ಬ್ರೇಕಿಂಗ್ ನ್ಯೂಸ್
10-05-22 01:18 pm HK Desk News ದೇಶ - ವಿದೇಶ
ನವದೆಹಲಿ, ಮೇ 10: ದೇಶಾದ್ಯಂತ ಸದ್ದು ಮಾಡಿರುವ ಕಾಶ್ಮೀರಿ ಪಂಡಿತರ ನರಮೇಧ ಕುರಿತ ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ಸಿಂಗಾಪುರದಲ್ಲಿ ನಿಷೇಧದ ಬರೆ ಬೀಳುವ ಸಾಧ್ಯತೆ ಕಂಡುಬಂದಿದೆ. ಚಿತ್ರದಲ್ಲಿ ಒಂದು ವರ್ಗವನ್ನು ಟಾರ್ಗೆಟ್ ಮಾಡಲಾಗಿದ್ದು, ಸಮುದಾಯಗಳ ನಡುವೆ ದ್ವೇಷ ಹರಡುವ ರೀತಿ ತೋರಿಸಲಾಗಿದೆ ಎಂದು ಸಿಂಗಾಪುರದ ಅಧಿಕಾರಿಗಳು ತಿಳಿಸಿದ್ದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಕಾಶ್ಮೀರ್ ಫೈಲ್ಸ್ ಚಿತ್ರವು ಸಿಂಗಾಪುರದ ಸಿನಿಮಾ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಬಿಂಬಿತವಾಗಿಲ್ಲ. ಸೂತ್ರಗಳಿಗೆ ಹೊರತಾದ ವಿಚಾರಗಳನ್ನು ತೋರಿಸುತ್ತಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. 1990ರಲ್ಲಿ ಕಾಶ್ಮೀರದಲ್ಲಿನ ಹತ್ಯಾಕಾಂಡಕ್ಕೆ ಬಲಿಯಾದ ಕುಟುಂಬದ ಕುಡಿ ಬೆಳೆದು ದೆಹಲಿಯ ಯುನಿವರ್ಸಿಟಿ ಒಂದರಲ್ಲಿ ಓದುತ್ತಿರುವುದು, ಹೆತ್ತವರ ಸಾವಿನ ಬಗ್ಗೆ ಹುಡುಕಾಟದ ಚಿತ್ರಣ ಕಾಶ್ಮೀರ್ ಫೈಲ್ಸ್ ಚಿತ್ರದಲ್ಲಿದೆ. ಹಳೆಯ ನೆನಪುಗಳನ್ನು ಮೆಲುಕು ಹಾಕುವ ನೆಪದಲ್ಲಿ ಹತ್ಯಾಕಾಂಡದ ಚಿತ್ರಣಗಳನ್ನು ತೋರಿಸಲಾಗಿತ್ತು. ಚಿತ್ರಕ್ಕೆ ಪ್ರಬಲ ವಿರೋಧ ಕೇಳಿಬಂದರೂ, ಭಾರತದಲ್ಲಿ ಆಡಳಿತ ಪಕ್ಷ ಬೆಂಬಲಿಸಿದ್ದರಿಂದ ದೇಶಾದ್ಯಂತ ಕಾವೇರಲು ಮತ್ತು ವಿವಾದಕ್ಕೂ ಕಾರಣವಾಗಿತ್ತು.
ಚಿತ್ರವನ್ನು ಸಿಂಗಾಪುರದಲ್ಲಿ ಪ್ರದರ್ಶನಕ್ಕೆ ಅಂಗೀಕರಿಸಲು ಸಾಧ್ಯವಿಲ್ಲ. ಕಾಶ್ಮೀರದ ಪ್ರಸಕ್ತ ಸನ್ನಿವೇಶವನ್ನು ತೋರಿಸುವ ನೆಪದಲ್ಲಿ ಚಿತ್ರದಲ್ಲಿ ಒಂದು ವರ್ಗವನ್ನು ತುಚ್ಛವಾಗಿಸಲಾಗಿದೆ. ಇದರಿಂದ ಸಮಾಜದಲ್ಲಿ ಸಮುದಾಯಗಳ ನಡುವೆ ದ್ವೇಷ ಹರಡಲು ಕಾರಣವಾಗುತ್ತದೆ. ಸಿಂಗಾಪುರದ ಬಹು ವೈವಿಧ್ಯದ ಸಮುದಾಯಗಳು, ಸಂಸ್ಕೃತಿ ಇರುವ ಪ್ರದೇಶದಲ್ಲಿ ಸಾಮರಸ್ಯಕ್ಕೆ ಧಕ್ಕೆ ಬರಬಹುದು. ಯಾವುದೇ ವಿಚಾರವನ್ನು ಮತ, ಧರ್ಮದ ಆಧಾರದಲ್ಲಿ ತಾರತಮ್ಯ ನೆಲೆಯಲ್ಲಿ ತೋರಿಸುವುದಕ್ಕೆ ಸಿಂಗಾಪುರದಲ್ಲಿ ನಿಷೇಧ ಇದೆ ಎಂದು ಅಲ್ಲಿನ ಅಧಿಕಾರಿಗಳು ನ್ಯೂಸ್ ಏಶಿಯಾ ಚಾನೆಲ್ ಗೆ ತಿಳಿಸಿದ್ದಾರೆ. ಆದರೆ ಸಿಂಗಾಪುರದ ಸರಕಾರ ಈ ಬಗ್ಗೆ ಅಧಿಕೃತವಾಗಿ ಯಾವುದನ್ನೂ ಹೇಳಿಕೊಂಡಿಲ್ಲ.
The Kashmir Files, directed by Vivek Agnihotri, will be banned in multi-racial Singapore now, reported PTI. The authorities have assessed the film to be 'beyond Singapore’s film classification guidelines'. The Kashmir Files, which released in India on March 11, tells the story of a university student who learns that his Kashmiri Hindu parents were killed during the Kashmir insurgency in 1990. Ever since its release, the film has created a huge noise among the audience.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm