ಬ್ರೇಕಿಂಗ್ ನ್ಯೂಸ್
24-09-20 05:00 pm Headline Karnataka News Network ದೇಶ - ವಿದೇಶ
ಮುಂಬೈ, ಸೆಪ್ಟಂಬರ್ 24: ಮುಂಬೈ ಪೊಲೀಸರು ಬಾಲಿವುಡ್ ಡ್ರಗ್ ನಂಟಿನ ಹಿಂದೆ ಬಿದ್ದಿರುವಾಗಲೇ ಬಾಲಿವುಡ್ ನಟಿ, ಶೆರ್ಲಿನ್ ಚೋಪ್ರಾ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ. ಐಪಿಎಲ್ ಪಂದ್ಯಾಟದ ಬಳಿಕ ನಡೆಯುವ ಪಾರ್ಟಿಯಲ್ಲಿ ಕ್ರಿಕೆಟಿಗರ ಪತ್ನಿಯರು ಮತ್ತು ಬಾಲಿವುಡ್ ತಾರೆಯರು ಕೊಕೇನ್ ಸೇವಿಸುತ್ತಿದ್ದರು. ಈ ಬಗ್ಗೆ ಮುಂಬೈ ಪೊಲೀಸರು ಬಯಸಿದರೆ ಮಾಹಿತಿ ನೀಡಲು ರೆಡಿ ಇದ್ದೇನೆ ಎಂದಿದ್ದಾರೆ.
‘ನಾನೊಮ್ಮೆ ಕೊಲ್ಕತಾದಲ್ಲಿ ಕೆಕೆಆರ್ ತಂಡದ ಐಪಿಎಲ್ ಪಂದ್ಯ ನಡೆಯುತ್ತಿದ್ದಾಗ ವೀಕ್ಷಣೆಗೆ ಹೋಗಿದ್ದೆ. ಕ್ರಿಕೆಟ್ ಮುಗಿದ ಬಳಿಕ ಪಾರ್ಟಿ ನಡೆದಿದ್ದು, ನನಗೂ ಆಹ್ವಾನ ನೀಡಿದ್ದರು. ಹಾಗೇ ನಾನೂ ಹೋಗಿದ್ದೆ. ಬಾಲಿವುಡ್ ತಾರೆಯರು ಮತ್ತು ಕ್ರಿಕೆಟರ್ ಗಳ ಪತ್ನಿಯರು ಕೂಡ ಪಾಲ್ಗೊಂಡಿದ್ದರು. ಆದರೆ ಅಲ್ಲಿ ಹೋಗಿದ್ದ ನನಗೆ ಶಾಕ್ ಆಗಿತ್ತು. ಪಾರ್ಟಿಯಲ್ಲಿ ಕುಣಿದು ದಣಿದ ಬಳಿಕ ನಾನು ಲೇಡಿಸ್ ವಾಶ್ ರೂಂ ಹೋಗಿದ್ದೆ. ಅಲ್ಲಿ ನೋಡಿದಾಗ, ಕ್ರಿಕೆಟಿಗರ ಪತ್ನಿಯರು ಕೊಕೇನ್ ಸೇವಿಸುತ್ತಿದ್ದರು. ನನ್ನತ್ತ ನೋಡಿ, ಕಿರುನಗೆ ಬೀರಿದರು. ನಾನು ಅವರತ್ತ ನಗು ಬೀರುತ್ತಲೇ ಹೊರಬಂದೆ. ನಾನೇನೋ ಸಲ್ಲದ ಜಾಗಕ್ಕೆ ಬಂದಿದ್ದೇನೋ ಅನಿಸ್ತು…’
‘ಆನಂತರವೂ ಡ್ರಗ್ ಪಾರ್ಟಿ ಜೋರಾಗಿಯೇ ನಡೆದಿತ್ತು. ಡ್ರಗ್ ಪಾರ್ಟಿಗಳು ಹಾಗೇ, ಒಂದರ ಮೇಲೊಂದು ನಡೆಯುತ್ತಿರುತ್ತೆ. ಸ್ವಲ್ಪ ಹೊತ್ತಿನ ಬಳಿಕ ಕುತೂಹಲದಿಂದ ಜಂಟ್ಸ್ ವಾಶ್ ರೂಮಿಗೆ ಹೋದೆ. ಅಲ್ಲಿನ ದೃಶ್ಯಗಳು ಬೇರೆ ತರ ಇರಲಿಲ್ಲ. ಸೇಮ್ ಆಗಿತ್ತು..’ ಎಂದು ಶರ್ಲಿನ್ ಚೋಪ್ರಾ ಬಾಂಬ್ ಸಿಡಿಸಿದ್ದಾಳೆ.

ಇದೇ ವೇಳೆ, ಮುಂಬೈನ ಎನ್ ಸಿಬಿ ಅಧಿಕಾರಿಗಳು ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ರಕುಲ್ ಪ್ರೀತ್ ಸಿಂಗ್, ಸಾರಾ ಅಲಿಖಾನ್, ಶ್ರದ್ಧಾ ಕಪೂರ್ ಸೇರಿದಂತೆ ಹಲವರಿಗೆ ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡಿದ್ದಾರೆ. ಬಾಲಿವುಡ್ ಡ್ರಗ್ ನಂಟು ಕೇಳಿ ಬರುತ್ತಿದ್ದಂತೆ ಕ್ರಿಕೆಟಿಗರಿಗೂ ಡ್ರಗ್ ನಂಟು ಇದೆ ಎಂಬ ಮಾತು ಕೇಳಿಬಂದಿತ್ತು. ಆದರೆ ಯಾವುದೇ ದೃಢವಾದ ಸಾಕ್ಷ್ಯಗಳು ಸಿಕ್ಕಿರಲಿಲ್ಲ.
Join our WhatsApp group for latest news updates (2)
14-01-26 03:34 pm
Bangalore Correspondent
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ ; ಪ್ರತ್ಯೇಕ...
14-01-26 01:34 pm
ಅಕಾಲಿಕ ಮಳೆಗೆ ಕಂಗಾಲಾದ ಕಾಫಿನಾಡು ; ಭಾರೀ ಮಳೆಗೆ ಕೊ...
13-01-26 10:13 pm
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
14-01-26 03:15 pm
Mangalore Correspondent
ಕುಂದಾಪುರ -ತಲಪಾಡಿ, ಸುರತ್ಕಲ್- ಬಿ.ಸಿ.ರೋಡ್ ಹೆದ್ದಾ...
13-01-26 10:30 pm
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
13-01-26 05:28 pm
HK News Desk
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm