ಬ್ರೇಕಿಂಗ್ ನ್ಯೂಸ್
11-08-23 02:04 pm Source: News18 Kannada ಸಿನಿಮಾ
ಬೀರ್ಬಲ್ ಸಿನಿಮಾ ಕನ್ನಡದಲ್ಲಿ ಹೊಸ ರೀತಿಯ ಭರವಸೆ ಮೂಡಿಸಿದೆ. ಟೋಪಿವಾಲಾ ಡೈರೆಕ್ಟರ್ ಶ್ರೀನಿ ಈ ಮೂಲಕ ಹೊಸ ರೀತಿಯ ಸಿನಿಮಾನೇ ಕೊಟ್ಟಿದ್ದಾರೆ. ನೋಡುಗರೂ ಕೂಡ ಬೀರ್ಬಲ್ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಕೊಟ್ಟಿದ್ದರು. ಹೊಸ ರೀತಿಯ ಕ್ಯಾರೆಕ್ಟರ್ ಡಿಸೈನ್ ಮಾಡೋ ಡೈರೆಕ್ಟರ್ ಎಂ.ಜಿ.ಶ್ರೀನಿವಾಸ್, ಘೋಸ್ಟ್ ಸಿನಿಮಾದಲ್ಲಿ ಒಳ್ಳೆ ಪಾತ್ರಗಳನ್ನ ಡಿಸೈನ್ ಮಾಡಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜನ್ಮ ದಿನಕ್ಕೆ ಹೊರ ಬಂದ ಚಿತ್ರದ ಬಿಗ್ ಡ್ಯಾಡಿ ಟೀಸರ್ ಇದಕ್ಕೆ ಸಾಕ್ಷಿ ಅಂತಲೇ ಹೇಳಬಹುದು. ಪಕ್ಕಾ ಪ್ಲಾನ್ ಮಾಡಿಕೊಂಡು ಸ್ಟೋರಿ ಬೋರ್ಡ್ ಮಾಡಿಕೊಂಡಿದ್ದ ಶ್ರೀನಿ, ತಮ್ಮ ಕಲ್ಪನೆಯಂತೇನೆ ಸಿನಿಮಾ ತೆಗೆದಿದ್ದಾರೆ. ಆ ಮೂಲಕ ಸಿನಿಮಾ ಈಗಾಗಲೇ ಒಂದು ಮಟ್ಟಕ್ಕೆ ಹೈಪ್ ತೆಗೆದುಕೊಂಡಿದೆ.
ಘೋಸ್ಟ್ ಸಿನಿಮಾದ ಆರಂಭದಲ್ಲಿಯೇ ಡೈರೆಕ್ಟರ್ ಶ್ರೀನಿ ಒಂದು ಮಾತು ಹೇಳಿದ್ದರು. ಈ ಚಿತ್ರದಲ್ಲಿ ಬೀರ್ಬಲ್ ಬರ್ತಾನೆ ಅಂತಲೂ ಹೇಳಿದ್ದರು. ಕನ್ನಡದಲ್ಲಿ ಇಲ್ಲಿವರೆಗೂ ಈ ರೀತಿಯ ಪ್ರಯೋಗ ಯಾರೂ ಮಾಡಿರಲಿಲ್ಲ. ಆದರೆ ಡೈರೆಕ್ಟರ್ ಶ್ರೀನಿ ಈ ಒಂದು ಕೆಲಸ ಮಾಡಿದ್ದಾರೆ.

ಸ್ಯಾಂಡಲ್ವುಡ್ನ ಬೀರ್ಬಲ್-ಘೋಸ್ಟ್ ಮುಖಾಮುಖಿ!
ಘೋಸ್ಟ್ ಇಲ್ಲಿ ಬೀರ್ಬಲ್ ಮೀಟ್ ಆಗೋದೇ ಈ ಒಂದು ಪ್ರಯೋಗ ಆಗಿದೆ. ಇದನ್ನ ಅಷ್ಟೇ ಅದ್ಭುತವಾಗಿಯೇ ಹ್ಯಾಂಡಲ್ ಮಾಡಿರೋ ಡೈರೆಕ್ಟರ್ ಶ್ರೀನಿ ತಮ್ಮ ಬೀರ್ಬಲ್ ಪಾತ್ರವನ್ನ ಮತ್ತೊಮ್ಮೆ ನಿರ್ವಹಿಸಿದ್ದಾರೆ. ಘೋಸ್ಟ್ ಅನ್ನ ಮೀಟ್ ಆಗೋ ದೃಶ್ಯಗಳಲ್ಲಿಯೇ ಈಗಾಗಲೇ ಅಭಿನಯಿಸಿದ್ದಾರೆ.
ಘೋಸ್ಟ್ ಚಿತ್ರದ ಕೊನೆಯಲ್ಲಿ ಬರುವ ಈ ಪಾತ್ರ ಒಂದು ವಿಷಯವನ್ನ ಕೂಡ ಹೇಳುತ್ತಿದೆ. ಘೋಸ್ಟ್ ಸಿನಿಮಾದಲ್ಲಿ ಬರೋ ಈ ಬೀರ್ಬಲ್ ತನ್ನ ಕಥೆಯ ಎರಡನೇ ಭಾಗದ ಹಿಂಟ್ ಕೂಡ ಬಿಟ್ಟುಕೊಡಲಿದ್ದಾನೆ. ಈ ಮಾತನ್ನೂ ಕೂಡ ಡೈರೆಕ್ಟರ್ ಶ್ರೀನಿ ಹೇಳಿದ್ದರು. ಅದೇ ರೀತಿ ಇದೀಗ ಬೀರ್ಬಲ್ ಪಾತ್ರದ ಚಿತ್ರೀಕರಣ ಕೂಡ ಮುಗಿದಿದೆ.

ಘೋಸ್ಟ್ ಸಿನಿಮಾದಲ್ಲಿ ಬೀರ್ಬಲ್ ಪಾತ್ರದ ಅಬ್ಬರ
ಘೋಸ್ಟ್ ಸಿನಿಮಾದ ಮತ್ತು ಬೀರ್ಬಲ್ ಪಾತ್ರದ ಶೂಟಿಂಗ್ ಮುಗಿಸಿರೋ ಡೈರೆಕ್ಟರ್ ಶ್ರೀನಿ, ಇದೀಗ ಡಬ್ಬಿಂಗ್ ಕೆಲಸದಲ್ಲಿಯೇ ಬ್ಯುಸಿ ಆಗಿದ್ದಾರೆ. ಮಾಲಿವುಡ್ನ ಜಯರಾಮ್ ಮೊನ್ನೆ ತಮ್ಮ ಪಾತ್ರದ ಡಬ್ಬಿಂಗ್ ಮಾಡಿದ್ದಾರೆ. ಈ ಮೂಲಕ ಕನ್ನಡದಲ್ಲಿಯೇ ಡಬ್ ಮಾಡೋ ಮೂಲಕ ತಮ್ಮ ಕನ್ನಡ ಪ್ರೀತಿಯನ್ನ ವ್ಯಕ್ತಪಡಿಸಿದ್ದಾರೆ.
ಇನ್ನುಳಿದಂತೆ ಅತಿ ಶೀಘ್ರದಲ್ಲಿಯೇ ಘೋಸ್ಟ್ ಸಿನಿಮಾದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಈಗಾಗಲೇ ಹೆಚ್ಚಿನ ನಿರೀಕ್ಷೆ ಮೂಡಿಸಿರೋ ಘೋಸ್ಟ್ ಸಿನಿಮಾದ ಇನ್ನಷ್ಟು ಮತ್ತಷ್ಟು ಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ.
Sandalwood Actor Director Ghost Film Director M G Srinivas Birbal Movie Latest.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 12:50 pm
HK News Staffer
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm