ಬ್ರೇಕಿಂಗ್ ನ್ಯೂಸ್
11-11-22 02:35 pm Source: Vijayakarnataka ಸಿನಿಮಾ
ಕ್ರಿಸ್ಮಸ್ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದೆ. ಜಗತ್ತಿನೆಲ್ಲೆಡೆ ಹಬ್ಬಕ್ಕೆ ಸಿದ್ಧತೆ ಜೋರಾಗಿದೆ. ಮೈಸೂರಿನಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ಸಕಲ ತಯಾರಿ ಮಾಡಿಕೊಳ್ಳಲಾಗ್ತಿದ್ದು, ಪ್ರತಿಷ್ಠಿತ ಹೋಟೆಲ್ ಸಂದೇಶ್ ದಿ ಪ್ರಿನ್ಸ್ ಹೋಟೆಲ್ನಲ್ಲಿ ಕೇಕ್ ತಯಾರಿಕೆಗೆ ಚಾಲನೆ ನೀಡಲಾಗಿದೆ. ಮೈಸೂರಿನಲ್ಲಿ ನಡೆದ ಕ್ರಿಸ್ಮಸ್ ಕೇಕ್ ಮಿಕ್ಸಿಂಗ್ ಸಮಾರಂಭದಲ್ಲಿ ಬಹುಭಾಷಾ ಖ್ಯಾತ ನಟ ಪ್ರಭುದೇವ ( Prabhu Deva ) ಭಾಗಿಯಾಗಿದ್ರು.
ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್ನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ನಡೆದ ಕ್ರಿಸ್ ಮಸ್ ಕೇಕ್ ಮಿಕ್ಸಿಂಗ್ ಸಮಾರಂಭದಲ್ಲಿ ಈ ಬಾರಿ ನಟ ಪ್ರಭುದೇವ ಭಾಗಿಯಾಗಿದ್ರು. ವಿವಿಧ ಬಗೆಯ ಡ್ರೈ ಫ್ರುಟ್ಸ್ಗಳನ್ನು ಮಾತ್ರ ಮಿಕ್ಸ್ ಮಾಡಿದ ನಟ ಪ್ರಭುದೇವ ಎಲ್ಲರ ಗಮನಸೆಳೆದರು. ಆಲ್ಕೋಹಾಲ್ ಮಿಶ್ರಿತ ವೈನ್ ಮಿಕ್ಸಿಂಗ್ ಮಾಡದ ನಟ ಪ್ರಭುದೇವ ಮಿಕ್ಸಿಂಗ್ನಿಂದ ದೂರ ಉಳಿದರು.
ಆಲ್ಕೋಹಾಲ್ ಮಿಶ್ರಿತ ಮದ್ಯದ ಬಾಟಲಿಗಳನ್ನು ಮುಟ್ಟದೇ ಸುಮ್ಮನೇ ನೋಡುತ್ತಾ ನಿಂತ ನಟ ಪ್ರಭುದೇವ ಕೇಕ್ ಮಿಕ್ಸಿಂಗ್ ನೋಡಿ ಖುಷಿಪಟ್ಟರು .ಸಂದೇಶ್ ದಿ ಪ್ರಿನ್ಸ್ ಹೋಟೆಲ್ ಮಾಲೀಕ ಹಾಗು ವಿಧಾನ ಪರಿಷತ್ ನ ಮಾಜಿ ಸದಸ್ಯ ಸಂದೇಶ್ ನಾಗರಾಜ್ ಹಾಗು ಅವರ ಪುತ್ರ ಸೇರಿದಂತೆ ಕುಟುಂಬ ಸದಸ್ಯರು, ಹೋಟೆಲ್ನ ಸಿಬ್ಬಂದಿಗಳು ಕ್ರಿಸ್ಮಸ್ ಕೇಕ್ ಮಿಕ್ಸಿಂಗ್ನಲ್ಲಿ ಭಾಗಿಯಾಗಿದ್ರು.
ಕೇಕ್ ಮಿಕ್ಸಿಂಗ್ ಸಮಾರಂಭ ಮುಗಿಯುತ್ತಿದ್ದಂತೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಟ ಪ್ರಭುದೇವ ನಿರಾಕರಣೆ ಮಾಡಿದ್ರು. ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಪ್ರಭುದೇವ ಹೋಟೆಲ್ನಿಂದ ನಿರ್ಗಮಿಸಿದರು.
ಸಾಲು ಸಾಲು ಸಿನಿಮಾದಲ್ಲಿ ಪ್ರಭು ಬ್ಯುಸಿ..!
ಸಂದೇಶ್ ನಾಗರಾಜ್ ನಿರ್ಮಾಣದ ಉಲ್ಫ್ ತಮಿಳು ಚಿತ್ರದಲ್ಲಿ ನಟ ಪ್ರಭುದೇವ ನಾಯಕನಾಗಿ ನಟಿಸುತ್ತಿದ್ದಾರೆ. ಉಲ್ಫ್ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ. ಹಾಗಾಗಿ ಪ್ರಭುದೇವ ಕುಟುಂಬ ಸದಸ್ಯರನ್ನು ನೋಡಲು ಮೈಸೂರಿಗೆ ಬರುವ ವಿಚಾರ ತಿಳಿದು ಈ ಬಾರಿಯ ಕ್ರಿಸ್ ಮಸ್ ಕೇಕ್ ಮಿಕ್ಸಿಂಗ್ಗೆ ಅವರನ್ನೇ ಆಹ್ವಾನಿಸಲಾಗಿತ್ತು. ನಟ ಪ್ರಭುದೇವ ನಟನೆಯ ಉಲ್ಫ್ ತಮಿಳುಚಿತ್ರದ ಜೊತೆ ಜೊತೆಗೆ, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ನಟಿಸುತ್ತಿರುವ ಘೋಸ್ಟ್ ಕನ್ನಡ ಚಿತ್ರದ ಚಿತ್ರೀಕರಣವು ನಡೆಯುತ್ತಿದೆ. ಇದು ಕೂಡ ಸಂದೇಶ್ ನಾಗರಾಜ್ ಅವರೇ ನಿರ್ಮಿಸುತ್ತಿದ್ದಾರೆ.
ರಾಜಕೀಯದಿಂದ ಸಂದೇಶ್ ನಾಗರಾಜ್ ದೂರ.!
ಸದ್ಯ ಸಂದೇಶ್ ನಾಗರಾಜ್ ರಾಜಕೀಯದಿಂದ ದೂರ ಇದ್ದಾರೆ. ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಒಟ್ಟೊಟ್ಟಿಗೆ 2-3ಸಿನಿಮಾಗಳನ್ನ ನಿರ್ಮಾಣ ಮಾಡ್ತಿದ್ದಾರೆ. ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ.
Prabhudeva Joins Cake Mixing Ceremony At Mysuru.
31-07-26 01:22 pm
HK News Staffer
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ ; ಸಂಸದ ಶಶಿಕಾಂತ...
29-07-26 01:52 pm
31-07-26 01:26 pm
HK News Staffer
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
31-07-26 10:58 pm
HK News Staffer
Mangalore Help Deeksha: ದಿಢೀರ್ ಮೆದುಳು ಜ್ವರಕ್ಕ...
31-07-26 07:03 pm
ರಾಜಸ್ಥಾನದಿಂದ ಮಂಗಳೂರಿಗೆ ಬಂದು ಬೀದಿಯಲ್ಲಿ ಅಲೆದಾಡು...
30-07-26 07:51 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
31-07-26 10:53 pm
HK News Staffer
ಪಣಂಬೂರು ತೋಟ ಬೆಂಗ್ರೆ ಬೀಚ್ ನಲ್ಲಿ ಸಾಮೂಹಿಕ ಅತ್ಯಾಚ...
31-07-26 09:47 pm
Kundapura Murder, Latest Update: ಹಣಕಾಸು ದ್ವೇಷ...
31-07-26 08:30 pm
ಜೀವಾವಧಿ ಶಿಕ್ಷೆಗೀಡಾಗಿದ್ದ ವಿನಯ್ ಕುಲಕರ್ಣಿಗೆ ಹೈಕೋ...
31-07-26 06:01 pm
ಕಾವೂರಿನಲ್ಲಿ ಮದರಂಗಿ ಶಾಸ್ತ್ರದಲ್ಲಿ ತಲವಾರು ಏಟು ;...
31-07-26 02:21 pm