡದ ಈ ಹೊಸ ಸಿನಿಮಾದ ಹೆಸರು ಗಿಲ್ಕಿ. ಒಂದು ಅದ್ಭುತ ನಿಶ್ಕಲ್ಮಶ ಪ್ರೇಮಕಥೆ ಹೊಂದಿರುವ , ಪಕ್ಕಾ ಕಂಟೆಂಟ್ ಬೇಸಡ್ ಸಿನಿಮಾ ಗಿಲ್ಕಿ.. ಈ ಸಿನಿಮಾದ ಆ ದೇವರೇ ಹಾಡು ಕೆಲವೇ ದಿನಗಳ ಹಿಂದಷ್ಟೇ ರಿಲೀಸ್ ಆಗಿತ್ತು.. ಈ ಹಾಡು ಜನರ ಹೃದಯ ಕರಗಿಸುವಂತಿದೆ..
ಇದೀಗ ಈ ಸಿನಿಮಾದ ಮತ್ತೊಂದು ಹಾಡು ರಿಲೀಸ್ ಆಗಿದೆ.. ತೀರ ಸೇರೋ ಟೈಟಲ್ ನ ಈ ಹಾಡು ನೋಡುಗರ ಮನಸ್ಸು ನಾಟುವಂತಿದೆ. ಪ್ರತಿಯೊಬ್ಬರ ನಟನೆ ನಮ್ಮನ್ನ ಅವರದ್ದೇ ಪ್ರಪಂಚಕ್ಕೆ ಕೊಂಡೊಯ್ಯುವಂತಿದೆ.
ಅಂದ್ಹಾಗೆ ಗಿಲ್ಕಿ ಸಿನಿಮಾದ ಹಾಡನ್ನ ಮಂಗಳೂರಿನಲ್ಲಿ ಗುರುಡ ಗಮನ ವೃಷಭ ವಾಹನ ಸಿನಿಮಾದ ನಟ ಕಮ್ ನಿರ್ದೇಶಕರಾದ ರಾಜ್ ಬಿ ಶೆಟ್ಟಿ ಅವರು ಬಿಡುಗಡೆ ಮಾಡಿದ್ದು ಹೊಸ ಸಿನಿಮಾಗೆ ಶುಭ ಕೋರಿದ್ದಾರೆ. ವಾಸುಕಿ ವೈಭವ್ ಅವರ ಸಾಹಿತ್ಯ , ಆದಿಲ್ ನಡಾಫ್ ಅವರ ಸಂಗೀತ ಸಂಯೋಜನೆಯ ಹಾಡಿಗೆ ಭರತ್ ನಾಯಕ್ ಅವರ ಧ್ವನಿ ಜೀವ ತುಂಬಿದೆ..
ಸಮಾಜದಿಂದ ದೂರ ಇರುವ ಮೂವರು ತಮ್ಮದೇ ಆದ ಅದ್ಭುತ ಪ್ರಪಂಚ ಕಟ್ಟಿಕೊಳ್ಳುವ ಅದ್ಭುತ ಪರಿಕಲ್ಪನೆಯಲ್ಲಿ ನಿರ್ದೇಶಕ YK ಅವರು ಈ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ.. ಮಾನಸಿಕ ಅಸ್ವಸ್ಥ ಪಾತ್ರಧಾರಿ, ವಿಶೇಷ ಚೇತನ ಪಾತ್ರಧಾರಿಯ ಪಾತ್ರಗಳಲ್ಲಿ ನಟ ತಾರಕ್ ಪೊನ್ನಪ್ಪ , ನಟಿ ಚೈತ್ರಾ ಅದ್ಭುತವಾಗಿ ನಟಿಸಿದ್ದಾರೆ..
AS ಕಾಮಧೇನು ಫಿಲಮ್ಸ್ ಬ್ಯಾನರ್ ನಡಿ ಚಿತ್ರ ಮೂಡಿಬಂದಿದ್ದು ತಾರಕ್ ಪೊನ್ನಪ್ಪ, ಚೈತ್ರಾ ಆಚಾರ್ , ಗೌತಮ್ ರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
July movie to come soon on Screens, song released by Raj B Shetty. The movie is under then banner of A S Kamdenu films.
15-07-25 12:27 pm
Bangalore Correspondent
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 10:32 am
Mangalore Correspondent
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
15-07-25 11:38 am
Mangalore Correspondent
ಮ್ಯಾಟ್ರಿಮನಿ ಸೈಟಲ್ಲಿ ಸಿಕ್ಕ ಗೆಳತಿಯಿಂದಲೇ ಮೋಸ ; ಆ...
13-07-25 05:23 pm
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am