ಬ್ರೇಕಿಂಗ್ ನ್ಯೂಸ್
            
                        02-01-21 10:54 am Source: FILMIBEAT ಸಿನಿಮಾ
            ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳ ಸಂಖ್ಯೆ ಕೋಟಿಗಳಲ್ಲಿದೆ. ಅಭಿಮಾನಿಗಳ ಪಾಲಿಗೆ ಆರಾಧ್ಯ ದೈವ ಮೆಗಾಸ್ಟಾರ್ ಚಿರಂಜೀವಿ. ಆದರೆ ತೆಲುಗಿನದ್ದೇ ಆದ ಒಟಿಟಿಯೊಂದು ಇದೀಗ ಚಿರಂಜೀವಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಆ ನಂತರ ತನ್ನ ತಪ್ಪು ತಿದ್ದಿಕೊಂಡು ಕ್ಷಮಾಪಣೆ ಸಹ ಕೇಳಿದೆ. ತೆಲುಗಿನ 'ಆಹಾ' ಒಟಿಟಿ ಇತ್ತೀಚೆಗೆ ಸಖತ್ ಖ್ಯಾತಿ ಗಳಿಸಿದೆ. ಆಹಾ ದಲ್ಲಿ ಸಮಂತಾ ನಡೆಸಿಕೊಡುವ 'ಸ್ಯಾಮ್ ಜ್ಯಾಮ್' ಹೆಸರಿನ ಟಾಕ್ ಶೋ ಅಂತೂ ಸಖತ್ ಹಿಟ್ ಆಗಿದೆ. ಈ ಟಾಕ್ ಶೋ ಗೆ ಮೆಗಾಸ್ಟಾರ್ ಚಿರಂಜೀವಿ, ವಿಜಯ್ ದೇವರಕೊಂಡ, ತಮನ್ನಾ ಇನ್ನೂ ಹಲವು ಸ್ಟಾರ್ಗಳು ಬಂದಿದ್ದಾರೆ. ಇತ್ತೀಚೆಗೆ ಅಲ್ಲು ಅರ್ಜುನ್ ಸಹ ಬಂದಿದ್ದರು. ಆಗಲೇ ಆಗಿದ್ದ ಯಡವಟ್ಟು.

ಟಾಕ್ ಶೋ ಗೆ ಬಂದಿದ್ದ ಅಲ್ಲು ಅರ್ಜುನ್ ಸ್ಯಾಮ್ ಜ್ಯಾಮ್ ಟಾಕ್ ಶೋ ಗೆ ಅಲ್ಲು ಅರ್ಜುನ್ ಬಂದಿದ್ದು, ಈ ಎಪಿಸೋಡ್ನ ಪ್ರಚಾರಕ್ಕಾಗಿ ಹಲವು ಪ್ರೋಮೋಗಳನ್ನು ಒಟಿಟಿಯು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿತ್ತು. ಆದರೆ ಒಂದು ಪ್ರೋಮೋ ದಲ್ಲಿ ಅಲ್ಲು ಅರ್ಜುನ್ ಅನ್ನು 'ಮೆಗಾಸ್ಟಾರ್' ಎಂದು ಸಂಭೋದಿಸಲಾಗಿತ್ತು. ಇದು ಚಿರು ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಯಿತು.
ಅಲ್ಲು ಅರ್ಜುನ್ ಅನ್ನು 'ಮೆಗಾಸ್ಟಾರ್' ಎಂದ ಆಹಾ 
ಆಹಾ ಒಟಿಟಿಯನ್ನು, ಅಲ್ಲು ಅರ್ಜುನ್ ಅನ್ನು ಸಮಂತಾ ಅನ್ನುನ ಗುರಿಯಾಗಿಸಿ ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ಎತ್ತಿದರು. ಅಲ್ಲು ಅರ್ಜುನ್ ಅನ್ನು ಸಖತ್ ಟ್ರೋಲ್ ಮಾಡಲಾಯಿತು.

ಕ್ಷಮೆ ಕೋರಿದ ಆಹಾ ಒಟಿಟಿ 
ಕೊನೆಗೆ ತನ್ನ ತಪ್ಪು ತಿದ್ದಿಕೊಂಡ ಆಹಾ, ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೋರಿ, 'ನಿಮ್ಮ ಪ್ರೀತಿಯಿಂದಲೇ ನಾವು ಇಷ್ಟು ದೂರ ಬಂದಿದ್ದೇವೆ. ಉದ್ದೇಶಪೂರ್ವಕವಲ್ಲದ ತಪ್ಪು ನಮ್ಮಿಂದ ಆಗಿದೆ. ನಮ್ಮ ತಪ್ಪಿನಿಂದ ಯಾರಿಗೆ ಬೇಸರವಾಗಿದೆಯೋ ಅವರಿಗೆಲ್ಲ ಕ್ಷಮೆ ಕೋರುತ್ತಿದ್ದೇವೆ' ಎಂದಿದೆ ಆಹಾ.

ಇರುವುದು ಒಬ್ಬರೇ ಮೆಗಾಸ್ಟಾರ್ 
ಅಷ್ಟೇ ಅಲ್ಲದೆ, 'ಇಡೀಯ ಸಿನಿಮಾ ಉದ್ಯಮದಲ್ಲಿ ಒಬ್ಬರೇ ಮೆಗಾಸ್ಟಾರ್ ಇರುವುದು ಅವರು ಯಾರೆಂದು ನಾವು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ' ಎಂದಿದೆ ಒಟಿಟಿ. ಆಹಾ ಕೋರಿದ ಕ್ಷಮೆಯನ್ನು ಮನ್ನಿಸಿದ್ದಾರೆ ಚಿರಂಜೀವಿ ಅಭಿಮಾನಿಗಳು.
This News Article is a Copy of FILMIBEAT
            
            
            
    
            
             04-11-25 04:38 pm
                        
            
                  
                Bangalore Correspondent    
            
                    
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             04-11-25 06:15 pm
                        
            
                  
                Mangalore Correspondent    
            
                    
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
ಹಿಂದುಗಳು, ಬಿಜೆಪಿಗರೆಂದು ತಾರತಮ್ಯಗೈದರೆ ಕ್ಷೇತ್ರದ...
03-11-25 10:47 pm
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
    
            
             04-11-25 02:11 pm
                        
            
                  
                Mangalore Correspondent    
            
                    
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm