ಬ್ರೇಕಿಂಗ್ ನ್ಯೂಸ್
07-07-23 03:47 pm Source: News18 Kannada ಸಿನಿಮಾ
ರೋರಿಂಗ್ ಸ್ಟಾರ್ ಮುರಳಿ ಅಭಿನಯದ ರಥಾವರ ಸಿನಿಮಾ ನೆನಪಿರಬೇಕಲ್ವೇ ? ಹೌದು, ಆ ಚಿತ್ರದಲ್ಲಿ ಶ್ರೀ ಮುರಳಿ ಅದ್ಭುತ ಪಾತ್ರ ಮಾಡಿದ್ದರು. ಭಜರಂಗಿ ಚಿತ್ರ ಖ್ಯಾತಿಯ ನಟ ಲೋಕಿ ಕೂಡ ಈ ಸಿನಿಮಾದಲ್ಲಿ ಬೇಜಾನ್ ಸಖತ್ ರೋಲ್ ಮಾಡಿದ್ದರು. ಇದೆಲ್ಲ ಡೈರೆಕ್ಟರ್ ಕಲ್ಪನೆಯ ಅಧ್ಯಯನದ ರೂಪವೇ ಆಗಿತ್ತು.
ಅದೇ ನಿರ್ದೇಶಕ ಆನೆ ಪಟಾಕಿ ಅನ್ನುವ ಸಿನಿಮಾ ಮಾಡಿದ್ದರು.ಇದು ಇವರ ಮೊದಲ ಸಿನಿಮಾನೇ ಆಗಿತ್ತು. ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಈ ಚಿತ್ರದ ನಾಯಕರಾಗಿದ್ದರು. ಸಖತ್ ಹಾಸ್ಯವನ್ನ ಕೂಡ ಮಾಡಿದ್ದರು. ಈ ಚಿತ್ರದ ಓಟದಿಂದ ನಿರ್ಮಾಪಕರು ಕೂಡ ಫುಲ್ ಖುಷ್ ಆಗಿದ್ದರು.

ಹೌದು, ಡೈರೆಕ್ಟರ್ ಚಂದ್ರಶೇಖರ್ ಬಂಡಿಯಪ್ಪ ಒಳ್ಳೆ ಸಿನಿಮಾಗಳನ್ನ ಮಾಡಿದ್ದಾರೆ. ಬೆರಳೆನಿಕೆಯಷ್ಟು ಸಿನಿಮಾ ಮಾಡಿರೋದು ಗೊತ್ತೇ ಇದೆ. ಆ ಸಾಲಿನಲ್ಲಿ ತಾರಕಾಸುರ ಸಿನಿಮಾ ಕೂಡ ಇತ್ತು. ಇದರಲ್ಲೂ ಒಳ್ಳೆ ಸ್ಟೋರಿ ಇತ್ತು. ಈ ಚಿತ್ರ ಆದ್ಮೇಲೆ ಚೌಕಿದಾರ್ ಸಿನಿಮಾ ಕೂಡ ಮಾಡುತ್ತಿದ್ದಾರೆ. ಇವರ ವೈರ್ಮುಡಿ ಸಿನಿಮಾ ಈಗ ಪ್ರೀ ಪ್ರೋಡಕ್ಷನ್ ಹಂತದಲ್ಲಿಯೇ ಇದೆ.
ಬಾಲಿವುಡ್ "ರೆಡ್ ಕಾಲರ್" ಸಿನಿಮಾದಲ್ಲಿ ಕಿಶೋರ್ ಹೀರೋ!
ಆದರೆ ಸದ್ದಿಲ್ಲದೇ ಬಾಲಿವುಡ್ ಸಿನಿಮಾ ಮಾಡಿದ್ದಾರೆ. ಕ್ರೈಂ ಕಥೆ ಹೊಂದಿರೋ ಈ ಚಿತ್ರಕ್ಕೆ ರೆಡ್ ಕಾಲರ್ ಅನ್ನುವ ಹೆಸರಿದೆ. ಇದಕ್ಕೂ ಹೆಚ್ಚಾಗಿ ಇದೊಂದು ದೇಸಿ ಕಂಟೆಂಟ್ ಇರೋ ಸಿನಿಮಾ ಅನ್ನೋದನ್ನ ಚಂದ್ರಶೇಖರ್ ಹೇಳುತ್ತಾರೆ.
ಈಗಾಗಲೇ ಸಿನಿಮಾದ ಶೂಟಿಂಗ್ ಕೂಡ ಪೂರ್ಣಗೊಂಡಿದೆ. ಪೋಸ್ಟ್ ಪ್ರೋಡಕ್ಷನ್ ಹಂತದಲ್ಲಿಯೇ ಈ ಚಿತ್ರ ಇದೆ. ಚಿತ್ರದಲ್ಲಿ ಇನ್ನೂ ಒಂದು ವಿಶೇಷ ಇದೆ. ಕನ್ನಡದ ಸ್ಪೆಷಲ್ ನಟ ಕಿಶೋರ್ ಈ ಸಿನಿಮಾದಲ್ಲಿ ಲೀಡ್ ರೋಲ್ ಅಲ್ಲಿಯೇ ಇದ್ದಾರೆ. ಈ ಮೂಲಕ ಕಿಶೋರ್ ಬಾಲಿವುಡ್ಗೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ.
ಕಿಶೋರ್ 3 ನೇ ಬಾಲಿವುಡ್ ಸಿನಿಮಾ ಶೂಟಿಂಗ್ ಕಂಪ್ಲೀಟ್
ಈ ಹಿಂದೆ ಕಿಶೋರ್ ಬಾಲಿವುಡ್ನ ವೆಬ್ ಸಿರೀಸ್ಗಳಾದ ದಿ ಫ್ಯಾಮಿಲಿ ಮ್ಯಾನ್, She ಅಲ್ಲೂ ಅಭಿನಯಿಸಿದ್ದಾರೆ. ಆದರೆ ಹಿಂದಿ ಸಿನಿಮಾ ಅಂತ ಬಂದ್ರೆ, ರೆಡ್ ಕಾಲರ್ ಸಿನಿಮಾ ಫಸ್ಟ್ ಅಂತಲೇ ಹೇಳಬಹುದು.
ಬಾಂಬೆ ಹೀರೋಯಿನ್ ಅಭಿನಯದ ಈ ಚಿತ್ರದ ಚಿತ್ರೀಕರಣ ಲಕ್ನೋದಲ್ಲಿ ನಡೆದಿದೆ. ಉತ್ತರ ಪ್ರದೇಶದಲ್ಲೂ ಮಾಡಲಾಗಿದೆ. ಇನ್ನುಳಿದಂತೆ ಡೈರೆಕ್ಟರ್ ಚಂದ್ರಶೇಖರ್ ಬಂಡಿಯಪ್ಪ ಈ ಮೂಲಕ ಬಾಲಿವುಡ್ಗೂ ಪ್ರವೇಶ ಪಡೆದಿದ್ದಾರೆ. ತಮ್ಮ ಮೊದಲ ಹಿಂದಿ ಚಿತ್ರದ ಚಿತ್ರೀಕರಣದ ನಂತರದ ಕೆಲಸದಲ್ಲಿಯೇ ಈಗ ಬ್ಯುಸಿ ಇದ್ದಾರೆ ಅಂತಲೇ ಹೇಳಬಹುದು.
Sandalwood Kantara Fame Actor Kishore Hindi Movie Latest News Updates.
31-07-26 01:22 pm
HK News Staffer
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ ; ಸಂಸದ ಶಶಿಕಾಂತ...
29-07-26 01:52 pm
31-07-26 01:26 pm
HK News Staffer
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
31-07-26 10:58 pm
HK News Staffer
Mangalore Help Deeksha: ದಿಢೀರ್ ಮೆದುಳು ಜ್ವರಕ್ಕ...
31-07-26 07:03 pm
ರಾಜಸ್ಥಾನದಿಂದ ಮಂಗಳೂರಿಗೆ ಬಂದು ಬೀದಿಯಲ್ಲಿ ಅಲೆದಾಡು...
30-07-26 07:51 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
31-07-26 10:53 pm
HK News Staffer
ಪಣಂಬೂರು ತೋಟ ಬೆಂಗ್ರೆ ಬೀಚ್ ನಲ್ಲಿ ಸಾಮೂಹಿಕ ಅತ್ಯಾಚ...
31-07-26 09:47 pm
Kundapura Murder, Latest Update: ಹಣಕಾಸು ದ್ವೇಷ...
31-07-26 08:30 pm
ಜೀವಾವಧಿ ಶಿಕ್ಷೆಗೀಡಾಗಿದ್ದ ವಿನಯ್ ಕುಲಕರ್ಣಿಗೆ ಹೈಕೋ...
31-07-26 06:01 pm
ಕಾವೂರಿನಲ್ಲಿ ಮದರಂಗಿ ಶಾಸ್ತ್ರದಲ್ಲಿ ತಲವಾರು ಏಟು ;...
31-07-26 02:21 pm