ಬ್ರೇಕಿಂಗ್ ನ್ಯೂಸ್
24-10-20 01:27 pm Headline Karnataka News Network ಸಿನಿಮಾ
ಮುಂಬೈ, ಅಕ್ಟೋಬರ್ 24: ಬಾಲಿವುಡ್ ಚಿತ್ರರಂಗದಲ್ಲಿ ಮಹೇಶ್ ಭಟ್ ದೊಡ್ಡ ಹೆಸರು. ಡ್ರಗ್ ದಂಧೆ ಹೊರಬಿದ್ದ ಬಳಿಕ ಸಿನಿಮಾ ನಿರ್ಮಾಪಕ, ನಿರ್ದೇಶಕನಾಗಿರುವ ಮಹೇಶ್ ಭಟ್, ಬಾಲಿವುಡ್ ಜಗತ್ತನ್ನೇ ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೋ ಎನ್ನುವಂತೆ ಅವರ ವಿರುದ್ಧ ಆರೋಪಗಳು ಕೇಳಿಬರುತ್ತಿವೆ. ಆದರೆ, ಮುಂಬೈ ಪೊಲೀಸರು ಮಾತ್ರ ಅವರನ್ನು ಮುಟ್ಟಲು ಹೋಗಿಲ್ಲ.
ಈಗ ಮಹೇಶ್ ಭಟ್ ಹತ್ತಿರದ ಸಂಬಂಧಿಯೇ ಭಟ್ ವಿರುದ್ಧ ದೂರುಗಳ ಸುರಿಮಳೆ ಗೈದಿದ್ದಾರೆ. ನಟಿ ಮತ್ತು ಮಾಡೆಲ್ ಆಗಿರುವ ಲವೀನಾ ಲೂದ್ ಎಂಬಾಕೆ, ಮಹೇಶ್ ಭಟ್ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿ, ವಿಡಿಯೋ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಮಹೇಶ್ ಭಟ್ ಅಳಿಯ ಸುಮಿತ್ ಸಬರ್ವಾಲ್ ಜೊತೆಗೆ ಮದುವೆಯಾಗಿದ್ದ ಲವೀನಾ ಲೂದ್, ಆತ ಮತ್ತು ಮಹೇಶ್ ಭಟ್ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದಾಳೆ. ಸಬರ್ವಾಲ್ ಜೊತೆ ಮದುವೆಯಾಗಿತ್ತು. ಆದರೆ, ಸಬರ್ವಾಲ್ ಡ್ರಗ್ ದಂಧೆಯಲ್ಲಿ ಇರುವುದನ್ನು ತಿಳಿದು ಆತನಿಂದ ಬೇರೆಯಾಗಿದ್ದೇನೆ. ಆತ ಚಿತ್ರರಂಗದ ಹಲವರಿಗೆ ಡ್ರಗ್ ಪೂರೈಕೆ ಮಾಡುತ್ತಾನೆ. ಹುಡುಗಿಯರನ್ನೂ ಪೂರೈಕೆ ಮಾಡುತ್ತಾನೆ. ಸಬರ್ವಾಲ್ ಮೊಬೈಲಿನಲ್ಲಿ ಹುಡುಗಿಯರ ಫೋಟೋಗಳಿದ್ದು ಅದರ ವಹಿವಾಟು ಕೂಡ ಆತನಿಗಿದೆ. ಇವೆಲ್ಲವೂ ಮಹೇಶ್ ಭಟ್ ಅವರಿಗೂ ಗೊತ್ತು.


ಇಂಡಸ್ಟ್ರಿಯಲ್ಲಿ ಮಹೇಶ್ ಭಟ್ ದೊಡ್ಡ ಡಾನ್. ಅವರು ಎಲ್ಲದನ್ನೂ ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ. ಅವರು ಹೇಳಿದಂತೆ ಕೇಳದಿದ್ದರೆ ಜೀವನ ಹಾಳು ಮಾಡುತ್ತಾರೆ. ನಿರ್ದೇಶಕರು, ಕಲಾವಿದರು, ಸಂಗೀತ ಸಂಯೋಜಕರನ್ನು ಕೆಲಸದಿಂದ ಕಿತ್ತು ಹಾಕುವಂತೆ ಮಾಡುತ್ತಾರೆ. ಅವರು ವಿರುದ್ಧ ಪ್ರಕರಣ ದಾಖಲಿಸಿದ ಬಳಿಕ ನನ್ನ ಹಿಂದೆ ಬಿದ್ದಿದ್ದಾರೆ. ಪೊಲೀಸರಿಗೆ ಹೇಳಿದರೆ ಅವರು ಕ್ಯಾರ್ ಮಾಡುತ್ತಿಲ್ಲ. ನನ್ನ ಮನೆಗೆ ನುಗ್ಗಿ ಬೆದರಿಕೆ ಹಾಕುತ್ತಾರೆ. ನನ್ನ ಕುಟುಂಬದವರಿಗೆ ಏನೇ ಅನಾಹುತ ಆದರೂ ಅದಕ್ಕೆ ಇವರೇ ಕಾರಣ ಎಂದು ವಿಡಿಯೋದಲ್ಲಿ ಲವೀನಾ ಲೂದ್ ಹೇಳಿಕೊಂಡಿದ್ದಾಳೆ.
Filmmaker Mahesh Bhatt‘s relative Luviena Lodh on Friday posted a video on Instagram accusing him of harassment and intimidation. Calling him the ‘biggest don of industry’, Luviena said that Mahesh is much powerful and he had destroyed many lives.
31-07-26 01:22 pm
HK News Staffer
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ ; ಸಂಸದ ಶಶಿಕಾಂತ...
29-07-26 01:52 pm
31-07-26 01:26 pm
HK News Staffer
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
31-07-26 10:58 pm
HK News Staffer
Mangalore Help Deeksha: ದಿಢೀರ್ ಮೆದುಳು ಜ್ವರಕ್ಕ...
31-07-26 07:03 pm
ರಾಜಸ್ಥಾನದಿಂದ ಮಂಗಳೂರಿಗೆ ಬಂದು ಬೀದಿಯಲ್ಲಿ ಅಲೆದಾಡು...
30-07-26 07:51 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
31-07-26 10:53 pm
HK News Staffer
ಪಣಂಬೂರು ತೋಟ ಬೆಂಗ್ರೆ ಬೀಚ್ ನಲ್ಲಿ ಸಾಮೂಹಿಕ ಅತ್ಯಾಚ...
31-07-26 09:47 pm
Kundapura Murder, Latest Update: ಹಣಕಾಸು ದ್ವೇಷ...
31-07-26 08:30 pm
ಜೀವಾವಧಿ ಶಿಕ್ಷೆಗೀಡಾಗಿದ್ದ ವಿನಯ್ ಕುಲಕರ್ಣಿಗೆ ಹೈಕೋ...
31-07-26 06:01 pm
ಕಾವೂರಿನಲ್ಲಿ ಮದರಂಗಿ ಶಾಸ್ತ್ರದಲ್ಲಿ ತಲವಾರು ಏಟು ;...
31-07-26 02:21 pm