ಬ್ರೇಕಿಂಗ್ ನ್ಯೂಸ್
28-08-20 01:15 pm Dhruthi Anchan - Correspondant ದೇಶ - ವಿದೇಶ
ಮುಂಬೈ, ಆಗಸ್ಟ್ 27: ಫ್ಯಾಮಿಲಿ ಪ್ಯಾಕ್ ಐಸ್ಕ್ರೀಮ್ಗೆ ಗ್ರಾಹಕರೊಬ್ಬರ ಬಳಿ ದರಕ್ಕಿಂತ ೧೦ ರೂ.ಗಳನ್ನು ಹೆಚ್ಚುವರಿಯಾಗಿ ವಸೂಲಿ ಮಾಡಿದ್ದಕ್ಕಾಗಿ ಮುಂಬೈನ ಸೆಂಟ್ರಲ್ ಶಗುನ್ ವೆಜ್ ರೆಸ್ಟೋರೆಂಟ್ಗೆ ಜಿಲ್ಲಾ ಗ್ರಾಹಕ ವೇದಿಕೆ ೨ ಲಕ್ಷ ರೂ. ದಂಡ ವಿಧಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.
ಆರು ವರ್ಷಗಳ ಹಿಂದೆ ಅಂಗಡಿ ಮಾಲಿಕರು ಗ್ರಾಹಕನ ಬಳಿಯಲ್ಲಿ ಎಂ ಆರ್ ಪಿ ರೇಟ್ ೧೬೫ ರೂ. ಗಳ ಬದಲು ೧೭೫ ರೂ.ಗಳನ್ನು ಪಡೆದಿತ್ತು. ಈ ಕುರಿತು ರೆಸ್ಟೋರೆಂಟ್ರವರ ಬಳಿ ವಿಚಾರಿಸಿದಾಗ, ಐಸ್ಕ್ರೀಮ್ ತೆಗೆದಿಡಲು ವೆಚ್ಚ ತಗಲುವುದಲ್ಲದೆ, ಅಂಗಡಿ ಹಾಗೂ ರೆಸ್ಟೋರೆಂಟ್ ನಡುವೆ ವ್ಯತ್ಯಾಸ ಇದೆಯೆಂದು ಹೇಳಿತ್ತು. ಆದರೆ ಗ್ರಾಹಕ ತಾವು ಹೋಟೆಲ್ನ ಬೇರೆ ಯಾವುದೇ ಸೇವೆಯಾಗಲಿ ಅಥವಾ ಅಲ್ಲಿನ ವಸ್ತುವನ್ನಾಗಲಿ ಬಳಸಿಲ್ಲ. ಕೌಂಟರ್ನಿಂದಲೆ ಐಸ್ ಕ್ರೀಂ ತೆಗೆದುಕೊಂಡು ಹೋಗಿದ್ದಾಗಿ ದೂರಿನಲ್ಲಿ ಹೇಳಿದ್ದರು.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಭಾಸ್ಕರ್ ಜಾಧವ್ ಎಂಬುವವರು ದೂರುದಾರರಾಗಿದ್ದು, ಇವರು ಜೂನ್ ೮,೨೦೧೪ ರಂದು ಡಿಬಿ ಮಾರ್ಗ್ ಪೊಲೀಸ್ ಠಾಣೆಯಿಂದ ಮನೆಗೆ ವಾಪಸಾಗುತ್ತಿದ್ದ ವೇಳೆ ಮನೆಯಲ್ಲಿದ್ದ ಅತಿಥಿಗಳಿಗೆಂದು ಐಸ್ ಕ್ರೀಂ ಖರೀದಿಸಲು ರೆಸ್ಟೋರೆಂಟ್ಗೆ ಹೋಗಿದ್ದಾಗಿ ಹಾಗೂ ತಮಗೆ ಒಂದರ ಬೆಲೆಗೆ ಎರಡು ಫ್ಯಾಮಿಲಿ ಪ್ಯಾಕ್ ದೊರೆತಿದ್ದರೂ ದರ ಹಾಗೂ ಹೆಚ್ಚುವರಿ ಬಿಲ್ ನೋಡಿ ಆಘಾತವಾಯಿತು ಎಂದು ದೂರಿನಲ್ಲಿ ಹೇಳಿದ್ದರು.
ಇವುಗಳನ್ನೆಲ್ಲಾ ಪರಿಶೀಲಿಸಿದ ಗ್ರಾಹಕ ವೇದಿಕೆ ಹೆಚ್ಚುವರಿ ದರ ವಿಧಿಸಿದ್ದು ಸರಿಯಲ್ಲ ಎಂದು ರೆಸ್ಟೋರೆಂಟ್ಗೆ ದಂಡ ವಿಧಿಸಿದೆ.
30-05-26 06:45 pm
HK News Staffer
ಕೆಪಿಸಿಸಿ ಅಧ್ಯಕ್ಷ ಗಾದಿಗೆ ಸರ್ಪ್ರೈಸ್ ಟ್ವಿಸ್ಟ್ ;...
30-05-26 01:14 pm
ಡಿಕೆಶಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ! ವಿಧಾನಸೌಧ ಮೆಟ...
29-05-26 10:41 pm
ಒಬ್ಬರಿಗೆ ಒಂದೇ ಹುದ್ದೆ ; ಕೆಪಿಸಿಸಿ ಅಧ್ಯಕ್ಷ ಹುದ್ದ...
29-05-26 04:30 pm
ಸಿದ್ದರಾಮಯ್ಯ ರಾಜೀನಾಮೆಗೆ ರಾಜ್ಯಪಾಲರಿಂದ ಅಧಿಕೃತ ಮು...
29-05-26 10:29 am
29-05-26 06:17 pm
HK News Staffer
ಟಿಎಂಸಿಯಲ್ಲಿ ಬಿರುಕು ; 50 ಶಾಸಕರು, ಸಂಸದರು ಬಿಜೆಪಿ...
27-05-26 09:17 pm
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
30-05-26 09:52 pm
HK News Desk
Mangalore News, Traffic: ಹೆದ್ದಾರಿ ಅಪಘಾತ ತಡೆಗೆ...
30-05-26 08:06 pm
Master Travels Bus, Mangalore: ಕಾವೂರಿನಲ್ಲಿ ಬಸ...
30-05-26 02:10 pm
ಹಿಂದೆ ವೀರೇಂದ್ರ ಪಾಟೀಲ್ ಗೆ ಆದ ಅವಮಾನ ಈಗ ಸಿದ್ದರಾಮ...
28-05-26 02:45 pm
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
29-05-26 10:21 pm
HK News Staffer
Expert College Case, Mangalore: ಕೋವಿಡ್ ಲಾಕ್ಡ...
29-05-26 08:30 pm
ಕಾರಿನ ಟೈಯರ್ ಬ್ಲಾಸ್ಟ್ ಆಗಿ ರಸ್ತೆಬದಿ ನಿಂತಿದ್ದ...
29-05-26 03:05 pm
ಬಕ್ರೀದ್ ಹಿನ್ನೆಲೆ, ರಾತ್ರೋರಾತ್ರಿ ಮನೆ ಕೊಟ್ಟಿಗೆಯಲ...
28-05-26 09:44 pm
ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡ...
28-05-26 10:43 am