ಬ್ರೇಕಿಂಗ್ ನ್ಯೂಸ್
29-03-21 05:41 pm Headline Karnataka News Network ದೇಶ - ವಿದೇಶ
ನವದೆಹಲಿ, ಮಾ.29: ಆಫ್ರಿಕಾ ಮತ್ತು ಯುರೋಪ್ ಖಂಡವನ್ನು ಬೇರ್ಪಡಿಸುವ ಸುಯೆಜ್ ಕಾಲುವೆಯಲ್ಲಿ ಒಂದು ವಾರದಿಂದ ಸಿಕ್ಕಿಕೊಂಡಿದ್ದ ಬೃಹತ್ ಹಡಗನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆದಿದೆ. 70 ಶೇಕಡಾ ತೆರವು ಕಾರ್ಯ ನಡೆದಿದೆ ಎಂದು ಸುಯೆಜ್ ಕಾಲುವೆ ಅಥಾರಿಟಿ ಅಧಿಕಾರಿಗಳು ತಿಳಿಸಿದ್ದಾರೆ.


ಎವರ್ ಗೀವನ್ ಎನ್ನುವ ಹೆಸರಿನ ಬೃಹತ್ ಕಂಟೇನರ್ ಹಡಗು ಈಜಿಪ್ಟ್ ಬಳಿಯ ಸುಯೆಜ್ ಕಾಲುವೆಯಲ್ಲಿ ವಾರದ ಹಿಂದೆ ಸಿಕ್ಕಿಕೊಂಡಿತ್ತು. ಇದರಿಂದಾಗಿ ಯುರೋಪ್ ಮತ್ತು ಮಧ್ಯ ಪ್ರಾಚ್ಯ ದೇಶಗಳಿಂದ ಸಾಗುವ ಹಡಗುಗಳ ಸಂಚಾರಕ್ಕೆ ತೊಡಕಾಗಿದ್ದು, ಭಾರೀ ವೈಪರೀತ್ಯ ಉಂಟಾಗಿತ್ತು. ಹಡಗು ಕಾಲುವೆಯಿಂದ ಸಾಗುತ್ತಿದ್ದಾಗ ಅಡಿಭಾಗದ ಮರಳಿನಲ್ಲಿ ಹೂತಿದ್ದರಿಂದ ಅಲ್ಲೇ ಉಳಿದುಕೊಂಡಿತ್ತು.

ಕಾಲುವೆಯಲ್ಲಿ ಅಡ್ಡಲಾಗಿ ಹಡಗು ನಿಂತಿದ್ದರಿಂದ ಇತರೇ ಹಡಗುಗಳ ಸಂಚಾರಕ್ಕೆ ಬ್ರೇಕ್ ಬಿದ್ದಿತ್ತು. ಎರಡೂ ಭಾಗದಲ್ಲಿ ಸುಮಾರು 450 ರಷ್ಟು ಹಡಗುಗಳು ಅಲ್ಲಿ ಸಿಕ್ಕಿಕೊಂಡು ಸರದಿ ನಿಂತಿದ್ದವು. ಇದರಿಂದಾಗಿ 9 ಬಿಲಿಯನ್ ಡಾಲರ್ ನಷ್ಟವಾಗಿತ್ತು. ಯುರೋಪ್ ಭಾಗದ ರಾಷ್ಟ್ರಗಳಿಂದ ಭಾರತ ಇನ್ನಿತರ ಪೂರ್ವ ರಾಷ್ಟ್ರಗಳಿಗೆ ವ್ಯಾಪಾರ ಸಂಬಂಧ ಸಾಗುವ ಹಡಗುಗಳು ಸುಯೆಜ್ ಕಾಲುವೆಯಲ್ಲಿ ಸಾಗುತ್ತವೆ.


ಆಫ್ರಿಕಾ ಮತ್ತು ಯುರೋಪ್ ಖಂಡದ ಮಧ್ಯೆ ಇರುವ ಸಪೂರ ಹಾದಿಯಾಗಿರುವ ಸುಯೆಜ್ ಕಾಲುವೆ ಈಜಿಪ್ಟ್ ದೇಶದ ವ್ಯಾಪ್ತಿಗೆ ಸೇರುತ್ತದೆ. ಅಲ್ಲಿನ ಕಾಲುವೆಯ ಮೂಲಕ ಸಾಗಿದರೆ, ಆಫ್ರಿಕಾವನ್ನು ಸುತ್ತುಹಾಕಿ ಸಾಗಬೇಕಾಗಿಲ್ಲ. ಆಫ್ರಿಕಾವನ್ನು ಸುತ್ತುಹಾಕಿ ಹಡಗು ಸಂಚರಿಸಿದರೆ, ಒಂದು ಹಡಗು ಭಾರತದಿಂದ ಇಂಗ್ಲೆಂಡ್ ತಲುಪಬೇಕಿದ್ದರೆ 34 ದಿನ(25 ಸಾವಿರ ಕಿಮೀ) ಬೇಕಾಗುತ್ತದೆ. ಸುಯೆಜ್ ಕಾಲುವೆಯಲ್ಲಿ ಸಾಗಿದರೆ 25 ದಿನಗಳಲ್ಲಿ(18 ಸಾವಿರ ಕಿಮೀ) ತಲುಪಬಹುದು. ಹೀಗಾಗಿ ಸರಕು ಸಾಗಾಟದ ಹಡಗುಗಳು ಹೆಚ್ಚಾಗಿ ಪೂರ್ವದಿಂದ ಪಶ್ಚಿಮ ರಾಷ್ಟ್ರಗಳಿಗೆ ತೆರಳಲು ಸುಯೆಜ್ ಕಾಲುವೆಯನ್ನೇ ಬಳಸುತ್ತವೆ.
The stern of a huge container ship that has been wedged across the Suez Canal for almost a week has been freed from the shoreline, officials say.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
15-07-26 10:44 pm
HK News Staffer
ಪ್ರಧಾನಿ ಮೋದಿ ನೇಮಿಸಿದ್ದ ಚೌಕಿದಾರರೇ ರಾಮನ ದೇಣಿಗೆ...
15-07-26 10:03 pm
ಬಾಂಗ್ಲಾನ್ನರು ಅನ್ನುವ ಶಂಕೆಯಿದ್ದರೆ ಪೊಲೀಸರಿಗೆ ತಿಳ...
15-07-26 09:03 pm
ಮಂಗಳೂರಿನಲ್ಲಿ ಯಾವ ಮಾಲ್ನಲ್ಲಿ ಎಷ್ಟೆಷ್ಟು ಬಾಂಗ್ಲಾದ...
15-07-26 05:32 pm
ಮುಸ್ಲಿಮೇತರ ಮಹಿಳೆಯನ್ನು ಮದುವೆಯಾಗುವುದು ಶರಿಯಾಕ್ಕೆ...
15-07-26 10:59 am
15-07-26 07:40 pm
HK News Staffer
ಉಡುಪಿ ; ಹೆದ್ದಾರಿ ಮಧ್ಯದಲ್ಲೇ ಟೇಬಲ್ ಹಾಕಿ ಟಿವಿ, ಮ...
15-07-26 07:02 pm
ಮುಕ್ಕ ಶ್ರೀನಿವಾಸ್ ಕಾಲೇಜು ಎಂಬಿಬಿಎಸ್ ವಿದ್ಯಾರ್ಥಿನ...
15-07-26 01:17 pm
Kasaragod car Accident: ಕಾಸರಗೋಡಿನಲ್ಲಿ ಡೆಡ್ಲಿ...
15-07-26 12:40 pm
ಟ್ರಾಫಿಕ್ ದಂಡ ಕಟ್ಟಲು ಎಪಿಕೆ ಫೈಲ್ ಡೌನ್ಲೋಡ್ ಮಾಡಲು...
14-07-26 09:13 pm