ಬ್ರೇಕಿಂಗ್ ನ್ಯೂಸ್
23-05-23 12:59 pm Source: news18 ಸಿನಿಮಾ
ಜೂನಿಯರ್ ಎನ್ಟಿಆರ್ ಅವರ ಒಂಭತ್ತು ಜನ ಅಭಿಮಾನಿಗಳನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ನಡೆದಿದೆ. ಜೂನಿಯರ್ ಎನ್ಟಿಆರ್ ಅವರ ಬರ್ತ್ಡೇ ಸಂದರ್ಭವೇ ಅವರ ಅಭಿಮಾನಿಗಳನ್ನು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಆಡುಗಳನ್ನು ಬಲಿಕೊಟ್ಟು ನಟನ ಬ್ಯಾನರ್ಗೆ ರಕ್ತಾಭಿಷೇಕ ಮಾಡಿದ ಹಿನ್ನೆಲೆಯಲ್ಲಿ ನಟನ ಅಭಿಮಾನಿಗಳನ್ನು ಬಂಧಿಸಲಾಗಿದೆ. ಪ್ರಾಣಿಗಳ ಬಲಿ ನಿಷೇಧಿಸಲಾಗಿದ್ದು ಆ ಕೃತ್ಯದಲ್ಲಿ ಪಾಲ್ಗೊಂಡಿದ್ದಕ್ಕೆ ಅಭಿಮಾನಿಗಳು ಅರೆಸ್ಟ್ ಆಗಿದ್ದಾರೆ.
ವಿಜಯವಾಡದಲ್ಲಿ ಘಟನೆ ನಡೆದಿದೆ. ನಟನ ಅಭಿಮಾನಿಗಳು ನಟನ ಬರ್ತ್ಡೇ ಆಚರಣೆ ಭಾಗವಾಗಿ ಥಿಯೇಟರ್ ಮುಂದೆ ಅವರ ಫ್ಲೆಕ್ಸಿ ಬ್ಯಾನರ್ಗೆ ಆಡುಗಳನ್ನು ಬಲಿ ಕೊಟ್ಟು ರಕ್ತ ಚಿಮ್ಮುವಂತೆ ಮಾಡಿದ್ದಾರೆ. ಅಭಿಮಾನಿಗಳು ಎರಡು ಆಡುಗಳನ್ನು ಸಾಯಿಸಿ ರಕ್ತಾಭಿಷೇಕ ಮಾಡಿದ್ದಾಗಿ ಆರೋಪಿಸಲಾಗಿದೆ. ನಟನ ಬರ್ತ್ಡೇ ಪ್ರಯುಕ್ತ ಅವರ ಹಳೆಯ ಸಿನಿಮಾ ಸಿಂಹಾದ್ರಿ ರಿ ರಿಲೀಸ್ ಆಗಿದೆ. ಈ ಸಂದರ್ಭ ಥಿಯೇಟರ್ ಮುಂದೆ ಈ ಘಟನೆ ನಡೆದಿದೆ.

ಪಿ. ಶಿವ ನಾಗ ರಾಜು, ಕೆ ಸಾಯಿ, ಜಿ ಸಾಯಿ, ಡಿ ನಾಗ ಭೂಷಣಂ, ವಿ ಸಾಯಿ, ಪಿ ನಾಗೇಶ್ವರ ರಾವ್, ವೈ. ಧರಣಿ, ಪಿ. ಶಿವ ಹಾಗೂ ಬಿ. ಅನಿಲ್ ಕುಮಾರ್ ಎಂಬವರನ್ನು ಈ ಘಟನೆಗೆ ಸಂಬಂಧಿಸಿ ಅರೆಸ್ಟ್ ಮಾಡಲಾಗಿದೆ. ಶಿವ ನಾಗ ರಾಜು ಹಾಗೂ ಅವರ ಸ್ನೇಹಿತರು ಸಿರಿ ಕೃಷ್ಣ ಹಾಗೂ ಸಿರಿ ವೆಂಕಟ ಥಿಯೇಟರ್ನಲ್ಲಿ ಮೇ 20ರಂದು ನಟನ ಬರ್ತ್ಡೇ ಆಚರಿಸಿದ್ದಾರೆ. ಈ ಸಂದರ್ಭದಲ್ಲಿಯೇ ಆಡನ್ನು ಬಲಿಕೊಟ್ಟ ಘಟನೆಯೂ ನಡೆದಿದೆ.

ನಟನ ಬರ್ತ್ಡೇ ಸಂದರ್ಭ ಇನ್ನೊಂದು ಘಟನೆಯಲ್ಲಿ ನಟ ಅಭಿಮಾನಿಗಳು ಥಿಯೇಟರ್ ಒಳಗಡೆ ಪಟಾಕಿ ಸಿಡಿಸಿ ಚಿತ್ರಮಂದಿರದೊಳಗೆ ಬೆಂಕಿ ಅವಘಡ ಸಂಭವಿಸುವಂತೆ ಮಾಡಿದ್ದಾರೆ. ಥಿಯೇಟರ್ನಲ್ಲಿ ಸೀಟುಗಳಿಗೂ ಹಾನಿಯಾಗಿದೆ. ಎಲ್ಲಾ ಕಡೆಗಳಲ್ಲಿ ಸಿನಿಮಾ ರಿ-ರಿಲೀಸ್ ಸಂಭ್ರಮ ತುಂಬಿದ್ದ ಹಿನ್ನೆಲೆಯಲ್ಲಿ ವಿಜಯವಾಡದಲ್ಲಿ ಸಂಭ್ರಮಾಚರಣೆ ವೇಳೆ ಅವಘಡ ಸಂಭವಿಸಿದೆ. ಘಟನೆಯ ಫೊಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದವು. ನಂತರ ಶೋ ಕ್ಯಾನ್ಸಲ್ ಮಾಡಲಾಯಿತು.
nine fans of jr ntr arrested for sacrificing goats.
31-07-26 01:22 pm
HK News Staffer
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ ; ಸಂಸದ ಶಶಿಕಾಂತ...
29-07-26 01:52 pm
31-07-26 01:26 pm
HK News Staffer
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
31-07-26 10:58 pm
HK News Staffer
Mangalore Help Deeksha: ದಿಢೀರ್ ಮೆದುಳು ಜ್ವರಕ್ಕ...
31-07-26 07:03 pm
ರಾಜಸ್ಥಾನದಿಂದ ಮಂಗಳೂರಿಗೆ ಬಂದು ಬೀದಿಯಲ್ಲಿ ಅಲೆದಾಡು...
30-07-26 07:51 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
31-07-26 10:53 pm
HK News Staffer
ಪಣಂಬೂರು ತೋಟ ಬೆಂಗ್ರೆ ಬೀಚ್ ನಲ್ಲಿ ಸಾಮೂಹಿಕ ಅತ್ಯಾಚ...
31-07-26 09:47 pm
Kundapura Murder, Latest Update: ಹಣಕಾಸು ದ್ವೇಷ...
31-07-26 08:30 pm
ಜೀವಾವಧಿ ಶಿಕ್ಷೆಗೀಡಾಗಿದ್ದ ವಿನಯ್ ಕುಲಕರ್ಣಿಗೆ ಹೈಕೋ...
31-07-26 06:01 pm
ಕಾವೂರಿನಲ್ಲಿ ಮದರಂಗಿ ಶಾಸ್ತ್ರದಲ್ಲಿ ತಲವಾರು ಏಟು ;...
31-07-26 02:21 pm