ಬ್ರೇಕಿಂಗ್ ನ್ಯೂಸ್
27-01-23 12:54 pm Source: Vijayakarnataka ಸಿನಿಮಾ
'ಸಿಂಹಪ್ರಿಯ' ಹರಿಪ್ರಿಯಾ ( Hariprriya ), ವಸಿಷ್ಠ ಸಿಂಹ ಅವರು ( Vasishta Simha ) ಇಂದು ( ಜನವರಿ 26 ) ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆಗೆ ಸ್ಯಾಂಡಲ್ವುಡ್ ಕಲಾವಿದರು ಆಗಮಿಸಿ, ಶುಭ ಹಾರೈಸಿದ್ದಾರೆ.
ಶಿವಣ್ಣ, ಡಾಲಿ, ಅಮೃತಾ ಅಯ್ಯಂಗಾರ್ ಭಾಗಿ
ಶಿವರಾಜ್ಕುಮಾರ್, ಡಾಲಿ ಧನಂಜಯ, ಅಮೃತಾ ಅಯ್ಯಂಗಾರ್, ನಿರ್ಮಾಪಕ ಸಂದೇಶ್ ನಾಗರಾಜ್ ಅವರು ಈ ಮದುವೆಗೆ ಬಂದು ನವಜೋಡಿಗೆ ಶುಭ ಹಾರೈಸಿದ್ದಾರೆ. ಅಷ್ಟೇ ಅಲ್ಲದೆ ಅಮೃತಾ ಅಯ್ಯಂಗಾರ್, ಡಾಲಿ ಧನಂಜಯ್ ಅವರು ಒಂದೇ ಕಾರ್ನಲ್ಲಿ ಈ ಮದುವೆಗೆ ಆಗಮಿಸಿ, "ಚಿತ್ರರಂಗದಲ್ಲಿ ಇರುವವರು ಹೀಗೆ ಮದುವೆ ಆದ್ರೆ ಖುಷಿ ಆಗತ್ತೆ" ಎಂದಿದ್ದಾರೆ. ಡಾ ಶಿವರಾಜ್ಕುಮಾರ್ ಅವರು 'ವಸಿಷ್ಠ ಸಿಂಹ ನನಗೆ ಆತ್ಮೀಯ. ಇಬ್ಬರ ಜೀವನ ಒಳ್ಳೆಯದಾಗಲಿ' ಎಂದು ಹೇಳಿದ್ದಾರೆ.
ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಆರತಕ್ಷತೆ ಕಾರ್ಯಕ್ರಮವು ಜನವರಿ 28 ರಂದು ಸಂಜೆ 7 ಗಂಟೆಯಿಂದ ತುಮಕೂರು ರಸ್ತೆಯ ಗೋಲ್ಡನ್ ಪಾಮ್ಸ್ & ರೆಸಾರ್ಟ್ನಲ್ಲಿ ನಡೆಯಲಿದೆ. ಈಗಾಗಲೇ ಈ ಜೋಡಿ ಕ್ರೇಜಿ ಸ್ಟಾರ್ ರವಿಚಂದ್ರನ್, 'ಗೋಲ್ಡನ್ ಸ್ಟಾರ್' ಗಣೇಶ್, ಕಿಚ್ಚ ಸುದೀಪ್, 'ರಿಯಲ್ ಸ್ಟಾರ್' ಉಪೇಂದ್ರ, ಡಾಲಿ ಧನಂಜಯ್, ಡಾ ಶಿವರಾಜ್ಕುಮಾರ್, ಧ್ರುವ ಸರ್ಜಾ, ನೆನಪಿರಲಿ ಪ್ರೇಮ್, ಜಗ್ಗೇಶ್, ಅನಂತ್ ನಾಗ್, ರಿಷಬ್ ಶೆಟ್ಟಿ, ಮಾಲಾಶ್ರೀ, ಗುರುಕಿರಣ್, ಶ್ರುತಿ, ಸೃಜನ್ ಲೋಕೇಶ್, ಅಮೃತಾ ಅಯ್ಯಂಗಾರ್ ಸೇರಿದಂತೆ ಸಾಕಷ್ಟು ಸ್ಯಾಂಡಲ್ವುಡ್ ಕಲಾವಿದರಿಗೆ ಹರಿಪ್ರಿಯಾ ಹಾಗೂ ವಸಿಷ್ಠ ಅವರು ಆಹ್ವಾನ ನೀಡಿದ್ದಾರೆ. ಇವರೆಲ್ಲರೂ ಆರತಕ್ಷತೆ ಕಾರ್ಯಕ್ರಮಕ್ಕೆ ಹಾಜರಾಗುವ ಸಾಧ್ಯತೆಯಿದೆ.
ನಿಶ್ಚಿತಾರ್ಥದ ನಂತರ ಅಧಿಕೃತ ಹೇಳಿಕೆ
ಸ್ಯಾಂಡಲ್ವುಡ್ನಲ್ಲಿ ಸಕ್ರಿಯವಾಗಿರುವ ವಸಿಷ್ಠ ಸಿಂಹ ಹಾಗೂ ಹರಿಪ್ರಿಯ ಅವರು ಸಾಕಷ್ಟು ವರ್ಷಗಳಿಂದ ಪರಿಚಿತರು. ಆದರೆ ಕಳೆದ ಒಂದು ವರ್ಷದಿಂದ ಇವರಿಬ್ಬರು ಪ್ರೀತಿ ಮಾಡುತ್ತಿದ್ದರು. ಇತ್ತೀಚೆಗೆ ಈ ಜೋಡಿ ದುಬೈನಲ್ಲಿ ಓಡಾಡುತ್ತಿದ್ದ ಫೋಟೋ ವೈರಲ್ ಆಗಿತ್ತು. ಆ ನಂತರದಲ್ಲಿ ಅವರಿಬ್ಬರು ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡ ನಂತರದಲ್ಲಿ ಈ ವಿಷಯವನ್ನು ಅಧಿಕೃತಪಡಿಸಿದ್ದರು. ಸುದ್ದಿಗೋಷ್ಠಿ ಕರೆದು ಇವರಿಬ್ಬರು ಪ್ರೀತಿಯ ಬಗ್ಗೆ ಹಂಚಿಕೊಂಡಿದ್ದರು. 'ನಮ್ಮ ಸಿಂಹಿಣಿಯನ್ನು ಚೆನ್ನಾಗಿ ನೋಡ್ಕೋಬೇಕು, ಅದೇ ನನ್ನ ದೊಡ್ಡ ಜವಾಬ್ದಾರಿ...'- ನಟ ವಸಿಷ್ಠ ಸಿಂಹ
Actor Vasishta Simha Haripriya Got Married At Mysuru.
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
29-04-25 11:00 pm
Mangalore Correspondent
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
29-04-25 09:59 pm
Mangalore Correspondent
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm