ಬ್ರೇಕಿಂಗ್ ನ್ಯೂಸ್
26-01-21 04:44 pm Source: FILMIBEAT Shruthi Gk ಸಿನಿಮಾ
ಇಂದು ದೇಶದಾದ್ಯಂತ 72ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಸ್ಯಾಂಡಲ್ ವುಡ್ ನಟ ಡಾಲಿ ಧನಂಜಯ್ ಈ ಬಾರಿಯ ಗಣರಾಜ್ಯದಿನವನ್ನು ವಿಶೇಷವಾಗಿ ಆಚರಣೆ ಮಾಡಿದ್ದಾರೆ. ಧನಂಜಯ್ ಸದ್ಯ ರತ್ನನ್ ಪ್ರಪಂಚ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರತ್ನನ್ ಪ್ರಪಂಚ ಸಿನಿಮಾದ ಚಿತ್ರೀಕರಣ ಹಳ್ಳಿಯಲ್ಲಿ ನಡೆಯುತ್ತಿದೆ. ಚಿತ್ರೀಕರಣದ ನಡುವೆಯೂ ಧನಂಜಯ್ ಹಳ್ಳಿಯ ಶಾಲೆಯೊಂದರ ಗಣರಾಜ್ಯೋತ್ಸವ ಸಂಭ್ರಮಕ್ಕೆ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದಾರೆ.
ಈ ಸಮಯದಲ್ಲಿ ಮಕ್ಕಳ ಮುಂದೆ ಭಾಷಣ ಮಾಡಿದ ನಟ ಧನಂಜಯ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂವಿಧಾನ ಎಂದರೇನು? ಅಂತ ಸರಳವಾಗಿ ವಿವರಿಸಿದ ಧನಂಜಯ್ ಮಾತಿಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ.
ಗಣರಾಜ್ಯ ಎಂದರೇನು? ಧನಂಜಯ್ ಹೇಳ್ತಾರೆ ಕೇಳಿ
'ನಿಮ್ಮ ಜೊತೆ ಗಣರಾಜ್ಯ ದಿವಸ ಆಚರಿಸಿದ್ದು ತುಂಬಾ ಸಂತೋಷವಾಗುತ್ತಿದೆ. ಗಣರಾಜ್ಯ ಎಂದರೆ ತುಂಬಾ ಸರಳವಾಗಿ ಹೇಳಬೇಕು ಎಂದರೆ ಶಾಲೆ ನಡೆಸಲು ಒಂದು ರೀತಿ ನೀತಿ ಇರತ್ತೆ, ಎಲ್ಲರೂ ಒಂದೇ, ಎಲ್ಲರಿಗೂ ಸಮಾನ ಅವಕಾಶವಿದೆ. ದೇಶ ನಡೆಸಲು ಒಂದು ರೀತಿ ನೀತಿ ಇರಬೇಕಲ್ವಾ.' ಎಂದಿದ್ದಾರೆ.

ಅಂಬೇಡ್ಕರ್ ಮತ್ತು ಹಿರಿಯರು ಸೇರಿ ರಚಿಸಿದ ಗ್ರಂಥ
'ಅಂಬೇಡ್ಕರ್ ಅಂತ ಹಿರಿಯರು ಎಲ್ಲಾ ಸೇರಿ ದೇಶ ನಡೆಸಲು ಅದ್ಭುತವಾದ ಗ್ರಂಥ ಸಂವಿಧಾನವನ್ನು ರಚಿಸಿದ್ದಾರೆ. ಇದೇ ದೇಶದಲ್ಲಿ ಎಲ್ಲವನ್ನೂ ನೋಡಿ ಬೆಳೆದವರು ಅವರು, ಹಾಗಾಗಿ ಈ ದೇಶ ಅದ್ಭುತವಾಗಿ ನಡೆಸಬೇಕು ಎಂದು ರಚಿಸಿದ್ದಾರೆ. ನಾವೆಲ್ಲರೂ ಅದಕ್ಕೆ ಬದ್ಧರಾಗಿರಬೇಕು.'
ಪ್ರಜಾಪ್ರಭುತ್ವ ಎಂದರೇನು?
'ಪ್ರಜಾಪ್ರಭುತ್ವ ಎಂದರೆ ಎಲ್ಲರಿಗೂ ಗೊತ್ತಿದೆ. ಇನ್ನು ಸ್ವಲ್ಪ ವರ್ಷದಲ್ಲೇ ನೀವು ಓಟು ಮಾಡುತ್ತೀರಿ. ಆಗ ನಿಮಗೆ ಗೊತ್ತಿರಬೇಕು. ಪ್ರಜಾಪ್ರಭುತ್ವ ಎಂದರೇ ಏನು ಅಂತ. ಪ್ರಜೆ ಎಂದರೆ ಪ್ರಜೆಗಳು ಎಂದರೆ ನಾವು. ಪ್ರಭುತ್ವ ಎಂದರೆ ಆಳ್ವಿಕೆ. ನಾವು ಆಳಬೇಕು ಅಂದರೆ ಅಧಿಕಾರವನ್ನು ಕೊಡುವ ಮೂಲಕ. ನಾವು ಓಟು ಹಾಕುವ ಮೂಲಕ ಅಧಿಕಾರ ಕೊಡುತ್ತೀವಿ. ಆದರೀಗ ಅಧಿಕಾರ ತಗೊತಿದ್ದಾರೆ.
This News Article is a Copy of FILMIBEAT
16-06-26 12:26 pm
HK News Staffer
ಧರ್ಮಸ್ಥಳದ ಬುರುಡೆ ಕೇಸಿಗೆ ಬಿಗ್ ಟ್ವಿಸ್ಟ್ ; ಎಸ್ಐಟ...
12-06-26 12:02 pm
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
15-06-26 11:18 am
HK News Staffer
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
ಕೇರಳದಲ್ಲಿ ಜೂನ್ 15ರಿಂದ 'ಪ್ರಿಯದರ್ಶಿನಿ' ಉಚಿತ ಬಸ್...
14-06-26 01:08 pm
16-06-26 11:35 am
HK News Staffer
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್:...
13-06-26 05:28 pm
16-06-26 08:32 pm
HK News Staffer
SIT Car Accident: ಎಸ್ಐಟಿ ಎಸ್ಪಿ ಸೈಮನ್ ಪ್ರಯಾಣಿಸ...
16-06-26 05:10 pm
Chandrashekhar, Belthangady: ಬೆಳ್ತಂಗಡಿ ಸರ್ಕಾರ...
16-06-26 02:34 pm
ಉಳ್ಳಾಲ ; ಸ್ನಾನಕ್ಕೆಂದು ಕೋಣೆಗೆ ತೆರಳಿದ್ದ ಪಿಯುಸಿ...
16-06-26 10:33 am
ಮಕ್ಕಳ ಕಣ್ಣೆದುರೇ ತಾಯಿಯ ಬರ್ಬರ ಹತ್ಯೆ! ಬೆಟ್ಟಿಂಗ್...
15-06-26 09:21 pm