ಬ್ರೇಕಿಂಗ್ ನ್ಯೂಸ್
11-11-22 02:35 pm Source: Vijayakarnataka ಸಿನಿಮಾ
ಕ್ರಿಸ್ಮಸ್ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದೆ. ಜಗತ್ತಿನೆಲ್ಲೆಡೆ ಹಬ್ಬಕ್ಕೆ ಸಿದ್ಧತೆ ಜೋರಾಗಿದೆ. ಮೈಸೂರಿನಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ಸಕಲ ತಯಾರಿ ಮಾಡಿಕೊಳ್ಳಲಾಗ್ತಿದ್ದು, ಪ್ರತಿಷ್ಠಿತ ಹೋಟೆಲ್ ಸಂದೇಶ್ ದಿ ಪ್ರಿನ್ಸ್ ಹೋಟೆಲ್ನಲ್ಲಿ ಕೇಕ್ ತಯಾರಿಕೆಗೆ ಚಾಲನೆ ನೀಡಲಾಗಿದೆ. ಮೈಸೂರಿನಲ್ಲಿ ನಡೆದ ಕ್ರಿಸ್ಮಸ್ ಕೇಕ್ ಮಿಕ್ಸಿಂಗ್ ಸಮಾರಂಭದಲ್ಲಿ ಬಹುಭಾಷಾ ಖ್ಯಾತ ನಟ ಪ್ರಭುದೇವ ( Prabhu Deva ) ಭಾಗಿಯಾಗಿದ್ರು.
ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್ನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ನಡೆದ ಕ್ರಿಸ್ ಮಸ್ ಕೇಕ್ ಮಿಕ್ಸಿಂಗ್ ಸಮಾರಂಭದಲ್ಲಿ ಈ ಬಾರಿ ನಟ ಪ್ರಭುದೇವ ಭಾಗಿಯಾಗಿದ್ರು. ವಿವಿಧ ಬಗೆಯ ಡ್ರೈ ಫ್ರುಟ್ಸ್ಗಳನ್ನು ಮಾತ್ರ ಮಿಕ್ಸ್ ಮಾಡಿದ ನಟ ಪ್ರಭುದೇವ ಎಲ್ಲರ ಗಮನಸೆಳೆದರು. ಆಲ್ಕೋಹಾಲ್ ಮಿಶ್ರಿತ ವೈನ್ ಮಿಕ್ಸಿಂಗ್ ಮಾಡದ ನಟ ಪ್ರಭುದೇವ ಮಿಕ್ಸಿಂಗ್ನಿಂದ ದೂರ ಉಳಿದರು.
ಆಲ್ಕೋಹಾಲ್ ಮಿಶ್ರಿತ ಮದ್ಯದ ಬಾಟಲಿಗಳನ್ನು ಮುಟ್ಟದೇ ಸುಮ್ಮನೇ ನೋಡುತ್ತಾ ನಿಂತ ನಟ ಪ್ರಭುದೇವ ಕೇಕ್ ಮಿಕ್ಸಿಂಗ್ ನೋಡಿ ಖುಷಿಪಟ್ಟರು .ಸಂದೇಶ್ ದಿ ಪ್ರಿನ್ಸ್ ಹೋಟೆಲ್ ಮಾಲೀಕ ಹಾಗು ವಿಧಾನ ಪರಿಷತ್ ನ ಮಾಜಿ ಸದಸ್ಯ ಸಂದೇಶ್ ನಾಗರಾಜ್ ಹಾಗು ಅವರ ಪುತ್ರ ಸೇರಿದಂತೆ ಕುಟುಂಬ ಸದಸ್ಯರು, ಹೋಟೆಲ್ನ ಸಿಬ್ಬಂದಿಗಳು ಕ್ರಿಸ್ಮಸ್ ಕೇಕ್ ಮಿಕ್ಸಿಂಗ್ನಲ್ಲಿ ಭಾಗಿಯಾಗಿದ್ರು.
ಕೇಕ್ ಮಿಕ್ಸಿಂಗ್ ಸಮಾರಂಭ ಮುಗಿಯುತ್ತಿದ್ದಂತೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಟ ಪ್ರಭುದೇವ ನಿರಾಕರಣೆ ಮಾಡಿದ್ರು. ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಪ್ರಭುದೇವ ಹೋಟೆಲ್ನಿಂದ ನಿರ್ಗಮಿಸಿದರು.
ಸಾಲು ಸಾಲು ಸಿನಿಮಾದಲ್ಲಿ ಪ್ರಭು ಬ್ಯುಸಿ..!
ಸಂದೇಶ್ ನಾಗರಾಜ್ ನಿರ್ಮಾಣದ ಉಲ್ಫ್ ತಮಿಳು ಚಿತ್ರದಲ್ಲಿ ನಟ ಪ್ರಭುದೇವ ನಾಯಕನಾಗಿ ನಟಿಸುತ್ತಿದ್ದಾರೆ. ಉಲ್ಫ್ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ. ಹಾಗಾಗಿ ಪ್ರಭುದೇವ ಕುಟುಂಬ ಸದಸ್ಯರನ್ನು ನೋಡಲು ಮೈಸೂರಿಗೆ ಬರುವ ವಿಚಾರ ತಿಳಿದು ಈ ಬಾರಿಯ ಕ್ರಿಸ್ ಮಸ್ ಕೇಕ್ ಮಿಕ್ಸಿಂಗ್ಗೆ ಅವರನ್ನೇ ಆಹ್ವಾನಿಸಲಾಗಿತ್ತು. ನಟ ಪ್ರಭುದೇವ ನಟನೆಯ ಉಲ್ಫ್ ತಮಿಳುಚಿತ್ರದ ಜೊತೆ ಜೊತೆಗೆ, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ನಟಿಸುತ್ತಿರುವ ಘೋಸ್ಟ್ ಕನ್ನಡ ಚಿತ್ರದ ಚಿತ್ರೀಕರಣವು ನಡೆಯುತ್ತಿದೆ. ಇದು ಕೂಡ ಸಂದೇಶ್ ನಾಗರಾಜ್ ಅವರೇ ನಿರ್ಮಿಸುತ್ತಿದ್ದಾರೆ.
ರಾಜಕೀಯದಿಂದ ಸಂದೇಶ್ ನಾಗರಾಜ್ ದೂರ.!
ಸದ್ಯ ಸಂದೇಶ್ ನಾಗರಾಜ್ ರಾಜಕೀಯದಿಂದ ದೂರ ಇದ್ದಾರೆ. ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಒಟ್ಟೊಟ್ಟಿಗೆ 2-3ಸಿನಿಮಾಗಳನ್ನ ನಿರ್ಮಾಣ ಮಾಡ್ತಿದ್ದಾರೆ. ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ.
Prabhudeva Joins Cake Mixing Ceremony At Mysuru.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 07:46 pm
HK News Staffer
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm