ಬ್ರೇಕಿಂಗ್ ನ್ಯೂಸ್
21-11-22 01:13 pm Source: Vijayakarnataka ಸಿನಿಮಾ
ಟಾಲಿವುಡ್ನಲ್ಲಿ ಸದ್ಯ ಡಬ್ಬಿಂಗ್ ಸಿನಿಮಾಗಳದ್ದೇ ಹವಾ. ಕನ್ನಡದ 'ಕಾಂತಾರ' ಸಿನಿಮಾ ತೆಲುಗು ಮಾರುಕಟ್ಟೆಯಲ್ಲಿ ಭರ್ತಿ 50 ಕೋಟಿ ರೂ. ಗಳಿಸಿದೆ. ವಿಕ್ರಮ್, ಪೊನ್ನಿಯಿನ್ ಸೆಲ್ವನ್ ಸಿನಿಮಾಗಳು ಕೂಡ ಭಾರಿ ಲಾಭ ಮಾಡಿಕೊಂಡಿವೆ. ಈ ಮಧ್ಯೆ ತೆಲುಗು ಚಿತ್ರ ನಿರ್ಮಾಪಕರ ಮಂಡಳಿ ಹೊಸದೊಂದು ರೂಲ್ಸ್ ಮಾಡಿತ್ತು. ಅದೇನೆಂದರೆ. 'ಸಂಕ್ರಾಂತಿ ಮತ್ತು ದಸರಾಗೆ ಕೇವಲ ಮೂಲ ತೆಲುಗು ಸಿನಿಮಾಗಳಿಗೆ ಮಾತ್ರ ಆದ್ಯತೆ ನೀಡಬೇಕು' ಎಂದು ಹೇಳಿದೆ. ಆದರೆ ಇದಕ್ಕೆ ತೆಲುಗಿನ ಸಿನಿಮಾ ನಿರ್ಮಾಪಕ, ನಟ ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಅವರೇ ವಿರೋಧ ವ್ಯಕ್ತಪಡಿಸಿದ್ದಾರೆ. 'ಇದು ಆಗೋ ಕೆಲಸ ಅಲ್ಲ...' ಎಂದು ಕುಟುಕಿದ್ದಾರೆ.
ಅಲ್ಲು ಅರವಿಂದ್ ಹೇಳಿದ್ದೇನು?
ಹಿಂದಿಯಲ್ಲಿ ತೆರೆಗೆ ಬರುತ್ತಿರುವ 'ಭೇಡಿಯಾ' ಸಿನಿಮಾವನ್ನು ತೆಲುಗಿನಲ್ಲಿ 'ತೊಡೆಲು' ಎಂದು ಡಬ್ ಮಾಡಿ, ರಿಲೀಸ್ ಮಾಡುತ್ತಿದ್ದಾರೆ ಅಲ್ಲು ಅರವಿಂದ್. ಈಚೆಗೆ ಸಕ್ಸಸ್ ಆಗಿರುವ 'ಕಾಂತಾರ' ಸಿನಿಮಾವನ್ನು ತೆಲುಗಿನಲ್ಲಿ ರಿಲೀಸ್ ಯಶಸ್ಸು ಕಂಡಿರುವ ಅಲ್ಲು ಅರವಿಂದ್, ಈಗ 'ಭೇಡಿಯಾ' ಸಿನಿಮಾವನ್ನು ದೊಡ್ಡಮಟ್ಟದಲ್ಲಿ ತೆರೆಗೆ ತರಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇದರ ಪ್ರೆಸ್ಮೀಟ್ನಲ್ಲಿ ತೆಲುಗು ಚಿತ್ರ ನಿರ್ಮಾಪಕರ ಮಂಡಳಿಯ ನಿರ್ಧಾರದ ಬಗ್ಗೆ ಪ್ರಶ್ನೆ ಕೇಳಿಬಂತು. ಅದಕ್ಕೆ ಉತ್ತರಿಸಿದ ಅಲ್ಲು ಅರವಿಂದ್, 'ಇದು ಆಗೋ ಕೆಲಸ ಅಲ್ಲ...' ಎಂದರು.

ದಿಲ್ ರಾಜುಗೆ ಸಂಕಷ್ಟ!
ಖ್ಯಾತ ನಿರ್ಮಾಪಕ ದಿಲ್ ರಾಜು ಕೆಲವು ವರ್ಷಗಳ ಹಿಂದೆ ಹೇಳಿದ್ದ, ‘ಹಬ್ಬದ ಸೀಸನ್ನ ಪ್ರಯೋಜನವನ್ನು ಡಬ್ಬಿಂಗ್ ಸಿನಿಮಾಗಳು ಮಾತ್ರ ಪಡೆದುಕೊಳ್ಳುತ್ತಿದ್ದು, ಡಬ್ಬಿಂಗ್ ಸಿನಿಮಾಗಳಿಗೆಯೇ ಹೆಚ್ಚಿನ ಚಿತ್ರಮಂದಿರಗಳನ್ನು ನೀಡಲಾಗುತ್ತಿದೆ. ಈ ಸಮಯದಲ್ಲಿ ಕೇವಲ ತೆಲುಗು ಸಿನಿಮಾಗಳಿಗೆ ಮಾತ್ರ ಆದ್ಯತೆ ನೀಡಿ, ಆಮೇಲೆ ಸ್ಪೇಸ್ ಮಿಕ್ಕಿದ್ದರೆ ಮಾತ್ರ ತೆಲುಗು ಡಬ್ಬಿಂಗ್ ಸಿನಿಮಾಗೆ ಕೊಡಬೇಕು’ ಎಂಬ ಮಾತನ್ನು ಉಲ್ಲೇಖಿಸಿರುವ ತೆಲುಗು ಚಿತ್ರ ನಿರ್ಮಾಪಕರ ಮಂಡಳಿ, ಈ ರೂಲ್ಸ್ ಮಾಡಿದೆ. ಆದರೆ ಈ ನಿಯಮ ಜಾರಿಯಾದರೆ ಮೊದಲು ತೊಂದರೆ ಅನುಭವಿಸುವುದು ದಿಲ್ ರಾಜು!
'ದಳಪತಿ' ವಿಜಯ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ ಕಾಲಿವುಡ್ನ ‘ವಾರಿಸು’ಸಿನಿಮಾವನ್ನು ದಿಲ್ ರಾಜು ನಿರ್ಮಿಸಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ ಸಂಕ್ರಾಂತಿ ಹಬ್ಬಕ್ಕೆ ಈ ಸಿನಿಮಾವನ್ನು ರಿಲೀಸ್ ಮಾಡುವುದು ದಿಲ್ ರಾಜು ಪ್ಲ್ಯಾನ್. ಆದರೆ 'ವಾರಿಸು' ತಮಿಳಿನಲ್ಲಿ ತಯಾರಾಗಿ, ತೆಲುಗಿಗೆ 'ವಾರಸುಡು' ಎಂದು ಡಬ್ ಆಗಿದೆ. ಇದು ಡಬ್ ಸಿನಿಮಾವಾಗಿರುವುದರಿಂದ ಟಾಲಿವುಡ್ನಲ್ಲಿ ರಿಲೀಸ್ ಮಾಡಲ ದಿಲ್ ರಾಜುಗೆ ಕಷ್ಟವಾಗಬಹುದು. ಆದರೆ ಅಲ್ಲು ಅರವಿಂದ್ ಅವರಂತಹ ದೊಡ್ಡ ನಿರ್ಮಾಪಕರೇ ಇದು ಆಗೋ ಕೆಲಸ ಅಲ್ಲ ಎಂದು ಕಾಮೆಂಟ್ ಮಾಡಿರುವುದರಿಂದ, ದಿಲ್ ರಾಜುಗೆ ದೊಡ್ಡ ಸಪೋರ್ಟ್ ಸಿಕ್ಕಂತೆಯೇ ಆಗಿದೆ. ಮುಂದಿನ ದಿನಗಳಲ್ಲಿ ಇದು ಯಾವ ರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕು.
ತೆಲುಗು ಸಿನಿಮಾಗಳ ಹೆಚ್ಚುತ್ತಿರುವ ನಿರ್ಮಾಣ ವೆಚ್ಚ, ನಿರ್ಮಾಪಕರ ಕ್ಷೇಮಾಭಿವೃದ್ಧಿ ಮತ್ತು ತೆಲುಗು ಚಿತ್ರೋದ್ಯಮವನ್ನು ಉಳಿಸುವ ಉದ್ದೇಶದಿಂದ ‘ಸಂಕ್ರಾಂತಿ ಮತ್ತು ದಸರಾಗೆ ಕೇವಲ ಮೂಲ ತೆಲುಗು ಸಿನಿಮಾಗಳಿಗೆ ಮಾತ್ರ ಆದ್ಯತೆ ನೀಡಬೇಕು’ ಎಂಬ ನಿರ್ಣಯವನ್ನು ಟಾಲಿವುಡ್ ನಿರ್ಮಾಪಕರ ಮಂಡಳಿ ಕೈಗೊಂಡಿತ್ತು.
Kantara Telugu Movie Distributor Allu Aravind Speaks About Telugu Cinema Dubbing Issue.
31-07-26 01:22 pm
HK News Staffer
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ ; ಸಂಸದ ಶಶಿಕಾಂತ...
29-07-26 01:52 pm
31-07-26 01:26 pm
HK News Staffer
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
31-07-26 10:58 pm
HK News Staffer
Mangalore Help Deeksha: ದಿಢೀರ್ ಮೆದುಳು ಜ್ವರಕ್ಕ...
31-07-26 07:03 pm
ರಾಜಸ್ಥಾನದಿಂದ ಮಂಗಳೂರಿಗೆ ಬಂದು ಬೀದಿಯಲ್ಲಿ ಅಲೆದಾಡು...
30-07-26 07:51 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
31-07-26 10:53 pm
HK News Staffer
ಪಣಂಬೂರು ತೋಟ ಬೆಂಗ್ರೆ ಬೀಚ್ ನಲ್ಲಿ ಸಾಮೂಹಿಕ ಅತ್ಯಾಚ...
31-07-26 09:47 pm
Kundapura Murder, Latest Update: ಹಣಕಾಸು ದ್ವೇಷ...
31-07-26 08:30 pm
ಜೀವಾವಧಿ ಶಿಕ್ಷೆಗೀಡಾಗಿದ್ದ ವಿನಯ್ ಕುಲಕರ್ಣಿಗೆ ಹೈಕೋ...
31-07-26 06:01 pm
ಕಾವೂರಿನಲ್ಲಿ ಮದರಂಗಿ ಶಾಸ್ತ್ರದಲ್ಲಿ ತಲವಾರು ಏಟು ;...
31-07-26 02:21 pm