ಬ್ರೇಕಿಂಗ್ ನ್ಯೂಸ್
10-05-22 01:50 pm HK Desk News ದೇಶ - ವಿದೇಶ
ನವದೆಹಲಿ, ಮೇ 10: ಭಾರತದ ಕೊರೊನಾ ಸನ್ನಿವೇಶಗಳನ್ನು ಹಿಡಿದಿಟ್ಟ ಖ್ಯಾತ ಫೋಟೋ ಜರ್ನಲಿಸ್ಟ್ ಆಗಿದ್ದ ದಿವಂಗತ ಡ್ಯಾನಿಶ್ ಆಲಿಗೆ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ನೀಡಲಾಗಿದೆ. ರಾಯ್ಟರ್ಟ್ ಸುದ್ದಿ ಸಂಸ್ಥೆಯ ಪತ್ರಕರ್ತರಾದ ಅದ್ನಾನ್ ಅಬಿದಿ, ಸನ್ನಾ ಇರ್ಶಾದ್ ಮಟ್ಟೂ ಮತ್ತು ಅಮಿತ್ ದವೆ ಅವರಿಗೂ ಪುಲಿಟ್ಜರ್ ಪ್ರಶಸ್ತಿ ಘೋಷಿಸಲಾಗಿದೆ.
ಭಾರತ ಮೂಲದ ಡ್ಯಾನಿಶ್ ಆಲಿ ರಾಯ್ಟರ್ಟ್ ಸಂಸ್ಥೆಯಲ್ಲಿ ಸೀನಿಯರ್ ಫೋಟೋಗ್ರಾಫರ್ ಆಗಿದ್ದರು. ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕಾಲೇಜಿನಲ್ಲಿ ಪದವಿ ಪಡೆದಿದ್ದ ಡ್ಯಾನಿಶ್, ಆಬಳಿಕ ಸಮೂಹ ಸಂವಹನ ವಿಚಾರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.
2018ರಲ್ಲಿ ರೋಹಿಂಗ್ಯಾ ನಿರಾಶ್ರಿತರ ಕುರಿತು ಡ್ಯಾಕ್ಯುಮೆಂಟರಿ ಮಾಡಿದ ಡ್ಯಾನಿಶ್ ಆಲಿ ನೇತೃತ್ವದ ತಂಡಕ್ಕೆ ಫೀಚರ್ ಫೋಟೋಗ್ರಫಿಗಾಗಿ ಪುಲಿಟ್ಜರ್ ಪ್ರಶಸ್ತಿ ನೀಡಲಾಗಿತ್ತು. 2021ರಲ್ಲಿ ಅಫ್ಘಾನಿಸ್ತಾನ- ತಾಲಿಬಾನಿಗಳ ಸಂಘರ್ಷದ ಕವರೇಜ್ ಮಾಡುವುದಕ್ಕಾಗಿ ತೆರಳಿದ್ದ ಡ್ಯಾನಿಶ್ ಆಲಿಯನ್ನು ತಾಲಿಬಾನಿ ಉಗ್ರರು ಹತ್ಯೆ ಮಾಡಿದ್ದರು. ಪಾಕಿಸ್ಥಾನ ಗಡಿಭಾಗ ಸ್ಪಿನ್ ಬೋಲ್ಡಾಕ್ ಎಂಬ ಪ್ರದೇಶದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಡ್ಯಾನಿಶ್ ಆಲಿ, ಜರ್ಮನ್ ಮೂಲದ ಯುವತಿಯನ್ನು ಮದುವೆಯಾಗಿದ್ದು ಇಬ್ಬರು ಮಕ್ಕಳನ್ನು ಹೊಂದಿದ್ದರು.
ಡ್ಯಾನಿಶ್ ಆಲಿ, ರಾಯ್ಟರ್ಸ್ ಸಂಸ್ಥೆಯಲ್ಲಿ ಫೋಟೋಗ್ರಾಫರ್ ಆಗಿದ್ದುಕೊಂಡು ಜಾಗತಿಕ ವಿದ್ಯಮಾನಗಳ ಛಾಯಾಗ್ರಹಣಕ್ಕಾಗಿ ನಾನಾ ದೇಶಗಳನ್ನು ಸುತ್ತಿದ್ದರು. ಅಫ್ಘಾನಿಸ್ತಾನ, ಇರಾಕ್ ಯುದ್ಧಗಳು, ರೋಹಿಂಗ್ಯಾ ಮುಸ್ಲಿಮರ ಸಂಘರ್ಷ, ಹಾಂಗ್ ಕಾಂಗ್ ಪ್ರತಿಭಟನೆ, ನೇಪಾಳಿ ಭೂಕಂಪ ಹೀಗೆ ಜಾಗತಿಕ ಪ್ರಮುಖ ವಿದ್ಯಮಾನಗಳ ಛಾಯಾಗ್ರಹಣದ ಮೂಲಕ ವಿಶ್ವದ ಗಮನ ಸೆಳೆದಿದ್ದರು. ಇದೀಗ ಕೋವಿಡ್ ಸಂದರ್ಭದಲ್ಲಿ ಭಾರತದ ದೆಹಲಿ ಮತ್ತಿತರ ಕಡೆ ಎದುರಾಗಿದ್ದ ಸನ್ನಿವೇಶಗಳ ಫೀಚರ್ ಫೋಟೋಗ್ರಫಿಗಾಗಿ ಡ್ಯಾನಿಶ್ ಆಲಿಗೆ ಮರಣೋತ್ತರವಾಗಿ ಪುಲಿಟ್ಜರ್ ಪ್ರಶಸ್ತಿ ಘೋಷಿಸಲಾಗಿದೆ.
Journalist Danish Siddiqui, who lost his life while covering the conflict situation in Afghanistan, has been awarded the Pulitzer Prize for feature photography for his coverage of the Covid situation in India. Along with him, Reuters journalists Adnan Abidi, Sanna Irshad Mattoo, and Amit Dave were also honoured with the Pulitzer Prize.
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm