ಬ್ರೇಕಿಂಗ್ ನ್ಯೂಸ್
22-09-25 07:15 pm Bangalore Correspondent ಸಿನಿಮಾ
ಬೆಂಗಳೂರು, ಸೆ.22: ಬಹು ನಿರೀಕ್ಷಿತ ಕಾಂತಾರ – ಅಧ್ಯಾಯ 1ರ ಟ್ರೈಲರ್ ರಿಲೀಸ್ ಮಾಡಲಾಗಿದೆ. ಹೊಂಬಾಳೆ ಫಿಲಂಸ್ ಬ್ಯಾನರಿನ ಯೂಟ್ಯೂಬ್ ನಲ್ಲಿ ಟ್ರೈಲರ್ ರಿಲೀಸ್ ಆಗಿದ್ದು, ಮುಂದಿನ ಅಕ್ಟೋಬರ್ 2ರಂದು ಚಿತ್ರ ಬಿಡುಗಡೆಯ ದಿನಾಂಕವನ್ನೂ ಘೋಷಿಸಲಾಗಿದೆ.
ಕರಾವಳಿಯ ತುಳುನಾಡಿನಲ್ಲಿ ದೈವಗಳು ಬರುವುದಕ್ಕೂ ಹಿಂದಿನ ಕತೆ ಚಿತ್ರದಲ್ಲಿರುವುದು ಟ್ರೈಲರ್ ನಲ್ಲಿ ಕಾಣುತ್ತದೆ. ರಿಷಬ್ ಶೆಟ್ಟಿ ನಾಗಾ ಸಾಧು, ದೈವದ ನಡುವೆ ಸಂಪರ್ಕ ಬೆಸೆಯುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಹುಬಲಿ ರೀತಿಯಲ್ಲಿ ಅದ್ದೂರಿ ಸೆಟ್ ಮತ್ತು ನವಿರಾದ ಪ್ರೇಮಕತೆ ಇರುವುದನ್ನೂ ತೋರಿಸಲಾಗಿದೆ.



ಕಾಂತಾರ ಚಿತ್ರದಲ್ಲಿ ದೈವ ಮಾಯವಾಗುವಲ್ಲಿಂದ ಅದು ಹೇಗೆ ದೈವ ಮಾಯವಾಗೋದು ಎಂಬ ಪ್ರಶ್ನೆಯಿಂದ ಕಥೆ ಆರಂಭಗೊಂಡು ದೈವಗಳ ಹಿನ್ನೆಲೆಯ ಕತೆಯನ್ನು ನಿರೂಪಣೆ ಮಾಡುವ ರೀತಿ ತೋರಿಸಲಾಗಿದೆ. ಸಾಕ್ಷಾತ್ ಶಿವನೇ ತುಳುನಾಡಿನಲ್ಲಿ ಬಂದು ನೆಲೆಸಿದ್ದ. ಆನಂತರ ಶಿವನ ಗಣಗಳಾಗಿ ಗುಳಿಗ ಇನ್ನಿತರ ದೈವಗಳು ಕಾಣಿಸಿಕೊಂಡಿದ್ದವು ಎನ್ನುವ ರೀತಿ ಕತೆಯ ಹಂದರ ಇರುವುದು ತೋರಿಬರುತ್ತದೆ. ಅಲ್ಲದೆ, ಬನವಾಸಿ ಕದಂಬ ರಾಜರು, ಅಲ್ಲಿನ ರಾಜಕುಮಾರಿಯ ಕತೆಯನ್ನೂ ಒಳಗೊಳ್ಳಿಸಲಾಗಿದೆ.
ಟ್ರೈಲರ್ ನೋಡಿದರೆ ತೆಲುಗಿನ ಬಾಹುಬಲಿಯ ಟಚ್ ಮೇಲ್ನೋಟಕ್ಕೆ ಕಾಣುತ್ತದೆ. ಹಿಂದಿನ ಕಾಂತಾರದಲ್ಲಿ ದೈವದ ಕಾರಣಿಕ ಮತ್ತು ಮುಗ್ಧ ಕಾಡಿನ ಜನರು, ಅರಣ್ಯ ಇಲಾಖೆಯ ಅಧಿಕಾರಿಗಳು, ಜಮೀನ್ದಾರನೊಂದಿಗೆ ಹೋರಾಟದ ಕತೆಯನ್ನು ತೋರಿಸಲಾಗಿತ್ತು. ಕೊನೆಯಲ್ಲಿ ದೈವದ ಪಾತ್ರಧಾರಿ ಮಾಯವಾಗುವಲ್ಲಿಗೆ ಚಿತ್ರವನ್ನು ನಿಲ್ಲಿಸಲಾಗಿತ್ತು. ಅಲ್ಲಿಂದಲೇ ಚಿತ್ರದ ಒಂದನೇ ಅಧ್ಯಾಯದ ಆರಂಭ ಕೊಟ್ಟಿರುವುದು ಟ್ರೈಲರ್ ನಲ್ಲಿ ಕಾಣಿಸುತ್ತದೆ.
ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಇದೆ. ನಾಯಕಿ ರುಕ್ಮಿಣಿ ವಸಂತ್ ಮತ್ತು ರಿಷಬ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
The much-awaited trailer of Kantara – Chapter 1 has been released by Hombale Films on their official YouTube channel, along with the announcement that the film will hit theatres on October 2. Set against the cultural backdrop of coastal Tulu Nadu, the trailer reveals the story that predates the events of Kantara. Actor-director Rishab Shetty appears in the role of a Naga Sadhu, acting as a bridge between the divine and the earthly realms. The visuals showcase grandeur on the scale of Baahubali, with magnificent sets, powerful sequences, and a tender love story woven into the narrative.
16-06-26 12:26 pm
HK News Staffer
ಧರ್ಮಸ್ಥಳದ ಬುರುಡೆ ಕೇಸಿಗೆ ಬಿಗ್ ಟ್ವಿಸ್ಟ್ ; ಎಸ್ಐಟ...
12-06-26 12:02 pm
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
15-06-26 11:18 am
HK News Staffer
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
ಕೇರಳದಲ್ಲಿ ಜೂನ್ 15ರಿಂದ 'ಪ್ರಿಯದರ್ಶಿನಿ' ಉಚಿತ ಬಸ್...
14-06-26 01:08 pm
16-06-26 11:35 am
HK News Staffer
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್:...
13-06-26 05:28 pm
16-06-26 02:34 pm
HK News Staffer
ಉಳ್ಳಾಲ ; ಸ್ನಾನಕ್ಕೆಂದು ಕೋಣೆಗೆ ತೆರಳಿದ್ದ ಪಿಯುಸಿ...
16-06-26 10:33 am
ಮಕ್ಕಳ ಕಣ್ಣೆದುರೇ ತಾಯಿಯ ಬರ್ಬರ ಹತ್ಯೆ! ಬೆಟ್ಟಿಂಗ್...
15-06-26 09:21 pm
ನಿಯಂತ್ರಣ ತಪ್ಪಿ ನಿಲ್ದಾಣದ ಪ್ಲಾಟ್ ಫಾರಂಗೆ ನುಗ್ಗಿ...
15-06-26 08:37 pm
ಕಾರವಾರದ ಕಡ್ಲೆ ಬೀಚ್ನಲ್ಲಿ ರೀಲ್ಸ್ ಮಾಡುಲು ಹೋಗಿ ಅ...
15-06-26 04:54 pm