ಬ್ರೇಕಿಂಗ್ ನ್ಯೂಸ್
12-09-20 07:44 pm Mangalore Reporter ಸಿನಿಮಾ
ಮಂಗಳೂರು, ಸೆಪ್ಟಂಬರ್ 12: ಶ್ರೀ ಹರಿ ಕಥಾನಕ ಎನ್ನುವ ಕನ್ನಡ ಚಿತ್ರವೊಂದು ಸದ್ದಿಲ್ಲದೆ ತಯಾರಾಗುತ್ತಿದ್ದು, ಮುಂದಿನ ತಿಂಗಳು ಟ್ರೈಲರ್ ರಿಲೀಸ್ ಮಾಡಲು ಸಿದ್ಧತೆ ನಡೆದಿದೆ.
ವಿಶೇಷ ಅಂದ್ರೆ ಚಿತ್ರದ ಟ್ರೈಲರ್ ಸುದೀರ್ಘ 18 ನಿಮಿಷ ಇರಲಿದೆಯಂತೆ. ಆದರೆ, ಟ್ರೈಲರ್ ನಲ್ಲಿ ಚಿತ್ರದ ಬಗ್ಗೆ ಯಾವುದೇ ಸುಳಿವು ಬಿಟ್ಟು ಕೊಡಲ್ಲ. ಎಲ್ಲಿ ಟ್ರೈಲರ್ ಕೊನೆಗೊಳ್ಳುತ್ತದೋ ಅಲ್ಲಿಂದ ಫಿಲ್ಮ್ ಪ್ರಾರಂಭವಾಗಲಿದ್ದು ಹೊಸ ಮಾದರಿಯ ಟ್ರೈಲರ್ ನಿರ್ಮಿಸುವುದೇ ನಮ್ಮ ಚಿತ್ರದ ಹೆಚ್ಚುಗಾರಿಕೆ ಎನ್ನುವ ಮಾತನ್ನು ಚಿತ್ರದ ನಿರ್ದೇಶಕ ಶರತ್ ಕುಮಾರ್ ಹೇಳುತ್ತಾರೆ. ಟ್ರೈಲರ್ ನಲ್ಲಿ ಕಾಶೀನಾಥ್, ಉಪೇಂದ್ರ ಚಿತ್ರಗಳ ಮಾದರಿಯಲ್ಲಿ ಡಬಲ್ ಮೀನಿಂಗ್ ವರ್ಡ್ ಪ್ಲೇ ಇರಲಿದ್ದು, ಸಂಪೂರ್ಣ ಚಲನಚಿತ್ರವು ರೊಮ್ಯಾಂಟಿಕ ಕಾಮಿಡಿ ಸ್ವರೂಪದಲ್ಲಿರಲಿದೆ ಎನ್ನುತ್ತಾರೆ.

ಲುಂಗಿ ಚಿತ್ರವನ್ನು ನಿರ್ದೇಶನ ಮಾಡಿದ್ದ ಅಕ್ಷಿತ್ ಶೆಟ್ಟಿ ಮೊದಲ ಬಾರಿಗೆ ಅಭಿನಯ ಕ್ಷೇತ್ರಕ್ಕೆ ಕಾಲಿಡುತ್ತಿದ್ದು, ಚಿತ್ರದಲ್ಲಿ ನಾಯಕನಾಗಿ ನಟಿಸಲಿದ್ದಾರೆ. ಒಂದು ಮೊಟ್ಟೆಯ ಕತೆ ಖ್ಯಾತಿಯ ಶೈಲಶ್ರೀ ಚಿತ್ರದ ನಾಯಕಿಯಾಗಿದ್ದಾರೆ. ಹೊಸ ಮಾದರಿಯ ಟ್ರೈಲರನ್ನು ದಿವಂಗತ ನಟ ಕಾಶಿನಾಥ್ ಅವರಿಗೆ ಅರ್ಪಿಸುವುದಾಗಿ ಹೇಳುವ ಚಿತ್ರತಂಡ, ಸದ್ಯಕ್ಕೆ ನಟ - ನಟಿಯರ ಪೋಸ್ಟರ್ ಬಿಡುಗಡೆ ಹಂತದಲ್ಲಿ ಬಿಝಿಯಾಗಿದೆ. ಅವನೇ ಶ್ರೀಮನ್ನಾರಾಯಣ ಚಿತ್ರದ ನಾಯಕಿ ಸಾನ್ವಿ ಶ್ರೀವಾಸ್ತವ, ಚಿತ್ರದ ಹೀರೋಯಿನ್ ಫಸ್ಟ್ ಲುಕ್ ಪೋಸ್ಟರನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಟೈಟಲ್ ಫಸ್ಟ್ ಲುಕ್ ಪೋಸ್ಟರನ್ನು ಕೆಜಿಎಫ್ ಖ್ಯಾತಿಯ ರವಿ ಬಸ್ರೂರು, ಹೀರೋ ಫಸ್ಟ್ ಲುಕ್ ಪೋಸ್ಟರನ್ನು ಟಗರು ಖ್ಯಾತಿಯ ಡಾಲಿ ಧನಂಜಯ್, ಗೆಸ್ ದಿ ಟೈಟಲ್ ಪೋಸ್ಟರನ್ನು ಗಿರ್ಗಿಟ್ ಖ್ಯಾತಿಯ ರೂಪೇಶ್ ಶೆಟ್ಟಿ , ಟೈಗರ್ರಾಜ ಪೋಸ್ಟರನ್ನ ಸಲಗದ ಖಳನಾಯಕ ಯಶ್ ಶೆಟ್ಟಿ ರಿಲೀಸ್ ಮಾಡಿದ್ದಾರೆ.



ಅಂದಹಾಗೆ, ಹೊಸ ಚಿತ್ರದಲ್ಲಿ ನಾಯಕ - ನಾಯಕಿಯರು ಸೇರಿ ಕಲಾವಿದರು ಮತ್ತು ತಂತ್ರಜ್ಞರೆಲ್ಲ ಕರಾವಳಿಯವರೇ ಆಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಏಳು ವರ್ಷಗಳಿಂದ ಕೆಲಸ ಮಾಡುತ್ತಿರುವ ಶಿರ್ವ ಮೂಲದ ಶರತ್ ಕುಮಾರ್, ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಒಟ್ಟು ಚಿತ್ರ ಕಾಶಿನಾಥ್ ಚಿತ್ರವನ್ನು ನೆನಪಿಸುವ ರೀತಿ ಇರಲಿದ್ದು, ರೊಮ್ಯಾಂಟಿಕ್ ಕಾಮೆಡಿಯಿಂದ ಕೂಡಿರುತ್ತದೆ ಎನ್ನುವ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಇದು ಆಸಕ್ತ ನಿರ್ಮಾಪಕರ ಹುಡುಕಾಟಕ್ಕಾಗಿ ಪ್ರೊಡ್ಯೂಸರ್ ಪಿಚ್ ಟ್ರೈಲರ್ ಕಟ್ ಆಗಿದೆ.
31-01-26 11:05 pm
Bangalore Correspondent
ಸಿ.ಜೆ.ರಾಯ್ ಸಾವು ‘ಆತ್ಮಹತ್ಯೆಯೋ ಅಥವಾ ಕೊಲೆಯೋ?’, ನ...
31-01-26 10:24 pm
ಸಿ.ಜೆ. ರಾಯ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಒತ್ತಡವೇ...
30-01-26 10:37 pm
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
31-01-26 10:20 pm
HK News Desk
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
Sunetra Pawar, Maharashtra Deputy CM: ಮಹಾರಾಷ್...
31-01-26 04:56 pm
ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಕೇಳಿಬಂತು ಕಾಂ...
30-01-26 03:38 pm
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
31-01-26 08:40 pm
Mangalore Correspondent
ವಿಷವಾಯ್ತಾ ಪವಿತ್ರ ಗುಜ್ಜರಕೆರೆಯ ನೀರು? ಪ್ರಯೋಗಾಲಯ...
31-01-26 03:38 pm
Road Blunder ; ಪ್ರತಿ ವರ್ಷ ದೇಶದಲ್ಲಿ ಅಪಘಾತಕ್ಕೆ...
30-01-26 09:01 pm
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
31-01-26 01:33 pm
Bengaluru Staffer
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm