ಬ್ರೇಕಿಂಗ್ ನ್ಯೂಸ್
06-09-21 01:12 pm Headline Karnataka News Network ದೇಶ - ವಿದೇಶ
ಕಾಬೂಲ್, ಸೆ.6: ತಾಲಿಬಾನ್ ಪಡೆಗಳಿಗೆ ತೀವ್ರ ಪ್ರತಿರೋಧ ಒಡ್ಡುತ್ತಿರುವ ಪಂಜ್ ಶೀರ್ ಯೋಧರ ಮೇಲೆ ಪಾಕಿಸ್ಥಾನದ ವಾಯುಪಡೆ ಯೋಧರು ಎರಗಿದ್ದಾರೆ. ತಾಲಿಬಾನ್ ಮತ್ತು ಪಾಕಿಸ್ಥಾನಿ ಪಡೆಗಳ ಜಂಟಿ ದಾಳಿಯಿಂದಾಗಿ ಪಂಜ್ ಶೀರ್ ಮೇಲೆ ನಿಯಂತ್ರಣ ಸಾಧಿಸುವತ್ತ ಮುನ್ನುಗ್ಗಿದ್ದಾರೆ. ಇದೇ ವೇಳೆ, ಪಂಜ್ ಶೀರ್ ನಲ್ಲಿ ಪ್ರತಿರೋಧ ಪಡೆಗಳ ನೇತೃತ್ವ ವಹಿಸಿದ್ದ ಮಹಮ್ಮದ್ ಸಲೇ ಅವರನ್ನು ಕೊಂದು ಹಾಕಿರುವುದಾಗಿ ತಾಲಿಬಾನಿಗಳು ಹೇಳಿಕೊಂಡಿದ್ದಾರೆ.
ಭಾನುವಾರದಿಂದ ಪಂಜ್ ಶೀರ್ ನಲ್ಲಿ ಪಾಕ್ ವಾಯುಪಡೆ ಯೋಧರು ಡ್ರೋಣ್ ದಾಳಿ ಆರಂಭಿಸಿದ್ದರು. ಒಂದೆಡೆ ವಾಯುಪಡೆ ದಾಳಿ, ಇನ್ನೊಂದೆಡೆ ತಾಲಿಬಾನಿ ಪಡೆಗಳ ದಾಳಿಯಿಂದಾಗಿ ಪಂಜ್ ಶೀರ್ ಪ್ರಾಂತ್ಯದ ಪ್ರತಿರೋಧ ಪಡೆಗಳು ತೀವ್ರ ಕಂಗೆಟ್ಟಿದ್ದವು. ನಿನ್ನೆ ರಾತ್ರಿಯೂ ದಾಳಿ ಕಾರ್ಯಾಚರಣೆ ಮುಂದುವರಿದಿತ್ತು ಎನ್ನಲಾಗುತ್ತಿದ್ದು ಇಂದು ಬೆಳಗ್ಗೆ ತಾಲಿಬಾನಿಗಳು ಪಂಜ್ ಶೀರ್ ಪ್ರಾಂತ್ಯವನ್ನು ಪೂರ್ತಿಯಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಪಂಜ್ ಶೀರ್ ಪ್ರತಿರೋಧ ಪಡೆಯ ಸದಸ್ಯರು ಈ ಸುದ್ದಿಯನ್ನು ನಿರಾಕರಿಸಿದ್ದಾರೆ.


ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಈ ಬಗ್ಗೆ ಹೇಳಿಕೆ ನೀಡಿದ್ದು, ಪಂಜ್ ಶೀರ್ ಪ್ರಾಂತ್ಯವನ್ನು ಸಂಪೂರ್ಣ ನಮ್ಮ ಹತೋಟಿಗೆ ತಂದಿದ್ದೇವೆ. ಅಲ್ಲಿನ ಜನರು ಕೂಡ ನಮ್ಮ ಸೋದರರೇ. ಅವರನ್ನು ಗೌರವದಿಂದ ನಡೆಸಿಕೊಳ್ಳುತ್ತೇವೆ. ಎಲ್ಲ ರೀತಿಯ ಸಹಕಾರ ಕೊಡುವುದಾಗಿ ಹೇಳಿದ್ದಾರೆ. ಫಾಹಿಮ್ ದಶ್ತಿ, ಅಹಮ್ಮದ್ ಮಸೂದ್ ಸೇರಿದಂತೆ ಪಂಜ್ ಶೀರ್ ಪ್ರಾಂತದ ಹಲವು ನಾಯಕರು ಸತ್ತಿದ್ದಾಗಿ ಹೇಳಲಾಗಿತ್ತು.
ಆದರೆ ಇದೇ ವೇಳೆ, ತಾಲಿಬಾನ್ ಪಡೆಗಳ ಹೇಳಿಕೆಯನ್ನು ಪಂಜ್ ಶೀರ್ ಪ್ರಾಂತ್ಯದ ಮುಂಚೂಣಿ ನಾಯಕ ಮಹಮ್ಮದ್ ಸಲೇ ನಿರಾಕರಿಸಿದ್ದಾಗಿ ಇಂಡಿಯಾ ಟುಡೇ ವರದಿ ಮಾಡಿದೆ. ತಾಲಿಬಾನ್ ಪಡೆಗಳು ಮತ್ತು ಪಾಕಿಸ್ಧಾನದ ಕಾಪ್ಟರ್ ಗಳು ಪರ್ವತ ಶ್ರೇಣಿಯ ತುದಿಯಲ್ಲಿ ನಿಂತು ಈ ಹೇಳಿಕೆ ನೀಡಿವೆ. ಆದರೆ ತಾಲಿಬಾನ್ ವಿರುದ್ಧ ನಮ್ಮ ಹೋರಾಟ ಮುಂದುವರಿದಿದೆ ಎಂದು ಸಲೇ ಹೇಳಿಕೆ ನೀಡಿದ್ದಾಗಿ ಇಂಡಿಯಾ ಟುಡೇ ಹೇಳಿದೆ. ಹೀಗಾಗಿ ಅಲ್ಲಿನ ವಾಸ್ತವ ಚಿತ್ರಣ ಮುಚ್ಚಿಡಲು ತಾಲಿಬಾನಿಗಳು ಸುಳ್ಳು ಹೇಳಿಕೆ ನೀಡುತ್ತಿರುವ ಬಗ್ಗೆ ಸಂಶಯ ಉಂಟಾಗಿದೆ.
The Taliban have claimed that Panjshir province was "completely conquered", adding that the country was now finally out of the vortex of war. However, the resistance forces have denied their claim.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
15-07-26 10:44 pm
HK News Staffer
ಪ್ರಧಾನಿ ಮೋದಿ ನೇಮಿಸಿದ್ದ ಚೌಕಿದಾರರೇ ರಾಮನ ದೇಣಿಗೆ...
15-07-26 10:03 pm
ಬಾಂಗ್ಲಾನ್ನರು ಅನ್ನುವ ಶಂಕೆಯಿದ್ದರೆ ಪೊಲೀಸರಿಗೆ ತಿಳ...
15-07-26 09:03 pm
ಮಂಗಳೂರಿನಲ್ಲಿ ಯಾವ ಮಾಲ್ನಲ್ಲಿ ಎಷ್ಟೆಷ್ಟು ಬಾಂಗ್ಲಾದ...
15-07-26 05:32 pm
ಮುಸ್ಲಿಮೇತರ ಮಹಿಳೆಯನ್ನು ಮದುವೆಯಾಗುವುದು ಶರಿಯಾಕ್ಕೆ...
15-07-26 10:59 am
16-07-26 09:26 pm
HK News Staffer
BC Road Murder, Crime Mangalore: ಬಿಸಿ ರೋಡ್ ಬಸ...
16-07-26 07:25 pm
ದೆಹಲಿಯಿಂದ ಕಾರಿನಲ್ಲಿ 5 ಕೋಟಿ ಮೌಲ್ಯದ ಎಂಡಿಎಂಎ ಡ್ರ...
16-07-26 05:10 pm
ಗುರುವಾಯನಕೆರೆ ವಿದ್ಯುತ್ ಸಬ್ ಸ್ಟೇಶನ್ ಬಳಿ ಶವ ಪತ್ತ...
16-07-26 02:29 pm
ಬೃಹತ್ ಖೋಟಾ ನೋಟು ಜಾಲ ಬಯಲಿಗೆ ; ಉಪ್ಪಿನಂಗಡಿ ಬಳಿ ಫ...
16-07-26 02:02 pm