ಬ್ರೇಕಿಂಗ್ ನ್ಯೂಸ್
            
                        24-12-22 02:10 pm Source: Vijayakarnataka ಸಿನಿಮಾ
            ವರ್ಷದ ಕೊನೆಯ ಹಬ್ಬ ಕ್ರಿಸ್ಮಸ್ಗೆ ತಾರಾ ಲೋಕ ಸಜ್ಜಾಗಿದೆ. ಈ ತಿಂಗಳಿನ ಆರಂಭದಿಂದಲೇ ಈ ಹಬ್ಬದ ವಿವಿಧ ತಯಾರಿಯಲ್ಲಿ ನಿರತರಾಗಿರುವ ಕೆಲವು ನಟ, ನಟಿಯರು ತಮ್ಮದೇ ರೀತಿಯಲ್ಲಿ ಹಬ್ಬ ಆಚರಿಸಲು ನಿರ್ಧರಿಸಿದ್ದಾರೆ. ಕೆಲವರು ತಮ್ಮ ಕ್ರಿಸ್ಮಸ್ ಸಿದ್ಧತೆಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರೆ, ಇನ್ನು ಕೆಲವರು ತಮ್ಮ ಕ್ರಿಸ್ಮಸ್ ಲುಕ್ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಕ್ರಿಸ್ಮಸ್ ವೆಕೇಶನ್ಗೆ ಹೋಗಲು ನಿರ್ಧರಿಸಿದ್ದು, ಇನ್ನು ಕೆಲವರು ಹಬ್ಬದ ಮೊದಲೇ ಫ್ಯಾಮಿಲಿ ಗೆಟ್ಟುಗೇದರ್ ಮತ್ತು ಡಿನ್ನರ್ಗಳನ್ನು ಆಯೋಜಿಸಿದ್ದಾರೆ. ವಿವಿಧ ತಾರೆಯರ ಕ್ರಿಸ್ಮಸ್ ತಯಾರಿಯ ಝಲಕ್ ಹೀಗಿದೆ.


ಫೆಸ್ಟಿವಲ್ ವೆಕೇಶನ್
ಕ್ರಿಸ್ಮಸ್ ಸೀಸನ್ ರಜಾ ಸಮಯವೂ ಆಗಿರುವುದರಿಂದ ಕೆಲವು ತಾರೆಯರು ಈ ಸಂದರ್ಭದಲ್ಲಿ ಪ್ರವಾಸ ಹೋಗಿ ಕ್ರಿಸ್ಮಸ್ ಆಚರಿಸುತ್ತಾರೆ. ಈ ನಿಟ್ಟಿನಲ್ಲಿಈಗಾಗಲೇ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಪುತ್ರಿ ಮಾಲತಿ ಜತೆಗೆ ಕ್ರಿಸ್ಮಸ್ ವೆಕೇಶನ್ಗೆ ಹೋಗಿದ್ದಾರೆ. ಈ ಕುರಿತ ಫೋಟೊ ಶೇರ್ ಮಾಡಿರುವ ಅವರು ತಮ್ಮ ಪುಟ್ಟ ಮಗಳ ಮೊದಲ ಕ್ರಿಸ್ಮಸ್ ಹಬ್ಬವನ್ನು ಪ್ರವಾಸ ತಾಣದಲ್ಲಿಎಂಜಾಯ್ ಮಾಡಲಿದ್ದಾರೆ. ಇದೇ ರೀತಿ ನಟ ಹೃತಿಕ್ ರೋಷನ್ ತಮ್ಮ ಗಲ್ರ್ ಫ್ರೆಂಡ್ ಸಾಬಾ ಅಜಾದ್ ಮತ್ತು ಮಕ್ಕಳೊಂದಿಗೆ ಕ್ರಿಸ್ಮಸ್ ವೆಕೇಶನ್ಗೆ ತೆರಳಿದ್ದಾರೆ. ನಟಿ ಸನ್ನಿ ಲಿಯೋನ್ ಕೂಡ ತಮ್ಮ ಕುಟುಂಬದ ಜತೆಗೆ ಕ್ರಿಸ್ಮಸ್ ವೆಕೇಶನ್ ಹೋಗಿದ್ದಾರೆ.


ರೆಡ್ ಲುಕ್
ಕೆಲವು ತಾರೆಯರು ಕ್ರಿಸ್ಮಸ್ಗೆ ಸೂಕ್ತವಾಗುವ ಕೆಂಪು ಬಣ್ಣದ ಉಡುಪುಗಳಲ್ಲಿ ಫೋಟೊಶೂಟ್ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಲ್ಲಿಹಬ್ಬದ ಸಂಭ್ರಮ ಮೂಡಿಸಿದ್ದಾರೆ. ನಟಿ ಡಯಾನಾ ಪೆಂಟಿ ಕೆಂಪು ಬಣ್ಣದ ಜೆರ್ಸಿ ಧರಿಸಿ, ಕೂದಲಿಗೆ ಕೆಂಪು ಹೇರ್ ಬ್ಯಾಂಡ್ ಹಾಕಿಕೊಂಡು ಕ್ರಿಸ್ಮಸ್ ಟ್ರೀ ಎದುರು ಫೋಟೊ ತೆಗೆಸಿಕೊಂಡಿದ್ದಾರೆ. ನಟಿ ಪ್ರೀತಿ ಝಿಂಟಾ ತಮ್ಮ ಮನೆಯನ್ನು ಕ್ರಿಸ್ಮಸ್ ಟ್ರೀಯಿಂದ ಅಲಂಕರಿಸಿ ತಾವು ಕೂಡ ಸಾಂತಾಕ್ಲಾಸ್ನ ಕಾಸ್ಟ್ಯೂಮ್ ಧರಿಸಿರುವ ವಿಡಿಯೊ ಶೇರ್ ಮಾಡಿದ್ದಾರೆ. ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸಾಂತಾ ಕ್ಲಾಸ್ನಂಥ ಉಡುಪು ಧರಿಸಿ ತಮ್ಮ ಅಭಿಮಾನಿಗಳಿಗೆ ಕ್ರಿಸ್ಮಸ್ ಶುಭಾಶಯ ಕೋರಿದ್ದಾರೆ.
ಗೆಟ್ ಟುಗೇದರ್
ಟಾಲಿವುಡ್ ಸ್ಟಾರ್ಗಳಾದ ಅಲ್ಲುಅರ್ಜುನ್ ಮತ್ತು ರಾಮ್ ಚರಣ್ ತೇಜ ಕ್ರಿಸ್ಮಸ್ಗೆ ಪೂರ್ವಭಾವಿಯಾಗಿ ಫ್ಯಾಮಿಲಿ ಗೆಟ್ಟುಗೇದರ್ ಮಾಡಿದ್ದಾರೆ. ತಮ್ಮ ಮನೆಯನ್ನು ಕ್ರಿಸ್ಮಸ್ ಥೀಮ್ನಲ್ಲಿ ಅಲಂಕರಿಸಿರುವ ಅವರ ಕೆಲವು ಕುಟುಂಬ ಸದಸ್ಯರು ಕೆಂಪು ಬಣ್ಣದ ಉಡುಪುಗಳಲ್ಲಿ ಕಂಗೊಳಿಸಿದ್ದಾರೆ. ನಟಿ ರಕುಲ್ ಪ್ರೀತ್ ಮುಂತಾದವರು ಕ್ರಿಸ್ಮಸ್ ಹಬ್ಬದ ತಿನಿಸು ತಯಾರಿಸುತ್ತಿರುವ ವಿಡಿಯೊ ಶೇರ್ ಮಾಡಿದ್ದಾರೆ.
            
            
            Merry Christmas 2022 Indian Film Industry Artist Celebration.
    
            
             03-11-25 05:17 pm
                        
            
                  
                Bangalore Correspondent    
            
                    
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             03-11-25 10:47 pm
                        
            
                  
                Mangalore Correspondent    
            
                    
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
    
            
             04-11-25 02:11 pm
                        
            
                  
                Mangalore Correspondent    
            
                    
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm