ಬ್ರೇಕಿಂಗ್ ನ್ಯೂಸ್
            
                        07-01-21 04:35 pm Source: FILMIBEAT Manjunatha C ಸಿನಿಮಾ
            ಸೆಲೆಬ್ರಿಟಿಗಳಿಗೆ ಖಾಸಗಿತನ ಎಂಬುದು ಬಹಳ ಕಡಿಮೆ, ಅದರಲ್ಲೂ ಬಾಲಿವುಡ್ ಸೆಲೆಬ್ರಿಟಿಗಳಿಗಂತೂ ಖಾಸಗಿತನ ಎಂಬುದು ಬಹುತೇಕ ಇಲ್ಲವೇ ಇಲ್ಲ ಎನ್ನುವಂತಾಗಿದೆ. ಮಾಧ್ಯಮಗಳ ಕ್ಯಾಮೆರಾಮನ್ಗಳು ಸದಾ ಸೆಲೆಬ್ರಿಟಿಗಳ ಮನೆಗಳ ಮುಂದೆ ಇದ್ದೇ ಇರುತ್ತಾರೆ. ಅವರು ಎಲ್ಲಿ ಹೋದರೂ ಹಿಂಬಾಲಿಸುತ್ತಾರೆ. ಹಲವು ಬಾಲಿವುಡ್ ಪತ್ರಿಕೆಗಳು ಹಲವು ಶಿಫ್ಟ್ಗಳಲ್ಲಿ ಸೆಲೆಬ್ರಿಟಿಗಳ ಮನೆಯ ಮುಂದೆ ಕ್ಯಾಮೆರಾಮನ್ಗಳನ್ನು ಕೆಲಸಕ್ಕೆ ಹಾಕಿರುತ್ತಾರೆ. ಸೆಲೆಬ್ರಿಟಿಗಳು ವಿದೇಶಕ್ಕೆ ಹೋದರೂ ಹಿಂಬಾಲಿಸುವವರಿದ್ದಾರೆ. ಪ್ರಸ್ತುತ ಅನುಷ್ಕಾ ಶರ್ಮಾ ಬಾಲಿವುಡ್ನ ಟಾಪ್ ಸೆಲೆಬ್ರಿಟಿ, ಅಮ್ಮನಾಗುತ್ತಿರುವ ಅನುಷ್ಕಾ ರ ಸಣ್ಣ ಕದಲಿಕೆಗಳೂ ಸುದ್ದಿಯಾಗುತ್ತಿವೆ. ಅವರ ಮನೆಯ ಮುಂದೆ ಕ್ಯಾಮೆರಾಮನ್ಗಳ ದಂಡೇ ಇರುತ್ತದೆ. ಎಲ್ಲಿ ಹೋದರೂ ಕ್ಯಾಮೆರಾ ಕ್ಲಿಕ್ಕಿಸಲಾಗುತ್ತದೆ. ವಿಡಿಯೋ ಮಾಡಲಾಗುತ್ತದೆ. ಇದರಿಂದ ಬೇಸತ್ತುಹೋಗಿದ್ದಾರೆ ನಟಿ ಅನುಷ್ಕಾ ಶರ್ಮಾ.

ಸಾಕು ಇದನ್ನು ನಿಲ್ಲಿಸಿ: ಅನುಷ್ಕಾ ಶರ್ಮಾ
'ಮನವಿಗಳನ್ನು ಮಾಡಿದ ಬಳಿಕವೂ ಒಬ್ಬ ಫೊಟೊಗ್ರಾಫರ್ ಮತ್ತು ಒಂದು ಪ್ರಕಟಣಾ ಸಂಸ್ಥೆ ನಮ್ಮ ಖಾಸಗಿತನವನ್ನು ಉಲ್ಲಂಘಿಸುತ್ತಿದ್ದಾರೆ. ದಯವಿಟ್ಟು ಇದನ್ನು ಇಲ್ಲಿಗೇ ನಿಲ್ಲಿಸಿಬಿಡಿ' ಎಂದಿದ್ದಾರೆ ಅನುಷ್ಕಾ ಶರ್ಮಾ.
ಚಿತ್ರ-ವಿಡಿಯೋ ಹಂಚಿಕೊಳ್ಳುವ ಅನುಷ್ಕಾ ಶರ್ಮಾ 
ಗರ್ಭಿಣಿ ಅನುಷ್ಕಾ ಶರ್ಮಾ ತಮ್ಮ ಸಾಕಷ್ಟು ಚಿತ್ರಗಳು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅದಾಗ್ಯೂ ಅವರು ಎಲ್ಲಿ ಹೋದರೂ ಅವರನ್ನು ಹಿಂಬಾಲಿಸಿ ಅವರ ಖಾಸಗಿ ಕ್ಷಣಗಳನ್ನು ಸಹ ಕ್ಲಿಕ್ಕಿಸಿ ಮುದ್ರಿಸಲಾಗುತ್ತಿದೆ. ಇದು ಅನುಷ್ಕಾ ರಿಗೆ ಬೇಸರ ತಂದಿದೆ.

ಆಸ್ಟ್ರೇಲಿಯಾದಿಂದ ವಾಪಸ್ಸಾಗಿರುವ ವಿರಾಟ್ ಕೊಹ್ಲಿ 
ನಟಿ ಅನುಷ್ಕಾ ಶರ್ಮಾ ಇದೇ ತಿಂಗಳಾಂತ್ಯದಲ್ಲಿ ಮಗುವನ್ನು ನಿರೀಕ್ಷಿಸುತ್ತಿದ್ದಾರೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ಸಹ ಆಸ್ಟ್ರೇಲಿಯಾ ಪ್ರವಾಸದಿಂದ ರಜೆ ಪಡೆದು ಪತ್ನಿಯೊಂದಿಗೆ ಕಾಲ ಕಳೆಯಲು ಭಾರತಕ್ಕೆ ವಾಪಸ್ಸಾಗಿದ್ದಾರೆ. ಕೆಲವೇ ದಿನಗಳಲ್ಲಿ ಸಿಹಿ ಸುದ್ದಿ ನೀಡಲಿದ್ದಾರೆ ಅನುಷ್ಕಾ.
This News Article is a Copy of FILMIBEAT
            
            
            
    
            
             04-11-25 04:38 pm
                        
            
                  
                Bangalore Correspondent    
            
                    
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             04-11-25 06:15 pm
                        
            
                  
                Mangalore Correspondent    
            
                    
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
ಹಿಂದುಗಳು, ಬಿಜೆಪಿಗರೆಂದು ತಾರತಮ್ಯಗೈದರೆ ಕ್ಷೇತ್ರದ...
03-11-25 10:47 pm
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
    
            
             04-11-25 02:11 pm
                        
            
                  
                Mangalore Correspondent    
            
                    
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm