ಬ್ರೇಕಿಂಗ್ ನ್ಯೂಸ್
02-01-23 01:05 pm Source: Vijayakarnataka ಸಿನಿಮಾ
ನಿರ್ದೇಶಕ ಪ್ರೇಮ್ ಪ್ರತಿ ಸಿನಿಮಾದಲ್ಲಿಯೂ ಏನಾದರೂ ಒಂದು ವಿಶೇಷತೆಯನ್ನು ಇಡುತ್ತಾರೆ. ತಮ್ಮ ಮೊದಲ ಸಿನಿಮಾದಿಂದಲೂ ಪ್ರಚಾರವನ್ನು ವಿಭಿನ್ನವಾಗಿ ಮಾಡಿಕೊಂಡು ಬಂದಿರುವ ಪ್ರೇಮ್ ಈಗ ಧ್ರುವ ಸರ್ಜಾ ಅವರಿಗೆ ‘ಕೆಡಿ’ ಎಂಬ ಸಿನಿಮಾ ಮಾಡುತ್ತಿದ್ದಾರೆ. ಅದರ ಟೈಟಲ್ ಲಾಂಚ್ ಅನ್ನು ಅದ್ಧೂರಿಯಾಗಿ ಮಾಡಿದ್ದ ಅವರು ಈಗ ಆ ಸಿನಿಮಾದ ಒಂದೊಂದೇ ಪಾತ್ರವನ್ನು ಪರಿಚಯಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಪ್ರೇಮ್ ಪರಿಚಯ ಮಾಡಿರುವ ಮೊದಲ ಪಾತ್ರ ಅಣ್ಣಯ್ಯಪ್ಪ. ಈ ಪಾತ್ರವನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ನಿರ್ವಹಿಸುತ್ತಿದ್ದು, ಅವರ ಭರ್ಜರಿ ಲುಕ್ ಅನ್ನು ಹೊಸ ವರ್ಷದಂದು ಚಿತ್ರತಂಡ ರಿವೀಲ್ ಮಾಡಿದೆ.
‘ಕೆಡಿ’ ರೆಟ್ರೋ ಸ್ಟೈಲ್ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ. ಈ ಸಿನಿಮಾದಲ್ಲಿ ಧ್ರುವ ಸರ್ಜಾ ರೌಡಿಯಾಗಿ ನಟಿಸುತ್ತಿದ್ದಾರೆ ಎಂಬುದು ಟೈಟಲ್ ಟೀಸರ್ನಲ್ಲಿ ಗೊತ್ತಾಗಿತ್ತು. ಈ ಕೆಡಿಯ ಜತೆ ಇನ್ನಷ್ಟು ಕೆಡಿಗಳು ನಟಿಸುತ್ತಾರೆ ಎಂಬುದು ಸಹ ಈಗಾಗಲೇ ಗೊತ್ತಾಗಿದೆ. ಚಿತ್ರತಂಡವೇ ಹೇಳಿರುವ ಪ್ರಕಾರ ಸಂಜಯ್ ದತ್ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಇದರ ನಡುವೆ ಕ್ರೇಜಿ ಸ್ಟಾರ್ ರವಿಚಂದ್ರನ್ ಸಹ ನಟಿಸಲಿದ್ದಾರೆ ಎಂಬುದು ಪೋಸ್ಟರ್ನಿಂದ ಗೊತ್ತಾಗುತ್ತಿದೆ. ರವಿಚಂದ್ರನ್ ರೆಟ್ರೋ ಸ್ಟೈಲ್ನ ಕಾಸ್ಟ್ಯೂಮ್ ಮತ್ತು ಹೇರ್ ಸ್ಟೈಲ್ನಿಂದ ಮಿಂಚುತ್ತಿದ್ದಾರೆ.

'ಸದ್ಯಕ್ಕೆ ಸಿನಿಮಾದ ಪಾತ್ರಗಳನ್ನು ಮಾತ್ರ ಪರಿಚಯ ಮಾಡುತ್ತಿದ್ದೇವೆ. ಆ ಪಾತ್ರದ ಹಿನ್ನೆಲೆ, ವಿವರ ಎಲ್ಲವೂ ತೆರೆಮೇಲೆ ನೋಡಿದಾಗಷ್ಟೇ ತಿಳಿಯುತ್ತದೆ. ರವಿಚಂದ್ರನ್ ಅವರದ್ದು ಪ್ರಮುಖ ಪಾತ್ರ ಎಂದಷ್ಟೇ ಹೇಳುತ್ತೇನೆ. ಅವರ ಫೋಟೋ ಶೂಟ್ ಮಾಡಿದ್ದೇವೆ. ಬಹಳ ಚೆನ್ನಾಗಿ ಮೂಡಿ ಬಂತು. ರವಿಚಂದ್ರನ್ ಅವರು ಇದುವರೆಗೂ ಈ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿಲ್ಲ’ ಎಂದಿದ್ದಾರೆ ನಿರ್ದೇಶಕ ಪ್ರೇಮ್.
ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಪ್ರೇಮ್ ಸಿದ್ಧರಿಲ್ಲ. ‘ಈ ಸಿನಿಮಾದಲ್ಲಿ ಭಾರತದ ವಿವಿಧ ಭಾಷೆಗಳ ಪ್ರಮುಖ ಕಲಾವಿದರು ನಟಿಸಲಿದ್ದು, ಪ್ರತಿಯೊಬ್ಬರ ಪಾತ್ರವನ್ನು ಹೀಗೆ ಪರಿಚಯಿಸುತ್ತಾ ಹೋಗುತ್ತೇವೆ. ಸಿನಿಮಾದ ಬಗ್ಗೆ ಸದ್ಯಕ್ಕೆ ಬೇರೆ ಯಾವುದೇ ಮಾಹಿತಿ ನೀಡುವುದಿಲ್ಲ. ಈಗ ಏನಾದರೂ ಮಾಹಿತಿ ಹೇಳಿದರೆ ತೆರೆಮೇಲೆ ನಾವು ಹೇಳುವುದಾದರೂ ಏನು? ಯಾವ ಪಾತ್ರ ಏನು ಮಾಡುತ್ತದೆ ಎಂದು ಕೇಳಿದರೆ ಸಿನಿಮಾ ನೋಡಿ ಎಂದಷ್ಟೇ ನಾನು ಹೇಳುತ್ತೇನೆ. ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಮಹತ್ವವಂತೂ ಇರುತ್ತದೆ. ಇದಿನ್ನೂ ಆರಂಭ, ಮುಂದಿನ ದಿನಗಳಲ್ಲಿಇನ್ನೂ ಅದ್ಭುತವಾದ ಪಾತ್ರಗಳನ್ನು ಪರಿಚಯಿಸುತ್ತಾ ಹೋಗುತ್ತೇನೆ. ಜನರಿಗೆ ಕಂಪ್ಲೀಟ್ ಮನರಂಜನೆ ನೀಡಬೇಕು ಎಂಬುದಷ್ಟೇ ನನ್ನ ಉದ್ದೇಶ’ ಎಂದಿದ್ದಾರೆ ಪ್ರೇಮ್.
ಈ ಸಿನಿಮಾ ಕನ್ನಡ, ತೆಲಗು, ತಮಿಳು, ಹಿಂದಿ , ಮಲಯಾಳಂ ಭಾಷೆಗಳಲ್ಲಿ ಸಿದ್ಧವಾಗುತ್ತಿತ್ತು. ಇದಕ್ಕಾಗಿ ಧ್ರುವ ಸರ್ಜಾ ತಮ್ಮ ದೇಹತೂಕವನ್ನು ಕೊಂಚ ಕಡಿಮೆ ಮಾಡಲಿದ್ದಾರಂತೆ. ಜತೆಗೆ ಲುಕ್ ಮೇಲೂ ಕೆಲಸವಾಗುತ್ತಿದ್ದು, ಅದು ಕೂಡ ವಿಭಿನ್ನವಾಗಿರಲಿದೆ ಎಂಬುದು ಚಿತ್ರತಂಡದ ಅಭಿಪ್ರಾಯ. ವಿಲಿಯಂ ಡೇವಿಡ್ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಲಿದ್ದಾರೆ.
Director Jogi Prem Talks About Ravichandrans Role In Kd Movie.
31-01-26 11:05 pm
Bangalore Correspondent
ಸಿ.ಜೆ.ರಾಯ್ ಸಾವು ‘ಆತ್ಮಹತ್ಯೆಯೋ ಅಥವಾ ಕೊಲೆಯೋ?’, ನ...
31-01-26 10:24 pm
ಸಿ.ಜೆ. ರಾಯ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಒತ್ತಡವೇ...
30-01-26 10:37 pm
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
01-02-26 02:00 pm
HK News Desk
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
Sunetra Pawar, Maharashtra Deputy CM: ಮಹಾರಾಷ್...
31-01-26 04:56 pm
ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಕೇಳಿಬಂತು ಕಾಂ...
30-01-26 03:38 pm
31-01-26 08:40 pm
Mangalore Correspondent
ವಿಷವಾಯ್ತಾ ಪವಿತ್ರ ಗುಜ್ಜರಕೆರೆಯ ನೀರು? ಪ್ರಯೋಗಾಲಯ...
31-01-26 03:38 pm
Road Blunder ; ಪ್ರತಿ ವರ್ಷ ದೇಶದಲ್ಲಿ ಅಪಘಾತಕ್ಕೆ...
30-01-26 09:01 pm
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
31-01-26 01:33 pm
Bengaluru Staffer
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm