ಬ್ರೇಕಿಂಗ್ ನ್ಯೂಸ್
08-08-20 10:05 am Headline Karnataka News Network ನ್ಯೂಸ್ View
ಔರಂಗಾಬಾದ್, ಆಗಸ್ಟ್ 08: ಕೊರೊನಾ ಎಂಬ ಮಾಹಾಮಾರಿ ವಿಶ್ವದಾದ್ಯಂತ ತಲ್ಲಣ ಸೃಷ್ಟಿಸಿದೆ. ಈ ಮಹಾಮಾರಿ ತಂದಿಟ್ಟ ಸಂಕಷ್ಟದ ಸ್ಥಿತಿ ಜೀವನದ ಪಾಠವನ್ನೂ ಕಲಿಸಿದೆ. ಲಾಕ್ ಡೌನ್ ಸಂದರ್ಭದಲ್ಲಿ ಜೀವನದ ಪ್ರತಿ ಹಂತದಲ್ಲಿ ಸಂಬಂಧಗಳ ಮಹತ್ವವನ್ನು ಮನವರಿಕೆ ಮಾಡಿಸಿದೆ. ಒಡನಾಟವನ್ನು ಹೆಚ್ಚಿಸಿದೆ. ಇನ್ನೊಂದು ಕಡೆ ಕೆಲ ಸಂಬಂಧಗಳ ಮುಖವಾಡವನ್ನೂ ಕಳಚಿಟ್ಟಿದೆ.
ಕೊರೊನಾ ಸೋಂಕು ತಗುಲಿದೆ ಎಂಬ ಕಾರಣಕ್ಕೆ ಕೆಲ ಅನ್ಯೋನ್ಯ ಸಂಬಂಧಗಳೇ ದೂರವಾಗಿದೆ. ಕೊರೊನಾ ಸೋಂಕು ತಗುಲಿದೆ ಎಂಬ ಕಾರಣಕ್ಕೆ ತನ್ನ ಹೆತ್ತ ತಾಯಿಯನ್ನೇ ಮಗನೊಬ್ಬ ಕಾಡಿಗೆ ಬಿಟ್ಟು ಬಂದ ಹೃದಯ ವಿದ್ರಾವಕ ಘಟನೆ ಔರಂಗಾಬಾದ್ ನಲ್ಲಿ ಬೆಳಕಿಗೆ ಬಂದಿದೆ. ಕೊರೊನಾ ಬಂದವರನ್ನು ಸುತ್ತಮುತ್ತಲಿನ ಜನರು ಶತ್ರುಗಳಂತೆ ನೋಡ್ತಿದ್ದಾರೆ .ಈ ಘಟನೆಯಲ್ಲಿ ಮಗನೇ ತನ್ನ ತಾಯಿಯನ್ನು ಶತ್ರುವಂತೆ ನೋಡಿದ್ದಾನೆ.

ಕೊರೊನಾ ಚಿಕಿತ್ಸೆಗೆ ಹೆಚ್ಚು ವೆಚ್ಚವಾಗುತ್ತದೆ ಎನ್ನುವ ಕಾರಣ ನೀಡಿ ಅನೇಕರು ಕೊರೊನಾ ಬಂದಿರುವುದನ್ನೇ ಮುಚ್ಚಿಡುತ್ತಿದ್ದಾರೆ. ಇದೇ ಕಾರಣಕ್ಕೆ ಚಿಕಿತ್ಸೆಗೆ ಹೆಚ್ಚು ವೆಚ್ಚವಾಗುತ್ತದೆ ಎಂದು
ತನ್ನ 90 ವರ್ಷದ ತಾಯಿಗೆ ಕೊರೊನಾ ಎಂಬುದು ಗೊತ್ತಾಗ್ತಿದ್ದಂತೆ ಮಗ ಆಕೆಯನ್ನು ಕಾಡಿನಲ್ಲಿ ಬಿಟ್ಟು ಬಂದಿದ್ದಾನೆ.
ಕಾಡಿನಲ್ಲಿ ವಯೋವೃದ್ಧೆ ಒದ್ದಾಡುತ್ತಿರುವುದು ಕಂಡು ಬಂದಿದೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ವೃದ್ಧೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ವೃದ್ಡೆಗೆ ಕೊರೊನಾ ಇರೋ ವಿಷ್ಯ ಗೊತ್ತಾಗ್ತಿದ್ದಂತೆ ಮನೆಯವರು ವೃದ್ಧೆಯನ್ನು ಮನೆಯಲ್ಲಿ ಇಟ್ಟುಕೊಳ್ಳಲು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾಯಿಯನ್ನು ಬೆಡ್ ಶೀಟ್ ನಲ್ಲಿ ಸುತ್ತಿ ಕಾಡಿನಲ್ಲಿ ಮಗ ಬಿಟ್ಟು ಹೋಗಿರುವುದು ಮನುಷ್ಯನ ಮಾನವೀಯ ಗುಣವನ್ನೇ ಅಣಕಿಸಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವೃದ್ಧೆಯ ಕುಟುಂಬಸ್ಥರ ಹುಡುಕಾಟ ಶುರು ಮಾಡಿದ್ದಾರೆ.
17-03-26 08:45 pm
HK News Staffer
ಸತತ 4 ದಿನ ಬ್ಯಾಂಕ್ ರಜೆ ಅಲರ್ಟ್ ; EMI, ಚೆಕ್ ಕೆಲ...
17-03-26 12:09 pm
ಮಂಜೇಶ್ವರ ಮತಕ್ಷೇತ್ರ ; ಎಕೆಎಂ ಅಶ್ರಫ್ ವಿರುದ್ಧ ಮತ್...
16-03-26 05:52 pm
ಐಎಎಸ್ ಅಧಿಕಾರಿಯೆಂದು ಪೋಸು ಕೊಟ್ಟು ಜನಸಾಮಾನ್ಯರಿಗೆ,...
16-03-26 03:36 pm
Chitradurga Accident: ಚಿತ್ರದುರ್ಗದಲ್ಲಿ ಭೀಕರ ಅಪ...
15-03-26 04:27 pm
16-03-26 11:05 pm
Mangaluru Staffee
ಆರೆಸ್ಸೆಸ್ ಮತ್ತು ಗುಪ್ತಚರ ಸಂಸ್ಥೆ 'ರಾ' ಬ್ಯಾನ್ ಮಾ...
16-03-26 09:30 pm
ಇರಾನ್ ದಾಳಿ ಬಗ್ಗೆ ಎಐ ವಿಡಿಯೋ ಆಧರಿತ ಸುಳ್ಳು ಸುದ್ದ...
16-03-26 02:44 pm
ಯುಪಿಎಸ್ಸಿ ಪಾಸ್, ಐಎಎಸ್ ಅಧಿಕಾರಿ ಆಗುತ್ತೇನೆಂದು ನಂ...
16-03-26 12:38 pm
ಒಡಿಶಾದ ಕಟಕ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ ; I...
16-03-26 12:34 pm
17-03-26 10:54 pm
HK News Staffer
Besant Evening College: ಬೆಸೆಂಟ್ ಸಂಧ್ಯಾ ಕಾಲೇಜಿ...
17-03-26 10:12 pm
Controversial Missionary Mohan C. Lazarus’ Ud...
17-03-26 09:19 pm
Mohan Lazarus Udupi: ತಮಿಳುನಾಡಿನ ವಿವಾದಾತ್ಮಕ ಮಿ...
17-03-26 07:35 pm
Inspector Sandesh Suspended: ಮಹಿಳೆಯರ ಜೊತೆಗೆ ದ...
17-03-26 07:16 pm
15-03-26 12:49 pm
HK News Desk
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ; ಪೋಕ್ಸೋ ಕಾಯ...
12-03-26 11:20 pm
ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳವು ;...
12-03-26 10:53 pm
ಬೆಂಗಳೂರು ; ಕಾಲೇಜು ಮುಗಿಸಿ ವಾಪಸ್ಸಾಗುತ್ತಿದ್ದಾಗ ಅ...
12-03-26 12:12 pm
ನಾಪತ್ತೆಯಾಗಿದ್ದ ಕೊಣಾಜೆಯ ಯುವಕ ಸೋಮೇಶ್ವರದ ಕೆರೆಯಲ್...
11-03-26 10:58 am