ಬ್ರೇಕಿಂಗ್ ನ್ಯೂಸ್
02-09-20 07:15 pm Headline Karnataka News Network ದೇಶ - ವಿದೇಶ
ಹೈದರಾಬಾದ್, ಸೆಪ್ಟೆಂಬರ್. 2: ತೆಲಂಗಾಣ ಮೂಲದ ವ್ಯಕ್ತಿ ಪಾಸ್ಪೋರ್ಟ್ ಇಲ್ಲದೆಯೇ 16 ವರ್ಷಗಳ ಬಳಿಕ ದುಬೈನಿಂದ ವಾಪಾಸ್ಸಾಗಿದ್ದು, ಕಳೆದ 16 ವರ್ಷಗಳಲ್ಲಿ ದುಬೈನಲ್ಲಿ ಸಿಲುಕಿಕೊಂಡಿದ್ದ ಅವರಿಗೆ 29 ಲಕ್ಷ ರೂ ನಷ್ಟು ದಂಡ ವಿಧಿಸಲಾಗಿತ್ತು.
ನೀಲ ಯಲ್ಲಯ್ಯ ಚಿಂತಮಾನಪಳ್ಳಿಯವರು, 2004ರಲ್ಲಿ ಕೆಲಸಕ್ಕೆಂದು ದುಬೈಗೆ ಹೋಗಿದ್ದರು. ಬಳಿಕ ಕೆಲವು ಸನ್ನಿವೇಶಗಳು ಅವರನ್ನು ಅಲ್ಲಿಯೇ ಉಳಿದುಕೊಳ್ಳುವಂತೆ ಮಾಡಿತು. ಜೈನ್ ಸೇವಾ ಮಿಷನ್ ಸ್ವಯಂಸೇವಕರಾದ ರೂಪೇಶ್ ಮೆಹ್ತಾ ಎಂಬುವವರು ಅವರಿಗೆ ಸಹಾಯ ಮಾಡಿದ್ದು, ದುಬೈನಲ್ಲಿರುವ ಭಾರತೀಯ ಕೌನ್ಸುಲೇಟ್ನಲ್ಲಿ ತಾತ್ಕಾಲಿಕ ಪಾಸ್ಪೋರ್ಟ್ ಪಡೆದು ಅವರನ್ನು ಕರೆತರಲಾಗಿದೆ.
ಯಲ್ಲಯ್ಯ ಅವರ ಪತ್ನಿ ಒತ್ತಾಯದ ಮೇರೆಗೆ ಹೈದರಾಬಾದ್ ಕಚೇರಿಯಲ್ಲಿ ಹಳೆಯ ಪಾಸ್ಪೋರ್ಟ್ ಪಡೆಯಲಾಯಿತು. ಅವರಿಗೆ ಉಚಿತ ವಿಮಾನ ಟಿಕೆಟ್ ನೀಡಿ ಕರೆಸಿಕೊಳ್ಳಲಾಯಿತು.ಅವರ ವೀಸಾ ಅವಧಿ ಮುಗಿದು ಕೂಡ ಅಲ್ಲಿಯೇ ಇದ್ದ ಕಾರಣ ನಿತ್ಯ 500 ರೂ.ನಷ್ಟು ಇಲ್ಲಿಯವರೆಗೆ 29 ಲಕ್ಷದಷ್ಟು ದಂಡ ವಿಧಿಸಲಾಗಿತ್ತು. ದುಬೈ ಸರ್ಕಾರ ಆ ದಂಡವನ್ನು ಮನ್ನಾ ಮಾಡಿದೆ.
ಅವರು ಸೋಮವಾರ ಸಂಜೆ ತೆಲಂಗಾಣವನ್ನು ತಲುಪಿದ್ದು, ಸದ್ಯ ಹೋಂ ಕ್ವಾರಂಟೈನ್ನಲ್ಲಿರಲು ಅವಕಾಶ ಮಾಡಿಕೊಡಲಾಗಿದೆ. ಯಲ್ಲಯ್ಯ ಅವರು ದುಬೈಗೆ ಹೊರಡುವ ಸಂದರ್ಭದಲ್ಲಿ ಮಗಳು ಇನ್ನೂ ಚಿಕ್ಕವಳು. ಈಗ ಆಕೆ ಒಂದು ಮಗುವಿನ ತಾಯಿಯಾಗಿದ್ದಾಳೆ.
30-05-26 06:45 pm
HK News Staffer
ಕೆಪಿಸಿಸಿ ಅಧ್ಯಕ್ಷ ಗಾದಿಗೆ ಸರ್ಪ್ರೈಸ್ ಟ್ವಿಸ್ಟ್ ;...
30-05-26 01:14 pm
ಡಿಕೆಶಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ! ವಿಧಾನಸೌಧ ಮೆಟ...
29-05-26 10:41 pm
ಒಬ್ಬರಿಗೆ ಒಂದೇ ಹುದ್ದೆ ; ಕೆಪಿಸಿಸಿ ಅಧ್ಯಕ್ಷ ಹುದ್ದ...
29-05-26 04:30 pm
ಸಿದ್ದರಾಮಯ್ಯ ರಾಜೀನಾಮೆಗೆ ರಾಜ್ಯಪಾಲರಿಂದ ಅಧಿಕೃತ ಮು...
29-05-26 10:29 am
29-05-26 06:17 pm
HK News Staffer
ಟಿಎಂಸಿಯಲ್ಲಿ ಬಿರುಕು ; 50 ಶಾಸಕರು, ಸಂಸದರು ಬಿಜೆಪಿ...
27-05-26 09:17 pm
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
30-05-26 09:52 pm
HK News Desk
Mangalore News, Traffic: ಹೆದ್ದಾರಿ ಅಪಘಾತ ತಡೆಗೆ...
30-05-26 08:06 pm
Master Travels Bus, Mangalore: ಕಾವೂರಿನಲ್ಲಿ ಬಸ...
30-05-26 02:10 pm
ಹಿಂದೆ ವೀರೇಂದ್ರ ಪಾಟೀಲ್ ಗೆ ಆದ ಅವಮಾನ ಈಗ ಸಿದ್ದರಾಮ...
28-05-26 02:45 pm
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
29-05-26 10:21 pm
HK News Staffer
Expert College Case, Mangalore: ಕೋವಿಡ್ ಲಾಕ್ಡ...
29-05-26 08:30 pm
ಕಾರಿನ ಟೈಯರ್ ಬ್ಲಾಸ್ಟ್ ಆಗಿ ರಸ್ತೆಬದಿ ನಿಂತಿದ್ದ...
29-05-26 03:05 pm
ಬಕ್ರೀದ್ ಹಿನ್ನೆಲೆ, ರಾತ್ರೋರಾತ್ರಿ ಮನೆ ಕೊಟ್ಟಿಗೆಯಲ...
28-05-26 09:44 pm
ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡ...
28-05-26 10:43 am