ಬ್ರೇಕಿಂಗ್ ನ್ಯೂಸ್
01-02-23 01:42 pm Source: Vijayakarnataka ಸಿನಿಮಾ
ಎಲ್ಲಾ ಸ್ಟಾರ್ಗಳು ಹೊಸತನದ ಕಥೆಗಳತ್ತ ತಮ್ಮ ಚಿತ್ತ ಹರಿಸುತ್ತಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಸಹ ಇದೇ ಹಾದಿಯಲ್ಲಿದ್ದು, ತಮ್ಮ ಎಂದಿನ ಸ್ಟೈಲ್ನ ಸಿನಿಮಾ ಬಿಟ್ಟು ಹೊಸ ನಿರ್ದೇಶಕ ಅನೀಸ್ ಎಂಬುವರ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಸಿನಿಮಾಗೆ 'ಗೌರಿ ಶಂಕರ' ಎಂದು ಹೆಸರಿಡಲಾಗಿದ್ದು, ಇದರಲ್ಲಿ ರವಿಚಂದ್ರನ್ ಇದುವರೆಗೆ ನಿರ್ವಹಿಸದೇ ಇರುವಂತಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ತಮಿಳು ಚಿತ್ರರಂಗದಲ್ಲಿ ಕೆಲವು ವರ್ಷಗಳಿಂದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ಅನೀಸ್ಗೆ ಇದು ಮೊದಲ ಸಿನಿಮಾ. ಮೊದಲ ಸಿನಿಮಾದಲ್ಲಿಯೇ ಅವರು ರವಿಚಂದ್ರನ್ನಂಥ ನಟರನ್ನು ಸೇರಿಸಿ ಪ್ರಯೋಗ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಕಾಸ್ಟ್ಯೂಮ್ ಸೇರಿದಂತೆ ಎಲ್ಲ ವಿಚಾರದಲ್ಲಿಯೂ ಪ್ರಯೋಗವೇ ಆಗಿದೆ.

ಮೂರು ಪ್ರಮುಖ ಪಾತ್ರ
'ಗೌರಿ ಶಂಕರ' ಸಿನಿಮಾದಲ್ಲಿ ರವಿಚಂದ್ರನ್, ಅಪೂರ್ವ ಗಂಡ ಹೆಂಡತಿಯಾಗಿ ನಟಿಸುತ್ತಿದ್ದಾರೆ. ಇವರ ಜತೆಗೆ ಒಂದು ಪುಟ್ಟ ಮಗು ಇರುತ್ತದೆ. ಈ ಮೂರೇ ಪಾತ್ರಗಳು ಸಿನಿಮಾದಲ್ಲಿ ಪ್ರಮುಖವಾಗಿರುತ್ತವೆ. ಇದನ್ನು ಬಿಟ್ಟರೆ ಹತ್ತು ಕೋಟಿ ರೂಪಾಯಿ ಬೆಲೆಬಾಳುವ ನಾಯಿ ಸಹ ಪ್ರಮುಖ ಪಾತ್ರದಲ್ಲಿದೆ. ಸಿನಿಮಾದಲ್ಲಿ ಹುಲಿ ಸಹ ನಟಿಸುತ್ತಿದೆ ಎಂದು ಚಿತ್ರತಂಡ ತಿಳಿಸಿದೆ.

ಪೇಂಟರ್ ರವಿಚಂದ್ರನ್
ಈ ಸಿನಿಮಾದಲ್ಲಿ ಕ್ರೇಜಿಸ್ಟಾರ್ ದೇಶ ಕಂಡ ಬಹುದೊಡ್ಡ ಕುಂಚ ಕಲಾವಿದನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಕಲಾವಿದ ಪತ್ನಿ ಮಗಳ ಜತೆಗೆ ಕಾಡಿಗೆ ಬಂದು ಅಲ್ಲಿ ಸೆಟಲ್ ಆಗಿರುತ್ತಾನೆ. ಈ ಸಮಯದಲ್ಲಿ ನಡೆಯುವ ಗಂಡ ಹೆಂಡತಿ ನಡುವಿನ ಮುನಿಸೇ ಸಿನಿಮಾದ ಕಥೆ. 'ರವಿಚಂದ್ರನ್ ವೃತ್ತಿಜೀವನದಲ್ಲಿಇದೊಂದು ವಿಭಿನ್ನ ಸಿನಿಮಾ. ಈ ರೀತಿಯ ಪಾತ್ರದಲ್ಲಿಅವರು ಯಾವತ್ತೂ ಕಾಣಿಸಿಕೊಂಡಿಲ್ಲ' ಎಂದು ನಿರ್ದೇಶಕ ಅನೀಸ್ ಹೇಳಿದ್ದಾರೆ.
'ಗೌರಿ ಶಂಕರ' ಸಿನಿಮಾದ ಚಿತ್ರೀಕರಣ ದಾಂಡೇಲಿ ಕಾಡಿನಲ್ಲಿ ಸುಮಾರು 15 ದಿನಗಳಿಂದ ನಡೆಯುತ್ತಿದೆ. ಮುಂದಿನ ಶೆಡ್ಯೂಲ್ ಯಲ್ಲಾಪುರ ಕಾಡಿನಲ್ಲಿ ನಡೆಯಲಿದೆ. ಇಡೀ ಸಿನಿಮಾದ ಶೇ. 80ರಷ್ಟು ದೃಶ್ಯಗಳು ಕಾಡಿನಲ್ಲಿ ನಡೆಯಲಿದ್ದು, ನಂತರ ಬೆಂಗಳೂರು ಮತ್ತು ಬ್ಯಾಂಕಾಕ್ನಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.
'ಗೌರಿ ಶಂಕರ' ಸಿನಿಮಾದಲ್ಲಿ ರವಿಚಂದ್ರನ್ ಪಾತ್ರವೇ ಹೈಲೈಟ್. ಅವರ ವೃತ್ತಿಬದುಕಿನಲ್ಲಿ ಇದೊಂದು ವಿಭಿನ್ನ ಮತ್ತು ವಿಶಿಷ್ಟ ಸಿನಿಮಾ. ಪ್ರೇಕ್ಷಕರಿಗೂ ಹೊಸ ಅನುಭವ ನೀಡುವಂತಹ ಚಿತ್ರವಿದು ಎಂದಿದ್ದಾರೆ ನಿರ್ದೇಶಕ ಅನೀಸ್.
Crazy Star To Play Lead In Kannada Movie Gowri Shankara Along With Apoorva.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 07:46 pm
HK News Staffer
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm