ಬ್ರೇಕಿಂಗ್ ನ್ಯೂಸ್
18-01-22 08:43 pm HK Desk news ದೇಶ - ವಿದೇಶ
ನವದೆಹಲಿ, ಜ.18 : ಕಾಶ್ಮೀರ ಕಣಿವೆ ಮತ್ತು ನಕ್ಸಲ್ ಪೀಡಿತ ಏರಿಯಾಗಳಲ್ಲಿ ಮುಂಚೂಣಿಯಾಗಿ ನಿಂತು ನೂರಾರು ಉಗ್ರರು ಮತ್ತು ನಕ್ಸಲರನ್ನು ಕೊಂದು ಹಾಕಿದ ಪರಿಣತಿ ಇರುವ ಸಿಆರ್ ಪಿಎಫ್ ಪಡೆಯ ಕ್ವಿಕ್ ಏಕ್ಷನ್ ಟೀಮ್ ಒಂದನ್ನು ರಾಜಧಾನಿ ದೆಹಲಿಯಲ್ಲಿ ಪೂರ್ಣಾವಧಿಗೆ ನೇಮಕ ಮಾಡಲಾಗಿದೆ.
ಆತ್ಮಹತ್ಯಾ ಬಾಂಬ್ ದಾಳಿ ಅಥವಾ ಯಾವುದೇ ರೀತಿಯ ವಿಧ್ವಂಸಕ ಕೃತ್ಯದ ಸಂದರ್ಭದಲ್ಲಿ ಕ್ಷಿಪ್ರವಾಗಿ ಕಾರ್ಯ ಎಸಗಬಲ್ಲ 50 ಮಂದಿಯ ಯೋಧರ ತಂಡ ಇದರಲ್ಲಿ ಇರಲಿದ್ದಾರೆ. ಕಾಶ್ಮೀರದಲ್ಲಿ ಈ ರೀತಿಯ ಕ್ವಿಕ್ ಏಕ್ಷನ್ ಟೀಮ್ ರೆಡಿ ಮಾಡಲಾಗಿತ್ತು. ಅದೇ ರೀತಿಯ ಮತ್ತೊಂದು ತಂಡವನ್ನು ರೆಡಿ ಮಾಡಲಾಗಿದ್ದು, ರಾಜಧಾನಿ ದೆಹಲಿಗೆ ನಿಯೋಜಿಸಲಾಗಿದೆ.
ತಂಡದಲ್ಲಿ 50 ಮಂದಿ ಯುವ ಪಡೆ ಇರಲಿದ್ದು, ಪ್ರತಿ ಯೋಧರು ಅತ್ಯಾಧುನಿಕ ರೈಫಲ್ಸ್ ಮತ್ತು ರಾತ್ರಿ- ಹಗಲು ಯಾವುದೇ ಸ್ಥಿತಿಯಲ್ಲೂ ಕೆಲಸ ಮಾಡಬಲ್ಲ ಮೆಷಿನರಿಯನ್ನು ಹೊಂದಿರುತ್ತಾರೆ. ಇದರಲ್ಲಿರುವ ಕಮಾಂಡೋಗಳು ಕಾಶ್ಮೀರದಲ್ಲಿ ಹಲವು ವರ್ಷಗಳಿಂದ ಹಿರಿಯ ಸೇನಾಧಿಕಾರಿಗಳಿಂದ ತರಬೇತಿ ಪಡೆದವರಾಗಿದ್ದು, ಐಇಡಿ ರೀತಿಯ ಸ್ಫೋಟಕಗಳನ್ನು ನಾಶ ಮಾಡಬಲ್ಲ ಸಾಮರ್ಥ್ಯ ಹೊಂದಿರುತ್ತಾರೆ.
ಇದಲ್ಲದೆ, ಈ ಯೋಧರು ನಗರ ಪ್ರದೇಶಗಳಲ್ಲಿ ಯಾವ ರೀತಿ ಕಾರ್ಯ ನಿರತ ಆಗಬೇಕು ಮತ್ತು ಜನನಿಬಿಡ ಪ್ರದೇಶಗಳಲ್ಲಿ ದೊಡ್ಡ ಕಟ್ಟಡಗಳ ಮೇಲಿಂದ ಯಾವ ರೀತಿ ಕಾರ್ಯಾಚರಣೆ ನಡೆಸಬೇಕು ಎಂಬ ಬಗ್ಗೆಯೂ ತರಬೇತಿ ಪಡೆದಿದ್ದಾರೆ. ತಂಡದಲ್ಲಿ ಎಂಪಿ 5- ಮೆಷಿನ್ ಗನ್, ಸ್ನೈಫರ್ ರೈಫಲ್, ಲೈಟ್ ಮೆಷಿನ್ ಗನ್, ಎಕೆ-47, ಕಾರ್ನರ್ ಶಾಟ್ (ಗನ್ ಉಪಕರಣ), ಅಂಡರ್ ಬ್ಯಾರಲ್ ಗ್ರೆನೇಡ್ ಲಾಂಚರ್ಸ್ ಹೀಗೆ ಹಲವು ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತಾರೆ. ಇದಲ್ಲದೆ, ರಾತ್ರಿ ವೇಳೆಯೂ ಕಾಣಬಲ್ಲ ನೈಟ್ ವಿಶನ್ ಗಾಗಲ್, ರಾಡಾರ್, ಸ್ಕ್ಯಾನರ್, ಶಸ್ತ್ರ ಸಜ್ಜಿತ ರೋಬೋಟ್ ಕೂಡ ಹೊಂದಿರುತ್ತಾರೆ.
ಗಣರಾಜ್ಯ ದಿನಕ್ಕೆ ದೆಹಲಿಯಲ್ಲಿ ಕಟ್ಟೆಚ್ಚರ ಘೋಷಣೆ ಮಾಡಿರುವುದರಿಂದ ಈ ಹೊಸ ತಂಡವನ್ನು ದೆಹಲಿಯ ಆಯಕಟ್ಟಿನ ಜಾಗಗಳಲ್ಲಿ ನಿಯೋಜನೆ ಮಾಡಲಾಗಿದೆ. ಇದಲ್ಲದೆ, ಸಂಸತ್ತಿನ ಆವರಣದಲ್ಲಿ ಮತ್ತು ಗಣ್ಯರ ಜೊತೆಗೆ ಹೆಚ್ಚುವರಿ ಸಿಆರ್ ಪಿಎಫ್ ಯೋಧರ ಪಡೆ ಇರಲಿದೆ. ಎನ್ಎಸ್ ಜಿ ಮಾದರಿಯಲ್ಲೇ ಮತ್ತೊಂದು ತಂಡವನ್ನು ದೆಹಲಿಗೆ ನಿಯೋಜನೆ ಮಾಡಲಾಗಿದೆ. ತಂಡದಲ್ಲಿ ಹಿಜ್ಬುಲ್ ಮುಜಾಹಿದೀನ್ ಮತ್ತು ಜೆಇಎಂ ಉಗ್ರರನ್ನು ಸದೆಬಡಿದು ವಿಶೇಷ ಪದಕ ಪಡೆದಿರುವ ಯೋಧರು ಇದ್ದಾರೆ.
Fifty handpicked commandos from the Central Reserve Police Force (CRPF), awarded for eliminating hundreds of terrorists in Kashmir and Naxals in red zones, will now be the prime responders in case of any terror or suicide attack in and around the national capital.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am