ಬ್ರೇಕಿಂಗ್ ನ್ಯೂಸ್
28-09-22 01:27 pm Source: Vijayakarnataka ಸಿನಿಮಾ
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ಏಕಕಾಲಕ್ಕೆ ಸ್ಯಾಂಡಲ್ವುಡ್ ಮತ್ತು ಟಾಲಿವುಡ್ಗೆ ಎಂಟ್ರಿ ನೀಡಿರುವುದು ಗೊತ್ತೇ ಇದೆ. ಕಿರೀಟಿ ಹೀರೋ ಆಗಿರುವ ಈ ದ್ವಿಭಾಷಾ ಸಿನಿಮಾವನ್ನು 'ಮಯಾಬಜಾರ್' ಸಿನಿಮಾ ಖ್ಯಾತಿಯ ರಾಧಕೃಷ್ಣ ರೆಡ್ಡಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾ ಶುರುವಾಗಿ 5-6 ತಿಂಗಳು ಕಳೆದರೂ, ಈ ಚಿತ್ರದ ಟೈಟಲ್ ಏನು ಅನ್ನೋದು ಮಾತ್ರ ಯಾರಿಗೂ ಬಹಿರಂಗಗೊಂಡಿರಲಿಲ್ಲ. ಪ್ರೊಡಕ್ಷನ್ ನಂ.15 ಎಂದು ತಾತ್ಕಾಲಿಕ ಟೈಟಲ್ನಲ್ಲಿ ಚಿತ್ರದ ಕೆಲಸಗಳು ಸಾಗಿದ್ದವು. ಇದೀಗ ಚಿತ್ರದ ಟೈಟಲ್ ಲಾಂಚ್ ಮಾಡುವ ಸಮಯ ಬಂದಿದೆ. ಹೌದು, ಇದೇ ಸೆ.29ರಂದು ಕಿರೀಟಿ ಹುಟ್ಟುಹಬ್ಬ. ಆ ಸಲುವಾಗಿ, ಅಂದೇ ಟೈಟಲ್ ಲಾಂಚ್ ಮಾಡೋಕೆ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.
ಸೆ.29ರ ಸಂಹೆ 6.39ಕ್ಕೆ ಚಿತ್ರದ ಟೈಟಲ್ ಲಾಂಚ್ ವಿಡಿಯೋವನ್ನು ರಿಲೀಸ್ ಮಾಡಲು ಚಿತ್ರತಂಡ ರೆಡಿ ಆಗಿದೆ. ಆ ಮೂಲಕ ಇಷ್ಟು ದಿನಗಳವರೆಗೂ ಇದ್ದ ಕುತೂಹಲಕ್ಕೆ ತೆರೆಬೀಳಲಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಎರಡೂ ಭಾಷೆಗೆ ಹೊಂದಿಕೆ ಆಗುವಂತಹ ಶೀರ್ಷಿಕೆ ಇರಲಿದೆಯೇ ಎಂಬ ಪ್ರಶ್ನೆ ಸದ್ಯ ಎಲ್ಲರಲ್ಲೂ ಇದೆ.
ತೆಲುಗಿನಲ್ಲಿ 'ಈಗ', 'ಲೆಜೆಂಡ್', 'ಯುದ್ಧಂ ಶರಣಂ' ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಸಾಯಿ ಕೊರ್ರಪಾಟಿ (Sai Korrapati) ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ಅವರ ವರಾಹಿ ಬ್ಯಾನರ್ನ 15ನೇ ಸಿನಿಮಾ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಈ ಸಿನಿಮಾ ತೆರೆಗೆ ಬರಲಿದ್ದು, ಬಿಗ್ ಬಜೆಟ್ನಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ತೆಲುಗಿನ ದೊಡ್ಡ ದೊಡ್ಡ ತಂತ್ರಜ್ಞರೇ ಈ ಸಿನಿಮಾಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಿಗ್ ಪ್ರಾಜೆಕ್ಟ್ಗೆ ಛಾಯಾಗ್ರಾಹಕರಾಗಿ 'ಈಗ', 'ಬಾಹುಬಲಿ', 'ಆರ್ಆರ್ಆರ್' ಸಿನಿಮಾಗಳ ಖ್ಯಾತಿಯ ಛಾಯಾಗ್ರಾಹಕ ಸೆಂಥಿಲ್ಕುಮಾರ್ ಕೆಲಸ ಮಾಡಲಿದ್ದಾರೆ. 'ಮಗಧೀರ', 'ಈಗ', 'ಊಸರವಳ್ಳಿ' ಮುಂತಾದ ಸೂಪರ್ ಹಿಟ್ ತೆಲುಗು ಸಿನಿಮಾಗಳಿಗೆ ಕಲಾ ನಿರ್ದೇಶನ ಮಾಡಿರುವ ರವೀಂದರ್ ಈ ಸಿನಿಮಾದ ಕಲಾ ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ಸದ್ಯ ಭಾರತದ ಸೆನ್ಸೇಷನಲ್ ಮ್ಯೂಸಿಕ್ ಡೈರೆಕ್ಟರ್ ಎನಿಸಿಕೊಂಡಿರುವ ದೇವಿಶ್ರೀ ಪ್ರಸಾದ್ (Devi Sri Prasad) ಈ ಸಿನಿಮಾದ ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಇನ್ನು ಭಾರತದ ಬಹುಬೇಡಿಕೆಯ ಸ್ಟಂಟ್ ಮಾಸ್ಟರ್ ಪೀಟರ್ ಹೇನ್ ಕೂಡ ಈ ಸಿನಿಮಾಗೆ ಕೆಲಸ ಮಾಡಲಿದ್ದಾರೆ. ಈ ಹಿಂದೆ ಕನ್ನಡದಲ್ಲಿ ಅವರು 'ರನ್ನ', 'ನಟಸಾರ್ವಭೌಮ', 'ಸತ್ಯ ಇನ್ ಲವ್' ಸಿನಿಮಾಗಳಿಗೆ ಅವರು ಫೈಟ್ ಮಾಸ್ಟರ್ ಆಗಿ ಕೆಲಸ ಮಾಡಿದ್ದರು.
ಮುಖ್ಯಪಾತ್ರದಲ್ಲಿ ರವಿಚಂದ್ರನ್
ಕಿರೀಟಿಗೆ ನಾಯಕಿಯಾಗಿ ಈ ಸಿನಿಮಾದಲ್ಲಿ ಶ್ರೀಲೀಲಾ ನಟಿಸುತ್ತಿದ್ದು, 'ಕ್ರೇಜಿ ಸ್ಟಾರ್' ರವಿಚಂದ್ರನ್ ಒಂದು ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. 'ಸತ್ಯ ಇನ್ ಲವ್' ಸಿನಿಮಾದಲ್ಲಿ ಬಣ್ಣ ಹಚ್ಚಿದ್ದ ಒಂದು ಕಾಲದ ಸ್ಟಾರ್ ನಟಿ ಜೆನಿಲಿಯಾ, ಇದೀಗ ಈ ಕಿರೀಟಿ ಸಿನಿಮಾದ ಮೂಲಕ ದಕ್ಷಿಣ ಭಾರತಕ್ಕೆ ಮರಳಿದ್ದಾರೆ. ಉಳಿದಂತೆ ಯಾರೆಲ್ಲ ಇದ್ದಾರೆ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.
Janardhana Reddys Son Kireeti And Sreeleela Starrer New Movie Title Will Be Revealed On September 29th.
15-08-25 03:20 pm
Bangalore Correspondent
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
Home Minister Parameshwar: ದ್ವೇಷ ಭಾಷಣ ಮಾಡುವವರ...
14-08-25 03:51 pm
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
15-08-25 01:32 pm
HK News Desk
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
14-08-25 10:29 pm
Mangalore Correspondent
SCDCC Bank Launches Special Independence Day...
14-08-25 01:12 pm
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
14-08-25 05:31 pm
Bangalore Correspondent
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm