ಬ್ರೇಕಿಂಗ್ ನ್ಯೂಸ್
01-04-23 01:28 pm Source: news18 ಸಿನಿಮಾ
ಶಿವಾಜಿ ಸುರತ್ಕಲ್-2 ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಈ ಟ್ರೈಲರ್ನಲ್ಲಿ ಒಂದು ಸೀಕ್ರೆಟ್ ರಿವೀಲ್ ಆಗಿದೆ. ಆ ಸೀಕ್ರೆಟ್ ಚಿತ್ರದ ಟೈಟಲ್ನಲ್ಲಿಯೇ ಇದೆ. ಆದರೆ ಅದು ಏನೂ ಅನ್ನೋದು ಟ್ರೈಲರ್ ನಲ್ಲಿ ರಿಲೀಸ್ ಆಗಿದ್ದು ಪ್ರೇಕ್ಷಕರಿಗೆ ಶಾಕ್ ಕೊಟ್ಟಿದೆ. ಶಿವಾಜಿ ಸುರತ್ಕಲ್-2 ಚಿತ್ರದಲ್ಲಿ ಸಂಗೀತಾ ಶೃಂಗೇರಿ ಪಾತ್ರವೂ ಇದೆ. ಸ್ಪೆಷಲ್ ಹಾಡಲ್ಲಿ ಸಂಗೀತಾ ಇಲ್ಲಿ ಕಾಣಿಸುತ್ತಾರೆ. ಆದರೆ ಇವರ ಪಾತ್ರ ಕೂಡ ಇಲ್ಲಿ ಕೊಲೆ ಆಗುತ್ತದೆ ಅನ್ನುವ ವಿಷಯ ಇದೇ ಟ್ರೈಲರ್ನಲ್ಲಿ ರಿವೀಲ್ ಆಗಿದೆ ನೋಡಿ.
ಶಿವರಾಜಿ ಸುರತ್ಕಲ್ ಸಿನಿಮಾದಲ್ಲೂ ಅಂತಹ ನೆಗೆಟಿವ್ ರೋಲ್ ಇದೆ. ಅದನ್ನ ರಮೇಶ್ ಅರವಿಂದ್ ಇಲ್ಲಿ ಅದ್ಭುತವಾಗಿಯೇ ನಿರ್ವಹಿಸಿದ್ದಾರೆ. ಹೌದು, ಚಿತ್ರಕ್ಕೆ ಭಾಗ ಎರಡು ಅನ್ನೋದಕ್ಕೂ ಈ ಚಿತ್ರದಲ್ಲಿ ರಮೇಶ್ ಅರವಿಂದ್ ಅವರ ಎರಡು ರೀತಿಯ ಪಾತ್ರ ಇರೋದಕ್ಕೂ ಸಿಂಕ್ ಆಗುತ್ತದೆ ನೋಡಿ. ಶಿವಾಜಿ ಸುರತ್ಕಲ್ ಚಿತ್ರದಲ್ಲಿ ರಮೇಶ್ ಅರವಿಂದ್ ಅವರು ಬೇರೆ ಕೇಸ್ ಬೆನ್ನಟ್ಟಿ ಹೋಗುತ್ತಿದ್ದಾರೆ. 131 ಅನ್ನೋದು ಈ ಕೇಸ್ ನಂಬರ್ ಆಗಿದೆ. ಇದರ ಸುತ್ತವೇ ಇಡೀ ಕಥೆ ಇದೆ. ಆದರೆ ಈ ಚಿತ್ರದ ಶಿವಾಜಿ ಸುರತ್ಕಲ್ ಪಾತ್ರ ಸುತ್ತವೇ ಈ ಒಂದು ಕೇಸ್ ಅದ್ಹೇಗೋ ಕನೆಕ್ಟ್ ಆಗಿದೆ.
ರಮೇಶ್ ಅರವಿಂದ್ ಅವರು ಈ ಚಿತ್ರದಲ್ಲಿ ಎರಡು ಪಾತ್ರ ಮಾಡಿದ್ದಾರೆ ಅನ್ನೊದು ಟ್ರೈಲರ್ ನೋಡಿದಾಕ್ಷಣ ಗೊತ್ತಾಗುತ್ತದೆ. ಆದರೆ ಅದರ ಬೆನ್ನಲ್ಲಿಯೇ ಇನ್ನೂ ಒಂದು ಪ್ರಶ್ನೆ ಹುಟ್ಟುಕೊಳ್ಳುತ್ತದೆ. ಚಿತ್ರದಲ್ಲಿ ರಮೇಶ್ ಅರವಿಂದ್ ಸ್ಪ್ಲಿಟ್ ಪರ್ಸನಾಲಿಟಿ ಇರೋ ಪಾತ್ರವನ್ನ ನಿರ್ವಹಿಸಿದ್ದಾರೆಯೇ ಅನ್ನುವ ಅನುಮಾನ ಕೂಡ ಮೂಡುತ್ತಿದೆ.
ಶಿವಾಜಿ ಸುರತ್ಕಲ್-2 ಸಿನಿಮಾದಲ್ಲಿ ಈ ಸಲ ಜಾಸ್ತಿನೇ ಥ್ರಿಲ್ಲಿಂಗ್ ಇದೆ ಅನಿಸುತ್ತದೆ. ಕೊಲೆಗಾರನ ಜಾಡು ಹಿಡಿದು ಹೊರಡುವ ಶಿವಾಜಿ ಸುರತ್ಕಲ್, ಕೊಲೆಗಡುಕನ ಕ್ಲಿಂಗ್ ಪ್ಯಾಟರ್ನ್ ಪತ್ತೆ ಹೆಚ್ಚಲು ಪರದಾಡುತ್ತಿದ್ದಾರೆ. ಆ ಒಂದು ಝಲಕ್ ಅನ್ನ ಕೂಡ ಇದೇ ಟ್ರೈಲರ್ ನಲ್ಲಿ ವೀಕ್ಷಿಸಬಹುದು. ಶಿವಾಜಿ ಸುರತ್ಕಲ್-2 ಚಿತ್ರದ ಡೈರೆಕ್ಟರ್ ಆಕಾಶ್ ಶ್ರೀವತ್ಸ ಈ ಸಲ ಬೇರೆ ರೀತಿಯಲ್ಲಿಯೇ ಕಥೆ ಹೇಳುತ್ತಿದ್ದಾರೆ. ಹೊಸ ರೀತಿಯ ಪ್ಯಾಟರ್ನ್ನಲ್ಲಿಯೇ ಇಡೀ ಸಿನಿಮಾ ತೋರಿಸೋಕೆ ಹೊರಟ್ಟಿದ್ದಾರೆ ಅನಿಸುತ್ತದೆ. ವಿಷ್ಯೂಲ್ ಎಫೆಕ್ಟ್ ಜೊತೆಗೆ ಜೂಡಾ ಸ್ಯಾಂಡಿ ಸಂಗೀತದ ಸ್ಪರ್ಶವೂ ಇಲ್ಲಿ ಚಿತ್ರಕ್ಕೆ ಇನ್ನೂ ಒಂದು ಥ್ರಿಲ್ ತಂದುಕೊಟ್ಟಿದೆ. ಶಿವಾಜಿ ಸುರತ್ಕಲ್-2 ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಏಪ್ರಿಲ್-14 ರಂದು ಸಿನಿಮಾ ರಿಲೀಸ್ ಎಲ್ಲೆಡೆ ರಿಲೀಸ್ ಆಗುತ್ತಿದೆ. ಸದ್ಯಕ್ಕೆ ಟ್ರೈಲರ್ ರಿಲೀಸ್ ಆಗಿ ಇಡೀ ಚಿತ್ರದ ಒಂದು ಝಲಕ್ ಕೊಡ್ತಾಯಿದೆ.
kannada actor ramesh aravind acted shivaji surathkal 2 secrets reveal in trailer.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
17-06-25 11:02 pm
HK News Desk
ಇರಾನ್ ಸಂಘರ್ಷ ; ಇನ್ನೇನೋ ದೊಡ್ಡದು ನಡೆಯಲಿದೆ ಎಂದ ಟ...
17-06-25 10:47 pm
ಬಾಂಬ್ ಬೆದರಿಕೆ ; ಜರ್ಮನಿಯಿಂದ ಹೈದ್ರಾಬಾದ್ ಬರುತ್ತಿ...
16-06-25 05:29 pm
Iran-Israel War: ಇಸ್ರೇಲ್- ಇರಾನ್ ಸಂಘರ್ಷ ; ಇರಾನ...
16-06-25 01:33 pm
ಅಹಮದಾಬಾದ್ ಬೆನ್ನಲ್ಲೇ ಮತ್ತೊಂದು ದುರಂತ ; ಕೇದಾರನಾ...
15-06-25 10:29 pm
17-06-25 09:57 pm
Mangalore Correspondent
Mangalore Jail Jammer: ಜೈಲಿನ ಜಾಮರ್ ಸಮಸ್ಯೆಗೆ ದ...
17-06-25 08:17 pm
Baby Death, Mangalore: ತಂದೆ ಸೇದಿ ಬಿಸಾಕಿದ ಬೀಡಿ...
17-06-25 01:48 pm
Mangalore Accident, Nanthoor, Doctor Amal: ಅತ...
17-06-25 12:43 pm
U T Khader, Mangalore: ದ್ವೇಷ ಭಾಷಣ, ಜಾಲತಾಣಗಳಲ್...
16-06-25 11:06 pm
17-06-25 05:06 pm
Bangalore Correspondent
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm