ಬ್ರೇಕಿಂಗ್ ನ್ಯೂಸ್
            
                        07-01-21 10:51 pm Filmibeat ಸಿನಿಮಾ
            Photo credits : BehindwoodsTV
ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾದ ಟೀಸರ್ ಅವಧಿಗೂ ಮುನ್ನವೇ ಬಿಡುಗಡೆಗೆ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ.
ಕೆಜಿಎಫ್ 2 ಸಿನಿಮಾದ ಟೀಸರ್ ಅನ್ನು ನಾಳೆ (ಜನವರಿ 08) ಯಶ್ ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಕೆಜಿಎಫ್ ಟೀಸರ್ ಜನವರಿ 08 ರಂದು ಬೆಳಿಗ್ಗೆ 10:18 ಕ್ಕೆ ಹೊಂಬಾಳೆ ಸಿನಿಮಾದ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಆಗಲಿತ್ತು. ಆದರೆ ವಿಡಿಯೋ ಲೀಕ್ ಆದ ಕಾರಣ ಬೇಗನೆ ಟೀಸರ್ ಬಿಡುಗಡೆ ಮಾಡಲಾಗಿದೆ.
ನಿಗದಿಗೊಳಿಸಿದ್ದ ಅವಧಿಗೂ ಮುನ್ನ ಅಂದರೆ ಗುರುವಾರ ರಾತ್ರಿ 9:29 ಕ್ಕೆ ಟೀಸರ್ ಬಿಡುಗಡೆ ಮಾಡಲಾಗುವುದು ಎಂದು ನಿರ್ದೇಶಕ ಪ್ರಶಾಂತ್ ನೀಲ್ ಟ್ವೀಟ್ ಮಾಡಿದ್ದರು.
ಟೀಸರ್ನಲ್ಲಿ ನರಾಚಿಯ ಏರಿಯಲ್ ಲುಕ್ಗಳು ಭೀತಿ ಹುಟ್ಟಿಸುವಂತಿದೆ. ಆಧುನಿಕ ಸ್ಟೆನ್ ಗನ್ಗಳನ್ನು ಬಳಸಿ ವೈರಿಗಳ ಸೆದೆ ಬಡಿಯುತ್ತಿರುವ ರಾಕಿ ಭಾಯ್, ಬಿಸಿಯಾದ ಗನ್ ನಿಂದ ಸಿಗರೇಟು ಹೊತ್ತಿಸುವ ಸ್ಟೈಲ್ ಅಭಿಮಾನಿಗಳಿಗೆ ಹುಚ್ಚು ಹಿಡಿಸುವುದು ಗ್ಯಾರೆಂಟಿ.
ಅದ್ಭುತವಾದ ಹಿನ್ನೆಲೆ ಸಂಗೀತ ರಾಕಿ ಭಾಯ್ಗಾಗಿ ಆರತಿ ತಟ್ಟೆ ಹಿಡಿದು ಕಾಯುತ್ತಿರುವ ಮೀರಾ, ರಾಕಿ ಭಾಯ್ ಅನ್ನು ಮುಗಿಸಲು ಬರುವ ದೊಡ್ಡ ಜನಸಾಗರ, ನರಾಚಿಯೊಳಗೆ ನುಗ್ಗುವ ಸರ್ಕಾರದ ಸೇನೆ ಎಲ್ಲವೂ ಟೀಸರ್ನಲ್ಲಿದೆ. ಟೀಸರ್ನ ವೇಗಕ್ಕೆ ತಕ್ಕಂತೆ ದಂಗುಬಡಿಸುವ ಹಿನ್ನೆಲೆ ಸಂಗೀತವೂ ಇದೆ.
ಕೆಜಿಎಫ್ ನಲ್ಲಿ 'ಪವರ್ಫುಲ್ ಪೀಪಲ್ಸ್ ಕಮ್ ಫ್ರಂ ಪವರ್ಫುಲ್ ಪ್ಲೇಸಸ್' ಎಂದಿದ್ದ ಸ್ಲೋಗನ್ ಕೆಜಿಎಫ್ 2 ಬದಲಾಗಿದೆ. 'ಪವರ್ಫುಲ್ ಪೀಪಲ್ ಮೇಕ್ ಪ್ಲೇಸಸ್ ಪವರ್ಫುಲ್' ಎಂದು ಬದಲು ಮಾಡಿರುವುದು ಈ ಟೀಸರ್ನಲ್ಲಿ ಗೊತ್ತಾಗುತ್ತಿದೆ.
ರವೀನಾ ಟಂಡನ್ ಲುಕ್ ಸೂಪರ್ ಪಾರ್ಲಿಮೆಂಟ್ನಲ್ಲಿ ಗತ್ತಿನಿಂದ ಹೆಜ್ಜೆ ಹಾಕುತ್ತಿರುವ ನಟಿ ರವೀನಾ ಟಂಡನ್, ಉದ್ದ ಜಡೆ ಬಿಟ್ಟು ಮಾರುದ್ದದ ಕತ್ತಿ ಹಿಡಿದು ನಿಂತಿರುವ ಸಂಜಯ್ ದತ್ ಲುಕ್ಗಳು ಹುಬ್ಬೇರಿಸುವಂತಿವೆ. ಟೀಸರ್ನ ಕೊನೆಯಲ್ಲಿ ಯಶ್ ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಸಹ ಕೋರಲಾಗಿದೆ.
 
            
            
            The most-awaited teaser of KGF: Chapter 2 was released on Thursday to contain the damage of the video’s leak, hours before its official launch.
    
            
             04-11-25 04:38 pm
                        
            
                  
                Bangalore Correspondent    
            
                    
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             04-11-25 06:15 pm
                        
            
                  
                Mangalore Correspondent    
            
                    
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
ಹಿಂದುಗಳು, ಬಿಜೆಪಿಗರೆಂದು ತಾರತಮ್ಯಗೈದರೆ ಕ್ಷೇತ್ರದ...
03-11-25 10:47 pm
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
    
            
             04-11-25 02:11 pm
                        
            
                  
                Mangalore Correspondent    
            
                    
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm