ಬ್ರೇಕಿಂಗ್ ನ್ಯೂಸ್
24-01-23 01:28 pm Source: news18 ಸಿನಿಮಾ
ರಿಯಲ್ ಸ್ಟಾರ್ ಸಿನಿಮಾ ಪವರ್ ಸ್ಟಾರ್ ಜನ್ಮ ದಿನದಂದು ರಿಲೀಸ್ ಆಗುತ್ತಿದೆ. ನಿಜಕ್ಕೂ ಈ ಒಂದು ಮಾತು ಸ್ಪೆಷಲ್ ಆಗಿದೆ ನೋಡಿ. ಈ ರೀತಿ ನಿರ್ಧಾರವನ್ನ ಎಲ್ಲರೂ ತೆಗೆದುಕೊಳ್ಳುವುದಿಲ್ಲ. ಆದರೆ ಕಬ್ಜ ಚಿತ್ರದ ನಿರ್ದೇಶಕರು ಈ ಒಂದು ನಿರ್ಧಾರ ತೆಗೆದುಕೊಂಡಿದ್ದಾರೆ.
ನಿರ್ಮಾಪಕ-ನಿರ್ದೇಶಕ ಆರ್. ಚಂದ್ರು ಅವರ ಈ ಒಂದು ನಿರ್ಧಾರಕ್ಕೆ ಎಲ್ಲ ಭಾಷೆಯ ವಿತರಕರೂ ಸಾಥ್ ಕೊಟ್ಟಿದ್ದಾರೆ. ದೊಡ್ಡ ಬಜೆಟ್ನ ಸಿನಿಮಾ ಆಗಿರೋದರಿಂದ ಎಲ್ಲರ ಸಪೋರ್ಟ್ ಕೂಡ ಬೇಕಾಗುತ್ತದೆ. ಅದಕ್ಕೆ ನಿರ್ಮಾಪಕ ಆರ್.ಚಂದ್ರು ಅವರಿಗೆ ಎಲ್ಲರೂ ಈಗ ಸಾಥ್ ಕೊಟ್ಟಿದ್ದಾರೆ.
ಅಪ್ಪು ಜನ್ಮ ದಿನಕ್ಕೆ ಉಪ್ಪಿ ಸಿನಿಮಾ ರಿಲೀಸ್ ಯಾಕೆ ?
ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾಗಳು ಅಂದ್ರೆ ಎಲ್ಲರಿಗೂ ಇಷ್ಟ ಆಗುತ್ತವೆ. ಅದೇ ರೀತಿ ಉಪ್ಪಿಯ ಕಬ್ಜ ಚಿತ್ರದ ಎಲ್ಲ ಹಂತಗಳನ್ನೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನೋಡಿಕೊಂಡು ಬಂದಿದ್ದರು. ಸಿನಿಮಾದ ಪ್ರತಿ ವಿಷಯವನ್ನು ಆರ್.ಚಂದ್ರು ಅವರಿಂದ ತಿಳಿದುಕೊಂಡಿದ್ದರು.
ತೆರೆ ಹಿಂದಿನ ಈ ವಿಷಯವನ್ನ ಡೈರೆಕ್ಟರ್ ಆರ್.ಚಂದ್ರು ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಹಂಚಿಕೊಂಡಿದ್ದಾರೆ. ನಮ್ಮ ಚಿತ್ರದ ಪ್ರತಿ ಹಂತವನ್ನೂ ಅಪ್ಪು ಸರ್ ಗಮನಿಸಿದ್ದಾರೆ. ದೊಡ್ಡ ಸಿನಿಮಾ ಮಾಡುತ್ತಿದ್ದೀರಾ, ಬಜೆಟ್ ಕೂಡ ದೊಡ್ಡದೇ ಇದೆ. ಚಿತ್ರವನ್ನ ನೋಡಿಕೊಂಡು ಮಾಡಿ, ಹುಷಾರಾಗಿ ಮಾಡಿ ಅಂತಲೂ ಆರ್.ಚಂದ್ರು ಅವರಿಗೆ ಅಪ್ಪು ಹೇಳಿದ್ದರು.
ಚಿತ್ರದ ಮೋಷನ್ ಪೋಸ್ಟರ್, ಪೋಸ್ಟರ್ ಹೀಗೆ ಚಿತ್ರದ ಪ್ರತಿ ವಿಷಯವನ್ನ ಪುನೀತ್ ಗಮನಿಸಿದ್ದಾರೆ. ಅದನ್ನ ಅಷ್ಟೇ ಖುಷಿಯಿಂದಲೂ ಮೆಚ್ಚಿಕೊಂಡು ಆರ್.ಚಂದ್ರು ಅವರಿಗೆ ಹೇಳಿದ್ದಾರೆ. ಅದೇ ಒಂದು ಪ್ರೀತಿಯಿಂದಲೇ ಅಪ್ಪು ಅವರ ಮೇಲಿನ ಗೌರವದಿಂದಲೇ ಆರ್ ಚಂದ್ರು ತಮ್ಮ ಕಬ್ಜ ಚಿತ್ರವನ್ನ ಪುನೀತ್ ಜನ್ಮ ದಿನಕ್ಕೆ ರಿಲೀಸ್ ಮಾಡೋಕೆ ಪ್ಲಾನ್ ಮಾಡಿದ್ದಾರೆ.
ಮಾರ್ಚ್-17 ರಂದು ಕಬ್ಜ ಸಿನಿಮಾ ರಿಲೀಸ್
ರಿಯಲ್ ಸ್ಟಾರ್ ಉಪೇಂದ್ರ ಅವರ ಕಬ್ಜ ಚಿತ್ರ ಮಾರ್ಚ್-17 ರಂದು ರಿಲೀಸ್ ಆಗುತ್ತಿದೆ. ಅಪ್ಪು ಜನ್ಮ ದಿನಕ್ಕೆ ಈ ಒಂದು ಚಿತ್ರ ರಿಲೀಸ್ ಮಾಡುತ್ತಿದ್ದೇವೆ. ಅಪ್ಪು ಅವರಿಗೆ ಈ ಮೂಲಕ ಗೌರವ ಸಲ್ಲಿಸುತ್ತಿದ್ದೇವೆ ಎಂದು ಚಿತ್ರದ ನಿರ್ದೇಶಕ-ನಿರ್ಮಾಪಕ ಆರ್.ಚಂದ್ರು ಹೇಳಿದ್ದಾರೆ.
ರಿಯಲ್ ಸ್ಟಾರ್ ಉಪ್ಪಿ ಅವರ ಈ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಇದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ಕನ್ನಡದ ಕಾಂತಾರ ಚಿತ್ರ ಆದ್ಮೇಲೆ ಸದ್ಯಕ್ಕೆ ಯಾವುದೇ ದೊಡ್ಡ ಚಿತ್ರ ಪ್ಯಾನ್ ಇಂಡಿಯಾ ಲೆವಲ್ಗೆ ರಿಲೀಸ್ ಆಗುತ್ತಿಲ್ಲ ಅಂತಲೇ ಹೇಳಬಹುದು.
ಕಬ್ಜ ರಿಲೀಸ್ ಬಗ್ಗೆ ಆರ್.ಚಂದ್ರು ಏನ್ ಹೇಳ್ತಾರೆ?
ರಿಯಲ್ ಸ್ಟಾರ್ ಉಪೇಂದ್ರ ಅವರ ಕಬ್ಜ ಚಿತ್ರ ಮಾರ್ಚ್-17 ರಂದು ರಿಲೀಸ್ ಆಗುತ್ತಿದೆ. ಅಪ್ಪು ಜನ್ಮ ದಿನಕ್ಕೆ ಈ ಒಂದು ಚಿತ್ರ ರಿಲೀಸ್ ಮಾಡುತ್ತಿದ್ದೇವೆ. ಅಪ್ಪು ಅವರಿಗೆ ಈ ಮೂಲಕ ಗೌರವ ಸಲ್ಲಿಸುತ್ತಿದ್ದೇವೆ. ಅವರು ಕನ್ನಡ ಚಿತ್ರರಂಗದ ದೇವರೇ ಆಗಿದ್ದಾರೆ ಎಂದು ಚಂದ್ರು ಹೇಳ್ತಾರೆ.
ಅಪ್ಪು ಅವರ ಜನ್ಮ ದಿನದಂದು ರಿಲೀಸ್ ಮಾಡೋ ನಿರ್ಧಾರ ತೆಗೆದುಕೊಂಡಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಎಲ್ಲ ಕೆಲಸಗಳು ನಡೆಯುತ್ತಿವೆ. ಯಾವುದು ಬಾಕಿ ಉಳಿದಿಲ್ಲ. ಇತರ ಕೆಲಸಗಳು ವೇಗದಲ್ಲಿಯೇ ಆಗುತ್ತಿವೆ ಅಂತಲೂ ಆರ್ ಚಂದ್ರು ಹೇಳುತ್ತಾರೆ.
ಕಬ್ಜ ಚಿತ್ರ ಈಗಾಗಲೇ ತನ್ನ ಮೇಕಿಂಗ್ನಿಂದಲೇ ಹೆಚ್ಚು ಗಮನ ಸೆಳೆದಿದೆ. ಚಿತ್ರದ ಪೋಸ್ಟರ್ ಮತ್ತು ಟೀಸರ್ ಅತಿ ಹೆಚ್ಚು ನಿರೀಕ್ಷೆ ಮೂಡಿಸಿದೆ. ಕೆಜಿಎಫ್ ರೀತಿನೆ ಈ ಚಿತ್ರವೂ ಇದೆ ಅಂತಲೇ ಅನೇಕರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನುಳಿದಂತೆ ಕಬ್ಜ ಕೂಡ ಕನ್ನಡದ ಮತ್ತೊಂದು ಹೆಮ್ಮೆಯ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ. ಬಾಲಿವುಡ್ನಲ್ಲಿ ಈಗಾಗಲೇ ಕಬ್ಜ ಸದ್ದು ಮಾಡುತ್ತಲೇ ಇದೆ.
Kabzaa movie going to release on Puneeth Birthday rvj.
10-08-25 09:12 pm
HK News Desk
ಗುಜರಾತ್, ಮಹಾರಾಷ್ಟ್ರದಂತೆ ನಮಗೂ ಆದ್ಯತೆ ಕೊಡಿ, ಮೆಟ...
10-08-25 06:27 pm
PM Modi, Operation Sindhoor: ಆಪರೇಶನ್ ಸಿಂಧೂರಕ್...
10-08-25 06:06 pm
ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ...
10-08-25 01:57 pm
ಗಿಟಾರಿಗೆ ಹೊದಿಕೆ ಹೊದಿಸಿ ಏಳನೇ ಕ್ಲಾಸ್ ಹುಡುಗನ ಸಾವ...
09-08-25 10:12 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
10-08-25 04:32 pm
Udupi Correspondent
Six Arrested, Dharmasthala Incident, Kudla Ra...
10-08-25 02:26 pm
Dharmasthala, Janardhan Poojary, SIT Probe: ದ...
10-08-25 01:01 pm
Mangalore Dharmasthala Case: ಧರ್ಮಸ್ಥಳ ಕೇಸ್ ;...
10-08-25 12:37 pm
No Evidence, Bahubali Hill in Dharmasthala: ಬ...
09-08-25 10:53 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm