ಬ್ರೇಕಿಂಗ್ ನ್ಯೂಸ್
04-07-21 03:58 pm Headline Karnataka News Network ದೇಶ - ವಿದೇಶ
ಪುಣೆ, ಜುಲೈ 4: ಮುಂಬೈ - ಪುಣೆ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೂರೂವರೆ ವರ್ಷದ ಮಗು ಸೇರಿ ದಂಪತಿ ದಾರುಣ ಸಾವಿಗೀಡಾದ ಘಟನೆ ನಡೆದಿದೆ.
ರಾಯಗಢ ಜಿಲ್ಲೆಯ ಬೋರ್ಗಾಟ್ ಎಂಬಲ್ಲಿ ಅಪಘಾತ ನಡೆದಿದ್ದು ಕಂಟೇನರ್ ಲಾರಿ, ಟ್ರಕ್ ಮತ್ತು ಕಾರು ಸರಣಿಯಾಗಿ ಡಿಕ್ಕಿಯಾಗಿದೆ. ಕಾರಿನಲ್ಲಿದ್ದ ಜೋಕಿಂ ಚೆಟ್ಟಿಯಾರ್(36), ಪತ್ನಿ ಲೂಸಿಯಾ(35), ಮತ್ತು ಇವರ ಮಗ ಮೂರುವರೆ ವರ್ಷದ ಜೈಸನ್ ಸ್ಥಳದಲ್ಲೇ ಸಾವು ಕಂಡಿದ್ದಾರೆ.
ಜೋಕಿಂ ಕುಟುಂಬದೊಂದಿಗೆ ಪುಣೆಯಲ್ಲಿ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿ ಶನಿವಾರ ಸಂಜೆ ತಮ್ಮ ಮನೆ ವಸಾಯಿ ಬಳಿಯ ನೈಗಾಂವ್ ಗೆ ಐಟ್ವೆಂಟಿ ಕಾರಿನಲ್ಲಿ ತೆರಳುತ್ತಿದ್ದರು. ಸಂಜೆ ಐದು ಗಂಟೆ ಸುಮಾರಿಗೆ ಹೆದ್ದಾರಿಯಲ್ಲಿ ಬರುತ್ತಿದ್ದಾಗ ಬೋರ್ಗಾಟ್ ಏರಿಯಾದಲ್ಲಿ ಕ್ರಾಸ್ ಮಾಡಿಕೊಂಡು ಮತ್ತೊಂದು ಕಡೆಗೆ ತೆರಳಲು ನಿಂತಿದ್ದರು. ಕಾರನ್ನು ಕ್ರಾಸ್ ಮಾಡಲೆಂದು ಮುಂದಕ್ಕೆ ಚಲಿಸುತ್ತಿದ್ದಾಗ ಇನ್ನೊಂದು ಕಡೆಯಿಂದ ಬಂದ ಕಂಟೇನರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಅಲ್ಲಿದ್ದ ಮತ್ತೊಂದು ಟ್ರಕ್ಕಿಗೆ ಡಿಕ್ಕಿಯಾಗಿದೆ. ಟ್ರಕ್ಕಿಗೆ ಬಡಿದ ರಭಸಕ್ಕೆ ಟ್ರಕ್ ಮುಂದಕ್ಕೆ ಬಂದಿದ್ದು ಜೋಕಿಂ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿಯಾಗಿದೆ.
ಡಿಕ್ಕಿಯಾದ ರಭಸಕ್ಕೆ ಕಾರು ರಸ್ತೆಯಲ್ಲೇ ಪಲ್ಟಿ ಹೊಡೆದಿದ್ದು ಕೆಲವೇ ಕ್ಷಣದಲ್ಲಿ ಬೆಂಕಿ ಹತ್ತಿಕೊಂಡಿದೆ. ಬೆಂಕಿಯ ಜ್ವಾಲೆಯ ಮಧ್ಯೆ ಕಾರಿನಲ್ಲಿದ್ದ ಮೂವರಿಗೆ ಹೊರಗೆ ಬರಲಾಗದೆ ಜೀವಂತ ದಹನವಾಗಿದ್ದಾರೆ.
ಕಂಟೇನರ್ ಲಾರಿಯ ಚಾಲಕ ರಮೇಶ್ ನಿಕಮ್ ಕೂಡ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸರು ಚಾಲಕ ರಮೇಶ್ ನಿಕ್ಕಂ ವಿರುದ್ಧ ನಿರ್ಲಕ್ಷ್ಯದ ಚಾಲನೆಯ ಆಧಾರದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅಪಘಾತದಿಂದಾಗಿ ಪುಣೆ - ಮುಂಬೈ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು ಪೊಲೀಸರು ಬಳಿಕ ಮೂರೂ ವಾಹನಗಳನ್ನು ಕ್ರೇನ್ ಮೂಲಕ ಹೆದ್ದಾರಿಯಿಂದ ತೆರವುಗೊಳಿಸಿದ್ದಾರೆ.
This is shocking and very Sad. #mumbaipuneexpressway https://t.co/OP4swPVzwV
— 𝚂𝚊𝚖𝚖𝚛𝚒𝚍𝚑 𝚅𝚊𝚛𝚖𝚊 (@sammridh) July 3, 2021
A road trip proved fatal for three members of a family after their car got hit by a container truck that lost control on the Mumbai-Pune Expressway in Maharashtra. The accident, the visuals of which were captured by the rear camera of another truck that was in front of their Hyundai i10, involved the car getting caught between the two big vehicles and being run over on Thursday
15-04-25 08:44 pm
Bangalore Correspondent
Kannada Journalist S K Shyamsundar Death: ಹಿರ...
15-04-25 12:51 pm
Hubballi encounter, PSI Annapurna: ಹುಬ್ಬಳ್ಳಿ...
14-04-25 09:48 pm
Bangalore Suicide: ಅಪಾರ್ಟ್ಮೆಂಟ್ನ ನಾಲ್ಕನೇ ಮಹ...
14-04-25 07:51 pm
Kannada comedy actor Bank Janardhan, Death: ಕ...
14-04-25 03:09 pm
15-04-25 04:40 pm
HK News Desk
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
ಕುರಾನ್ ಪ್ರತಿ, ಪೆನ್- ಪೇಪರ್ ಪಡೆದ ತಹಾವ್ವುರ್ ರಾಣಾ...
13-04-25 06:15 pm
Waqf clashes: ವಕ್ಫ್ ವಿರುದ್ಧ ಬೀದಿಗಿಳಿದ ಜನರು ;...
12-04-25 09:01 pm
15-04-25 09:57 pm
Mangalore Correspondent
Drowning, Surathkal Beach, Mangalore, News: ಮ...
15-04-25 09:21 pm
ಹರಿದ್ವಾರದಲ್ಲಿ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ...
14-04-25 09:20 pm
Drowning Ullal, Mangalore: ಉಳ್ಳಾಲದಲ್ಲಿ ಸಮುದ್ರ...
13-04-25 05:20 pm
ಮಂಗಳೂರಿಗೆ ಮತ್ತೊಂದು ವಂದೇ ಭಾರತ್ ರೈಲು ; ಪ್ರತ್ಯೇಕ...
13-04-25 01:27 pm
15-04-25 10:24 pm
HK News Desk
Pastor John Jebraj Arrest: ಇಬ್ಬರು ಹೆಣ್ಮಕ್ಕಳಿಗ...
15-04-25 06:17 pm
Mangalore Crime, Fire: ಕುಡಿದ ಮತ್ತಿನಲ್ಲಿ ಏಸಿಡ್...
15-04-25 05:13 pm
Mangalore CCB, Drugs, Crime: ಮಂಗಳೂರು ಸಿಸಿಬಿ ಪ...
12-04-25 10:52 pm
ಸರ್ಕಾರಿ ಅಧಿಕಾರಿ ಸೋಗಿನಲ್ಲಿ ನಕಲಿ ಕೋರ್ಟ್ ಆದೇಶ ಸೃ...
12-04-25 01:53 pm