ಬ್ರೇಕಿಂಗ್ ನ್ಯೂಸ್
06-07-23 01:53 pm Source: News18 Kannada ಸಿನಿಮಾ
ಯೂಟ್ಯೂಬ್ಗ್ ಬೆಂಕಿ ಬಿದ್ದಿದೆ. ಬೆಳಗ್ಗೆ 5:12 ಗಂಟೆಯಿಂದ ಬಿರುಗಾಳಿ ಕೂಡ ಎದ್ದಿದೆ. ಅರೇ ಯಾಕೆ ಅಂತ ಕನ್ಫೂಸ್ ಆಗಬೇಡಿ. ಮೋಸ್ಟ್ ವೈಲೆಂಟೆಡ್ ಮ್ಯಾನ್ ಸಲಾರ್ ಸಿನಿಮಾದ ಟೀಸರ್ ರಿಲೀಸ್ ಆಗಿ ಯೂಟ್ಯೂಬ್ನಲ್ಲಿ ಧೂಳೆಬ್ಬಿಸುತ್ತಿದೆ. ಸೇಮ್ ಟು ಸೇಮ್ ಕೆಜಿಎಫ್ ಥೀಮ್ನಲ್ಲೇ ಈ ಸಿನಿಮಾ ಕೂಡ ಬಂದಿದೆ ಅಂತ ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ. ಈ ಬಾರಿ ಪ್ರಶಾಂತ್ ನೀಲ್ ಪ್ರಭಾಸ್ ಅವರನ್ನು ಡೈನಾಸರ್ಗೆ ಹೋಲಿಸಿದ್ದಾರೆ. ಟೀಸರ್ ನೋಡಿದವರು ಜಪಿಸ್ತಿರೋದು ಒಂದೇ ಅದು ಸೆಪ್ಟೆಂಬರ್ ತಿಂಗಳು.
ಇನ್ನೂ ಟೀಸರ್ ರಿಲೀಸ್ಗೂ ಮುನ್ನ ಕೆಜಿಎಫ್ ಕಥೆಗೂ ಸಲಾರ್ ಕಥೆಗೂ ಲಿಂಕ್ ಇದೆ ಅನ್ನೋ ಮಾತುಗಳು ಸಿಕ್ಕಾಪಟ್ಟೆ ಕೇಳಿಬಂದಿತ್ತು. ಒಬ್ಬೊಬ್ಬರು ಒಂದೊಂದು ಆ್ಯಂಗಲ್ನಲ್ಲಿ ತಮ್ಮದೇ ಆದ ಉತ್ತರ ನೀಡಿದ್ದರು. ಆದರೆ ಟೀಸರ್ನಲ್ಲೇ ಒಂದು ಬಿಗ್ ಹಿಂಟ್ ಕೊಟ್ರಾ ನೀಲ್ ಅನ್ನೋ ಅನುಮಾನ ಶುರುವಾಗಿದೆ. ಸಲಾರ್ ಭಾಗ 1: CEASEFIRE ನಲ್ಲಿ ರಾಕಿಭಾಯ್ ಎಂಟ್ರಿಯಾಗೋದು ಪಕ್ಕಾ ಅಂತ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಟೀಸರ್ನಲ್ಲಿರೋ ಸಣ್ಣ ಸಣ್ಣ ವಿಚಾರಗಳನ್ನು ಕೂಡ ಗುರುತಿಸುತ್ತಿದ್ದಾರೆ.



ಅಭಿಮಾನಿಯೊಬ್ಬರು ಕೆಜಿಎಫ್ ಒಳಗೊಂಡ ಎರಡು ಸ್ಕ್ರೀನ್ಶಾಟ್ಗಳನ್ನು ಟ್ವೀಟ್ ಮಾಡಿದ್ದಾರೆ. ಕೆಜಿಎಫ್ 2 ಪೋಸ್ಟ್ ಕ್ರೆಡಿಟ್ ದೃಶ್ಯ ಮತ್ತು ಸಲಾರ್ ಟೀಸರ್ ಚಿತ್ರಗಳು ಒಂದಕ್ಕೊಂದು ಹೋಲುತ್ತವೆ. 516 ಮತ್ತು LALF=81 ಎಂಬ ಬರಹಗಳು ಕೆಜಿಎಫ್ 2 ಮತ್ತು ಸಲಾರ್ ಸಿನಿಮಾಗಳಲ್ಲಿ ಇದೆ. ಹೀಗಾಗಿ ಈ ಸಿನಿಮಾಗೂ ರಾಕಿ ಭಾಯ್ಗೂ ಪಕ್ಕಾ ಲಿಂಕ್ ಇದೆ. ನಿರ್ದೇಶಕ ಪ್ರಶಾಂತ್ ನೀಲ್ ಈ ಗುಟ್ಟನ್ನು ಬಿಟ್ಟುಕೊಡುತ್ತಿಲ್ಲ ಅಂತ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.



ಪ್ರಭಾಸ್ ಮತ್ತು ಯಶ್ ನಡುವಿನ ಅತಿದೊಡ್ಡ ಸೌತ್ ಕ್ರಾಸ್ಒವರ್ ಅನ್ನು ಒಳಗೊಂಡಿರಬಹುದು ಎಂದು ತೋರುತ್ತದೆ. ಕೆಜಿಎಫ್ ಯೂನಿವರ್ಸ್ ಸೃಷ್ಟಿಸಿದ್ದಾರಾ ಪ್ರಶಾಂತ್ ನೀಲ್ ಎಂಬ ಪ್ರಶ್ನೆ ಮೂಡಿದೆ. ಹೊಂಬಾಳೆ ಫಿಲ್ಮ್ಸ್ನ ಸಲಾರ್ ಭಾಗ 1: CEASEFIRE ನಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಸೇರಿದಂತೆ ತಾರಾಬಳಗದ ತಾರಾಗಣವಿದೆ. ಈ ಚಿತ್ರವು ಸೆಪ್ಟೆಂಬರ್ 28, 2023 ರಂದು ತೆಲುಗು, ಕನ್ನಡ, ಮಲಯಾಳಂ, ತಮಿಳು ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
Salaar Teaser KGF Connection Fans Spots major Clue Hinting at Crossover between Yash and Prabhas.
31-01-26 11:05 pm
Bangalore Correspondent
ಸಿ.ಜೆ.ರಾಯ್ ಸಾವು ‘ಆತ್ಮಹತ್ಯೆಯೋ ಅಥವಾ ಕೊಲೆಯೋ?’, ನ...
31-01-26 10:24 pm
ಸಿ.ಜೆ. ರಾಯ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಒತ್ತಡವೇ...
30-01-26 10:37 pm
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
31-01-26 10:20 pm
HK News Desk
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
Sunetra Pawar, Maharashtra Deputy CM: ಮಹಾರಾಷ್...
31-01-26 04:56 pm
ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಕೇಳಿಬಂತು ಕಾಂ...
30-01-26 03:38 pm
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
31-01-26 08:40 pm
Mangalore Correspondent
ವಿಷವಾಯ್ತಾ ಪವಿತ್ರ ಗುಜ್ಜರಕೆರೆಯ ನೀರು? ಪ್ರಯೋಗಾಲಯ...
31-01-26 03:38 pm
Road Blunder ; ಪ್ರತಿ ವರ್ಷ ದೇಶದಲ್ಲಿ ಅಪಘಾತಕ್ಕೆ...
30-01-26 09:01 pm
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
31-01-26 01:33 pm
Bengaluru Staffer
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm