ಬ್ರೇಕಿಂಗ್ ನ್ಯೂಸ್
23-08-23 12:43 pm Source: News18 Kannada ಸಿನಿಮಾ
ಕೆವಿಎನ್ ಪ್ರೊಡಕ್ಷನ್ ಹೌಸ್ ಜೊತೆಗೆ ಯಶ್ ಒಂದು ಸಿನಿಮಾ ಮಾಡೋರಿದ್ದಾರೆ. ಈ ಸಿನಿಮಾ ಕಥೆಯ ವಿಚಾರದಲ್ಲಿ ಮಫ್ತಿ ಡೈರೆಕ್ಟರ್ ನರ್ತನ್ ಕೂಡ ಹೇಳಿಕೊಂಡಿದ್ದರು. ಅವರೆ ಒಂದು ಸಿನಿಮಾ ಮಾಡೋರಿದ್ದರು. ಅದು ಹಲವು ಕಾರಣಗಳಿಂದ ಸಾಧ್ಯವಾಗಲಿಲ್ಲ ಅನ್ನುವ ಮಾಹಿತಿ ಇದೆ.
ರಾಕಿಂಗ್ ಸ್ಟಾರ್ ಯಶ್-19 ಸಿನಿಮಾ ಎಲ್ಲಿಗೆ ಬಂತು?
ರಾಕಿಂಗ್ ಸ್ಟಾರ್ ಯಶ್ ಈ ಬಗ್ಗೆ ಎಲ್ಲೂ ಏನೂ ಹೇಳಿಕೊಂಡಿಲ್ಲ. ಆದರೆ ಒಂದು ವಿಚಾರವನ್ನ ತಿಳಿಸಿದ್ದರು. ದೊಡ್ಡಮಟ್ಟದಲ್ಲಿಯೇ ಬರೋ ಪ್ಲಾನ್ ಇದೆ. ಎಲ್ಲ ತಯಾರಿ ಕೂಡ ನಡೆಯುತ್ತಿದೆ. ಅತಿ ಶೀಘ್ರದಲ್ಲಿಯೇ ಎಲ್ಲ ಹೇಳೋದಾಗಿ ತಿಳಿಸಿದ್ದರು.

ಹಾಗೆ ಈ ಒಂದು ಮಾತು ಹೇಳಿ ಹೆಚ್ಚು ಕಡಿಮೆ ಮೂರ್ನಾಲ್ಕು ತಿಂಗಳೇ ಆಗಿವೆ. ಆದರೂ ಇಲ್ಲಿವರೆಗೂ ಏನೂ ಅಪ್ಡೇಟ್ಸ್ ಹೊರ ಬಿದ್ದಿಲ್ಲ ಬಿಡಿ. ಈ ನಡುವೆ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿಯಾಗಿ ಜಾಹೀರಾತು ಮಾಡಿದ್ದಾರೆ. ಅದು ಈಗಾಗಲೇ ಪ್ರಸಾರ ಕೂಡ ಆಗುತ್ತಿದೆ.
ಕೆವಿಎನ್ ಪ್ರೊಡಕ್ಷನ್ ಹೌಸ್ ಬಿಗ್ ನ್ಯೂಸ್ ಏನು?
ಇದರ ಮಧ್ಯೆ ಕೆವಿಎನ್ ಪ್ರೊಡಕ್ಷನ್ ಹೌಸ್ ಒಂದು ಬಿಗ್ ಅನೌನ್ಸ್ಮೆಂಟ್ ಕೊಡ್ತಿದೆ. ಅದೇನೂ ಅನ್ನೋದರ ಸುಳಿವೂ ಕೂಡ ಇಲ್ವೇ ಇಲ್ಲ. ಆದರೆ ಈ ಮೂಲಕ ಕುತೂಹಲ ದಿನವೂ ಜಾಸ್ತಿ ಆಗುತ್ತಿದೆ. ಇದನ್ನ ತಿಳಿಯೋಕೆ ಇದೇ ತಿಂಗಳ 25 ರಂದು ಕಾಯಲೇಬೇಕು ನೋಡಿ.

ಬಿಗ್ ಅನೌನ್ಸ್ಮೆಂಟ್ಗೆ ಕೌಂಟ್ಡೌನ್ ಶುರು
ವರಮಹಾಲಕ್ಷ್ಮಿ ಹಬ್ಬಕ್ಕೇನೆ ಈ ಒಂದು ಬಿಗ್ ಅನೌನ್ಸ್ಮೆಂಟ್ ಹೊರ ಬೀಳುತ್ತಿದೆ. ಕೌಂಟ್ಡೌನ್ ಕೂಡ ಈಗಾಗಲೇ ಶುರು ಆಗಿದೆ. ಒಂದು ವೇಳೆ ಈ ಬಿಗ್ ಅನೌನ್ಸ್ಮೆಂಟ್ ಯಶ್ ಸಿನಿಮಾದ್ದೇ ಆದ್ರೆ, ಕೆಜಿಎಫ್-3 ಕಥೆ ಏನ್ ಆಗುತ್ತದೆ.
ರಾಕಿ ಭಾಯ್ ಕೆಜಿಎಫ್-3 ಸಿನಿಮಾ ಯಾವಾಗ?
ಆದರೂ ಮೊನ್ನೆಯಿಂದಲೇ ಒಂದು ಸುದ್ದಿ ಹರಿದಾಡ್ತಾನೇ ಇದೆ. ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಬೇರೆ ಯಾವುದೇ ಅಲ್ಲ. ಅದು ಕೆಜಿಎಫ್-3 ಅನ್ನೋ ಮಾಹಿತಿ ಇದೆ. ಡೈರೆಕ್ಟರ್ ಪ್ರಶಾಂತ್ ರೆಡಿ ಆಗುತ್ತಿದ್ದಾರೆ. ಸಲಾರ್ ಸಿನಿಮಾದ ಕೆಲಸ ಮುಗಿಸಿದ ಕೂಡಲೇ ಕೆಜಿಎಫ್ ಸಿನಿಮಾ ಕಥೆ ಬರೆಯೋಕೆ ಶುರು ಮಾಡ್ತಾರೆ ಅನ್ನುವ ಸುದ್ದಿ ವೈರಲ್ ಆಗಿದೆ.
ಆದರೆ ಕೆಜಿಎಫ್ -3 ಅಂದುಕೊಂಡಂತೆ ಶುರು ಆಗುತ್ತದೆಯೇ ಅನ್ನುವ ಪ್ರಶ್ನೆ ಕೂಡ ಇದೆ. ಆದರೆ ಸದ್ಯ ಎಲ್ಲವೂ ಪ್ರಶ್ನೆಗಳೆ ಆಗಿವೆ. ಉತ್ತರಕ್ಕಾಗಿ ಫ್ಯಾನ್ಸ್ ಮತ್ತು ಸಿನಿಮಾ ಲವರ್ಸ್ ಕಾಯಲೇಬೇಕಾಗಿದೆ.
ಈ ನಡುವೆ ಇನ್ನೂ ಒಂದು ಸುದ್ದಿ ಕೂಡ ಹರಿದಾಡಿದೆ. ಮಲೆಯಾಳಂ ಡೈರೆಕ್ಟರ್ ಗೀತು ಮೋಹನ್ ದಾಸ್ ಅವರ ಸುತ್ತವೇ ಈ ಸುದ್ದಿ ಇದೆ. ರಾಕಿಂಗ್ ಸ್ಟಾರ್ ಯಶ್ ಇವರೊಟ್ಟಿಗೆ ಸಿನಿಮಾ ಮಾಡ್ತಾರೆ ಅನ್ನೋದೇ ಆಗಿದೆ. ಕಥೆ ಕೂಡ ಇಷ್ಟ ಆಗಿದೆ. ಇನ್ನೇನು ಯಶ್-19 ಸಿನಿಮಾ ಅದೇ ಆಗಿರುತ್ತದೆ ಅನ್ನುವ ಸುದ್ದಿ ಕೂಡ ಇದೆ.
Sandalwood Rocking Star Yash 19 Cinema Viral News.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 12:50 pm
HK News Staffer
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm