ಬ್ರೇಕಿಂಗ್ ನ್ಯೂಸ್
29-06-23 01:22 pm Source: news18 ಸಿನಿಮಾ
ದಳಪತಿ ವಿಜಯ್ ಅವರ ಮುಂದಿನ ಸಿನಿಮಾ ಲಿಯೋ ಅವರಿಗೆ ತೊಂದರೆ ತಂದಿಟ್ಟಿದೆ. ಸಿನಿಮಾದ ಫಸ್ಟ್ ಸಿಂಗಲ್ ರಿಲೀಸ್ ಆಗಿದ್ದೇ ತಟ ತಮಿಳು ನಟ, ಸ್ಟಾರ್ ವಿಜಯ್ ವಿರುದ್ಧ ಕೇಸ್ ದಾಖಲಾಗಿದೆ. ಲಿಯೋ ಸಿನಿಮಾದ ಮೊದಲ ಹಾಡು ಇತ್ತೀಚೆಗೆ ರಿಲೀಸ್ ಆಗಿತ್ತು. ಲಿಯೋ ಸಿನಿಮಾ ಅಕ್ಟೋಬರ್ನಲ್ಲಿ ದಸರಾ ಸಂದರ್ಭ ಬಿಡುಗಡೆಯಾಗಲಿದೆ. ಸಿನಿಮಾದ ಹೆಚ್ಚಿನ ಸೀನ್ ಶೂಟಿಂಗ್ ಕೂಡಾ ಮುಗಿದಿದೆ. ಸಿನಿಮಾದ ಮೊದಲ ಸಾಂಗ್ ವಿಜಯ್ ಬರ್ತ್ಡೇ ಸಂದರ್ಭ ರಿಲೀಸ್ ಮಾಡಲಾಗಿತ್ತು. ಆದರೆ ಹಾಡಿನ ಬಗ್ಗೆ ವಿರೋಧ ವ್ಯಕ್ತವಾಗಿದೆ.
ನಾ ರೆಡಿ ಎನ್ನುವ ಹಾಡು ರಿಲೀಸ್ ಆಗಿದ್ದು ಈಗ ಸಮಸ್ಯೆ ಎದುರಾಗಿದೆ. ಕೊರುಕ್ಕುಪೇಟ್ ಎಂಬಲ್ಲಿನ ಸಾಮಾಜಿಕ ಕಾರ್ಯಕರ್ತ ಸೆಲ್ವಮ್ ಎಂಬ ವ್ಯಕ್ತಿ ನಾ ರೆಡಿ ಹಾಡಿನ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಈ ಹಾಡು ಮಾದಕ ವ್ಯಸನವನ್ನು ಹಾಗೂ ರೌಡಿಸಂ ಪ್ರೋತ್ಸಾಹಿಸುತ್ತದೆ ಎಂದು ಆರೋಪಿಸಿದ್ದಾರೆ. ನಾರ್ಕೋಟಿಕ್ಸ್ ಕಂಟ್ರೋಲ್ ಆ್ಯಕ್ಟ್ ಅಡಿಯಲ್ಲಿ ನಟ ವಿಜಯ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಮಿಷನರ್ ಬಳಿ ದೂರು ನೀಡಲಾಗಿದೆ. ಈ ವಿಚಾರ ಈಗ ಎಲ್ಲೆಡೆ ವೈರಲ್ ಆಗಿದ್ದು ಹಾಡಿನ ಲಿರಿಕ್ಸ್ ಬಗ್ಗೆ ಟೀಕೆ ವ್ಯಕ್ತವಾಗಿದೆ.

ನಾ ರೆಡಿ ಹಾಡಿನಲ್ಲಿರುವ ಕೆಲವು ಸಾಲುಗಳು ಡ್ರಗ್ಸ್ ಹಾಗೂ ರೌಡಿಸಂ ಸಪೋರ್ಟ್ ಮಾಡುತ್ತವೆ. ವಿಜಯ್ ಅವರು ಸ್ಮೋಕ್ ಮಾಡುತ್ತಿದ್ದು ಮದ್ಯವನ್ನೂ ಈ ಹಾಡಿನಲ್ಲಿ ಬಳಸಲಾಗಿದೆ. ಸಾಂಗ್ ವೈರಲ್ ಆಗಿದ್ದು ಇದು ಯುವಜನರನ್ನು ಪ್ರಭಾವಿಸುತ್ತದೆ ಎಂದು ಆರೋಪಿಸಲಾಗಿದೆ. ವಿಜಯ್ ವಿರುದ್ಧ ಕ್ರಮ ಕೈಗೊಳ್ಳಲು ಕೋರ್ಟ್ನಲ್ಲಿ ಕೇಸ್ ಫೈಲ್ ಮಾಡುವುದಾಗಿ ಸೆಲ್ವಮ್ ಹೇಳಿದ್ದಾರೆ. ಇದೇ ವಿಚಾರವಾಗಿ ಕೆಲವು ನೆಟ್ಟಿಗರು ವಿಜಯ್ ವಿರುದ್ಧ ಕಿಡಿ ಕಾರಿದ್ದಾರೆ. ವಿಜಯ್ ಅವರ ಅಭಿಮಾನಿಗಳು ಇದು ಸಿನಿಮಾಗೆ ಬಿಟ್ಟಿ ಪ್ರಚಾರ ಎಂದು ಹೇಳಿದ್ದಾರೆ.

ಸದ್ಯ ಲಿಯೋ ಸಿನಿಮಾದ ಶೂಟಿಂಗ್ ಫೈನಲ್ ಸ್ಟೇಜ್ಗೆ ತಲುಪಿದೆ. ಈ ಸಿನಿಮಾ ಬಹುನಿರೀಕ್ಷಿತ ಚಿತ್ರವಾಗಿದ್ದು ವಿಜಯ್ ಫ್ಯಾನ್ಸ್ ಕುತೂಹಲದಿಂದ ಸಿನಿಮಾಗಾಗಿ ಕಾಯುತ್ತಿದ್ದಾರೆ. ವಿಜಯ್ ಅವರ ಹಲವಾರು ಫೋಟೋಗಳು ವೈರಲ್ ಆಗಿದ್ದು ಇದರಲ್ಲಿ ನಟ ಸಿಗರೇಟ್ ಸೇದುವುದನ್ನು ಕಾಣಬಹುದು. ಹಾಗೆಯೇ ನಟ ಪಿಸ್ತೂಲ್ ಹಿಡಿದಿರುವಂತಹ ಫೋಟೋಗಳು ಕೂಡಾ ವೈರಲ್ ಆಗಿದ್ದವು.
A police complaint filed against leo actor vijay for promoting drugs.
31-07-26 01:22 pm
HK News Staffer
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ ; ಸಂಸದ ಶಶಿಕಾಂತ...
29-07-26 01:52 pm
31-07-26 01:26 pm
HK News Staffer
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
31-07-26 10:58 pm
HK News Staffer
Mangalore Help Deeksha: ದಿಢೀರ್ ಮೆದುಳು ಜ್ವರಕ್ಕ...
31-07-26 07:03 pm
ರಾಜಸ್ಥಾನದಿಂದ ಮಂಗಳೂರಿಗೆ ಬಂದು ಬೀದಿಯಲ್ಲಿ ಅಲೆದಾಡು...
30-07-26 07:51 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
31-07-26 10:53 pm
HK News Staffer
ಪಣಂಬೂರು ತೋಟ ಬೆಂಗ್ರೆ ಬೀಚ್ ನಲ್ಲಿ ಸಾಮೂಹಿಕ ಅತ್ಯಾಚ...
31-07-26 09:47 pm
Kundapura Murder, Latest Update: ಹಣಕಾಸು ದ್ವೇಷ...
31-07-26 08:30 pm
ಜೀವಾವಧಿ ಶಿಕ್ಷೆಗೀಡಾಗಿದ್ದ ವಿನಯ್ ಕುಲಕರ್ಣಿಗೆ ಹೈಕೋ...
31-07-26 06:01 pm
ಕಾವೂರಿನಲ್ಲಿ ಮದರಂಗಿ ಶಾಸ್ತ್ರದಲ್ಲಿ ತಲವಾರು ಏಟು ;...
31-07-26 02:21 pm