ಬ್ರೇಕಿಂಗ್ ನ್ಯೂಸ್
07-12-22 02:31 pm Source: Vijayakarnataka ಸಿನಿಮಾ
ಮಾಸ್, ಹೊಡಿ ಬಡಿ ಸಿನಿಮಾಗಳು ಹೆಚ್ಚಾಗಿ ಬರುತ್ತಿರುವ ಈ ಹೊತ್ತಿನಲ್ಲಿ ಕಾಲೇಜು ಕಥೆಯೊಂದು ಸೆಟ್ಟೇರಲು ಸಜ್ಜಾಗಿದೆ. ಅದರ ಹೆಸರು ‘ಜಸ್ಟ್ ಪಾಸ್’. ಇದರಲ್ಲಿ 'ಇರುವುದೆಲ್ಲವ ಬಿಟ್ಟು' ಸಿನಿಮಾ ಖ್ಯಾತಿಯ ಶ್ರೀ ಮಹದೇವ್ ನಟಿಸುತ್ತಿದ್ದು, ರಘು ಕೆ ಎಂ ಎಂಬವರು ನಿರ್ದೇಶನ ಮಾಡುತ್ತಿದ್ದಾರೆ.
100 ಅಂಕಗಳಿಗೆ 35 ಅಂಕ ಪಡೆದರೆ ಅವರನ್ನು ಜಸ್ಟ್ ಪಾಸಾದವರು ಎಂದು ಕರೆಯುತ್ತಾರೆ. ಅಂತಹದೇ ಒಂದು ಕಥೆಯನ್ನು ನಿರ್ದೇಶಕ ರಘು ಸಿನಿಮಾ ಮಾಡಿದ್ದಾರೆ. ನಟ ಶ್ರೀ ಈ ಕಥೆಗೆ ಸೂಕ್ತವಾಗಿ ಹೊಂದಿಕೆಯಾಗುತ್ತಾರೆ ಎಂಬ ಕಾರಣಕ್ಕೆ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ. ರಘು ಕೆ ಎಂ ಈ ಮೊದಲು ‘ತರ್ಲೆ ವಿಲೇಜ್’, ‘ಪರಸಂಗ’, ‘ದೊಡ್ಡಟ್ಟಿ ಬೋರೇಗೌಡ’ ಎಂಬ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇದರಲ್ಲಿ‘ದೊಡ್ಡಟ್ಟಿ ಬೋರೇಗೌಡ’ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಪಡೆದಿತ್ತು.
‘ಜಸ್ಟ್ ಪಾಸ್ ಒಂದು ಯೂತ್ಫುಲ್ ಸಬ್ಜೆಕ್ಟ್. ಕಾಲೇಜು ಹಿನ್ನೆಲೆಯಲ್ಲಿ ಮೂಡಿ ಬರಲಿರುವ ಈ ಸಿನಿಮಾದಲ್ಲಿಇಂದಿನ ಯುವಕರ ಬದುಕಿನಲ್ಲಿ ಸಾಮಾನ್ಯವಾಗಿ ನಡೆಯುವಂತಹ ಘಟನೆಗಳಿವೆ. ಅದರ ಜತೆಗೆ ಒಂದಷ್ಟು ವಿಶೇಷ ಮನರಂಜನೆಗಳಿರುತ್ತವೆ. ನಾಯಕ ಶ್ರೀಗೆ ನಾಯಕಿಯ ಆಯ್ಕೆ ಇನ್ನೊಂದು ವಾರದಲ್ಲಿ ಆಗಲಿದೆ. ಡಿಸೆಂಬರ್ 14ರಂದು ಮುಹೂರ್ತ ನಡೆಯಲಿದೆ. ಜಸ್ಟ್ ಪಾಸ್ ಸಿನಿಮಾದಲ್ಲಿ ಹೊಸ ರೀತಿಯ, ವಿಭಿನ್ನ ನಿರೂಪಣೆಯಿದೆ' ಎಂದು ನಿರ್ದೇಶಕ ರಘು ಹೇಳಿದ್ದಾರೆ. ರಂಗಾಯಣ ರಘು, ಪ್ರಕಾಶ್ ತುಮ್ಮಿನಾಡ್, ದೀಪಕ್ ರೈ, ಸಾಧು ಕೋಕಿಲ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ.
'ಶ್ರೀರಸ್ತು ಶುಭಮಸ್ತು', 'ನೀಲಿ', 'ಚಿಟ್ಟೆಹೆಜ್ಜೆ', 'ಇಷ್ಟದೇವತೆ' ಮುಂತಾದ ಧಾರಾವಾಹಿ ಮೂಲಕ ಗಮನ ಸೆಳೆದಿದ್ದ ನಟ ಶ್ರೀ ಮಹದೇವ್, 'ಹೊಂದಿಸಿ ಬರೆಯಿರಿ', 'ಬೆಂಗಳೂರು ಬಾಯ್ಸ್' ಮುಂತಾದ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. 'ಗಜಾನನ & ಗ್ಯಾಂಗ್' ಸಿನಿಮಾ ಈ ವರ್ಷ ತೆರೆಕಂಡಿದೆ. ಇನ್ನು, ಅವರ 'ಹೊಂದಿಸಿ ಬರೆಯಿರಿ' ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ರಾಮೇನಹಳ್ಳಿ ಜಗನ್ನಾಥ್ ಆ್ಯಕ್ಷನ್-ಕಟ್ ಹೇಳಿರುವ ಈ ಸಿನಿಮಾವು ಅತೀ ಶೀಘ್ರದಲ್ಲೇ ತೆರೆಗೆ ಬರಲಿದೆ.
ಈ ಹಿಂದೆ 'ಬ್ರಹ್ಮ ವಿಷ್ಣು ಮಹೇಶ್ವರ' ಸಿನಿಮಾವನ್ನು ನಿರ್ದೇಶನ ಮಾಡಿದ್ದ ಯುವ ನಿರ್ದೇಶಕ ಸ್ವರೂಪ್ ಈಗ 'ಲೆಟ್ಸ್ ಬ್ರೇಕಪ್' ಸಿನಿಮಾ ಮಾಡುತ್ತಿದ್ದು, ಆ ಸಿನಿಮಾದಲ್ಲೂ ಶ್ರೀ ಮಹದೇವ್ ನಟಿಸುತ್ತಿದ್ದಾರೆ. ಈ ಸಿನಿಮಾದ ಸ್ಕ್ರಿಪ್ಟ್ ಪೂಜೆ ಕೂಡ ಮುಗಿದಿದೆ. 'ಲವ್ ಮಾಕ್ಟೇಲ್' ಸಿನಿಮಾ ಖ್ಯಾತಿಯ ನಟಿ ರಚನಾ ಇಂದರ್ 'ಲೆಟ್ಸ್ ಬ್ರೇಕಪ್'ನಲ್ಲಿ ಶ್ರೀ ಮಹದೇವ್ ಎದುರು ನಾಯಕಿಯಾಗಿದ್ದಾರೆ.
Actor Shri Mahadev Starrer New Movie Titled Just Pass.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 07:46 pm
HK News Staffer
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm