ಬ್ರೇಕಿಂಗ್ ನ್ಯೂಸ್
07-07-23 03:47 pm Source: News18 Kannada ಸಿನಿಮಾ
ರೋರಿಂಗ್ ಸ್ಟಾರ್ ಮುರಳಿ ಅಭಿನಯದ ರಥಾವರ ಸಿನಿಮಾ ನೆನಪಿರಬೇಕಲ್ವೇ ? ಹೌದು, ಆ ಚಿತ್ರದಲ್ಲಿ ಶ್ರೀ ಮುರಳಿ ಅದ್ಭುತ ಪಾತ್ರ ಮಾಡಿದ್ದರು. ಭಜರಂಗಿ ಚಿತ್ರ ಖ್ಯಾತಿಯ ನಟ ಲೋಕಿ ಕೂಡ ಈ ಸಿನಿಮಾದಲ್ಲಿ ಬೇಜಾನ್ ಸಖತ್ ರೋಲ್ ಮಾಡಿದ್ದರು. ಇದೆಲ್ಲ ಡೈರೆಕ್ಟರ್ ಕಲ್ಪನೆಯ ಅಧ್ಯಯನದ ರೂಪವೇ ಆಗಿತ್ತು.
ಅದೇ ನಿರ್ದೇಶಕ ಆನೆ ಪಟಾಕಿ ಅನ್ನುವ ಸಿನಿಮಾ ಮಾಡಿದ್ದರು.ಇದು ಇವರ ಮೊದಲ ಸಿನಿಮಾನೇ ಆಗಿತ್ತು. ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಈ ಚಿತ್ರದ ನಾಯಕರಾಗಿದ್ದರು. ಸಖತ್ ಹಾಸ್ಯವನ್ನ ಕೂಡ ಮಾಡಿದ್ದರು. ಈ ಚಿತ್ರದ ಓಟದಿಂದ ನಿರ್ಮಾಪಕರು ಕೂಡ ಫುಲ್ ಖುಷ್ ಆಗಿದ್ದರು.
ಹೌದು, ಡೈರೆಕ್ಟರ್ ಚಂದ್ರಶೇಖರ್ ಬಂಡಿಯಪ್ಪ ಒಳ್ಳೆ ಸಿನಿಮಾಗಳನ್ನ ಮಾಡಿದ್ದಾರೆ. ಬೆರಳೆನಿಕೆಯಷ್ಟು ಸಿನಿಮಾ ಮಾಡಿರೋದು ಗೊತ್ತೇ ಇದೆ. ಆ ಸಾಲಿನಲ್ಲಿ ತಾರಕಾಸುರ ಸಿನಿಮಾ ಕೂಡ ಇತ್ತು. ಇದರಲ್ಲೂ ಒಳ್ಳೆ ಸ್ಟೋರಿ ಇತ್ತು. ಈ ಚಿತ್ರ ಆದ್ಮೇಲೆ ಚೌಕಿದಾರ್ ಸಿನಿಮಾ ಕೂಡ ಮಾಡುತ್ತಿದ್ದಾರೆ. ಇವರ ವೈರ್ಮುಡಿ ಸಿನಿಮಾ ಈಗ ಪ್ರೀ ಪ್ರೋಡಕ್ಷನ್ ಹಂತದಲ್ಲಿಯೇ ಇದೆ.
ಬಾಲಿವುಡ್ "ರೆಡ್ ಕಾಲರ್" ಸಿನಿಮಾದಲ್ಲಿ ಕಿಶೋರ್ ಹೀರೋ!
ಆದರೆ ಸದ್ದಿಲ್ಲದೇ ಬಾಲಿವುಡ್ ಸಿನಿಮಾ ಮಾಡಿದ್ದಾರೆ. ಕ್ರೈಂ ಕಥೆ ಹೊಂದಿರೋ ಈ ಚಿತ್ರಕ್ಕೆ ರೆಡ್ ಕಾಲರ್ ಅನ್ನುವ ಹೆಸರಿದೆ. ಇದಕ್ಕೂ ಹೆಚ್ಚಾಗಿ ಇದೊಂದು ದೇಸಿ ಕಂಟೆಂಟ್ ಇರೋ ಸಿನಿಮಾ ಅನ್ನೋದನ್ನ ಚಂದ್ರಶೇಖರ್ ಹೇಳುತ್ತಾರೆ.
ಈಗಾಗಲೇ ಸಿನಿಮಾದ ಶೂಟಿಂಗ್ ಕೂಡ ಪೂರ್ಣಗೊಂಡಿದೆ. ಪೋಸ್ಟ್ ಪ್ರೋಡಕ್ಷನ್ ಹಂತದಲ್ಲಿಯೇ ಈ ಚಿತ್ರ ಇದೆ. ಚಿತ್ರದಲ್ಲಿ ಇನ್ನೂ ಒಂದು ವಿಶೇಷ ಇದೆ. ಕನ್ನಡದ ಸ್ಪೆಷಲ್ ನಟ ಕಿಶೋರ್ ಈ ಸಿನಿಮಾದಲ್ಲಿ ಲೀಡ್ ರೋಲ್ ಅಲ್ಲಿಯೇ ಇದ್ದಾರೆ. ಈ ಮೂಲಕ ಕಿಶೋರ್ ಬಾಲಿವುಡ್ಗೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ.
ಕಿಶೋರ್ 3 ನೇ ಬಾಲಿವುಡ್ ಸಿನಿಮಾ ಶೂಟಿಂಗ್ ಕಂಪ್ಲೀಟ್
ಈ ಹಿಂದೆ ಕಿಶೋರ್ ಬಾಲಿವುಡ್ನ ವೆಬ್ ಸಿರೀಸ್ಗಳಾದ ದಿ ಫ್ಯಾಮಿಲಿ ಮ್ಯಾನ್, She ಅಲ್ಲೂ ಅಭಿನಯಿಸಿದ್ದಾರೆ. ಆದರೆ ಹಿಂದಿ ಸಿನಿಮಾ ಅಂತ ಬಂದ್ರೆ, ರೆಡ್ ಕಾಲರ್ ಸಿನಿಮಾ ಫಸ್ಟ್ ಅಂತಲೇ ಹೇಳಬಹುದು.
ಬಾಂಬೆ ಹೀರೋಯಿನ್ ಅಭಿನಯದ ಈ ಚಿತ್ರದ ಚಿತ್ರೀಕರಣ ಲಕ್ನೋದಲ್ಲಿ ನಡೆದಿದೆ. ಉತ್ತರ ಪ್ರದೇಶದಲ್ಲೂ ಮಾಡಲಾಗಿದೆ. ಇನ್ನುಳಿದಂತೆ ಡೈರೆಕ್ಟರ್ ಚಂದ್ರಶೇಖರ್ ಬಂಡಿಯಪ್ಪ ಈ ಮೂಲಕ ಬಾಲಿವುಡ್ಗೂ ಪ್ರವೇಶ ಪಡೆದಿದ್ದಾರೆ. ತಮ್ಮ ಮೊದಲ ಹಿಂದಿ ಚಿತ್ರದ ಚಿತ್ರೀಕರಣದ ನಂತರದ ಕೆಲಸದಲ್ಲಿಯೇ ಈಗ ಬ್ಯುಸಿ ಇದ್ದಾರೆ ಅಂತಲೇ ಹೇಳಬಹುದು.
Sandalwood Kantara Fame Actor Kishore Hindi Movie Latest News Updates.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
17-06-25 11:02 pm
HK News Desk
ಇರಾನ್ ಸಂಘರ್ಷ ; ಇನ್ನೇನೋ ದೊಡ್ಡದು ನಡೆಯಲಿದೆ ಎಂದ ಟ...
17-06-25 10:47 pm
ಬಾಂಬ್ ಬೆದರಿಕೆ ; ಜರ್ಮನಿಯಿಂದ ಹೈದ್ರಾಬಾದ್ ಬರುತ್ತಿ...
16-06-25 05:29 pm
Iran-Israel War: ಇಸ್ರೇಲ್- ಇರಾನ್ ಸಂಘರ್ಷ ; ಇರಾನ...
16-06-25 01:33 pm
ಅಹಮದಾಬಾದ್ ಬೆನ್ನಲ್ಲೇ ಮತ್ತೊಂದು ದುರಂತ ; ಕೇದಾರನಾ...
15-06-25 10:29 pm
17-06-25 09:57 pm
Mangalore Correspondent
Mangalore Jail Jammer: ಜೈಲಿನ ಜಾಮರ್ ಸಮಸ್ಯೆಗೆ ದ...
17-06-25 08:17 pm
Baby Death, Mangalore: ತಂದೆ ಸೇದಿ ಬಿಸಾಕಿದ ಬೀಡಿ...
17-06-25 01:48 pm
Mangalore Accident, Nanthoor, Doctor Amal: ಅತ...
17-06-25 12:43 pm
U T Khader, Mangalore: ದ್ವೇಷ ಭಾಷಣ, ಜಾಲತಾಣಗಳಲ್...
16-06-25 11:06 pm
17-06-25 05:06 pm
Bangalore Correspondent
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm