ಬ್ರೇಕಿಂಗ್ ನ್ಯೂಸ್
16-01-23 01:18 pm Source: news18 ಸಿನಿಮಾ
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಎಲ್ಲರ ಮನದಲ್ಲಿದ್ದಾರೆ. ಅವರು ದೈಹಿಕವಾಗಿ ಇಲ್ಲ ಅನ್ನೋದನ್ನ ಬಿಟ್ರೆ, ಪವರ್ ಸ್ಟಾರ್ ಪವರ್ ಇನ್ನೂ ಎಲ್ಲರ ಮನದಲ್ಲಿಯೇ ಹರಿಯುತ್ತಿದೆ.

ಪುನೀತ್ ರಾಜಕುಮಾರ್ ಎಂದೂ ತಾವು ಏನೇ ಮಾಡಿದ್ರೂ ಎಲ್ಲೂ ಏನೂ ಹೇಳಿಕೊಳ್ಳುತ್ತಿರಲಿಲ್ಲ. ಆದರೆ ಅವರು ಹಾಗೆ ಮಾಡಿರೊ ಕಾರ್ಯ ಎಲ್ಲ ಕಾಲಕ್ಕೂ ಸಲ್ಲುತ್ತದೆ.
ಅಜರಾ"ಮರ" ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಎಲ್ಲರ ಮನದಲ್ಲಿ ಹಾಗೇ ಇದ್ದಾರೆ. ಅವರ ನೆನಪು ಎಲ್ಲರನ್ನ ಕಾಡುತ್ತಲೇ ಇರುತ್ತದೆ. ಪುನೀತ್ ವ್ಯಕ್ತಿತ್ವವೇ ಹಾಗಿತ್ತು. ಅಷ್ಟು ಆಳವಾಗಿಯೇ ಎಲ್ಲರ ಮನದಲ್ಲಿರೋ ಅಪ್ಪು, ಈಗಲೂ ಎಲ್ಲರಿಗೂ ನೆನಪಿಗೆ ಬರುತ್ತಾರೆ.
ಅಪ್ಪು ಮಾಡಿರೋ ಕೆಲಸಗಳು ಹಾಗಿವೆ. ಹಾಗೇನೇ ಅಪ್ಪು ಕೊಡಗಿಗೂ ಹೋಗಿ ಬಂದಿದ್ದಾರೆ. ಹಾಗೆ ಅಪ್ಪು ಇಲ್ಲಿಗೆ ಹೋದಾಗ ಒಂದ್ ಅದ್ಭುತ ಕೆಲಸವನ್ನೇ ಮಾಡಿದ್ದಾರೆ. ಇಲ್ಲಿಯ ರೆಸಾರ್ಟ್ ಒಂದರಲ್ಲಿ ಒಂದು ಸ್ಪೂರ್ತಿದಾಯಕ ಕೆಲಸವನ್ನೂ ಮಾಡಿದ್ದಾರೆ.
ಅಪ್ಪನ ಜನ್ಮ ದಿನಕ್ಕೆ ಗಿಡ ನೆಟ್ಟ ಪವರ್ ಸ್ಟಾರ್ ಪುನೀತ್
ಡಾಕ್ಟರ್ ರಾಜ್ಕುಮಾರ್ ಅವರ 92 ನೇ ಜನ್ಮ ದಿನಕ್ಕೆ ಪುನೀತ್ ರಾಜ್ಕುಮಾರ್ ಒಂದು ಒಳ್ಳೆ ಕೆಲಸ ಮಾಡಿದ್ದಾರೆ. ಕೊಡಗಿಗೆ ಹೋದಾಗ ಇಲ್ಲಿಯ ರೆಸಾರ್ಟ್ ಒಂದರಲ್ಲಿ ಮಲಬಾರ್ ಹುಣಸೆ ಗಿಡವನ್ನ ನೆಟ್ಟಿದ್ದಾರೆ. ಹಾಗೆ ನೆಟ್ಟ ಈ ಗಿಡದ ಪಕ್ಕದಲ್ಲಿಯೇ ಈ ಎಲ್ಲ ಡೀಟೆಲ್ಸ್ ಕೂಡ ಇದೆ.
ಘೋಸ್ಟ್ ಡೈರೆಕ್ಟರ್ ಶ್ರೀನಿ ಶೇರ್ ಮಾಡಿದ ಮ್ಯಾಟರ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಘೋಸ್ಟ್ ಚಿತ್ರವನ್ನ ಡೈರೆಕ್ಟರ್ ಶ್ರೀನಿ ನಿರ್ದೇಶನದ ಮಾಡುತ್ತಿದ್ದಾರೆ. ಹಾಗೆ ಎರಡು ಹಂತದ ಚಿತ್ರೀಕರಣವನ್ನ ಈಗ ಮುಗಿಸಿಕೊಂಡು, ಫ್ಯಾಮಿಲಿ ಜೊತೆಗೆ ಮೊನ್ನೆ ಕೊಡಗಿಗೂ ಹೋಗಿದ್ರು.

ಹಾಗೇನೆ ಇಲ್ಲಿಯ ಒಂದು ರೆಸಾರ್ಟ್ ನಲ್ಲೂ ಉಳಿದುಕೊಂಡಿದ್ದರು. ಶ್ರೀನಿ ಉಳಿದುಕೊಂಡ ರೂಮ್ ಪಕ್ಕದಲ್ಲಿಯೇ ಪವರ್ ಸ್ಟಾರ್ ಪುನೀತ್ ನೆಟ್ಟಿರೋ ಗಿಡ ಕೂಡ ಇತ್ತು. ಅದರ ಫೋಟೋ ತೆಗೆದಿರೋ ನಟ-ನಿರ್ದೇಶಕ ಶ್ರೀನಿ ಆ ಫೋಟೋವನ್ನ ಟ್ವಿಟರ್ನಲ್ಲೂ ಶೇರ್ ಮಾಡಿದ್ದಾರೆ. You are rooted in our memories ಅಂತಲೂ ಬರೆದುಕೊಂಡಿದ್ದಾರೆ.
ಡೈರೆಕ್ಟರ್ ಶ್ರೀನಿ ಮಾತು ನಿಜವೇ ಆಗಿದೆ. ಪುನೀತ್ ರಾಜ್ಕುಮಾರ್ ಎಲ್ಲರ ಮನದಲ್ಲಿ ಆಳವಾಗಿಯೇ ಬೇರೂರಿದ್ದಾರೆ. ಅಪ್ಪು ಅಂದ್ರೆ ಅಮರ, ಅಪ್ಪು ಅಂದ್ರೆ ಅದ್ಭುತ ಅನ್ನೋ ಮಾತನ್ನ ಎಲ್ಲರೂ ಒಪ್ಪಿಕೊಳ್ಳುತ್ತಾರೆ.
ಅಪ್ಪು ಈಗಲೂ ಎಲ್ಲರ ಮನಸಿನಲ್ಲಿ ಜೀವಂತವಾಗಿದ್ದಾರೆ. ಹಾಗೇನೆ ಇದೇ ರೆಸಾರ್ಟ್ ನಲ್ಲಿಯೇ ನಟಿ ಐಶ್ವರ್ಯ ರೈ, ಸೂಪರ್ ಸ್ಟಾರ್ ರಜಿನಿಕಾಂತ್ ಸೇರಿದಂತೆ ಇನ್ನೂ ಅನೇಕರು ಅಪ್ಪು ರೀತಿನೇ ಗಿಡಗಳನ್ನ ಇಲ್ಲಿ ನೆಟ್ಟು ಹೋಗಿದ್ದಾರೆ.
Power Star Puneeth Rajkumar planted a Malabar Tamarind plant at Coorg Resort.
02-05-26 04:48 pm
HK News Staffer
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
ಸದ್ಯಕ್ಕಿಲ್ಲ ಡಿಕೆಶಿಗೆ ಸಿಎಂ ಭಾಗ್ಯ ; ರಾಜ್ಯಸಭೆ- ಏ...
29-04-26 10:36 am
02-05-26 11:18 am
HK News Staffer
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
02-05-26 12:19 pm
HK News Staffer
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm
ಮಕ್ಕಳ ಆಯೋಗ ಸಮಿತಿ ಸದಸ್ಯನಿಂದಲೇ ಹಲವು ಮಹಿಳೆಯರಿಗೆ...
01-05-26 01:45 pm