ಬ್ರೇಕಿಂಗ್ ನ್ಯೂಸ್
23-05-23 12:59 pm Source: news18 ಸಿನಿಮಾ
ಜೂನಿಯರ್ ಎನ್ಟಿಆರ್ ಅವರ ಒಂಭತ್ತು ಜನ ಅಭಿಮಾನಿಗಳನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ನಡೆದಿದೆ. ಜೂನಿಯರ್ ಎನ್ಟಿಆರ್ ಅವರ ಬರ್ತ್ಡೇ ಸಂದರ್ಭವೇ ಅವರ ಅಭಿಮಾನಿಗಳನ್ನು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಆಡುಗಳನ್ನು ಬಲಿಕೊಟ್ಟು ನಟನ ಬ್ಯಾನರ್ಗೆ ರಕ್ತಾಭಿಷೇಕ ಮಾಡಿದ ಹಿನ್ನೆಲೆಯಲ್ಲಿ ನಟನ ಅಭಿಮಾನಿಗಳನ್ನು ಬಂಧಿಸಲಾಗಿದೆ. ಪ್ರಾಣಿಗಳ ಬಲಿ ನಿಷೇಧಿಸಲಾಗಿದ್ದು ಆ ಕೃತ್ಯದಲ್ಲಿ ಪಾಲ್ಗೊಂಡಿದ್ದಕ್ಕೆ ಅಭಿಮಾನಿಗಳು ಅರೆಸ್ಟ್ ಆಗಿದ್ದಾರೆ.
ವಿಜಯವಾಡದಲ್ಲಿ ಘಟನೆ ನಡೆದಿದೆ. ನಟನ ಅಭಿಮಾನಿಗಳು ನಟನ ಬರ್ತ್ಡೇ ಆಚರಣೆ ಭಾಗವಾಗಿ ಥಿಯೇಟರ್ ಮುಂದೆ ಅವರ ಫ್ಲೆಕ್ಸಿ ಬ್ಯಾನರ್ಗೆ ಆಡುಗಳನ್ನು ಬಲಿ ಕೊಟ್ಟು ರಕ್ತ ಚಿಮ್ಮುವಂತೆ ಮಾಡಿದ್ದಾರೆ. ಅಭಿಮಾನಿಗಳು ಎರಡು ಆಡುಗಳನ್ನು ಸಾಯಿಸಿ ರಕ್ತಾಭಿಷೇಕ ಮಾಡಿದ್ದಾಗಿ ಆರೋಪಿಸಲಾಗಿದೆ. ನಟನ ಬರ್ತ್ಡೇ ಪ್ರಯುಕ್ತ ಅವರ ಹಳೆಯ ಸಿನಿಮಾ ಸಿಂಹಾದ್ರಿ ರಿ ರಿಲೀಸ್ ಆಗಿದೆ. ಈ ಸಂದರ್ಭ ಥಿಯೇಟರ್ ಮುಂದೆ ಈ ಘಟನೆ ನಡೆದಿದೆ.
ಪಿ. ಶಿವ ನಾಗ ರಾಜು, ಕೆ ಸಾಯಿ, ಜಿ ಸಾಯಿ, ಡಿ ನಾಗ ಭೂಷಣಂ, ವಿ ಸಾಯಿ, ಪಿ ನಾಗೇಶ್ವರ ರಾವ್, ವೈ. ಧರಣಿ, ಪಿ. ಶಿವ ಹಾಗೂ ಬಿ. ಅನಿಲ್ ಕುಮಾರ್ ಎಂಬವರನ್ನು ಈ ಘಟನೆಗೆ ಸಂಬಂಧಿಸಿ ಅರೆಸ್ಟ್ ಮಾಡಲಾಗಿದೆ. ಶಿವ ನಾಗ ರಾಜು ಹಾಗೂ ಅವರ ಸ್ನೇಹಿತರು ಸಿರಿ ಕೃಷ್ಣ ಹಾಗೂ ಸಿರಿ ವೆಂಕಟ ಥಿಯೇಟರ್ನಲ್ಲಿ ಮೇ 20ರಂದು ನಟನ ಬರ್ತ್ಡೇ ಆಚರಿಸಿದ್ದಾರೆ. ಈ ಸಂದರ್ಭದಲ್ಲಿಯೇ ಆಡನ್ನು ಬಲಿಕೊಟ್ಟ ಘಟನೆಯೂ ನಡೆದಿದೆ.
ನಟನ ಬರ್ತ್ಡೇ ಸಂದರ್ಭ ಇನ್ನೊಂದು ಘಟನೆಯಲ್ಲಿ ನಟ ಅಭಿಮಾನಿಗಳು ಥಿಯೇಟರ್ ಒಳಗಡೆ ಪಟಾಕಿ ಸಿಡಿಸಿ ಚಿತ್ರಮಂದಿರದೊಳಗೆ ಬೆಂಕಿ ಅವಘಡ ಸಂಭವಿಸುವಂತೆ ಮಾಡಿದ್ದಾರೆ. ಥಿಯೇಟರ್ನಲ್ಲಿ ಸೀಟುಗಳಿಗೂ ಹಾನಿಯಾಗಿದೆ. ಎಲ್ಲಾ ಕಡೆಗಳಲ್ಲಿ ಸಿನಿಮಾ ರಿ-ರಿಲೀಸ್ ಸಂಭ್ರಮ ತುಂಬಿದ್ದ ಹಿನ್ನೆಲೆಯಲ್ಲಿ ವಿಜಯವಾಡದಲ್ಲಿ ಸಂಭ್ರಮಾಚರಣೆ ವೇಳೆ ಅವಘಡ ಸಂಭವಿಸಿದೆ. ಘಟನೆಯ ಫೊಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದವು. ನಂತರ ಶೋ ಕ್ಯಾನ್ಸಲ್ ಮಾಡಲಾಯಿತು.
nine fans of jr ntr arrested for sacrificing goats.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
17-06-25 11:02 pm
HK News Desk
ಇರಾನ್ ಸಂಘರ್ಷ ; ಇನ್ನೇನೋ ದೊಡ್ಡದು ನಡೆಯಲಿದೆ ಎಂದ ಟ...
17-06-25 10:47 pm
ಬಾಂಬ್ ಬೆದರಿಕೆ ; ಜರ್ಮನಿಯಿಂದ ಹೈದ್ರಾಬಾದ್ ಬರುತ್ತಿ...
16-06-25 05:29 pm
Iran-Israel War: ಇಸ್ರೇಲ್- ಇರಾನ್ ಸಂಘರ್ಷ ; ಇರಾನ...
16-06-25 01:33 pm
ಅಹಮದಾಬಾದ್ ಬೆನ್ನಲ್ಲೇ ಮತ್ತೊಂದು ದುರಂತ ; ಕೇದಾರನಾ...
15-06-25 10:29 pm
17-06-25 09:57 pm
Mangalore Correspondent
Mangalore Jail Jammer: ಜೈಲಿನ ಜಾಮರ್ ಸಮಸ್ಯೆಗೆ ದ...
17-06-25 08:17 pm
Baby Death, Mangalore: ತಂದೆ ಸೇದಿ ಬಿಸಾಕಿದ ಬೀಡಿ...
17-06-25 01:48 pm
Mangalore Accident, Nanthoor, Doctor Amal: ಅತ...
17-06-25 12:43 pm
U T Khader, Mangalore: ದ್ವೇಷ ಭಾಷಣ, ಜಾಲತಾಣಗಳಲ್...
16-06-25 11:06 pm
17-06-25 05:06 pm
Bangalore Correspondent
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm