ಬ್ರೇಕಿಂಗ್ ನ್ಯೂಸ್
11-09-20 05:44 pm Headline Karnataka News Network ಸಿನಿಮಾ
ಮುಂಬೈ, ಸೆಪ್ಟಂಬರ್ 11: ದಿನದಿಂದ ದಿನಕ್ಕೆ ಬಾಲಿವುಡ್ ಅಂಗಳದಿಂದ ಒಂದೊಂದೇ ರಹಸ್ಯಗಳು ಹೊರಬರುತ್ತಿದೆ. ನೆಪೊಟಿಸಂ ಆಯಿತು ಡ್ರಗ್ಸ್ ಮಾಫಿಯಾ ಆಯಿತು ಈಗ ಮತ್ತೇ ಕಾಸ್ಟಿಂಗ್ ಕೌಚ್ ಸರದಿ. ಬಾಲಿವುಡ್ ನ ಆಳ ಆಗಲ ಕೆದಕಿದರೆ ಬರೀ ಕೊಳಕು ಹೊರಬರುತ್ತಿದೆ. ಇಲ್ಲಿ ಪ್ರತಿಯೊಂದಕ್ಕೂ ಉದ್ಧೇಶ ಇದ್ದೇ ಇರುತ್ತದೆ. ಈಗ ಮತ್ತೇ ವಿವಾದಾತ್ಮಕ ನಿರ್ಮಾಪಕ ಸಾಜಿದ್ ಖಾನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಇದು ಈತನ ವಿರುದ್ಧ ಕೇಳಿ ಬಂದಿರುವ 4 ನೇ ಲೈಂಗಿಕ ಕಿರಿಕುಳ ಆರೋಪ.
ಈ ಬಾರಿ ಆರೋಪ ಕೇಳಿ ಬಂದಿರೋದು ಮಾಡಲಿಂಗ್ ಕ್ಷೇತ್ರದಿಂದ. ರೂಪದರ್ಶಿ ಪೌಲಾ ಈ ಆರೋಪವನ್ನು ಮಾಡಿದ್ದು, ತನ್ನ ಇನ್ಟ್ರಾಗ್ರಾಂ ಪೇಜ್ ನಲ್ಲಿ ತನ್ನ ಮೇಲಾದ ದೌರ್ಜನ್ಯವನ್ನು ಬರೆದುಕೊಂಡಿದ್ದಾರೆ.
ಸಾಜಿದ್ ಖಾನ್ ಕಚೇರಿಗೆ ಚಿತ್ರವೊಂದರ ನಾಯಕಿ ನಟಿಯ ಆಡಿಷನ್ ಗೆ ತೆರಳಿದ್ದ ಸಂದರ್ಭದಲ್ಲಿ ಸಾಜಿದ್, ಪೌಲಾ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೊಪಿಸಲಾಗಿದೆ. ಚಿತ್ರದಲ್ಲಿ ಅವಕಾಶ ಬೇಕಾದರೆ ತನ್ನ ಜೊತೆ ಲೈಂಗಿಕವಾಗಿ ಸಹಕರಿಸುವಂತೆ ಸಾಜಿದ್ ಒತ್ತಾಯಿಸಿದ್ದಾನೆ ಎಂದು ಪೌಲ್ ಆರೋಪಿಸಿದ್ದಾರೆ . ಈ ಘಟನೆ ನಡೆದಾಗ ತನಗಿನ್ನು 17 ವರ್ಷ , ತನ್ನ ಮೇಲಾದ ಲೈಂಗಿಕ ದೌರ್ಜನ್ಯವನ್ನು ಪೌಲಾ ಕೆಲ ಸಮಯದ ಬಳಿಕ ಬಹಿರಂಗವಾಗಿ ಹೇಳಿಕೊಂಡಿದ್ದಾರೆ .
🙏🏼 Before democracy dies and there is no freedom of speech anymore I thought I should speak !
A post shared by Dimple paul (@paulaa__official) on Sep 9, 2020 at 5:18am PDT
ನಟ ಸುಶಾಂತ್ ಸಿಂಗ್ ಅನುಮಾನಾಸ್ಪದ ಸಾವಿನ ಬಳಿಕ ಬಾಲಿವುಡ್ ನಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದ್ದು, ಬಾಲಿವುಡ್ ಒಳಗೆ ನಡೆಯುತ್ತಿರುವ ವಿಚಾರಗಳು ಇದೀಗ ಒಂದೊಂದಾಗಿ ಬೆಳಕಿಗೆ ಬರಲಾರಂಭಿಸಿದೆ.
16-06-26 12:26 pm
HK News Staffer
ಧರ್ಮಸ್ಥಳದ ಬುರುಡೆ ಕೇಸಿಗೆ ಬಿಗ್ ಟ್ವಿಸ್ಟ್ ; ಎಸ್ಐಟ...
12-06-26 12:02 pm
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
15-06-26 11:18 am
HK News Staffer
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
ಕೇರಳದಲ್ಲಿ ಜೂನ್ 15ರಿಂದ 'ಪ್ರಿಯದರ್ಶಿನಿ' ಉಚಿತ ಬಸ್...
14-06-26 01:08 pm
16-06-26 11:35 am
HK News Staffer
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್:...
13-06-26 05:28 pm
16-06-26 05:10 pm
HK News Staffer
Chandrashekhar, Belthangady: ಬೆಳ್ತಂಗಡಿ ಸರ್ಕಾರ...
16-06-26 02:34 pm
ಉಳ್ಳಾಲ ; ಸ್ನಾನಕ್ಕೆಂದು ಕೋಣೆಗೆ ತೆರಳಿದ್ದ ಪಿಯುಸಿ...
16-06-26 10:33 am
ಮಕ್ಕಳ ಕಣ್ಣೆದುರೇ ತಾಯಿಯ ಬರ್ಬರ ಹತ್ಯೆ! ಬೆಟ್ಟಿಂಗ್...
15-06-26 09:21 pm
ನಿಯಂತ್ರಣ ತಪ್ಪಿ ನಿಲ್ದಾಣದ ಪ್ಲಾಟ್ ಫಾರಂಗೆ ನುಗ್ಗಿ...
15-06-26 08:37 pm